/newsfirstlive-kannada/media/post_attachments/wp-content/uploads/2025/06/RCB-31.jpg)
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಕೆಎಸ್​ಸಿಎ ( Karnataka State Cricket Association) ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಕೋರ್ಟ್​, ಪ್ರಕರಣದ ಎರಡು, ಮೂರು ಮತ್ತು ನಾಲ್ಕನೇ ಆರೋಪಿಗಳ ಮೇಲೆ ಬಲವಂತದ ಕ್ರಮಬೇಡ ಎಂದು ಮಧ್ಯಂತರ ತೀರ್ಪು ನೀಡಿದೆ. ಅಲ್ಲದೇ ಆರೋಪಿಗಳಿಗೆ ತನಿಖೆಗೆ ಸಹಕರಿಸಬೇಕು ಎಂದಿರುವ ಕೋರ್ಟ್​, ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದೆ.
ವಾದ-ಪ್ರತಿವಾದ..
ನ್ಯಾಯಮೂರ್ತಿ ಕೃಷ್ಣ ಕುಮಾರ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಪ್ರಕರಣ ಸಂಬಂಧ ಒಟ್ಟು ಮೂರು ಎಫ್ಐಆರ್​ಗಳು ದಾಖಲಾಗಿವೆ ಎಂದು ಎಜಿ ಶಶಿಕಿರಣ್ ಶೆಟ್ಟಿ ಹೈಕೊರ್ಟ್​ಗೆ ತಿಳಿಸಿದರು. ಅದಕ್ಕೆ KSCA ಪರ ವಕೀಲ ಶ್ಯಾಮ್ ಸುಂದರ್, ಒಂದೇ ಘಟನೆಗೆ ಹಲವು ಎಫ್ಐಆರ್​ಗಳು ಯಾಕೆ?. ಎಲ್ಲಾ ಎಫ್ಐಆರ್​​ಗಳನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಆರ್​ಸಿಬಿ, ಡಿಎನ್ಎ ಮ್ಯಾನೇಜ್ಮೆಂಟ್ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಾದಿಸಿದರು.
/newsfirstlive-kannada/media/post_attachments/wp-content/uploads/2025/06/RCB-32.jpg)
ಆಗ ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆಯಾ ಅಂತಾ ಜಸ್ಟೀಸ್ ಪ್ರಶ್ನೆ ಮಾಡಿದರು. ‘ಹೌದು, ಆದೇಶ ಮಾಡಲಾಗಿದೆ. 15 ದಿನದೊಳಗೆ ವರದಿಗೆ ಸೂಚಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೇತೃತ್ವದ ಏಕಸದಸ್ಯ ಸಮಿತಿ ರಚನೆ ಆಗಿದೆ. ಆರ್​ಸಿಬಿಯಿಂದ ಒಬ್ಬರು ಡಿಎನ್ಎ ಯಿಂದ ಮೂವರ ಅರೆಸ್ಟ್ ಮಾಡಲಾಗಿದೆ ಎಂದು ಎಜಿ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್​, ಕೆಎಸ್​​ಸಿಎ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿಕೆ ಮಾಡಿದೆ.
ಇದೇ ವೇಳೆ ಆರ್​​ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ಅವರ ಪರ ಸಂದೇಶ್ ಚೌಟ ವಾದಿಸಿದರು. ಮಾಧ್ಯಮದ ಮುಂದೆ ಸಿಎಂ ಅರೆಸ್ಟ್ ಮಾಡಿ ಅಂತ ಹೇಳಿದ್ದಾರೆ. ಹೇಗೆಯೇ ನಿಖಿಲ್​​ರನ್ನು ಅರೆಸ್ಟ್ ಮಾಡಲಾಗಿದೆ ಎಂದರು. ಒಟ್ಟು ಮೂರು ಎಫ್​​ಐಆರ್​ಗಳನ್ನು ದಾಖಲು ಮಾಡಲಾಗಿದೆ. ಸುಮೊಟೋ ಕೇಸ್ ದಾಖಲಿಸಿದ ಇನ್ಸ್​​ಪೆಕ್ಟರ್​​ ಅವರನ್ನು ಅಮಾನತು ಮಾಡಿದ್ದಾರೆ. ಹಾಗಿರುವಾಗ ನಿಖಿಲ್ ಅವರನ್ನ ಅರೆಸ್ಟ್ ಮಾಡಿದ್ದಾದರೂ ಯಾರು? ತನಿಖಾಧಿಕಾರಿ ಇಲ್ಲದೇ ಅರೆಸ್ಟ್ ಮಾಡಿದ್ಯಾರು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಂಗಧಾಮ ಕೆರೆಯಲ್ಲಿ ದಾರುಣ ಘಟನೆ.. ಇಬ್ಬರು ಮುದ್ದಾದ ಮಕ್ಕಳನ್ನು ಕೆರೆಗೆ ತಳ್ಳಿ ತಾಯಿ ಆತ್ಮಹತ್ಯೆ
/newsfirstlive-kannada/media/post_attachments/wp-content/uploads/2025/06/RCB-30.jpg)
ಅದಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಪ್ರತಿವಾದಿಸಿ, ಅಶೋಕನಗರ ಪೊಲೀಸ್ ಇನ್ಸ್​​ಪೆಕ್ಟರ್ ರವಿ ಅವರಿಂದ ನಿಖಿಲ್​ರ ಅರೆಸ್ಟ್ ಆಗಿದೆ. ಮೂರು ಕೇಸ್​ಗಳನ್ನ ಸಿಐಡಿ ತನಿಖೆ ಮಾಡ್ತಿದೆ ಎಜಿ ಶಶಿಕಿರಣ್ ಶೆಟ್ಟಿ ಹೇಳಿದರು. ಆಗ ಸಂದೇಶ ಚೌಟ ಅವರು, ಆರೋಪಿಯ ಮೇಲೆ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಕೋರ್ಟ್​ಗೆ ಮನವಿ ಮಾಡಿಕೊಂಡರು. ಅದಕ್ಕೆ ನಿಖಿಲ್​ ಅವರನ್ನ ಬೇರೆ ಕೇಸ್​​ಗಳಲ್ಲಿ ಬಲವಂತದ ಕ್ರಮ ಆಗಬಾರದು ಎಂದು ಕೋರ್ಟ್​ ಹೇಳಿತು. ನಿಖಿಲ್ ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಇದನ್ನೂ ಓದಿ: ಸಾಲಗಾರರಿಗೆ ಬಿಗ್ ರಿಲೀಫ್.. 3ನೇ ಬಾರಿ ರೆಪೋ ದರ ಕಡಿಮೆ ಮಾಡಿದ RBI; ಬಡ್ಡಿ ದರ ಇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us