/newsfirstlive-kannada/media/post_attachments/wp-content/uploads/2025/06/Arjun_Air_India_crash.jpg)
ಗಾಂಧಿನಗರ: ಅಹಮದಾಬಾದ್ನಿಂದ ಲಂಡನ್ಗೆ ಹೊರಟ್ಟಿದ್ದ ವಿಮಾನದಲ್ಲಿ 240ಕ್ಕೂ ಹೆಚ್ಚು ಪ್ರಯಾಣಿಕರು ಕೊನೆಯುಸಿರೆಳೆದಿದ್ದಾರೆ. ಇದರಲ್ಲಿ ಕರುಳು ಹಿಂಡುವ ಸಂಗತಿ ಎಂದರೆ ಹೆಂಡತಿ ಆಸೆಯಂತೆ ಹುಟ್ಟೂರಲ್ಲಿ ಅಸ್ತಿ ಬಿಡಲು ಬಂದಿದ್ದ ವ್ಯಕ್ತಿಯೊಬ್ಬರು ವಿಮಾನದಲ್ಲಿ ಸಜೀವ ದಹನಗೊಂಡಿದ್ದಾರೆ.
ಅರ್ಜುನ್ ಮನುಭಾಯ್ ಪಟೋಲಿಯಾ (36) ಯುನೈಟೆಡ್ ಕಿಂಗ್ಡಮ್ (ಯುಕೆ) ಮೂಲದ ಭಾರತೀಯ ವ್ಯಕ್ತಿ. ಒಂದು ವಾರದ ಹಿಂದೆ ಇವರ ಹೆಂಡತಿ ಭಾರತಿಬೆನ್ ಅವರು ಪ್ರಾಣ ಬಿಟ್ಟಿದ್ದರು. ಸಾಯುವುದಕ್ಕೂ ಮೊದಲು ನನ್ನ ಚಿತಾಭಸ್ಮವನ್ನು ನನ್ನ ಹುಟ್ಟೂರಿನಲ್ಲಿ ಬಿಡುವಂತೆ ಗಂಡನಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಹೆಲಿಕಾಪ್ಟರ್, ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ದೇಶದ ಹಾಲಿ, ಮಾಜಿ ಸಿಎಂಗಳ ಪಟ್ಟಿ ಇಲ್ಲಿದೆ..
ಹೀಗಾಗಿ ಹೆಂಡತಿ ಕೊನೆಯ ಆಸೆಯಂತೆ ಅರ್ಜುನ್, ಯುಕೆ ಇಂದ ಭಾರತಕ್ಕೆ ಬಂದಿದ್ದರು. ಗುಜರಾತ್ನ ಅಮ್ರೇಲಿಯ ವಾಡಿಯಾ ಎಂಬ ಹೆಂಡತಿಯ ಪೂರ್ವಜ ಗ್ರಾಮಕ್ಕೆ ಬಂದು ಅಲ್ಲಿದ್ದ ಸಂಬಂಧಿಗಳೊಂದಿಗೆ ಅಂತಿಮ ವಿಧಾನಗಳನ್ನು ಪೂರೈಸಿದ್ದರು. ನರ್ಮದಾ ನದಿಯಲ್ಲಿ ಹೆಂಡತಿಯ ಚಿತಾಭಸ್ಮ ಬಿಟ್ಟು ಲಂಡನ್ನಲ್ಲಿದ್ದ 4 ಮತ್ತು 8 ವರ್ಷದ ತನ್ನ ಹೆಣ್ಣು ಮಕ್ಕಳ ಬಳಿಗೆ ಮರಳುತ್ತಿದ್ದರು.
ಎರಡು ಮಕ್ಕಳ ತಂದೆಯಾದ ಪಟೋಲಿಯಾ, ಏರ್ ಇಂಡಿಯಾ ವಿಮಾನ AI171 ನಲ್ಲಿ ಲಂಡನ್ಗೆ ಹಿಂತಿರುಗುತ್ತಿದ್ದರು. ಆದರೆ ಭಾರತದ ಗಡಿ ದಾಟುವ ಮೊದಲೇ ಅಹಮದಾಬಾದ್ನ ಬಳಿ ವಿಮಾನ ದೊಡ್ಡ ದುರಂತಕ್ಕೆ ಒಳಗಾಗಿದೆ. ಇದರಲ್ಲಿ ಅವರು ಜೀವ ಕಳೆದುಕೊಂಡಿದ್ದು ಯಾರು ಎಂಬುದೇ ಗುರುತಿಸಲು ಆಗುತ್ತಿಲ್ಲ. ತಾಯಿಯನ್ನ ಕಳೆದುಕೊಂಡು ನೋವಿನಲ್ಲಿದ್ದ ಆ ಹೆಣ್ಣುಮಕ್ಕಳ್ಳಿಗೆ ಈಗ ತಂದೆಯೂ ಇಲ್ಲ ಎನ್ನುವ ಮತ್ತೊಂದು ಆಘಾತವಾಗಿದೆ ಎಂದು ಅರ್ಜುನ್ ಅವರ ಅಳಿಯ ಕ್ರಿಶ್ ಜಗದೀಶ್ ಎನ್ನುವರು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ