ಜೀರೋ ಟ್ರಾಫಿಕ್.. ಖಾಕಿ ಸರ್ಪಗಾವಲಿನಲ್ಲಿ ತಾತ್ಕಾಲಿಕ ಗೇಟ್ ಆಗಮನ
ಶುಭ ಮುಹೂರ್ತದಲ್ಲಿ ಶುರುವಾಗಿದೆ ತಾತ್ಕಾಲಿಕ ಗೇಟ್ ಅಳವಡಿಕೆ ಸಾಹಸ
ಗೇಟ್ ಇನ್ಸ್ಟಾಲ್ ಯಶಸ್ವಿಯಾದ್ರೆ ಉಳಿಯೋದು ಎಷ್ಟು TMC ನೀರು?
ಇಡೀ ದೇಶದ ಕಣ್ಣೀಗ ತುಂಗಭದ್ರಾ ಜಲಾಶಯದತ್ತ ನೆಟ್ಟಿದೆ. TB DAMನ ಕ್ರಸ್ಟ್ ಗೇಟ್ ಮುರಿದು ಐದು ದಿನಗಳಾಗಿವೆ. ಇದೀಗ ಸಿಎಂ ಸೂಚನೆಯಂತೆ ರೈತರಿಗಾಗಿ ಡ್ಯಾಂನ ಅಧಿಕಾರಿಗಳು ದೊಡ್ಡ ಸಾಹಸಮಯ ಕೆಲಸಕ್ಕೆ ಕೈ ಹಾಕಿದ್ದಾರೆ. ಪೋಲಾಗುತ್ತಿರುವ ನೀರನ್ನು ತಡೆಯಲು ಜಿಂದಾಲ್ನಿಂದ ತರಿಸಿರುವ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಇಳಿಕೆ.. ಎಷ್ಟು TMC ನೀರು ಪೋಲಾಗಿದೆ?
ಪೋಲಾಗ್ತಿರುವ ತುಂಗಭದ್ರೆಯನ್ನು ತಡೆಯಲು ಹರಸಾಹಸ
ಶುಭ ಮುಹೂರ್ತದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಆರಂಭ
ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಗೇಟ್ ಮುರಿದು ಹೋಗಿ ಐದು ದಿನಗಳಾಗಿದೆ. ಅನ್ನದಾತರಿಗೆ ವರವಾಗಬೇಕಿದ್ದ ಜೀವಜಲ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹೀಗಾಗಿ ಬೋರ್ಗರೆದು ಹರಿಯುತ್ತಿರುವ ನೀರನ್ನು ತಡೆಯಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ದುರ್ಘಟನೆ ನಡೆದ ಐದು ದಿನಗಳ ಬಳಿಕ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.
ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದಲ್ಲಿ ಸ್ಪಾಪ್ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಾರಾಯಣ ಸ್ಟೀಲ್ ವರ್ಕ್ , ಹಮೀದ್ ಇಂಜಿನಿಯರ್ ವರ್ಕ್ಸ್ ಹಾಗೂ ಜಿಂದಾಲ್ ಕಂಪನಿ. ಈ ಮೂರು ಕಂಪನಿಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಮೂರು ದಿನದೊಳಗೆ ಗೇಟ್ ಇನ್ಸ್ಟಾಲ್ ಯಶಸ್ವಿಯಾದ್ರೆ ಜಲಾಶಯದಲ್ಲಿ ಕನಿಷ್ಠ 65 TMC ನೀರು ಉಳಿಸಲು ಸಾಧ್ಯವಿದೆ. ಹೀಗಾಗಿ ಸದ್ಯಕ್ಕೆ ಇದೊಂದೇ ಉತ್ತಮ ಮಾರ್ಗ ಎಂದು ಸ್ಟಾಪ್ಲಾಗ್ ಗೇಟ್ ಅಳವಡಿಸುತ್ತಿದ್ದಾರೆ.
ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ
ಜೀರೋ ಟ್ರಾಫಿಕ್.. ಖಾಕಿ ಸರ್ಪಗಾವಲಿನಲ್ಲಿ ಗೇಟ್ ಆಗಮನ
ಸ್ಟಾಪ್ ಲಾಗ್ ಗೇಟ್ಗಳು ಕಳೆದ ರಾತ್ರಿಯೇ ಟಿ.ಬಿ ಡ್ಯಾಗ್ಗೆ ಬರಬೇಕಿತ್ತು. ಆದ್ರೆ ಮಳೆಯಿಂದಾಗಿ ವಿಳಂಬವಾಗಿತ್ತು. ಇಂದು ಬೆಳಗ್ಗೆ ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಹೊಸಪೇಟೆಗೆ ಜೀರೋ ಟ್ರಾಫಿಕ್ ಮತ್ತು ಖಾಕಿ ಸರ್ಪಗಾವನಲ್ಲಿ ತರಲಾಗಿದೆ.
ತಾತ್ಕಾಲಿಕ ಗೇಟ್ ಅಳವಡಿಕೆ!
14 ಟನ್ ಗಾತ್ರದ 5 ಸ್ಟಾಪ್ ಲಾಗ್ ಗೇಟ್ಗಳನ್ನು ಟಿಬಿ ಡ್ಯಾಂಗೆ ತರಲಾಗಿದೆ. ಜಿಂದಾಲ್ ಕಂಪನಿಯಲ್ಲಿ ತಯಾರಾಗಿರುವ ಗೇಟ್ಗಳು ಒಂದೊಂದು 60 ಅಡಿ ಉದ್ದ 4 ಅಡಿ ಅಗಲದ ಸ್ಟಾಪ್ ಲಾಗ್ ಗೇಟ್ ಆಗಿವೆ. ಮೊದಲ ಹಂತದಲ್ಲಿ 3 ಗೇಟ್ಗಳನ್ನು ಇನ್ಸ್ಟಾಲ್ ಮಾಡಲು ಪ್ಲಾನ್ ಮಾಡಲಾಗಿದೆ. ಇದರಿಂದ ಒಟ್ಟು 70 ಟಿಎಂಸಿ ನೀರು ತಡೆಯಬಹುದಾಗಿದೆ. ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಹರಿಯೋ ನೀರಿನಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಬಿರುಸಿನಿಂದ ಸಾಗಿದೆ.
26 ಗಂಟೆಗಳ ಕಾರ್ಯ.. ನಾಳೆ ಗುಡ್ನ್ಯೂಸ್ ಸಿಗುವ ವಿಶ್ವಾಸ!
ಹರಿಯೋ ನೀರಿನಲ್ಲಿ ಗೇಟ್ ಅಳವಡಿಕೆ ಕಾರ್ಯ ಅಂದುಕೊಂಡಷ್ಟು ಸುಲಭವಲ್ಲ. ಸ್ವಲ್ಪ ಯಾಮಾರಿದ್ರೂ, ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಬಹಳ ಎಚ್ಚರಿಕೆಯಿಂದ ಸ್ಟಾಪ್ಲಾಗ್ ಗೇಟ್ ಅಳವಡಿಕೆ ಮಾಡಲಾಗ್ತಿದೆ. ಸುಮಾರು 26 ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆಯಲಿದೆ. 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇದುವರೆಗೆ 7 ಅಡಿಯಷ್ಟು. ಅಂದ್ರೆ 27 ಟಿಎಂಸಿ ನೀರು ಖಾಲಿಯಾಗಿದ್ದು ಸದ್ಯ 78 ಟಿಎಂಸಿ ನೀರಿದೆ. ಕ್ರಸ್ಟ್ ಗೇಟ್ ಅಳವಡಿಕೆಗೆ ಒಟ್ಟು 60 ಟಿಎಂಸಿ ನೀರು ಖಾಲಿ ಮಾಡುವ ಅನಿರ್ವಾಯತೆ ಇತ್ತು. ಇನ್ನು ನೀರಿನ ಒತ್ತಡ ಹೆಚ್ಚಾದ್ರೆ ಸಮಸ್ಯೆ ಎದುರಾಗಲಿದೆ. ಹೀಗಾಗಿ 33 ಗೇಟ್ಗಳ ಮೂಲಕ ಸದ್ಯ 1.40 ಲಕ್ಷ ಕ್ಯುಸೆಕ್ಸ್ ನೀರು ಹೊರಬಿಡಲಾಗ್ತಿದ್ದು, ನಾಳೆ ಸಂಜೆಯೊಳಗೆ ಗುಡ್ನ್ಯೂಸ್ ಸಿಗಲಿದೆ ಎಂದು ಡ್ಯಾಂ ತಜ್ಞ ಕನ್ಹಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಟಾಪ್ ಲಾಗ್ ಬ್ಯಾಲೆನ್ಸ್ ಆಗದ ಹಿನ್ನೆಲೆಯಲ್ಲಿ ಆರಂಭದಲ್ಲಿ ಕೊಂಚ ತೊಡಕುಂಟಾಯ್ತು. ಬಳಿಕ ಬ್ಯಾಲೆನ್ಸ್ ಮಾಡಿ ಮೇಲೆತ್ತಲು ಕನ್ಹಯ್ಯ ಸೂಚನೆ ನೀಡಿದರು. ಇನ್ನೊಂದೆಡೆ ಗೇಟ್ನ ಜಾಗದಲ್ಲಿ ಚೈನ್ ಲಿಂಕ್ ಮಿಸ್ ಮ್ಯಾಚ್ ಆದ ಕಾರಣ, ಓರ್ವ ತಂತ್ರಜ್ಙನನ್ನು ಕ್ರೇನ್ ಮೂಲಕ ಗೇಟ್ ಭಾಗಕ್ಕೆ ಇಳಿಸಿ ಸರಿ ಪಡಿಸಲು ಯತ್ನಿಲಾಯಿತು.
ಇದನ್ನೂ ಓದಿ: ಫಸ್ಟ್ ನೈಟ್ಗೆ ಹೋಗೋ ಮುನ್ನ ಇದನ್ನು ತಿನ್ನಲೇಬೇಕು; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಅನ್ನದಾತರ ಹಿತದೃಷ್ಟಿಗಾಗಿ ದೊಡ್ಡ ರಿಸ್ಕ್ ತೆಗೆದುಕೊಂಡು ಹರಿಯುವ ನೀರಲ್ಲೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇವರ ಈ ಕಾರ್ಯ ಯಶಸ್ವಿಯಾಗಲಿ ಎಂದು ಇಡೀ ರಾಜ್ಯದ ಜನತೆಯೇ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜೀರೋ ಟ್ರಾಫಿಕ್.. ಖಾಕಿ ಸರ್ಪಗಾವಲಿನಲ್ಲಿ ತಾತ್ಕಾಲಿಕ ಗೇಟ್ ಆಗಮನ
ಶುಭ ಮುಹೂರ್ತದಲ್ಲಿ ಶುರುವಾಗಿದೆ ತಾತ್ಕಾಲಿಕ ಗೇಟ್ ಅಳವಡಿಕೆ ಸಾಹಸ
ಗೇಟ್ ಇನ್ಸ್ಟಾಲ್ ಯಶಸ್ವಿಯಾದ್ರೆ ಉಳಿಯೋದು ಎಷ್ಟು TMC ನೀರು?
ಇಡೀ ದೇಶದ ಕಣ್ಣೀಗ ತುಂಗಭದ್ರಾ ಜಲಾಶಯದತ್ತ ನೆಟ್ಟಿದೆ. TB DAMನ ಕ್ರಸ್ಟ್ ಗೇಟ್ ಮುರಿದು ಐದು ದಿನಗಳಾಗಿವೆ. ಇದೀಗ ಸಿಎಂ ಸೂಚನೆಯಂತೆ ರೈತರಿಗಾಗಿ ಡ್ಯಾಂನ ಅಧಿಕಾರಿಗಳು ದೊಡ್ಡ ಸಾಹಸಮಯ ಕೆಲಸಕ್ಕೆ ಕೈ ಹಾಕಿದ್ದಾರೆ. ಪೋಲಾಗುತ್ತಿರುವ ನೀರನ್ನು ತಡೆಯಲು ಜಿಂದಾಲ್ನಿಂದ ತರಿಸಿರುವ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಇಳಿಕೆ.. ಎಷ್ಟು TMC ನೀರು ಪೋಲಾಗಿದೆ?
ಪೋಲಾಗ್ತಿರುವ ತುಂಗಭದ್ರೆಯನ್ನು ತಡೆಯಲು ಹರಸಾಹಸ
ಶುಭ ಮುಹೂರ್ತದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಆರಂಭ
ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಗೇಟ್ ಮುರಿದು ಹೋಗಿ ಐದು ದಿನಗಳಾಗಿದೆ. ಅನ್ನದಾತರಿಗೆ ವರವಾಗಬೇಕಿದ್ದ ಜೀವಜಲ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹೀಗಾಗಿ ಬೋರ್ಗರೆದು ಹರಿಯುತ್ತಿರುವ ನೀರನ್ನು ತಡೆಯಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ದುರ್ಘಟನೆ ನಡೆದ ಐದು ದಿನಗಳ ಬಳಿಕ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.
ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದಲ್ಲಿ ಸ್ಪಾಪ್ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಾರಾಯಣ ಸ್ಟೀಲ್ ವರ್ಕ್ , ಹಮೀದ್ ಇಂಜಿನಿಯರ್ ವರ್ಕ್ಸ್ ಹಾಗೂ ಜಿಂದಾಲ್ ಕಂಪನಿ. ಈ ಮೂರು ಕಂಪನಿಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಮೂರು ದಿನದೊಳಗೆ ಗೇಟ್ ಇನ್ಸ್ಟಾಲ್ ಯಶಸ್ವಿಯಾದ್ರೆ ಜಲಾಶಯದಲ್ಲಿ ಕನಿಷ್ಠ 65 TMC ನೀರು ಉಳಿಸಲು ಸಾಧ್ಯವಿದೆ. ಹೀಗಾಗಿ ಸದ್ಯಕ್ಕೆ ಇದೊಂದೇ ಉತ್ತಮ ಮಾರ್ಗ ಎಂದು ಸ್ಟಾಪ್ಲಾಗ್ ಗೇಟ್ ಅಳವಡಿಸುತ್ತಿದ್ದಾರೆ.
ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ
ಜೀರೋ ಟ್ರಾಫಿಕ್.. ಖಾಕಿ ಸರ್ಪಗಾವಲಿನಲ್ಲಿ ಗೇಟ್ ಆಗಮನ
ಸ್ಟಾಪ್ ಲಾಗ್ ಗೇಟ್ಗಳು ಕಳೆದ ರಾತ್ರಿಯೇ ಟಿ.ಬಿ ಡ್ಯಾಗ್ಗೆ ಬರಬೇಕಿತ್ತು. ಆದ್ರೆ ಮಳೆಯಿಂದಾಗಿ ವಿಳಂಬವಾಗಿತ್ತು. ಇಂದು ಬೆಳಗ್ಗೆ ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಹೊಸಪೇಟೆಗೆ ಜೀರೋ ಟ್ರಾಫಿಕ್ ಮತ್ತು ಖಾಕಿ ಸರ್ಪಗಾವನಲ್ಲಿ ತರಲಾಗಿದೆ.
ತಾತ್ಕಾಲಿಕ ಗೇಟ್ ಅಳವಡಿಕೆ!
14 ಟನ್ ಗಾತ್ರದ 5 ಸ್ಟಾಪ್ ಲಾಗ್ ಗೇಟ್ಗಳನ್ನು ಟಿಬಿ ಡ್ಯಾಂಗೆ ತರಲಾಗಿದೆ. ಜಿಂದಾಲ್ ಕಂಪನಿಯಲ್ಲಿ ತಯಾರಾಗಿರುವ ಗೇಟ್ಗಳು ಒಂದೊಂದು 60 ಅಡಿ ಉದ್ದ 4 ಅಡಿ ಅಗಲದ ಸ್ಟಾಪ್ ಲಾಗ್ ಗೇಟ್ ಆಗಿವೆ. ಮೊದಲ ಹಂತದಲ್ಲಿ 3 ಗೇಟ್ಗಳನ್ನು ಇನ್ಸ್ಟಾಲ್ ಮಾಡಲು ಪ್ಲಾನ್ ಮಾಡಲಾಗಿದೆ. ಇದರಿಂದ ಒಟ್ಟು 70 ಟಿಎಂಸಿ ನೀರು ತಡೆಯಬಹುದಾಗಿದೆ. ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಹರಿಯೋ ನೀರಿನಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಬಿರುಸಿನಿಂದ ಸಾಗಿದೆ.
26 ಗಂಟೆಗಳ ಕಾರ್ಯ.. ನಾಳೆ ಗುಡ್ನ್ಯೂಸ್ ಸಿಗುವ ವಿಶ್ವಾಸ!
ಹರಿಯೋ ನೀರಿನಲ್ಲಿ ಗೇಟ್ ಅಳವಡಿಕೆ ಕಾರ್ಯ ಅಂದುಕೊಂಡಷ್ಟು ಸುಲಭವಲ್ಲ. ಸ್ವಲ್ಪ ಯಾಮಾರಿದ್ರೂ, ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಬಹಳ ಎಚ್ಚರಿಕೆಯಿಂದ ಸ್ಟಾಪ್ಲಾಗ್ ಗೇಟ್ ಅಳವಡಿಕೆ ಮಾಡಲಾಗ್ತಿದೆ. ಸುಮಾರು 26 ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆಯಲಿದೆ. 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇದುವರೆಗೆ 7 ಅಡಿಯಷ್ಟು. ಅಂದ್ರೆ 27 ಟಿಎಂಸಿ ನೀರು ಖಾಲಿಯಾಗಿದ್ದು ಸದ್ಯ 78 ಟಿಎಂಸಿ ನೀರಿದೆ. ಕ್ರಸ್ಟ್ ಗೇಟ್ ಅಳವಡಿಕೆಗೆ ಒಟ್ಟು 60 ಟಿಎಂಸಿ ನೀರು ಖಾಲಿ ಮಾಡುವ ಅನಿರ್ವಾಯತೆ ಇತ್ತು. ಇನ್ನು ನೀರಿನ ಒತ್ತಡ ಹೆಚ್ಚಾದ್ರೆ ಸಮಸ್ಯೆ ಎದುರಾಗಲಿದೆ. ಹೀಗಾಗಿ 33 ಗೇಟ್ಗಳ ಮೂಲಕ ಸದ್ಯ 1.40 ಲಕ್ಷ ಕ್ಯುಸೆಕ್ಸ್ ನೀರು ಹೊರಬಿಡಲಾಗ್ತಿದ್ದು, ನಾಳೆ ಸಂಜೆಯೊಳಗೆ ಗುಡ್ನ್ಯೂಸ್ ಸಿಗಲಿದೆ ಎಂದು ಡ್ಯಾಂ ತಜ್ಞ ಕನ್ಹಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಟಾಪ್ ಲಾಗ್ ಬ್ಯಾಲೆನ್ಸ್ ಆಗದ ಹಿನ್ನೆಲೆಯಲ್ಲಿ ಆರಂಭದಲ್ಲಿ ಕೊಂಚ ತೊಡಕುಂಟಾಯ್ತು. ಬಳಿಕ ಬ್ಯಾಲೆನ್ಸ್ ಮಾಡಿ ಮೇಲೆತ್ತಲು ಕನ್ಹಯ್ಯ ಸೂಚನೆ ನೀಡಿದರು. ಇನ್ನೊಂದೆಡೆ ಗೇಟ್ನ ಜಾಗದಲ್ಲಿ ಚೈನ್ ಲಿಂಕ್ ಮಿಸ್ ಮ್ಯಾಚ್ ಆದ ಕಾರಣ, ಓರ್ವ ತಂತ್ರಜ್ಙನನ್ನು ಕ್ರೇನ್ ಮೂಲಕ ಗೇಟ್ ಭಾಗಕ್ಕೆ ಇಳಿಸಿ ಸರಿ ಪಡಿಸಲು ಯತ್ನಿಲಾಯಿತು.
ಇದನ್ನೂ ಓದಿ: ಫಸ್ಟ್ ನೈಟ್ಗೆ ಹೋಗೋ ಮುನ್ನ ಇದನ್ನು ತಿನ್ನಲೇಬೇಕು; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಅನ್ನದಾತರ ಹಿತದೃಷ್ಟಿಗಾಗಿ ದೊಡ್ಡ ರಿಸ್ಕ್ ತೆಗೆದುಕೊಂಡು ಹರಿಯುವ ನೀರಲ್ಲೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇವರ ಈ ಕಾರ್ಯ ಯಶಸ್ವಿಯಾಗಲಿ ಎಂದು ಇಡೀ ರಾಜ್ಯದ ಜನತೆಯೇ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ