/newsfirstlive-kannada/media/post_attachments/wp-content/uploads/2025/07/RISHABH_PANT.jpg)
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಅಂತಿಮ ಟೆಸ್ಟ್​ ಪಂದ್ಯ ಜುಲೈ 31 ರಿಂದ ಆರಂಭವಾಗಲಿದೆ. ಶುಭ್​ಮನ್​ ಗಿಲ್ ನೇತೃತ್ವದ ತಂಡ 5ನೇ ಪಂದ್ಯವನ್ನ ಗೆಲ್ಲಲೇಬೇಕಾದ ಅನಿವಾರ್ಯಕ್ಕಿ ಸಿಲುಕಿದೆ. ಈಗಾಗಲೇ ಟೀಮ್ ಇಂಡಿಯಾ ಲಂಡನ್​ ತಲುಪಿದ್ದು ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಇಂಜುರಿಗೆ ಒಳಗಾಗಿದ್ದ ರಿಷಭ್​ ಪಂತ್ ಗಾಯವಾದ ಮೂರೂ-ನಾಲ್ಕು ದಿನಗಳ ಬಳಿಕ ಕಾಲಿಗೆ ಪ್ಲಾಸ್ಟರ್​​ ಮಾಡಿಸಿಕೊಂಡಿದ್ದಾರೆ.
ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಕಮ್ ಬ್ಯಾಟರ್​ ರಿಷಭ್​ ಪಂತ್​ ಕಾಲಿಗೆ ವೈದ್ಯರಿಂದ ಪ್ಲಾಸ್ಟರ್​​ ಮಾಡಿಸಿಕೊಂಡಿದ್ದಾರೆ. ಮ್ಯಾಂಚೆಸ್ಟರ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಪಂತ್​ ಅವರ ಕಾಲಿನ ಬೆರಳಿನ ಇಂಜುರಿಗೆ ತುತ್ತಾಗಿದ್ದರು. ಸ್ಕ್ಯಾನ್​ ರಿಪೋರ್ಟ್​ನಲ್ಲಿ ಮೂಳೆ ಮುರಿದಿದೆ ಎಂದು ತಿಳಿದು ಬಂದರೂ, ಪ್ಲಾಸ್ಟರ್​ ಮಾಡಿಸಿಕೊಳ್ಳದೇ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮುಂದುವರೆಸಿದ್ದರು.
/newsfirstlive-kannada/media/post_attachments/wp-content/uploads/2025/06/Team-India-3.jpg)
ಇಷ್ಟೇ ಅಲ್ಲದೇ 4ನೇ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲೂ ಅಗತ್ಯ ಬಿದ್ದರೆ ತಂಡಕ್ಕಾಗಿ ಬ್ಯಾಟಿಂಗ್​ ಮಾಡಬೇಕೆಂಬ ಕಾರಣದಿಂದ ಪಂತ್ ಕಾಲಿಗೆ ಪ್ಲಾಸ್ಟರ್ ಮಾಡಿಸಿಕೊಂಡಿರಲಿಲ್ಲ. ಹೀಗಾಗಿ ಮೂರೂ-ನಾಲ್ಕು ದಿನಗಳ ಕಾಲ ನೋವಲ್ಲೇ ಇದ್ದರು. ಪಂದ್ಯ ಅಂತ್ಯವಾದ ಬಳಿಕ ಪ್ಲಾಸ್ಟರ್ ರಿಷಭ್ ಪಂತ್​ ಕಾಲಿಗೆ ಪ್ಲಾಸ್ಟರ್ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯವನ್ನಾಡಲು ಶುಭ್​ಮನ್ ಗಿಲ್ ನೇತೃತ್ವದ ಟೀಮ್​ ಇಂಡಿಯಾ ಲಂಡನ್​ ತಲುಪಿದೆ. ಮ್ಯಾಂಚೆಸ್ಟರ್​ನಿಂದ ಲಂಡನ್​ಗೆ ರೈಲಿನಲ್ಲಿ ಭಾರತದ ಆಟಗಾರರು ಪ್ರಯಾಣಿಸಿದ್ದು ವಿಶೇಷ ಅನಿಸಿತು. ಇಂದಿನಿಂದ ಟೀಮ್​ ಇಂಡಿಯಾ ಅಭ್ಯಾಸ ಆರಂಭಿಸಲಿದೆ. ಜುಲೈ 31 ರಿಂದ ಅಂತಿಮ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಸರಣಿ ಸಮಬಲ ಸಾಧಿಸಲು ಟೀಮ್​ ಇಂಡಿಯಾ ಗೆಲ್ಲಲೇಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us