ವಿಮಾನ ದುರಂತದಲ್ಲಿ ಬೆಂಗಳೂರಿನ ಟೆಕ್ಕಿ ಸಾವು.. ಪತಿಗೆ ಬರ್ತ್​​ಡೇ ಸರ್ಪ್ರೈಸ್ ಕೊಡಲು ಹೊರಟಿದ್ದರು..

author-image
Ganesh
Updated On
ವಿಮಾನ ದುರಂತದಲ್ಲಿ ಬೆಂಗಳೂರಿನ ಟೆಕ್ಕಿ ಸಾವು.. ಪತಿಗೆ ಬರ್ತ್​​ಡೇ ಸರ್ಪ್ರೈಸ್ ಕೊಡಲು ಹೊರಟಿದ್ದರು..
Advertisment
  • ವಿಮಾನ ಪತನದಲ್ಲಿ ಇಂದೋರ್​ ಮೂಲದ ಬೆಂಗಳೂರಿನ ಟೆಕ್ಕಿ ಸಾವು
  • ಪತಿಗೆ ಬರ್ತ್ ಡೇ ಸರ್ ಪ್ರೈಸ್ ನೀಡಲು ಹೊರಟವಳ ದುರಂತ ಅಂತ್ಯ
  • ವಿಮಾನ ದುರಂತದ ಸ್ಥಳಕ್ಕೆ ಇಂದು ಎಐಸಿಸಿ ಅಧ್ಯಕ್ಷ ಭೇಟಿ

ವಿಮಾನ ದುರಂತ ಒಂದು.. ವಿಮಾನದೊಳಗಿದ್ದವರ ಸಾವಿನ ಸಂಖ್ಯೆ 241.. ಅದೆಷ್ಟೋ ಕನಸುಗಳನ್ನ ಹೊತ್ತು ಲೋಹದ ಹಕ್ಕಿಯ ಬೆನ್ನೇರಿದ್ದ ಪ್ರಯಾಣಿಕರು ವಿಮಾನ ದುರಂತದಲ್ಲಿ ಸಜೀವ ದಹನವಾಗಿದ್ದಾರೆ. ಇದೀಗ ವಿಮಾನ ಪತನದಲ್ಲಿ ಮೃತಪಟ್ಟವರ ಕುಟುಂಬಗಳ ಕಣ್ಣೀರಿನ ಕಥೆಗಳು ಹೊರಬೀಳುತ್ತಿವೆ.

ವಿಮಾನ ಪತನದಲ್ಲಿ ಇಂದೋರ್​ ಮೂಲದ ಬೆಂಗಳೂರಿನ ಟೆಕ್ಕಿ ಸಾವು

ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿಯೊಬ್ಬರು ಸಾವನ್ನಪ್ಪಿರುವುದು ಖಚಿತವಾಗಿದೆ. ಇಂದೋರ್​ ಮೂಲದ ಹರ್ ಪ್ರೀತ್ ಹೊರಾ ಪತಿ ಲಂಡನ್​ನಲ್ಲಿ ಟೆಕ್ಕಿಯಾಗಿದ್ದಾರೆ. ಇದೇ ಜೂನ್​ 16ರಂದು ಪತಿಯ ಬರ್ತ್​ಡೇ ಇತ್ತು. ಈ ಹಿಂದೆ ಜೂನ್ 19 ರಂದು ಲಂಡನ್ ಗೆ ತೆರಳಲು ಆಕೆ ಯೋಜಿಸಿದ್ದರು. ಆದ್ರೆ ಪತಿಯ ಜನ್ಮ ದಿನವನ್ನು ಅವಿಸ್ಮರಣೀಯವಾಗಿಸುವ ಬಯಕೆಯಿಂದ ಹರ್​ ಪ್ರೀತ್​.. ಜೂನ್ 12ರಂದೇ ತೆರಳಲು ದಿನಾಂಕ ಬದಲಿಸಿದ್ದರಂತೆ.. ಆದ್ರೆ ವಿಧಿಯಾಟವೇ ಬೇರೆ ಇತ್ತು.. ಸದ್ಯ ಇಂಧೋರ್​ನಲ್ಲಿ ನೆಲೆಸಿರುವ ಅವರ ಕುಟುಂಬ ದುಖದ ಮಡುವಿನಲ್ಲಿ ಮುಳುಗಿದೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ಅಪಘಾತದ ಬೆನ್ನಲ್ಲೇ ದೊಡ್ಡ ಆದೇಶ ಹೊರಡಿಸಿದ DGCA.. ಏನದು?

publive-image

ಮಗಳಿಗೆ ಸರ್ಪೈಸ್​ ನೀಡಲು ಹೊರಟಿದ್ದ ಅಪ್ಪ-ಅಮ್ಮ

ಗುಜರಾತ್​ನ ವಸಾದ್​ ಮೂಲದ ರಜನಿಕಾಂತ್​ ಪಟೇಲ್​ ಮತ್ತು ದಿವ್ಯಾಬೇನ್​ ರಜನಿಕಾಂತ್ ಅವರ ಮಗಳು​ ಲಂಡನ್​ನಲ್ಲಿದ್ದಾರೆ. ಮಗಳ ಕಾನ್ವಕೇಷನ್​ ಸಮಾರಂಭದಲ್ಲಿ ಪಾಲ್ಗೊಳ್ಳಲು ಜೂನ್​ 17ರಂದು ಲಂಡನ್​ಗೆ ತೆರಳಲು ಪ್ಲಾನ್​ ಮಾಡಿದ್ರು.. ಮಗಳ ಜೊತೆ ಹೆಚ್ಚಿನ ಸಮಯ ಕಳೆಯಲು.. ಹಾಗೂ ಸರ್ಪೈಸ್​ ನೀಡಲು, ಜೂನ್​ 12ರಂದೇ ಲಂಡನ್​ಗೆ ಹೊರಟ್ಟಿದ್ದರು. ಇವರ ಜೊತೆ ಸಂಬಂಧಿರೊಬ್ಬರೂ ಕೂಡ ಇದ್ದರು.. ಆದ್ರೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

ಇದನ್ನೂ ಓದಿ: 28 ಗಂಟೆಗಳ ಬಳಿಕ ಸಿಕ್ಕ ಕಪ್ಪು ಪೆಟ್ಟಿಗೆಯಲ್ಲಿ ಏನಿದೆ..? ಸಂಪೂರ್ಣ ಪರಿಶೀಲನೆಗೆ ಎಷ್ಟು ದಿನ ಬೇಕು ಗೊತ್ತಾ..?

publive-image

ವಿಮಾನ ದುರಂತದ ಸ್ಥಳಕ್ಕೆ ಇಂದು ಎಐಸಿಸಿ ಅಧ್ಯಕ್ಷ ಭೇಟಿ

ಭೀಕರ ವಿಮಾನ ದುರಂತದಲ್ಲಿ 245 ಇದರ ಜೊತೆಗೆ ಹಾಸ್ಟೆಲ್​ನಲ್ಲಿ 24 ಜನರು ಒಟ್ಟು 265 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ, ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಜೊತೆಗೆ ಗಾಯಾಳುಗಳನ್ನು ಭೇಟಿ ಆಗಿ ಧೈರ್ಯ ತುಂಬಿದ್ರು. ಇದರ ಬೆನ್ನಲ್ಲೇ ಇವತ್ತು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದುರಂತದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಇದರ ಜೊತೆಗೆ ಮೃತರು ಮತ್ತು ಗಾಯಾಳುಗಳ ಕುಟುಂಬಕ್ಕೂ ಸಾಂತ್ವನ ಹೇಳಲಿದ್ದಾರೆ.

ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್​ನ ಮಾಜಿ ಸಿಎಂ ವಿಜಯ್​ ರೂಪಾನಿ ದುರ್ಮರಣಕ್ಕೀಡಾಗಿದ್ದಾರೆ. ಲಂಡನ್​ನಲ್ಲಿದ್ದ ಪತ್ನಿಯನ್ನು ಕರೆತರಲು ಹೊರಟ್ಟಿದ್ದವರು ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ರು.. ಮಾಜಿ ಸಿಎಂ ನಿಧನಕ್ಕೆ ಪ್ರಧಾನಿಯಾದಿಯಾಗಿ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಇವತ್ತು ವಿಜಯ್​ ರೂಪಾನಿಯವರ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಏಕೆ..? ಮತ್ತೆ ಮಧ್ಯಪ್ರಾಚ್ಯದಲ್ಲಿ ಆಗ್ತಿರೋದು ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment