RCB ಕ್ಯಾಂಪ್​ನಿಂದ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಬೆಂಗಳೂರು ತಂಡಕ್ಕೆ ಬಂತು ಆನೆಬಲ

author-image
Bheemappa
Updated On
RCB ಕ್ಯಾಂಪ್​ನಿಂದ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಬೆಂಗಳೂರು ತಂಡಕ್ಕೆ ಬಂತು ಆನೆಬಲ
Advertisment
  • ಈ ಐಪಿಎಲ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದ ಆರ್​ಸಿಬಿ
  • ಬೆಂಗಳೂರು ತಂಡದಲ್ಲಿ ಮತ್ತೆ ಮರುಕಳಿಸಿದ ಫುಲ್ ಜೋಶ್
  • ಸ್ಟಾರ್ ಬ್ಯಾಟರ್ ತಂಡಕ್ಕೆ ಹಿಂದಿರುಗುವುದು ಕನ್​ಫರ್ಮ್ ಆಗಿದೆ

ಐಪಿಎಲ್ ಸೀಸನ್​​ 18ರಲ್ಲಿ ರಾಯಲ್​ ಆಟವಾಡ್ತಿದ್ದ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದ್ದಾಗಲೇ ಐಪಿಎಲ್​ ಮುಂದೂಡಿಕೆಯಾಗಿತ್ತು. ಇದೀಗ ಐಪಿಎಲ್​ ಪುನಾರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಅಭಿಮಾನಿಗಳ ವಲಯದಲ್ಲಿ ಮತ್ತೆ ಜೋಶ್​ ಮರುಕಳಿಸಿದ್ದು ಆರ್​​ಸಿಬಿ ಕ್ಯಾಂಪ್​ನಿಂದ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಇಲ್ಲಿದೆ.

ಸೀಸನ್​ 18ರ ಐಪಿಎಲ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡ್ತಾ ಇದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ಲೇ ಆಫ್​ ಸ್ಟೇಜ್​ಗೆ​​​ ದಾಪುಗಾಲಿಡೋ ತವಕದಲ್ಲಿತ್ತು. ಇನ್ನೇನು ಆರ್​​ಸಿಬಿ ಅಧಿಕೃತವಾಗಿ ಕ್ವಾಲಿಫೈ ಆಯಿತು ಅನ್ನೋವಾಗಲೇ, ಭಾರತ-ಪಾಕ್​ ನಡುವೆ ಉಂಟಾದ ಉದ್ವಿಗ್ನತೆಯಿಂದಾಗಿ ಐಪಿಎಲ್​ ಟೂರ್ನಿ ಮುಂದೂಡಿಕೆ ಆಗಿತ್ತು.

ಇದೀಗ ಐಪಿಎಲ್​ ಪುನಾರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಅಭಿಮಾನಿಗಳ ವಲಯದಲ್ಲಿ ಮತ್ತೆ ಜೋಶ್​​ ಬಂದಿದೆ. ಆದ್ರೆ, ಈ ಬಗ್ಗೆ ಆರ್​​ಸಿಬಿ ಕ್ಯಾಂಪ್​ನಲ್ಲಿ ಖುಷಿಯ ಸುದ್ದಿ ಹರಿದಾಡುತ್ತಿದೆ. ಗಾಯಕ್ಕೆ ತುತ್ತಾಗಿದ್ದ ನಾಯಕ ಹಾಗೂ ಜ್ವರದಿಂದ ಬಳಲುತ್ತಿದ್ದ ಸ್ಟಾರ್ ಬ್ಯಾಟರ್ ಹಿಂದಿರುಗುವುದು ಕನ್​ಫರ್ಮ್ ಆಗಿದೆ.

ರಜತ್​ ಬಹುತೇಕ ಫಿಟ್​​.!

ಕ್ಯಾಪ್ಟನ್​ ರಜತ್​ ಪಾಟಿದಾರ್​​ ಚೆನ್ನೈ ಸೂಪರ್​ ಕಿಂಗ್ಸ್​​ ವಿರುದ್ಧದ ಪಂದ್ಯದ ವೇಳೆ ಕೈ ಬೆರಳಿನ ಇಂಜುರಿಗೆ ತುತ್ತಾಗಿದ್ದರು. ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ಗಾಯದ ನೋವಿನಿಂದ ಪಾಟಿದಾರ್​ ಬಳಲಿದ್ರು. ಹೀಗಾಗಿ ಆ ಪಂದ್ಯದಲ್ಲಿ ಜಿತೇಶ್​ ಶರ್ಮಾ ಆರ್​​ಸಿಬಿ ತಂಡವನ್ನ ಮುನ್ನಡೆಸೋಕೆ ರೆಡಿಯಾಗಿದ್ದರು. ಅಷ್ಟರಲ್ಲಿ ಟೂರ್ನಿ ಮುಂದೂಡಿಕೆಯಾಗಿತ್ತು. ಇದೀಗ ಪಾಟಿದಾರ್​ ಬಹುತೇಕ ಫಿಟ್​ ಆಗಿದ್ದಾರೆ ಎನ್ನಲಾಗಿದ್ದು, ರಿಸ್ಟಾರ್ಟ್​ ಆಗೋ ವೇಳೆಗೆ ಆಯ್ಕೆಗೆ ಲಭ್ಯವಿರುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಕ್ಯಾಪ್ಟನ್​ ರೇಸ್​ನಲ್ಲಿ ಯುವ ಆಟಗಾರನ ಹೆಸರು.. ಕನ್ನಡಿಗನಿಗೆ ಚಾನ್ಸ್​ ಇಲ್ವಾ?

publive-image

ಬ್ಯಾಟಿಂಗ್​​ಗೆ ಬಂತು ಬಲ.!

ಅಗ್ರೆಸ್ಸಿವ್​ ಆಟದಿಂದ ಎದುರಾಳಿಗಳನ್ನ ಚಿಂದಿ ಉಡಾಯಿಸಿದ್ದ ಫಿಲ್​ ಸಾಲ್ಟ್​​ ಆರ್​​ಸಿಬಿಗೆ ಈ ಸೀಸನ್​ನಲ್ಲಿ​​ ಸಾಲಿಡ್​ ಓಪನಿಂಗ್​ ನೀಡ್ತಾ ಇದ್ದರು. ಕೊಹ್ಲಿ -ಸಾಲ್ಟ್​​ ಜೋಡಿಯ ಕರಾಮತ್ತಿಗೆ ಎದುರಾಳಿಗಳು ಥಂಡಾ ಹೊಡೆದ್ರೆ, ಫ್ಯಾನ್ಸ್​​ ಉಘೇ ಉಘೇ ಅಂತಿದ್ರು. ಆದ್ರೆ, ವೈರಲ್​ ಫೀವರ್​​ನಿಂದ ಬಳಲಿದ್ದ ಫಿಲ್​ ಸಾಲ್ಟ್​ ಕಳೆದ 2 ಪಂದ್ಯಗಳಿಂದ ಹೊರಗುಳಿದಿದ್ದರು. ಲಕ್ನೋ ಎದುರು ಆಡೋದು ಅನುಮಾನವಾಗಿತ್ತು. ಇದೀಗ ಸಾಲ್ಟ್​ ಚೇತರಿಸಿಕೊಂಡಿದ್ದು, ತಂಡಕ್ಕೆ ಬಲ ಬಂದಿದೆ.

ರಾಜ ರಜತ್​ ಪಾಟಿದಾರ್​, ಫಿಲ್​ ಸಾಲ್ಟ್​​ ಫಿಟ್​ ಆಗಿರೋದು ರಾಯಲ್ ಚಾಲೆಂಜರ್ಸ್ ತಂಡದ ಬಲ ಹೆಚ್ಚಿಸಿದೆ. ನಿಜಕ್ಕೂ ಇದು ಅಭಿಮಾನಿಗಳ ವಲಯ ಸಂಭ್ರಮಿಸೋ ವಿಚಾರ. ಐಪಿಎಲ್​ನಲ್ಲಿ ಫುಲ್ ಕಾನ್ಫೆಡೆನ್ಸಿಯಾಗಿ ಆಡುತ್ತಿರುವ ಆರ್​ಸಿಬಿ ತಂಡ ಈ ಸಲ ಟ್ರೋಫಿ ಗೆಲ್ಲುವ ಪೇವರಿಟ್ ಟೀಮ್ ಎನಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment