ಬದ್ಧವೈರಿ CSKನಾ ಸೋಲಿಸಬೇಕಿತ್ತು ಎನ್ನುವುದು ಫ್ಯಾನ್ಸ್ ಬಯಕೆ
ಆರ್ಸಿಬಿ ಮೊದಲ ಸೋಲಿನಿಂದ ಕುಗ್ಗಬೇಕಿಲ್ಲ, ಸಿಡಿದು ನಿಲ್ಲಬೇಕಿದೆ!
ಪಂಜಾಬ್ಗೆ ಪಂಚ್ ಕೊಡಲು RCB ಟೀಮ್ ಏನು ಮಾಡಬೇಕು..?
ವಿರಾಟ್ ಕೊಹ್ಲಿ ಇದು ಹೊಸ ಅಧ್ಯಾಯ ಅಂತ ಹೇಳಿದ್ದೆ ಬಂತು. ಆದ್ರೆ ಆನ್ಫೀಲ್ಡ್ನಲ್ಲಿ ಆರ್ಸಿಬಿ ತಂಡ ಹಳೆ ಚಾಳಿಯನ್ನ ಮುಂದುವರಿಸಿದೆ. ಶುಭಾರಂಭ ಮಾಡಬೇಕಾದ ರೆಡ್ ಆರ್ಮಿ, ಚೆಪಾಕ್ ಫೈಟ್ ಸೋತಾಗಿದೆ. ಇಂದು ತವರಿನಲ್ಲಿ 2ನೇ ಫೈಟ್ಗೆ ಸಜ್ಜಾಗಿರೋ ಆರ್ಸಿಬಿ ಗೆಲ್ಲಲ್ಲು ಏನ್ ಮಾಡ್ಬೇಕು.?
ಈ ಸೀಸನ್ನ ಮೊದಲ ಐಪಿಎಲ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಎದುರಾಳಿ ಪಂಜಾಬ್ ಪಡೆ ಏನೋ ಗೆದ್ದು ಬೀಗೋ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಚೆನ್ನೈನಲ್ಲಿ ಸೋತು ಮುಖಭಂಗ ಅನುಭವಿಸಿರುವ ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್ ಮನೆ ಮಾಡಿದೆ.
ಹೊಸ ಲೋಗೊ, ಹೊಸ ಹೆಸರು, ಹೊಸ ಜರ್ಸಿ.. ಆರ್ಸಿಬಿ ತಂಡ 2024ನೇ ಐಪಿಎಲ್ನಲ್ಲಿ ಎಲ್ಲವನ್ನ ಬದಲಿಸಿಕೊಂಡು ಹೊಸ ಹುರುಪಿನಲ್ಲಿ ಕಣಕ್ಕಿಳಿದಿತ್ತು. ಆದ್ರೆ, ಮೊದಲ ಪಂದ್ಯ ದೇವರಿಗೆ ಕೊಡೋ ಸಂಪ್ರದಾಯ ಹಾಗೆ ಉಳಿದುಬಿಡ್ತು. ಕಪ್ ಗೆಲ್ಲದಿದ್ರೂ ಪರ್ವಾಗಿಲ್ಲ. ಬದ್ಧವೈರಿ ಸಿಎಸ್ಕೆ ತಂಡವನ್ನ ಸೋಲಿಸಲೇಬೇಕು ಅನ್ನೋದು ಫ್ಯಾನ್ಸ್ ಹೆಬ್ಬಯಕೆ ಆಗಿತ್ತು. ಆದ್ರೆ, ಆರ್ಸಿಬಿ ಸೋಲಿಗೆ ಶರಣಾಯ್ತು.
ಸೂಪರ್ ಸ್ಟಾರ್ಗಳ ದಂಡು ಬಿಗ್ ಹಿಟ್ಟರ್ಸ್, ಗೇಮ್ ಚೇಂಜರ್ಸ್, ಕ್ವಾಲಿಟಿ ಬೌಲಿಂಗ್ ಪಡೆ. ಎಲ್ಲವೂ ಇತ್ತು. ಆದ್ರೆ ಯಾವುದೂ ಪ್ರಯೋಜನಕ್ಕೆ ಬರ್ಲಿಲ್ಲ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಆರ್ಸಿಬಿ ಹಿನ್ನಡೆ ಅನುಭವಿಸಿದ್ದು, ಚೆಪಾಕ್ ಸೋಲಿಗೆ ಗುರಿ ಮಾಡ್ತು.
ಹಿಂದಿನ ಪಂದ್ಯದಲ್ಲಾದ ತಪ್ಪು ತಿದ್ದಿಕೊಂಡ್ರೆ ಗೆಲುವು ನಮ್ದೇ.!
ಗೆಲುವು, ಸೋಲು ಆಟದ ಒಂದು ಭಾಗ. ಸೋಲಿನಿಂದ ಫಾಫ್ ಡುಪ್ಲೆಸಿ ಪಡೆ ಕುಗ್ಗಬೇಕಿಲ್ಲ. ಮೊದಲ ಪಂದ್ಯದ ಕಹಿ ನೋವನ್ನ ಮರೆತು, ಮುಂದೇನು ಮಾಡಬೇಕು ಅನ್ನೋದ್ರರ ಬಗ್ಗೆ ಗಾಢವಾಗಿ ಯೋಚಿಸಬೇಕಿದೆ. ಹಿಂದಿನ ಪಂದ್ಯದಲ್ಲಾದ ತಪ್ಪನ್ನ ಇಂದು ತಿದ್ದಿಕೊಂಡ್ರೆ ಅಂದು ಕೈ ತಪ್ಪಿದ ಗೆಲುವು ಪಂಜಾಬ್ ಕಿಂಗ್ಸ್ ವಿರುದ್ಧ ಡೆಫಿನೆಟ್ಲಿ ನಮ್ಮದಾಗಲಿದೆ. ಹಾಗಾದ್ರೆ ಆರ್ಸಿಬಿ ಗೆಲ್ಲಲು ಮಾಡಬೇಕಿರೋದೇನು?.
ಇದನ್ನೂ ಓದಿ: RCB.. ಕೊಹ್ಲಿ ಚಾಂಟ್ಸ್ ಬಿಟ್ರೆ ಏನು ಕೇಳಲ್ಲ.. ಚಿನ್ನಸ್ವಾಮಿಯಲ್ಲಿ ನೆಚ್ಚಿನ ಅಭಿಮಾನಿಗಳ ಮುಂದೆ ಹೊಸ ಅಧ್ಯಾಯ ಶುರು
ಏನು ಸುಧಾರಿಸಬೇಕು..?
ಎರಡು ದಿನಗಳ ಗ್ಯಾಂಪ್ ಅಂತರದಲ್ಲಿ ಆರ್ಸಿಬಿ ಮತ್ತೊಂದು ವಾರ್ಗೆ ಸಜ್ಜಾಗಿದೆ. ತವರಿನಂಗಳದಲ್ಲಿ ಭರ್ಜರಿ ಅಭ್ಯಾಸವನ್ನೂ ನಡೆಸಿದೆ. ಇಂದು ಹೋಮ್ಗ್ರೌಂಡ್ನಲ್ಲಿ ಹ್ಯೂಜ್ ಫ್ಯಾನ್ಸ್ ಸಪೋರ್ಟ್ ತಂಡಕ್ಕೆ ಸಿಗಲಿದೆ. ತಪ್ಪುಗಳನ್ನ ತಿದ್ದಿಕೊಂಡು ಅಖಾಡಕ್ಕಿಳಿದ್ರೆ, ಚಿನ್ನಸ್ವಾಮಿ ಮೈದಾನದಲ್ಲಿ ವಿಜಯ ಪತಾಕೆ ಹಾರಿಸೋದು ಸವಾಲಿನ ವಿಚಾರವೇನಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಬದ್ಧವೈರಿ CSKನಾ ಸೋಲಿಸಬೇಕಿತ್ತು ಎನ್ನುವುದು ಫ್ಯಾನ್ಸ್ ಬಯಕೆ
ಆರ್ಸಿಬಿ ಮೊದಲ ಸೋಲಿನಿಂದ ಕುಗ್ಗಬೇಕಿಲ್ಲ, ಸಿಡಿದು ನಿಲ್ಲಬೇಕಿದೆ!
ಪಂಜಾಬ್ಗೆ ಪಂಚ್ ಕೊಡಲು RCB ಟೀಮ್ ಏನು ಮಾಡಬೇಕು..?
ವಿರಾಟ್ ಕೊಹ್ಲಿ ಇದು ಹೊಸ ಅಧ್ಯಾಯ ಅಂತ ಹೇಳಿದ್ದೆ ಬಂತು. ಆದ್ರೆ ಆನ್ಫೀಲ್ಡ್ನಲ್ಲಿ ಆರ್ಸಿಬಿ ತಂಡ ಹಳೆ ಚಾಳಿಯನ್ನ ಮುಂದುವರಿಸಿದೆ. ಶುಭಾರಂಭ ಮಾಡಬೇಕಾದ ರೆಡ್ ಆರ್ಮಿ, ಚೆಪಾಕ್ ಫೈಟ್ ಸೋತಾಗಿದೆ. ಇಂದು ತವರಿನಲ್ಲಿ 2ನೇ ಫೈಟ್ಗೆ ಸಜ್ಜಾಗಿರೋ ಆರ್ಸಿಬಿ ಗೆಲ್ಲಲ್ಲು ಏನ್ ಮಾಡ್ಬೇಕು.?
ಈ ಸೀಸನ್ನ ಮೊದಲ ಐಪಿಎಲ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಎದುರಾಳಿ ಪಂಜಾಬ್ ಪಡೆ ಏನೋ ಗೆದ್ದು ಬೀಗೋ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಚೆನ್ನೈನಲ್ಲಿ ಸೋತು ಮುಖಭಂಗ ಅನುಭವಿಸಿರುವ ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್ ಮನೆ ಮಾಡಿದೆ.
ಹೊಸ ಲೋಗೊ, ಹೊಸ ಹೆಸರು, ಹೊಸ ಜರ್ಸಿ.. ಆರ್ಸಿಬಿ ತಂಡ 2024ನೇ ಐಪಿಎಲ್ನಲ್ಲಿ ಎಲ್ಲವನ್ನ ಬದಲಿಸಿಕೊಂಡು ಹೊಸ ಹುರುಪಿನಲ್ಲಿ ಕಣಕ್ಕಿಳಿದಿತ್ತು. ಆದ್ರೆ, ಮೊದಲ ಪಂದ್ಯ ದೇವರಿಗೆ ಕೊಡೋ ಸಂಪ್ರದಾಯ ಹಾಗೆ ಉಳಿದುಬಿಡ್ತು. ಕಪ್ ಗೆಲ್ಲದಿದ್ರೂ ಪರ್ವಾಗಿಲ್ಲ. ಬದ್ಧವೈರಿ ಸಿಎಸ್ಕೆ ತಂಡವನ್ನ ಸೋಲಿಸಲೇಬೇಕು ಅನ್ನೋದು ಫ್ಯಾನ್ಸ್ ಹೆಬ್ಬಯಕೆ ಆಗಿತ್ತು. ಆದ್ರೆ, ಆರ್ಸಿಬಿ ಸೋಲಿಗೆ ಶರಣಾಯ್ತು.
ಸೂಪರ್ ಸ್ಟಾರ್ಗಳ ದಂಡು ಬಿಗ್ ಹಿಟ್ಟರ್ಸ್, ಗೇಮ್ ಚೇಂಜರ್ಸ್, ಕ್ವಾಲಿಟಿ ಬೌಲಿಂಗ್ ಪಡೆ. ಎಲ್ಲವೂ ಇತ್ತು. ಆದ್ರೆ ಯಾವುದೂ ಪ್ರಯೋಜನಕ್ಕೆ ಬರ್ಲಿಲ್ಲ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಆರ್ಸಿಬಿ ಹಿನ್ನಡೆ ಅನುಭವಿಸಿದ್ದು, ಚೆಪಾಕ್ ಸೋಲಿಗೆ ಗುರಿ ಮಾಡ್ತು.
ಹಿಂದಿನ ಪಂದ್ಯದಲ್ಲಾದ ತಪ್ಪು ತಿದ್ದಿಕೊಂಡ್ರೆ ಗೆಲುವು ನಮ್ದೇ.!
ಗೆಲುವು, ಸೋಲು ಆಟದ ಒಂದು ಭಾಗ. ಸೋಲಿನಿಂದ ಫಾಫ್ ಡುಪ್ಲೆಸಿ ಪಡೆ ಕುಗ್ಗಬೇಕಿಲ್ಲ. ಮೊದಲ ಪಂದ್ಯದ ಕಹಿ ನೋವನ್ನ ಮರೆತು, ಮುಂದೇನು ಮಾಡಬೇಕು ಅನ್ನೋದ್ರರ ಬಗ್ಗೆ ಗಾಢವಾಗಿ ಯೋಚಿಸಬೇಕಿದೆ. ಹಿಂದಿನ ಪಂದ್ಯದಲ್ಲಾದ ತಪ್ಪನ್ನ ಇಂದು ತಿದ್ದಿಕೊಂಡ್ರೆ ಅಂದು ಕೈ ತಪ್ಪಿದ ಗೆಲುವು ಪಂಜಾಬ್ ಕಿಂಗ್ಸ್ ವಿರುದ್ಧ ಡೆಫಿನೆಟ್ಲಿ ನಮ್ಮದಾಗಲಿದೆ. ಹಾಗಾದ್ರೆ ಆರ್ಸಿಬಿ ಗೆಲ್ಲಲು ಮಾಡಬೇಕಿರೋದೇನು?.
ಇದನ್ನೂ ಓದಿ: RCB.. ಕೊಹ್ಲಿ ಚಾಂಟ್ಸ್ ಬಿಟ್ರೆ ಏನು ಕೇಳಲ್ಲ.. ಚಿನ್ನಸ್ವಾಮಿಯಲ್ಲಿ ನೆಚ್ಚಿನ ಅಭಿಮಾನಿಗಳ ಮುಂದೆ ಹೊಸ ಅಧ್ಯಾಯ ಶುರು
ಏನು ಸುಧಾರಿಸಬೇಕು..?
ಎರಡು ದಿನಗಳ ಗ್ಯಾಂಪ್ ಅಂತರದಲ್ಲಿ ಆರ್ಸಿಬಿ ಮತ್ತೊಂದು ವಾರ್ಗೆ ಸಜ್ಜಾಗಿದೆ. ತವರಿನಂಗಳದಲ್ಲಿ ಭರ್ಜರಿ ಅಭ್ಯಾಸವನ್ನೂ ನಡೆಸಿದೆ. ಇಂದು ಹೋಮ್ಗ್ರೌಂಡ್ನಲ್ಲಿ ಹ್ಯೂಜ್ ಫ್ಯಾನ್ಸ್ ಸಪೋರ್ಟ್ ತಂಡಕ್ಕೆ ಸಿಗಲಿದೆ. ತಪ್ಪುಗಳನ್ನ ತಿದ್ದಿಕೊಂಡು ಅಖಾಡಕ್ಕಿಳಿದ್ರೆ, ಚಿನ್ನಸ್ವಾಮಿ ಮೈದಾನದಲ್ಲಿ ವಿಜಯ ಪತಾಕೆ ಹಾರಿಸೋದು ಸವಾಲಿನ ವಿಚಾರವೇನಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ