ಟೀಮ್ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್​.. ಮ್ಯಾಂಚೆಸ್ಟರ್​ ಟೆಸ್ಟ್​ ಪಂದ್ಯ ಆಕಾಶ್ ದೀಪ್ ಆಡೋದಿಲ್ಲ, ಕಾರಣ?

author-image
Bheemappa
Updated On
ಟೀಮ್ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್​.. ಮ್ಯಾಂಚೆಸ್ಟರ್​ ಟೆಸ್ಟ್​ ಪಂದ್ಯ ಆಕಾಶ್ ದೀಪ್ ಆಡೋದಿಲ್ಲ, ಕಾರಣ?
Advertisment
  • ಭಾರತ ತಂಡ ಸೇರಿಕೊಳ್ಳಲಿರುವ ಸಿಎಸ್​ಕೆ ಟೀಮ್​ನ ಪ್ಲೇಯರ್
  • ಟೀಮ್ ಇಂಡಿಯಾದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಶಾಕ್
  • ಈಗಾಗಲೇ ಗಾಯಕ್ಕೆ ಒಳಗಾಗಿರುವ ವೇಗಿ ಅರ್ಷ್​ದೀಪ್ ಸಿಂಗ್​

5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನ ಆಡಿವೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಗೆ ಗಾಯಗಳ ಸಮಸ್ಯೆ ಎಡೆಬಿಡದೇ ಕಾಡುತ್ತಿವೆ. ರಿಷಭ್ ಪಂತ್, ಅರ್ಷ್​ದೀಪ್ ಸಿಂಗ್ ಗಾಯಕ್ಕೆ ತುತ್ತಾದ ಬೆನ್ನಲ್ಲೇ ಟೀಮ್ ಇಂಡಿಯಾದ ಇನ್ನೊಬ್ಬ ವೇಗಿ ಆಕಾಶ್ ದೀಪ್ ಕೂಡ ಇಂಜುರಿಗೆ ಒಳಗಾಗಿರುವ ಆಘಾತಕಾರಿ ವಿಷ್ಯ ಹೊರ ಬಿದ್ದಿದೆ.

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿ ನಡೆಯುವ 4ನೇ ಟೆಸ್ಟ್​ ಪಂದ್ಯಕ್ಕೂ ಮೊದಲೇ ಭಾರತ ತಂಡದಲ್ಲಿ ಇಂಜುರಿ ತಾಂಡವಾಡುತ್ತಿದೆ. ಟೀಮ್ ಇಂಡಿಯಾದ ವೇಗಿ ಆಕಾಶ ದೀಪ್ ಅವರು ತೊಡೆಸಂದು (Groin Nniggle) ಗಾಯಕ್ಕೆ ಒಳಗಾಗಿರುವುದು ಗಿಲ್​ ಸೇನೆಗೆ ಆತಂಕ ಮೂಡಿಸಿದೆ. ಏಕೆಂದರೆ ಸರಣಿಯಲ್ಲಿ ಸಮಬಲ ಕಾಪಾಡಿಕೊಳ್ಳಬೇಕು ಎಂದರೆ ಬೌಲರ್​ಗಳು ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ ತಂಡದಲ್ಲಿ ಇಂಜುರಿ ಆಗುವುದು ಸಾಮಾನ್ಯವಾಗಿರುವುದು ತಲೆನೋವು ಹೆಚ್ಚಿಸಿದೆ.

ಇದನ್ನೂ ಓದಿ: ಯಂಗ್ ಪ್ಲೇಯರ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​.. 24 ವರ್ಷದ ಯುವ ಆಟಗಾರನಿಗೆ ಒಲಿದ ಅವಕಾಶ

publive-image

ಮೊದಲು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಬೆರಳಿನ ಗಾಯಕ್ಕೆ ಒಳಗಾಗಿದ್ದರು. ಇವರಾದ ಮೇಲೆ ಅರ್ಷ್​ದೀಪ್ ಸಿಂಗ್ ಅವರು ಎಡಗೈನ ಗಾಯಕ್ಕೆ ತುತ್ತಾಗಿದ್ದರು. ಇವೆರಡೇ ಎನ್ನುವಷ್ಟರಲ್ಲಿ ಇದೀಗ ಆಕಾಶ್ ದೀಪ್ ಕೂಡ ತೊಡೆಸಂದು ಗಾಯದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಇನ್ನು ಅರ್ಷ್​ ದೀಪ್ ಬದಲಿಗೆ ತಂಡಕ್ಕೆ ಹರಿಯಾಣದ ಯಂಗ್ ಬೌಲರ್​ ಅನ್ಶುಲ್ ಕಾಂಬೋಜ್ ಅವರು ಎಂಟ್ರಿ ಕೊಡಲಿದ್ದಾರೆ.

ತಂಡದಲ್ಲಿ ಆಗುತ್ತಿರುವ ಈ ಎಲ್ಲ ಬೆಳವಣಿಗೆಗಳು ಶುಭ್​ಮನ್​ ಗಿಲ್ ನೇತೃತ್ವದ ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಎಂದೇ ಹೇಳಬಹುದು. ಏಕೆಂದರೆ ಅರ್ಷ್​​ದೀಪ್ ಸಿಂಗ್ ಹಾಗೂ ಆಕಾಶ್ ದೀಪ್ 4ನೇ ಟೆಸ್ಟ್​ ಪಂದ್ಯ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇನ್ನು 4ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್​ನಲ್ಲಿ ಜುಲೈ 23 ರಿಂದ ಆರಂಭವಾಗಲಿದೆ. ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment