ಜಡ್ಡು-ರಾಹುಲ್ ಅನುಪಸ್ಥಿತಿ ಟೀಮ್ ಇಂಡಿಯಾಕ್ಕೆ ಹಿನ್ನಡೆ ಆಗುತ್ತಾ?
ಟೀಮ್ನಲ್ಲಿ ತೊಡೆ ನೋವಿಗೆ ತುತ್ತಾದ ಕನ್ನಡಿಗ ಕೆ.ಎಲ್ ರಾಹುಲ್
ನಾಲ್ವರು ಕೀ ಪ್ಲೇಯರ್ಸ್ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಹಿಟ್ಮ್ಯಾನ್.!
ಯಾಕೋ ಟೀಮ್ ಇಂಡಿಯಾ ಅದೃಷ್ಟಾನೇ ಸರಿ ಇಲ್ಲ ಅನ್ಸುತ್ತೆ. ಒಂದು ಕಡೆ ಹೈದ್ರಾಬಾದ್ ಟೆಸ್ಟ್ ಸೋಲು ತಂಡವನ್ನ ಕಂಗಲಾಗಿಸಿದೆ. ಇನ್ನೊಂದೆಡೆ ಪ್ರಮುಖ ನಾಲ್ವರು ಆಟಗಾರರ ಅಲಭ್ಯತೆ ಚಿಂತೆಗೀಡು ಮಾಡಿದೆ. ಇದರಿಂದ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಿಕ್ಕೇ ತೋಚದಂತಾಗಿದೆ. ಮುಂದೆ ಏನಾಗುತ್ತೋ ಅನ್ನೋ ಟೆನ್ಶನ್ ಕಾಡ್ತಿದೆ.
ಇಂಗು ತಿಂಗು ಮಂಗನಂತಾದ ಭಾರತ..ಮುಂದೇನು..?
”ಯಾವಾಗ ದುಃಖ ಬರುತ್ತೋ ಅದು ಗೂಢಚಾರಿಯಾಗಿ ಬರಲ್ಲ. ಸೈನ್ಯವಾಗಿ ಬರುತ್ತೆ”. ವಿಲಿಯಮ್ ಶೇಕ್ಸ್ಪಿಯರ್ ಹ್ಯಾಮ್ಲೆಟ್ನಲ್ಲಿ ಹೇಳಿದ ಮಾತಿದು. ಸದ್ಯ ಈ ಮಾತು ಟೀಮ್ ಇಂಡಿಯಾಗೆ ತುಂಬಾ ಸೂಟ್ ಆಗುತ್ತೆ. ಯಾಕಂದ್ರೆ ಹೈದ್ರಾಬಾದ್ ಟೆಸ್ಟ್ನಲ್ಲಿ ಸೋತು ಸುಣ್ಣವಾಗಿದೆ. ಆ ಸೋಲನ್ನ ಇನ್ನೂ ಅರಗಿಸಿಕೊಳ್ಳಲು ಆಗ್ತಿಲ್ಲ. ಇಂತಹ ಕಠಿಣ ಸಮಯದಲ್ಲಿ ಮತ್ತಿಬ್ಬರು ಮ್ಯಾಚ್ ವಿನ್ನರ್ಗಳು ವೈಜಾಗ್ ಟೆಸ್ಟ್ನಿಂದ ಹೊರಬಿದ್ದಿದ್ದು, ಟೀಮ್ ಇಂಡಿಯಾದ ಕಥೆ ಇಂಗು ತಿಂದ ಮಂಗನಂತಾಗಿದೆ.
ಜಡ್ಡು-ರಾಹುಲ್ಗೆ ಇಂಜುರಿ.. 2ನೇ ಟೆಸ್ಟ್ಗೆ ಅಲಭ್ಯ..!
ಹೈದ್ರಾಬಾದ್ ಟೆಸ್ಟ್ ಸೋಲಿನ ಬೆನ್ನಲ್ಲೆ ಭಾರತಕ್ಕೆ ಒಂದೇ ದಿನ ಡಬಲ್ ಶಾಕ್ ಎದುರಾಗಿದೆ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ 2ನೇ ಟೆಸ್ಟ್ನಿಂದ ಹೊರಬಿದ್ದಿದ್ದಾರೆ. ಇಬ್ಬರೂ ಗಾಯದಿಂದ ಬಳಲುತ್ತಿದ್ದಾರೆ. ಜಡೇಜಾ ಹ್ಯಾಮ್ಸ್ಟ್ರಿಂಗ್ ಇಂಜುರಿಗೆ ತುತ್ತಾದ್ರೆ ಕನ್ನಡಿಗ ರಾಹುಲ್ ತೊಡೆ ನೋವಿಗೆ ಒಳಗಾಗಿದ್ದಾರೆ.
ಜಡ್ಡು ಇಂಜುರಿ ಗಂಭೀರವಾಗಿದೆ. ರಿಕವರಿಗೆ ಸಾಕಷ್ಟು ಸಮಯಾವಕಾಶ ಬೇಕಿದೆ. ಹೀಗಾಗಿ ಉಳಿದ ಮೂರು ಟೆಸ್ಟ್ ಆಡುವುದು ಅನುಮಾನ ಎಂದು ಹೇಳಲಾಗ್ತಿದೆ. ಇನ್ನು ರಾಹುಲ್ಗೆ ಮೈನರ್ ಇಂಜುರಿ ಆಗಿದ್ದು, ವೈಜಾಗ್ ಟೆಸ್ಟ್ ಬಳಿಕ ಫುಲ್ ಫಿಟ್ ಆಗಲಿದ್ದಾರೆ ಎಂದು ಹೇಳಲಾಗ್ತಿದೆ. 2ನೇ ಟೆಸ್ಟ್ನಲ್ಲಿ ಇಬ್ಬರು ಮೇನ್ ಪ್ಲೇಯರ್ಸ್ ಅಲಭ್ಯತೆ ಭಾರತಕ್ಕೆ ದೊಡ್ಡ ಹಿನ್ನಡೆ ತಂದೊಡ್ಡಿದೆ.
ಕ್ರಿಕೆಟ್ ಜನಕರಿಗಿಲ್ಲ ಕಿಂಗ್ ಕೊಹ್ಲಿ ಭಯ..!
ವಿರಾಟ್ ಕೊಹ್ಲಿ ಪರ್ಫಾಮ್ ಮಾಡಲಿ, ಮಾಡದೇ ಇರಲಿ. ಅವರು ತಂಡದಲ್ಲಿದ್ರೆ, ಎದುರಾಳಿ ತಂಡ ಒತ್ತಡದಲ್ಲೆ ಕಣಕ್ಕಿಳಿಯುತ್ತೆ. ಸದ್ಯ ಆ ಭೀತಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕಿಲ್ಲ. ಯಾಕಂದ್ರೆ ರನ್ ಮಷಿನ್ ವೈಜಾಗ್ ಟೆಸ್ಟ್ ಕೂಡ ಆಡ್ತಿಲ್ಲ. ವೈಯಕ್ತಿಕ ಕಾರಣ ನೀಡಿ ಮೊದಲ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇಂತಹ ಸೂಪರ್ ಸ್ಟಾರ್ ಅಲಭ್ಯತೆಯಲ್ಲಿ ರೋಹಿತ್ ಪಡೆಯ ಕಮ್ಬ್ಯಾಕ್ ಬಿಗ್ ಚಾಲೆಂಜ್ ಎನಿಸಿದೆ.
ಸ್ಪೀಡ್ ವೆಪನ್ ಶಮಿ ವೈಜಾಗ್ ಟೆಸ್ಟ್ನಿಂದ ದೂರ..!
ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಹಾಗೂ ಕಿಂಗ್ ಕೊಹ್ಲಿ ಅಷ್ಟೇ ಅಲ್ಲ. ಸ್ಪೀಡ್ಸ್ಟರ್ ಮೊಹಮ್ಮದ್ ಶಮಿ ಕೂಡ ಮುಂದಿನ ಟೆಸ್ಟ್ ಆಡುತ್ತಿಲ್ಲ. ಫುಲ್ ಫಿಟ್ ಆಗದ ಶಮಿಯನ್ನ ಆಯ್ಕೆ ಮಾಡಿ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಎನ್ಸಿಯಿಂದ ಇಲ್ಲಿ ತನಕ ಶಮಿಯ ಫಿಟ್ನೆಸ್ ಕ್ಲೀಯರೆನ್ಸ್ ಕೂಡ ಬಂದಿಲ್ಲ. ಈ ವಿಕೆಟ್ ಟೇಕರ್ ವೈಜಾಗ್ನಲ್ಲಿ ಆಡಿದ್ರೆ ಆಂಗ್ಲರಿಗೆ ಅಕ್ಷರಶಃ ನರಕ ತೋರಿಸ್ತಿದ್ರು.
ಅತಿರಥರಿಲ್ಲದ ರೋಹಿತ್ಗೆ ರಿಯಲ್ ಅಗ್ನಿಪರೀಕ್ಷೆ..!
ಗೆಲುವಿನ ಕನಸು ಕಾಣ್ತಿರೋ ಟೀಮ್ ಇಂಡಿಯಾ ನಾಲ್ವರು ಅತಿರಥ ಮಹಾರಥರಿಲ್ಲದೇ ವೈಜಾಗ್ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದೆ. ಇದರಿಂದ ಕ್ಯಾಪ್ಟನ್ ರೋಹಿತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಟ್ಮ್ಯಾನ್ ಮೊದಲೇ ಹೈದ್ರಾಬಾದ್ ಟೆಸ್ಟ್ ಸೋಲಿನಿಂದ ಜರ್ಝರಿತಾಗಿದ್ದಾರೆ. ಇದರ ಮಧ್ಯೆ ನಾಲ್ವರು ಕೀ ಪ್ಲೇಯರ್ಸ್ ಅಲಭ್ಯತೆ ಬಿಗ್ ಸೆಟ್ಬ್ಯಾಕ್ ಆಗಿದೆ. ಕ್ಯಾಪ್ಟನ್ ಆ್ಯಂಡ್ ಹೆಡ್ಕೋಚ್ ಈ ಕೀ ಪ್ಲೇಯರ್ಗಳ ಅನುಪಸ್ಥಿತಿಯನ್ನ ಹೇಗೆ ಮೀರಿ ನಿಲ್ತಾರೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಜಡ್ಡು-ರಾಹುಲ್ ಅನುಪಸ್ಥಿತಿ ಟೀಮ್ ಇಂಡಿಯಾಕ್ಕೆ ಹಿನ್ನಡೆ ಆಗುತ್ತಾ?
ಟೀಮ್ನಲ್ಲಿ ತೊಡೆ ನೋವಿಗೆ ತುತ್ತಾದ ಕನ್ನಡಿಗ ಕೆ.ಎಲ್ ರಾಹುಲ್
ನಾಲ್ವರು ಕೀ ಪ್ಲೇಯರ್ಸ್ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಹಿಟ್ಮ್ಯಾನ್.!
ಯಾಕೋ ಟೀಮ್ ಇಂಡಿಯಾ ಅದೃಷ್ಟಾನೇ ಸರಿ ಇಲ್ಲ ಅನ್ಸುತ್ತೆ. ಒಂದು ಕಡೆ ಹೈದ್ರಾಬಾದ್ ಟೆಸ್ಟ್ ಸೋಲು ತಂಡವನ್ನ ಕಂಗಲಾಗಿಸಿದೆ. ಇನ್ನೊಂದೆಡೆ ಪ್ರಮುಖ ನಾಲ್ವರು ಆಟಗಾರರ ಅಲಭ್ಯತೆ ಚಿಂತೆಗೀಡು ಮಾಡಿದೆ. ಇದರಿಂದ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಿಕ್ಕೇ ತೋಚದಂತಾಗಿದೆ. ಮುಂದೆ ಏನಾಗುತ್ತೋ ಅನ್ನೋ ಟೆನ್ಶನ್ ಕಾಡ್ತಿದೆ.
ಇಂಗು ತಿಂಗು ಮಂಗನಂತಾದ ಭಾರತ..ಮುಂದೇನು..?
”ಯಾವಾಗ ದುಃಖ ಬರುತ್ತೋ ಅದು ಗೂಢಚಾರಿಯಾಗಿ ಬರಲ್ಲ. ಸೈನ್ಯವಾಗಿ ಬರುತ್ತೆ”. ವಿಲಿಯಮ್ ಶೇಕ್ಸ್ಪಿಯರ್ ಹ್ಯಾಮ್ಲೆಟ್ನಲ್ಲಿ ಹೇಳಿದ ಮಾತಿದು. ಸದ್ಯ ಈ ಮಾತು ಟೀಮ್ ಇಂಡಿಯಾಗೆ ತುಂಬಾ ಸೂಟ್ ಆಗುತ್ತೆ. ಯಾಕಂದ್ರೆ ಹೈದ್ರಾಬಾದ್ ಟೆಸ್ಟ್ನಲ್ಲಿ ಸೋತು ಸುಣ್ಣವಾಗಿದೆ. ಆ ಸೋಲನ್ನ ಇನ್ನೂ ಅರಗಿಸಿಕೊಳ್ಳಲು ಆಗ್ತಿಲ್ಲ. ಇಂತಹ ಕಠಿಣ ಸಮಯದಲ್ಲಿ ಮತ್ತಿಬ್ಬರು ಮ್ಯಾಚ್ ವಿನ್ನರ್ಗಳು ವೈಜಾಗ್ ಟೆಸ್ಟ್ನಿಂದ ಹೊರಬಿದ್ದಿದ್ದು, ಟೀಮ್ ಇಂಡಿಯಾದ ಕಥೆ ಇಂಗು ತಿಂದ ಮಂಗನಂತಾಗಿದೆ.
ಜಡ್ಡು-ರಾಹುಲ್ಗೆ ಇಂಜುರಿ.. 2ನೇ ಟೆಸ್ಟ್ಗೆ ಅಲಭ್ಯ..!
ಹೈದ್ರಾಬಾದ್ ಟೆಸ್ಟ್ ಸೋಲಿನ ಬೆನ್ನಲ್ಲೆ ಭಾರತಕ್ಕೆ ಒಂದೇ ದಿನ ಡಬಲ್ ಶಾಕ್ ಎದುರಾಗಿದೆ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ 2ನೇ ಟೆಸ್ಟ್ನಿಂದ ಹೊರಬಿದ್ದಿದ್ದಾರೆ. ಇಬ್ಬರೂ ಗಾಯದಿಂದ ಬಳಲುತ್ತಿದ್ದಾರೆ. ಜಡೇಜಾ ಹ್ಯಾಮ್ಸ್ಟ್ರಿಂಗ್ ಇಂಜುರಿಗೆ ತುತ್ತಾದ್ರೆ ಕನ್ನಡಿಗ ರಾಹುಲ್ ತೊಡೆ ನೋವಿಗೆ ಒಳಗಾಗಿದ್ದಾರೆ.
ಜಡ್ಡು ಇಂಜುರಿ ಗಂಭೀರವಾಗಿದೆ. ರಿಕವರಿಗೆ ಸಾಕಷ್ಟು ಸಮಯಾವಕಾಶ ಬೇಕಿದೆ. ಹೀಗಾಗಿ ಉಳಿದ ಮೂರು ಟೆಸ್ಟ್ ಆಡುವುದು ಅನುಮಾನ ಎಂದು ಹೇಳಲಾಗ್ತಿದೆ. ಇನ್ನು ರಾಹುಲ್ಗೆ ಮೈನರ್ ಇಂಜುರಿ ಆಗಿದ್ದು, ವೈಜಾಗ್ ಟೆಸ್ಟ್ ಬಳಿಕ ಫುಲ್ ಫಿಟ್ ಆಗಲಿದ್ದಾರೆ ಎಂದು ಹೇಳಲಾಗ್ತಿದೆ. 2ನೇ ಟೆಸ್ಟ್ನಲ್ಲಿ ಇಬ್ಬರು ಮೇನ್ ಪ್ಲೇಯರ್ಸ್ ಅಲಭ್ಯತೆ ಭಾರತಕ್ಕೆ ದೊಡ್ಡ ಹಿನ್ನಡೆ ತಂದೊಡ್ಡಿದೆ.
ಕ್ರಿಕೆಟ್ ಜನಕರಿಗಿಲ್ಲ ಕಿಂಗ್ ಕೊಹ್ಲಿ ಭಯ..!
ವಿರಾಟ್ ಕೊಹ್ಲಿ ಪರ್ಫಾಮ್ ಮಾಡಲಿ, ಮಾಡದೇ ಇರಲಿ. ಅವರು ತಂಡದಲ್ಲಿದ್ರೆ, ಎದುರಾಳಿ ತಂಡ ಒತ್ತಡದಲ್ಲೆ ಕಣಕ್ಕಿಳಿಯುತ್ತೆ. ಸದ್ಯ ಆ ಭೀತಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕಿಲ್ಲ. ಯಾಕಂದ್ರೆ ರನ್ ಮಷಿನ್ ವೈಜಾಗ್ ಟೆಸ್ಟ್ ಕೂಡ ಆಡ್ತಿಲ್ಲ. ವೈಯಕ್ತಿಕ ಕಾರಣ ನೀಡಿ ಮೊದಲ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇಂತಹ ಸೂಪರ್ ಸ್ಟಾರ್ ಅಲಭ್ಯತೆಯಲ್ಲಿ ರೋಹಿತ್ ಪಡೆಯ ಕಮ್ಬ್ಯಾಕ್ ಬಿಗ್ ಚಾಲೆಂಜ್ ಎನಿಸಿದೆ.
ಸ್ಪೀಡ್ ವೆಪನ್ ಶಮಿ ವೈಜಾಗ್ ಟೆಸ್ಟ್ನಿಂದ ದೂರ..!
ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಹಾಗೂ ಕಿಂಗ್ ಕೊಹ್ಲಿ ಅಷ್ಟೇ ಅಲ್ಲ. ಸ್ಪೀಡ್ಸ್ಟರ್ ಮೊಹಮ್ಮದ್ ಶಮಿ ಕೂಡ ಮುಂದಿನ ಟೆಸ್ಟ್ ಆಡುತ್ತಿಲ್ಲ. ಫುಲ್ ಫಿಟ್ ಆಗದ ಶಮಿಯನ್ನ ಆಯ್ಕೆ ಮಾಡಿ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಎನ್ಸಿಯಿಂದ ಇಲ್ಲಿ ತನಕ ಶಮಿಯ ಫಿಟ್ನೆಸ್ ಕ್ಲೀಯರೆನ್ಸ್ ಕೂಡ ಬಂದಿಲ್ಲ. ಈ ವಿಕೆಟ್ ಟೇಕರ್ ವೈಜಾಗ್ನಲ್ಲಿ ಆಡಿದ್ರೆ ಆಂಗ್ಲರಿಗೆ ಅಕ್ಷರಶಃ ನರಕ ತೋರಿಸ್ತಿದ್ರು.
ಅತಿರಥರಿಲ್ಲದ ರೋಹಿತ್ಗೆ ರಿಯಲ್ ಅಗ್ನಿಪರೀಕ್ಷೆ..!
ಗೆಲುವಿನ ಕನಸು ಕಾಣ್ತಿರೋ ಟೀಮ್ ಇಂಡಿಯಾ ನಾಲ್ವರು ಅತಿರಥ ಮಹಾರಥರಿಲ್ಲದೇ ವೈಜಾಗ್ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದೆ. ಇದರಿಂದ ಕ್ಯಾಪ್ಟನ್ ರೋಹಿತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಟ್ಮ್ಯಾನ್ ಮೊದಲೇ ಹೈದ್ರಾಬಾದ್ ಟೆಸ್ಟ್ ಸೋಲಿನಿಂದ ಜರ್ಝರಿತಾಗಿದ್ದಾರೆ. ಇದರ ಮಧ್ಯೆ ನಾಲ್ವರು ಕೀ ಪ್ಲೇಯರ್ಸ್ ಅಲಭ್ಯತೆ ಬಿಗ್ ಸೆಟ್ಬ್ಯಾಕ್ ಆಗಿದೆ. ಕ್ಯಾಪ್ಟನ್ ಆ್ಯಂಡ್ ಹೆಡ್ಕೋಚ್ ಈ ಕೀ ಪ್ಲೇಯರ್ಗಳ ಅನುಪಸ್ಥಿತಿಯನ್ನ ಹೇಗೆ ಮೀರಿ ನಿಲ್ತಾರೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ