ಬೂಮ್ರಾ ಇಲ್ಲದೇ ಬೌಲಿಂಗ್ ಅಟ್ಯಾಕ್​ ಹೇಗೆ.. ಶಮಿ ಫಿಟ್ ಇಲ್ಲ, ಬಲ ತುಂಬುವ ತಾಕತ್ ಯಾರಿಗಿದೆ?

author-image
Bheemappa
Updated On
ಬೂಮ್ರಾ ಇಲ್ಲದೇ ಬೌಲಿಂಗ್ ಅಟ್ಯಾಕ್​ ಹೇಗೆ.. ಶಮಿ ಫಿಟ್ ಇಲ್ಲ, ಬಲ ತುಂಬುವ ತಾಕತ್ ಯಾರಿಗಿದೆ?
Advertisment
  • ಈ ವಿಷಯದಲ್ಲಿ ಮಾತ್ರ ಪಾಂಡ್ಯ ಮೇಲೆ ಆಧಾರವಾಗಬೇಕಾ?
  • ಟೀಮ್ ಇಂಡಿಯಾದ ವೀಕ್​ನೆಸ್​ ಎದುರಾಳಿಗೆ ವರವಾಗುತ್ತಾ?
  • ಇಬ್ಬರು ಯಂಗ್ ಪ್ಲೇಯರ್ಸ್​ ನರ್ವಸ್ ಆದರೆ ಭಾರತ ಅಷ್ಟೇ!

ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಅಭಿಯಾನ ಇಂದಿನಿಂದ ಆರಂಭವಾಗ್ತಿದೆ. ಸೂಪರ್​ ಸ್ಟಾರ್​ ಆಟಗಾರರ ದಂಡೇ ಹೊಂದಿರೋ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲುವ ಹಾಟ್​ ಫೇವರಿಟ್​ ಎನಿಸಿದೆ. ಆದ್ರೆ, ಒಂದು ವೀಕ್​ನೆಸ್​​ ಟೀಮ್​ ಇಂಡಿಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೂಮ್ರಾ ಇಲ್ಲದ ಬೌಲಿಂಗ್​ ಅಟ್ಯಾಕ್​ ಬಡವಾಗಿದೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾ ಸಜ್ಜಾಗಿ ನಿಂತಿದೆ. ದುಬೈನ ಐಸಿಸಿ ಕ್ರಿಕೆಟ್​​ ಅಕಾಡೆಮಿಯಲ್ಲಿ ಕಳೆದ 3 ದಿನಗಳಿಂದ ಸಮಾರಾಭ್ಯಾಸ ನಡೆಸಿದ ಇಂಡಿಯನ್​ ಟೈಗರ್ಸ್​, ಯುದ್ಧಭೂಮಿಯಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಆದ್ರೆ, ಒಳಗೊಳಗೆ ಆತಂಕ ಇಡೀ ತಂಡವನ್ನ ಕಾಡ್ತಿದೆ. ಭರ್ಜರಿ ಅಭ್ಯಾಸ ನಡೆಸಿ, ಗೆಲ್ಲುವ ಹಾಟ್​ ಫೇವರಿಟ್​ಗಳಾಗಿ ಕದನಕ್ಕೆ ಸಜ್ಜಾಗಿದ್ರೂ ಬೌಲಿಂಗ್​ ದೌರ್ಬಲ್ಯ ಟೀಮ್​ ಇಂಡಿಯಾಗೆ ಹಿನ್ನಡೆಯಾಗಿದೆ.

publive-image

ಬೂಮ್ರಾ ಇಲ್ಲದ ಭಾರತ.. ಬಲ ತುಂಬೋದ್ಯಾರು.?

ಈ ಟೂರ್ನಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾಗೆ ಮೇಜರ್​ ಸೆಟ್​ಬ್ಯಾಕ್​ ಆಗಿದೆ. ತಂಡದ ಮ್ಯಾಚ್​ ವಿನ್ನರ್​ ವೇಗಿ ಜಸ್​ಪ್ರೀತ್​ ಬೂಮ್ರಾ ಇಂಜುರಿಗೆ ತುತ್ತಾಗಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಬೂಮ್ರಾ ಇಲ್ಲದೇ ಟೀಮ್​ ಇಂಡಿಯಾದ ಬೌಲಿಂಗ್​ ಸಿಕ್ಕಾಪಟ್ಟೆ ದುರ್ಬಲವಾಗಿ ಕಾಣ್ತಿದೆ. ಬೂಮ್ರಾ ಅಲಭ್ಯತೆಯಲ್ಲಿ ಬೌಲಿಂಗ್​ಗೆ ಬಲ ತುಂಬೋದ್ಯಾರು ಅನ್ನೋ ಪ್ರಶ್ನೆ ಇಡೀ ತಂಡವನ್ನ ಕಾಡ್ತಿದೆ.

ವೇಗಿ ಶಮಿ ಫಿಟ್​ನೆಸ್​ ಬಗ್ಗೆಯೂ ಇದೆ ಅನುಮಾನ.!

ಸದ್ಯ ತಂಡದಲ್ಲಿರೋ ಅನುಭವಿ ವೇಗಿ ಅಂದ್ರೆ ಮೊಹಮ್ಮದ್​ ಶಮಿ. ನೋ ಡೌಟ್​ ಶಮಿ ಒನ್​ ಆಫ್​ ದ ಗ್ರೆಟೆಸ್ಟ್​ ಬೌಲರ್​. ಕಳೆದ ಏಕದಿನ ವಿಶ್ವಕಪ್​​ನಲ್ಲಿ ಶಮಿ ಅದ್ಧೂರಿ ಪರ್ಫಾಮೆನ್ಸ್​ ನೀಡಿದ್ರು. ಆದ್ರೆ, ಈಗ ಅದೇ ಶಮಿ ಇಲ್ಲ. ಏಕದಿನ ವಿಶ್ವಕಪ್​​ ಬಳಿಕ ಸರ್ಜರಿಗೆ ಒಳಗಾಗಿ ಲಾಂಗ್​ ಗ್ಯಾಪ್​ನ ಬಳಿಕ ಕಮ್​ಬ್ಯಾಕ್​ ಮಾಡಿದ್ದಾರೆ. ಇಂಗ್ಲೆಂಡ್​ ಸರಣಿಯಲ್ಲಿ ಹಳೆ ಖದರ್​ ಕಾಣಿಸಿಲ್ಲ. ಜೊತೆಗೆ ಚೇತರಿಸಿಕೊಂಡು ಕಮ್​ಬ್ಯಾಕ್​ ಮಾಡಿರುವ ಶಮಿ ಮೇಲೆ ಹೆಚ್ಚಿನ pressure ಕೂಡ ಹಾಕುವಂತಿಲ್ಲ. ಶಮಿ ಫಿಟ್​ನೆಸ್​ ಬಗ್ಗೆ ಅನುಮಾನಗಳಿರೋದು ಗೊಂದಲಕ್ಕೆ ಕಾರಣವಾಗಿದೆ.

ಏಕದಿನ ಫಾರ್ಮೆಟ್​ನಲ್ಲಿ​ ಆರ್ಷ್​​ದೀಪ್​ ಅನಾನುಭವಿ.!

ತಂಡದಲ್ಲಿರೋ ಇನ್ನೊರ್ವ ವೇಗಿ ಆರ್ಷ್​​ದೀಪ್​ ಸಿಂಗ್​ ಲೆಫ್ಟ್​ ಆರ್ಮ್​ ಪೇಸರ್​ ಕಳೆದ ಟಿ20 ವಿಶ್ವಕಪ್​​ನಲ್ಲಿ ಸಾಲಿಡ್​ ಪರ್ಫಾಮನ್ಸ್​ ನೀಡಿದರು. ಚಾಂಪಿಯನ್ಸ್​ ಟ್ರೋಫಿ ನಡಿತಿರುವ ದುಬೈನಲ್ಲೂ ಆಡಿದ ಅನುಭವ ಆರ್ಷ್​​ದೀಪ್​ಗಿದೆ. ಆದ್ರೆ, ಏಕದಿನ ಫಾರ್ಮೆಟ್​ನಲ್ಲಿ ಈತ ಆಡಿರೋದು ಕೇವಲ 9 ಪಂದ್ಯ ಮಾತ್ರ. ಅನಾನುಭವಿ ಆರ್ಷ್​​ದೀಪ್​ ಬಿಗ್​ ಟೂರ್ನಮೆಂಟ್​ನಲ್ಲಿ ಒತ್ತಡಕ್ಕೆ ಒಳಗಾದ್ರೆ ಕಷ್ಟ.. ಕಷ್ಟ..!

ಇದನ್ನೂ ಓದಿ:ಪಾಕ್​ ವಿರುದ್ಧದಷ್ಟೇ ಬಾಂಗ್ಲಾ ಜೊತೆಗಿನ ಪಂದ್ಯಗಳು ರೋಚಕ.. ಟೀಮ್ ಇಂಡಿಯಾದ ಗೆಲುವು ಹೇಗಿವೆ?

publive-image

ಹರ್ಷಿತ್​ ರಾಣಾಗಿಲ್ಲ ಬಿಗ್​ ಟೂರ್ನಿ ಆಡಿದ ಅನುಭವ.!

ಬೂಮ್ರಾ ರಿಪ್ಲೇಸ್​ಮೆಂಟ್​ ಆಗಿ ಟೀಮ್​ ಇಂಡಿಯಾಗೆ ಎಂಟ್ರಿಕೊಟ್ಟಿರುವ ಹರ್ಷಿತ್​ ರಾಣಾ ಅನಾನಭವಿ. ಈವರೆಗೆ ಒಂದೇ ಒಂದು ಐಸಿಸಿ ಟೂರ್ನಮೆಂಟ್​ ಆಡಿಲ್ಲ. ಆಡಿರೋದು ಕೇವಲ 6 ಇಂಟರ್​ನ್ಯಾಷನಲ್​ ಪಂದ್ಯ, ಅದ್ರಲ್ಲಿ 3 ಒಡಿಐ. ಕೇವಲ 3 ಏಕದಿನ ಪಂದ್ಯ ಆಡಿರೋ ಹರ್ಷಿತ್​ ರಾಣಾ, ಚಾಂಪಿಯನ್ಸ್​ ಟ್ರೋಫಿಯಂತ ಬಿಗ್​ಸ್ಟೇಜ್​ನಲ್ಲಿ ಹೇಗೆ ಪರ್ಫಾಮ್​ ಮಾಡ್ತಾರೆ ಅನ್ನೋದು ಎಲ್ಲರನ್ನ ಕಾಡ್ತಿದೆ.

ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯನೇ ‘3ನೇ ವೇಗಿ’..!

ಅನುಭವಿ ಶಮಿಯಲ್ಲಿ ಹಳೆ ಖದರ್​​ ಮಾಯವಾಗಿದ್ರೆ, ಉಳಿದ ಸ್ಪೆಷಲಿಸ್ಟ್​ ವೇಗಿಗಳಿಗೆ ಅನುಭವದ ಕೊರತೆಯಿದೆ. ಹೀಗಾಗಿ ಆಲ್​​ರೌಂಡರ್​​ ಹಾರ್ದಿಕ್​ ಪಾಂಡ್ಯ ಮೇಲೆ ಜವಾಬ್ದಾರಿ ಹೆಚ್ಚಿದೆ. ಉಳಿದವರಿಗೆ ಹೋಲಿಸಿದ್ರೆ, ಅನುಭವಿಯಾಗಿರೋ ಪಾಂಡ್ಯ ಪೇಸ್​ ಅಟ್ಯಾಕ್​ನ 3ನೇ ವೇಗಿ ರೋಲ್​ನ ಪ್ಲೇ ಮಾಡಬೇಕಿದೆ. ಪವರ್​ ಪ್ಲೇ ಹಾಗೂ ಡೆತ್​ ಓವರ್​​ಗಳಲ್ಲಿ ಟೀಮ್​ ಇಂಡಿಯಾ ಈಗ ಹಾರ್ದಿಕ್​​ ಮೇಲೆ ಡಿಪೆಂಡ್​ ಆಗಿದೆ. ಹಾರ್ದಿಕ್​ ಜವಾಬ್ದಾರಿಯನ್ನ ಹೇಗಿ ನಿಭಾಯಿಸ್ತಾರೆ ಅನ್ನೋದ್ರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment