ಸೀಸನ್-17ರಲ್ಲೂ ಚೆನ್ನೈ ಕಪ್ ಗೆಲ್ಲೋದು ಗ್ಯಾರಂಟಿನಾ?
ಪ್ರತಿ ಸ್ಲಾಟ್ನಲ್ಲೂ ಸ್ಪೆಷಲಿಸ್ಟ್ ಆಟಗಾರರ ದಂಡೇ ಇದ್ದಾರೆ
11 ಆಲ್ರೌಂಡರ್ಸ್.. ಇವ್ರೇ ಚೆನ್ನೈ ಕಿಂಗ್ಸ್ ಬಲ..!
ಐಪಿಎಲ್ ಸೀಸನ್-17 ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಮೊದಲ ಫೈಟ್ನಲ್ಲೇ ಅಂಗಳದಲ್ಲಿ ಆರ್ಸಿಬಿಗೆ ನಿಜಕ್ಕೂ ಬಿಗ್ ಚಾಲೆಂಜ್ ಎದುರಾಗಲಿದೆ. ಧೋನಿ ನಾಯಕನ ಪಟ್ಟ ತ್ಯಜಿಸಿರಬಹುದು. ಹಾಗಂತ ಸಿಎಸ್ಕೆಯನ್ನ ಸುಲಭಕ್ಕೆ ಪರಿಗಣಿಸುವಂತಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ಇತಿಹಾಸದ ಚಾಂಪಿಯನ್ ಟೀಮ್. ದಾಖಲೆಯ ಐದು ಬಾರಿ ಐಪಿಎಲ್ ಮುಕುಟಕ್ಕೆ ಮುತ್ತಿಟ್ಟಿರುವ ಚೆನ್ನೈ, ಈ ಸಲನೂ ಕಪ್ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ. ಈ ನಿಟ್ಟಿನಲ್ಲೇ ಹೋಮ್ ವರ್ಕ್ ಮುಗಿಸಿರೋ ಚೆನ್ನೈ, ಅಖಾಡದಲ್ಲಿ ಗೆಲ್ಲೋ ಭರವಸೆಯಲ್ಲಿದೆ. ಇದಕ್ಕೆಲ್ಲಾ ಕಾರಣ ಚೆನ್ನೈ ತಂಡದಲ್ಲಿನ ಪರಿಪೂರ್ಣತೆ. ಹೀಗಾಗಿ ಚೆನ್ನೈ, ಮತ್ತೊಮ್ಮೆ ಕಪ್ ಗೆಲ್ಲೋ ಹಾಟ್ ಫೇವರಿಟ್ ಅಂದ್ರೂ ತಪ್ಪಿಲ್ಲ.
ಚೆನ್ನೈ ಬ್ಯಾಟಿಂಗ್ ಲೈನ್ ಆಪ್ ಡಿಸೆಂಟ್..!
ಚೆನ್ನೈ ಬ್ಯಾಟಿಂಗ್ ವಿಭಾಗವಂತೂ ನಿಜಕ್ಕೂ ಡಿಸೆಂಟ್. ಪವರ್ ಪ್ಲೇಗೆ ತಕ್ಕಂತೆ ಪವರ್ ಬ್ಯಾಟಿಂಗ್ ನಡೆಸೋ ಆಟಗಾರಾರಿದ್ದಾರೆ. ಋತುರಾಜ್, ಡಿವೋನ್ ಕಾನ್ವೆ, ಅಜಿಂಕ್ಯಾ ರಹಾನೆ ಟಾಪ್ ಆರ್ಡರ್ನಲ್ಲಿ ಘರ್ಜಿಸೋಕೆ ಸದಾ ಸಿದ್ಧರಾಗಿದ್ದಾರೆ.
ಮಿಡಲ್ ಆರ್ಡರ್ನಲ್ಲಿ ದರ್ಬಾರ್ ನಡೆಸಲು ಶಿವಂ ದುಬೆ, ಡೇರಿಲ್ ಮಿಚೆಲ್ ಇದ್ದಾರೆ. ಇವರನ್ನ ಕಟ್ಟಿ ಹಾಕೋದು ಸುಲಭದ ಮಾತು ಅಲ್ಲವೇ ಅಲ್ಲ. ಗೆಲುವಿನ ದಡ ಸೇರಿಸುವ ಮ್ಯಾಚ್ ಫಿನಿಷರ್ ರೋಲ್ ನಿಭಾಯಿಸಲು ಧೋನಿ ಹಾಗೂ ಜಡೇಜಾ ಇದ್ದಾರೆ. ಯಾವುದೇ ಪಿಚ್ನಲ್ಲಿ ಸ್ಕೋರ್ ಮಾಡಬಲ್ಲ ಇವರು, ಚೆನ್ನೈ ಪಾಲಿನ ಬಿಗ್ ವೆಪನ್ಸ್.
11 ಆಲ್ರೌಂಡರ್ಸ್.. ಇವ್ರೇ ಚೆನ್ನೈ ಬಲ
ಕಳೆದ ಸೀಸನ್ನಲ್ಲಿ ಬಲಿಷ್ಟ ಸೈನ್ಯ ಕಟ್ಟಿದ್ದ ಚೆನ್ನೈ, ಬರೋಬ್ಬರಿ 6 ಮಂದಿ ಆಲ್ರೌಂಡರ್ಗಳಿಗೆ ಸ್ಥಾನ ನೀಡಿತ್ತು. ಈ ಸೀನಸ್ನಲ್ಲಿ ಬರೋಬ್ಬರಿ 11 ಮಂದಿ ಆಲ್ರೌಂಡರ್ಗಳಿಗೆ ಮಣೆಹಾಕಿದೆ. ಈ ಆಲ್ರೌಂಡರ್ಗಳಿಗೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ತಾಕತ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಈ ಆಲ್ರೌಂಡರ್ಗಳು, ಯಾವುದೇ ಕ್ರಮಾಂಕದಲ್ಲಿ ಬೇಕಾದ್ರೂ ಬ್ಯಾಟ್ ಮಾಡಬಲ್ಲರು. ಓಪನರ್ ಟು ಮ್ಯಾಚ್ ಫಿನಿಷಿಂಗ್ ಎಲ್ಲಾ ರೋಲ್ ಪ್ಲೇ ಮಾಡೋ ಕಲೆಗಾರಿಕೆ ಇದೆ. ಫಾಸ್ಟ್ ಬೌಲಿಂಗ್, ಸ್ಪಿನ್ ಅಸ್ತ್ರಗಳೂ ಬತ್ತಳಿಕೆಯಲ್ಲಿದೆ.
ಸಿಎಸ್ಕೆನಲ್ಲಿ ಸ್ಪೆಷಲಿಸ್ಟ್ ಬೌಲರ್ಗಳ ದಂಡು..!
ತಂಡದ ಬತ್ತಳಿಕೆಯಲ್ಲಿರುವ ಬಿಗ್ ವೆಪನ್ಗಳೇ ಈ ಬೌಲರ್ಗಳು. ಪವರ್ ಪ್ಲೇನಲ್ಲಿ ಚಮತ್ಕಾರ ಮಾಡಲು ದೀಪಕ್ ಚಹರ್ ಹಾಗೂ ಮುಖೇಶ್ ಚೌಧರಿ ಇದ್ದಾರೆ. ಮಿಡಲ್ ಓವರ್ಗಳಲ್ಲಿ ಮ್ಯಾಜಿಕ್ ಮಾಡಲು ಜಡೇಜಾ, ಮಹೀಷ ತೀಕ್ಷ್ಣಣ ಜೊತೆಗೆ ಮೊಯಿನ್ ಅಲಿ ಇದ್ದಾರೆ. ಡೆತ್ ಓವರ್ಗಳಲ್ಲಿ ಎದುರಾಳಿ ಲೆಕ್ಕಚಾರ ಬುಡಮೇಲು ಮಾಡೋ ಮಹೀಶಾ ಪತಿರಣ ಇದ್ದಾರೆ. ಎಲ್ಲಾ ವಿಭಾಗಗಳಲ್ಲೂ ಸ್ಪಷ್ಟ ಹಾಗೂ ಬಲಿಷ್ಟವಾಗಿದ್ರೂ, ಚೆನ್ನೈ ತಂಡದಲ್ಲಿ ವೀಕ್ನೆಸ್ಗಳಿವೆ.
ಚೆನ್ನೈ ತಂಡದ ವಿಕ್ನೇಸ್..!
ಧೋನಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರೂ, ವಿಕೆಟ್ ಹಿಂದೆ ನಿಂತು ತಂತ್ರ ಪ್ರತಿತಂತ್ರಗಳನ್ನ ರೂಪಿಸ್ತಾ ಯಂಗ್ ಋತುರಾಜ್ನ ಗೈಡ್ ಮಾಡೋದು ಪಕ್ಕಾ. ಧೋನಿಯ ಸಲಹೆ ಸೂಚನೆಗಳನ್ನ ಪಾಲಿಸಿದ್ರೆ ಸಾಕು ತಂಡ ವಿನ್ನಿಂಗ್ ಟ್ರ್ಯಾಕ್ನಲ್ಲಿ ಹೋಗಲಿದೆ. ಇದಿಷ್ಟೇ ಅಲ್ಲ.! ಈ ವರ್ಷವೂ ಚೆನ್ನೈ ಪಾಲಿಗೆ ಎಮೋಷನಲ್ ಇಯರ್. ಧೋನಿಗಾಗಿ ಕಪ್ ಗೆಲ್ಲೋ ಹಂಬಲ, ಛಲ ಆಟಗಾರರಲ್ಲಿದೆ. ಆ ಕಿಚ್ಚು ಸಾಕು ಚಾಂಪಿಯನ್ ಆಗೋಕೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸೀಸನ್-17ರಲ್ಲೂ ಚೆನ್ನೈ ಕಪ್ ಗೆಲ್ಲೋದು ಗ್ಯಾರಂಟಿನಾ?
ಪ್ರತಿ ಸ್ಲಾಟ್ನಲ್ಲೂ ಸ್ಪೆಷಲಿಸ್ಟ್ ಆಟಗಾರರ ದಂಡೇ ಇದ್ದಾರೆ
11 ಆಲ್ರೌಂಡರ್ಸ್.. ಇವ್ರೇ ಚೆನ್ನೈ ಕಿಂಗ್ಸ್ ಬಲ..!
ಐಪಿಎಲ್ ಸೀಸನ್-17 ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಮೊದಲ ಫೈಟ್ನಲ್ಲೇ ಅಂಗಳದಲ್ಲಿ ಆರ್ಸಿಬಿಗೆ ನಿಜಕ್ಕೂ ಬಿಗ್ ಚಾಲೆಂಜ್ ಎದುರಾಗಲಿದೆ. ಧೋನಿ ನಾಯಕನ ಪಟ್ಟ ತ್ಯಜಿಸಿರಬಹುದು. ಹಾಗಂತ ಸಿಎಸ್ಕೆಯನ್ನ ಸುಲಭಕ್ಕೆ ಪರಿಗಣಿಸುವಂತಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ಇತಿಹಾಸದ ಚಾಂಪಿಯನ್ ಟೀಮ್. ದಾಖಲೆಯ ಐದು ಬಾರಿ ಐಪಿಎಲ್ ಮುಕುಟಕ್ಕೆ ಮುತ್ತಿಟ್ಟಿರುವ ಚೆನ್ನೈ, ಈ ಸಲನೂ ಕಪ್ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ. ಈ ನಿಟ್ಟಿನಲ್ಲೇ ಹೋಮ್ ವರ್ಕ್ ಮುಗಿಸಿರೋ ಚೆನ್ನೈ, ಅಖಾಡದಲ್ಲಿ ಗೆಲ್ಲೋ ಭರವಸೆಯಲ್ಲಿದೆ. ಇದಕ್ಕೆಲ್ಲಾ ಕಾರಣ ಚೆನ್ನೈ ತಂಡದಲ್ಲಿನ ಪರಿಪೂರ್ಣತೆ. ಹೀಗಾಗಿ ಚೆನ್ನೈ, ಮತ್ತೊಮ್ಮೆ ಕಪ್ ಗೆಲ್ಲೋ ಹಾಟ್ ಫೇವರಿಟ್ ಅಂದ್ರೂ ತಪ್ಪಿಲ್ಲ.
ಚೆನ್ನೈ ಬ್ಯಾಟಿಂಗ್ ಲೈನ್ ಆಪ್ ಡಿಸೆಂಟ್..!
ಚೆನ್ನೈ ಬ್ಯಾಟಿಂಗ್ ವಿಭಾಗವಂತೂ ನಿಜಕ್ಕೂ ಡಿಸೆಂಟ್. ಪವರ್ ಪ್ಲೇಗೆ ತಕ್ಕಂತೆ ಪವರ್ ಬ್ಯಾಟಿಂಗ್ ನಡೆಸೋ ಆಟಗಾರಾರಿದ್ದಾರೆ. ಋತುರಾಜ್, ಡಿವೋನ್ ಕಾನ್ವೆ, ಅಜಿಂಕ್ಯಾ ರಹಾನೆ ಟಾಪ್ ಆರ್ಡರ್ನಲ್ಲಿ ಘರ್ಜಿಸೋಕೆ ಸದಾ ಸಿದ್ಧರಾಗಿದ್ದಾರೆ.
ಮಿಡಲ್ ಆರ್ಡರ್ನಲ್ಲಿ ದರ್ಬಾರ್ ನಡೆಸಲು ಶಿವಂ ದುಬೆ, ಡೇರಿಲ್ ಮಿಚೆಲ್ ಇದ್ದಾರೆ. ಇವರನ್ನ ಕಟ್ಟಿ ಹಾಕೋದು ಸುಲಭದ ಮಾತು ಅಲ್ಲವೇ ಅಲ್ಲ. ಗೆಲುವಿನ ದಡ ಸೇರಿಸುವ ಮ್ಯಾಚ್ ಫಿನಿಷರ್ ರೋಲ್ ನಿಭಾಯಿಸಲು ಧೋನಿ ಹಾಗೂ ಜಡೇಜಾ ಇದ್ದಾರೆ. ಯಾವುದೇ ಪಿಚ್ನಲ್ಲಿ ಸ್ಕೋರ್ ಮಾಡಬಲ್ಲ ಇವರು, ಚೆನ್ನೈ ಪಾಲಿನ ಬಿಗ್ ವೆಪನ್ಸ್.
11 ಆಲ್ರೌಂಡರ್ಸ್.. ಇವ್ರೇ ಚೆನ್ನೈ ಬಲ
ಕಳೆದ ಸೀಸನ್ನಲ್ಲಿ ಬಲಿಷ್ಟ ಸೈನ್ಯ ಕಟ್ಟಿದ್ದ ಚೆನ್ನೈ, ಬರೋಬ್ಬರಿ 6 ಮಂದಿ ಆಲ್ರೌಂಡರ್ಗಳಿಗೆ ಸ್ಥಾನ ನೀಡಿತ್ತು. ಈ ಸೀನಸ್ನಲ್ಲಿ ಬರೋಬ್ಬರಿ 11 ಮಂದಿ ಆಲ್ರೌಂಡರ್ಗಳಿಗೆ ಮಣೆಹಾಕಿದೆ. ಈ ಆಲ್ರೌಂಡರ್ಗಳಿಗೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ತಾಕತ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಈ ಆಲ್ರೌಂಡರ್ಗಳು, ಯಾವುದೇ ಕ್ರಮಾಂಕದಲ್ಲಿ ಬೇಕಾದ್ರೂ ಬ್ಯಾಟ್ ಮಾಡಬಲ್ಲರು. ಓಪನರ್ ಟು ಮ್ಯಾಚ್ ಫಿನಿಷಿಂಗ್ ಎಲ್ಲಾ ರೋಲ್ ಪ್ಲೇ ಮಾಡೋ ಕಲೆಗಾರಿಕೆ ಇದೆ. ಫಾಸ್ಟ್ ಬೌಲಿಂಗ್, ಸ್ಪಿನ್ ಅಸ್ತ್ರಗಳೂ ಬತ್ತಳಿಕೆಯಲ್ಲಿದೆ.
ಸಿಎಸ್ಕೆನಲ್ಲಿ ಸ್ಪೆಷಲಿಸ್ಟ್ ಬೌಲರ್ಗಳ ದಂಡು..!
ತಂಡದ ಬತ್ತಳಿಕೆಯಲ್ಲಿರುವ ಬಿಗ್ ವೆಪನ್ಗಳೇ ಈ ಬೌಲರ್ಗಳು. ಪವರ್ ಪ್ಲೇನಲ್ಲಿ ಚಮತ್ಕಾರ ಮಾಡಲು ದೀಪಕ್ ಚಹರ್ ಹಾಗೂ ಮುಖೇಶ್ ಚೌಧರಿ ಇದ್ದಾರೆ. ಮಿಡಲ್ ಓವರ್ಗಳಲ್ಲಿ ಮ್ಯಾಜಿಕ್ ಮಾಡಲು ಜಡೇಜಾ, ಮಹೀಷ ತೀಕ್ಷ್ಣಣ ಜೊತೆಗೆ ಮೊಯಿನ್ ಅಲಿ ಇದ್ದಾರೆ. ಡೆತ್ ಓವರ್ಗಳಲ್ಲಿ ಎದುರಾಳಿ ಲೆಕ್ಕಚಾರ ಬುಡಮೇಲು ಮಾಡೋ ಮಹೀಶಾ ಪತಿರಣ ಇದ್ದಾರೆ. ಎಲ್ಲಾ ವಿಭಾಗಗಳಲ್ಲೂ ಸ್ಪಷ್ಟ ಹಾಗೂ ಬಲಿಷ್ಟವಾಗಿದ್ರೂ, ಚೆನ್ನೈ ತಂಡದಲ್ಲಿ ವೀಕ್ನೆಸ್ಗಳಿವೆ.
ಚೆನ್ನೈ ತಂಡದ ವಿಕ್ನೇಸ್..!
ಧೋನಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರೂ, ವಿಕೆಟ್ ಹಿಂದೆ ನಿಂತು ತಂತ್ರ ಪ್ರತಿತಂತ್ರಗಳನ್ನ ರೂಪಿಸ್ತಾ ಯಂಗ್ ಋತುರಾಜ್ನ ಗೈಡ್ ಮಾಡೋದು ಪಕ್ಕಾ. ಧೋನಿಯ ಸಲಹೆ ಸೂಚನೆಗಳನ್ನ ಪಾಲಿಸಿದ್ರೆ ಸಾಕು ತಂಡ ವಿನ್ನಿಂಗ್ ಟ್ರ್ಯಾಕ್ನಲ್ಲಿ ಹೋಗಲಿದೆ. ಇದಿಷ್ಟೇ ಅಲ್ಲ.! ಈ ವರ್ಷವೂ ಚೆನ್ನೈ ಪಾಲಿಗೆ ಎಮೋಷನಲ್ ಇಯರ್. ಧೋನಿಗಾಗಿ ಕಪ್ ಗೆಲ್ಲೋ ಹಂಬಲ, ಛಲ ಆಟಗಾರರಲ್ಲಿದೆ. ಆ ಕಿಚ್ಚು ಸಾಕು ಚಾಂಪಿಯನ್ ಆಗೋಕೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್