ಸಿಎಸ್​​ಕೆಗೆ ಆರ್​ಸಿಬಿ ಮೇಲಿದೆ ಭಯಂಕರ ಕೋಪ.. ಯಾಕೆ ಅಷ್ಟೊಂದು ಸಿಟ್ಟು ಗೊತ್ತಾ..?

author-image
Ganesh
Updated On
VIDEO.. ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​; ಭವಿಷ್ಯ ವಾಣಿ ನುಡಿದ ಗಿಳಿ.. ಹೇಳಿದ್ದೇನು?
Advertisment
  • ಐಪಿಎಲ್​​ ಅಖಾಡದಲ್ಲಿಂದು ಮದಗಜಗಳ ಕಾಳಗ
  • ಚೆಪಾಕ್​​ ಮೈದಾನದಲ್ಲಿ RCB VS CSK ಹಣಾಹಣಿ
  • ಹೈವೋಲ್ಟೆಜ್​​ ಕದನ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತರ

ಇಡೀ ಐಪಿಎಲ್​ ಟೂರ್ನಿಯದ್ದೇ ಒಂದು ಲೆಕ್ಕವಾದ್ರೆ ಈ ಪಂದ್ಯದ್ದೇ ಒಂದು ಲೆಕ್ಕ. ಶ್ರೀಮಂತ ಕ್ರಿಕೆಟ್​ ಲೀಗ್​ನ ಹೈಪ್ರೋಪೈಲ್​ ತಂಡಗಳ ನಡುವಿನ ಬಿಗ್​ ಬ್ಯಾಟಲ್​​ಗೆ ಚೆನ್ನೈನ ಚೆಪಾಕ್​ ರೆಡಿಯಾಗಿದೆ. ಚೆನ್ನೈ ಸೂಪರ್​​ ಕಿಂಗ್ಸ್​ vs ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವಿನ ಫೈಟ್​ನ ಫೀವರ್​​ ಕ್ರಿಕೆಟ್​ ಜಗತ್ತನ್ನ ಆವರಿಸಿದೆ.

ಅಭಿಮಾನಿಗಳ ವಲಯದಲ್ಲಿ ಹೈವೋಲ್ಟೆಜ್​​ ಕದನದ ಕ್ರೇಜ್​ ಡಬಲ್​ ಆಗಿದೆ. ಹೈಪ್​ ಹೆಚ್ಚಾಗಿದೆ. ಜಿದ್ದಾಜಿದ್ದಿನ ಹಣಾಹಣಿಯ ನಿರೀಕ್ಷೆ ಎಲ್ಲರಲ್ಲಿದೆ. ಯೆಲ್ಲೋ ಆರ್ಮಿ ಇಂದಿನ ಪಂದ್ಯದಲ್ಲಿ ರೆಡ್​ ಆರ್ಮಿಯನ್ನ ಸೋಲಿಸಿಯೇ ತೀರಲು ಪಣತೊಟ್ಟಿದೆ. ಅದಕ್ಕೆ ಕಾರಣ ಕೂಡ ಇದೆ.

ಇದನ್ನೂ ಓದಿ: ತವರಿನಲ್ಲಿ ಹೈದ್ರಾಬಾದ್​ಗೆ ಭಾರೀ ಮುಖಭಂಗ.. ರಿಷಭ್ ಪಂತ್ ಮುಂದೆ ತಲೆ ಬಾಗಿದ ಕಮಿನ್ಸ್​

publive-image

ದಿನಾಂಕ - ಮೇ 18, 2024

ತುಂಬಾ ಹಳೆ ಕತೆಯಲ್ಲ. ಕಳೆದ ಸೀಸನ್​​​ ಐಪಿಎಲ್​ನಲ್ಲಿ ಆರ್​​ಸಿಬಿ-ಸಿಎಸ್​​ಕೆ ಆಡಿದ ಕೊನೆಯ ಲೀಗ್​ ಪಂದ್ಯದ ಕತೆ. ಮೇ 18, 2024ರಂದು ನಡೆದಿದ್ದ ಡು ಆರ್​ ಡೈ ಕದನ. ಫ್ಲೇ ಆಫ್​ ಎಂಟ್ರಿಗೆ ಉಭಯ ತಂಡಗಳಿಗೂ ಮುಂದೂ ಗೆಲ್ಲಲೇಬೇಕಾದ ಪಂದ್ಯ ಅದು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿತ್ತು. ಯಾವಾಗ್ಲೂ ಆರ್​​ಸಿಬಿ.. ಆರ್​​ಸಿಬಿ.. ಎಂಬ ಕಹಳೆ ಮೊಳಗುವ ಆರ್​​​ಸಿಯ ಭದ್ರಕೋಟೆಯಲ್ಲಿ ಅಂದು ಸಿಎಸ್​ಕೆ ಪರವೂ ಘೋಷಣೆಗಳು ಕೇಳಿ ಬಂದಿದ್ವು. ರೆಡ್​​ ಜೆರ್ಸಿಗಳ ಜೊತೆಗೆ ಯೆಲ್ಲೋ ಜೆರ್ಸಿಗಳು ರಾರಾಜಿಸಿದ್ವು.

ಚೆನ್ನೈ ಬೌಲರ್​ಗಳ ಚೆಂಡಾಡಿದ RCB ಬ್ಯಾಟರ್ಸ್​

ಡು ಆರ್​​ ಡೈ ಬ್ಯಾಟಲ್​ನಲ್ಲಿ ಮೊದಲು ಬ್ಯಾಟಿಂಗ್​ಗಿಳಿದ ಆರ್​​ಸಿಬಿ ಹೋಮ್​​​ಗ್ರೌಂಡ್​​ನಲ್ಲಿ ಚೆನ್ನೈ ಬೌಲರ್​ಗಳ ಚೆಂಡಾಡಿತು. ಕೊಹ್ಲಿ, ಫಾಫ್​ ಡುಪ್ಲೆಸಿ, ರಜತ್​ ಪಾಟಿದಾರ್​, ಕ್ಯಾಮರೂನ್​ ಗ್ರೀನ್​​.. ಅಂತಿಮ ಹಂತದಲ್ಲಿ ಕಣದಲ್ಲಿ ಮ್ಯಾಕ್ಸ್​ವೆಲ್​ ಎಲ್ಲಾ ಬೌಂಡರಿ, ಸಿಕ್ಸರ್​ಗಳಲ್ಲೇ ರನ್​ ಡೀಲ್​ ಮಾಡಿದ್ರು. 20 ಓವರ್​ ಅಂತ್ಯಕ್ಕೆ ಆರ್​​ಸಿಬಿ 218 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕಿತ್ತು.

ಇದನ್ನೂ ಓದಿ: ಸಿಎಸ್​​ಕೆ ತಂಡದ ಈ ಬ್ರಹ್ಮಾಸ್ತ್ರ ಎದುರಿಸೋದೇ RCBಗೆ ಇವತ್ತು ದೊಡ್ಡ ಚಾಲೆಂಜ್..!

publive-image

RCB ಬೊಂಬಾಟ್​​ ಬೌಲಿಂಗ್​​

218 ರನ್​ಗಳಿಸಿದ್ರೂ ಪ್ಲೇ ಆಫ್​ಗೆ ಕ್ವಾಲಿಫೈ ಆಗಲು ಸಿಎಸ್​ಕೆಯನ್ನ 200ರ ಒಳಗೆ ಕಟ್ಟಿ ಹಾಕಬೇಕಿತ್ತು. ಬೊಂಬಾಟ್​ ಬೌಲಿಂಗ್​ ಮಾಡಿದ ಆರ್​​ಸಿಬಿ ಬೌಲರ್ಸ್​, ಸಿಎಸ್​​ಕೆ ಪ್ರಮುಖ ಬ್ಯಾಟರ್​​ಗಳಿಗೆ ಕ್ರಿಸ್​​ನಲ್ಲಿ ನಿಲ್ಲೋಕೆ ಅವಕಾಶ ನೀಡಲಿಲ್ಲ. ಮಿಡಲ್​ ಓವರ್​ಗಳಲ್ಲಂತೂ ರಚಿನ್​ ರವೀಂದ್ರ, ಶಿವಂ ದುಬೆ, ಮಿಚೆಲ್​ ಸ್ಯಾಂಟ್ನೆರ್​ಗೆ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ದಾರಿ ತೋರಿಸಿದ್ರು. ಇಲ್ಲಿಗೆ ಕಥೆ ಮುಗೀಲಿಲ್ಲ. ಅಸಲಿ ಆಟ ಶುರುವಾಗಿದ್ದೇ ಆಗ. ಯಾಕೆಂದರೆ ಆಗ ಎಂಟ್ರಿಯಾಗಿದ್ದು ತಲಾ

ತಲಾ ಧೋನಿ ಎಂಟ್ರಿಯಾಗಿದ್ದೇ ಆಗಿದ್ದು, ಆರ್​​ಸಿಬಿ ಹೋಮ್​​ಗ್ರೌಂಡ್​​ ಫುಲ್​ ಯೆಲ್ಲೋಮಯವಾಯ್ತು. ಧೋನಿ ಪಂದ್ಯವನ್ನ ಗೆಲ್ಲಿಸ್ತಾರೆ ಎಂಬ ಆತ್ಮವಿಶ್ವಾಸದಲ್ಲಿ ಸಿಎಸ್​ಕೆ ಫ್ಯಾನ್ಸ್​ ತೇಲಾಡ್ತಿದ್ರು. ಇದಕ್ಕೆ ತಕ್ಕಂತೆ ಆಡಿದ 3 ಬೌಂಡರಿ 1 ಸಿಕ್ಸರ್​ ಚಚ್ಚಿದ್ರು. ಕೊನೆಯ ಓವರ್​​ನ 2ನೇ ಎಸೆತದಲ್ಲಿ ಧೋನಿ ಔಟಾದ್ರು. ಸಿಎಸ್​ಕೆ ಫ್ಯಾನ್ಸ್​​ ಸೈಲೆಂಟಾದ್ರೆ ಆರ್​​ಸಿಬಿ ಅಭಿಮಾನಿಗಳ ಅಬ್ಬರ ಶುರುವಾಯ್ತು.

ಇದನ್ನೂ ಓದಿ: 13 ಬಾಲ್​ನಲ್ಲಿ 5 ಸಿಕ್ಸರ್​! ಪಂದ್ಯ ಸೋತರೂ SRH ಹುಡುಗನ ಬೊಂಬಾಟ್ ಬ್ಯಾಟಿಂಗ್..!

publive-image

ಅಂತಿಮವಾಗಿ ರಣರೋಚಕ ಪಂದ್ಯವನ್ನ 27 ರನ್​ಗಳ ಅಂತರದಿಂದ ಗೆದ್ದ ಆರ್​​ಸಿಬಿ, ಪ್ಲೇ ಆಫ್​ಗೆ ಎಂಟ್ರಿ ಕೊಡ್ತು. ಸಿಎಸ್​​ಕೆಯ ಅಭಿಯಾನ ಸೋಲಿನೊಂದಿಗೆ ಅಂತ್ಯವಾಗಿತ್ತು. ಆರ್​​ಸಿಬಿ ಅಭಿಮಾನಿಗಳಂತೂ ಯುದ್ಧ ಗೆದ್ದಂತೆ ಅಂದು ಸಂಭ್ರಮಿಸಿದ್ರು. ಪಂದ್ಯ ಮುಗಿದ ಬಳಿಕ ತಡ ರಾತ್ರಿ 130ರವರೆಗೆ ಸ್ಟೇಡಿಯಂ ಹೊರಗೆ ಕಾದ ಫ್ಯಾನ್ಸ್​ ಆರ್​​ಸಿಬಿ ಆಟಗಾರರಿಗೆ ಜೈಕಾರ ಹಾಕಿದ್ರು. ಕಬ್ಬನ್​ ಪಾರ್ಕ್​​ ರಸ್ತೆಯ ಇಕ್ಕೆಲಗಳಲ್ಲೂ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ರು.

RCBಯ ಗೆಲುವು, ಆಟಗಾರರ ಸಂಭ್ರಮ, ಅಭಿಮಾನಿಗಳ ಸೆಲಬ್ರೇಷನ್ ಈ​​ ಎಲ್ಲವೂ ಇಂದು ಸಿಎಸ್​ಕೆ ಪಾಳಯದಲ್ಲಿ ಕಿಚ್ಚು ಹತ್ತಿಸಿದೆ. ಅಭಿಮಾನಿಗಳ ವಲಯದಲ್ಲೂ ಪಂದ್ಯದ ಮೇಲೆ ಕ್ರೇಜ್​ ಹೆಚ್ಚಾಗಿದೆ. ಅಂತದ್ದೇ ಒಂದು ರಣರೋಚಕ ಪಂದ್ಯದ ನಿರೀಕ್ಷೆ ಕ್ರಿಕೆಟ್​ ಲೋಕದಲ್ಲಿದೆ. ಸಿಎಸ್​ಕೆ ಸೇಡು ತೀರಿಸಿಕೊಳ್ಳುತ್ತಾ? ಚೆಪಾಕ್​ನಲ್ಲೂ ಆರ್​​ಸಿಬಿ ಪರಾಕ್ರಮ ಮೆರೆಯುತ್ತಾ? ಕಾದು ನೋಡೋಣ.

ಇದನ್ನೂ ಓದಿ: RCB vs CSK ಕದನ.. ಚೆಪಾಕ್ ಸ್ಟೇಡಿಯಂ ಪಿಚ್ ರಿಪೋರ್ಟ್​ ಹೇಗಿದೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment