/newsfirstlive-kannada/media/post_attachments/wp-content/uploads/2025/06/MAYANK.jpg)
ಐಪಿಎಲ್ ಫೈನಲ್ ಪಂದ್ಯವು ರಜತ್ ಪಾಟೀದಾರ್ ನಾಯಕತ್ವದ RCB ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ನಡುವೆ ಶುರುವಾಗಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿರುವ ಆರ್​ಸಿಬಿ ಆರಂಭಿಕ ಆಘಾತ ಅನುಭವಿಸಿದೆ.
ದೊಡ್ಡ ಸ್ಕೋರ್ ನಿರೀಕ್ಷೆಯಲ್ಲಿದ್ದ ಆರ್​ಸಿಬಿಗೆ ಪಂಜಾಬ್ ಕಿಂಗ್ಸ್​ ಪೆಟ್ಟು ಕೊಟ್ಟಿದೆ. ಅಂದರೆ ಆರ್​​ಸಿಬಿ ಎರಡು ವಿಕೆಟ್ ಕಳೆದುಕೊಂಡಿದ್ದು, ಸಂಕಷ್ಟದಲ್ಲಿದೆ. ಆರಂಭಿಕ ಬ್ಯಾಟ್ಸಮನ್ ಫಿಲ್ ಸಾಲ್ಟ್, ಒಂದು ಸಿಕ್ಸರ್, ಎರಡು ಬೌಂಡರಿ ಬಾರಿಸಿ ಬಿಗ್​​ ಸ್ಕೋರ್​​ ಗಳಿಸುವ ಸೂಚನೆ ನೀಡಿದ್ದರು.
ಆದರೆ, ಬಾಲ್ ಎದುರಿಸಿ 16 ರನ್​ಗಳಿಸಿದ್ದ ಸಾಲ್ಟ್​ ಅವರ ವಿಕೆಟ್ ಪಡೆಯುವಲ್ಲಿ ಜೆಮಿಸನ್ ಯಶಸ್ವಿಯಾದರು. ನಂತರ ಬಂದ ಮಯಾಂಕ್ ಅಗರ್ವಾಲ್, ಸ್ಫೋಟಕ ಬ್ಯಾಟಿಂಗ್ ಮಾಡುವ ಸುಳಿವು ನೀಡಿದ್ದರು. 18 ಬಾಲ್​​ನಲ್ಲಿ ಒಂದು ಸಿಕ್ಸರ್, 2 ಬೌಂಡರಿಯೊಂದಿಗೆ 24 ರನ್​ಗಳಿಸಿ ಔಟ್ ಆದರು.
ಭರವಸೆ ಮೂಡಿಸಿದ ಕೊಹ್ಲಿ
ಇತ್ತ ಆರ್​ಸಿಬಿ ಎರಡು ವಿಕೆಟ್ ಕಳೆದುಕೊಂಡು 65 ರನ್​ಗಳಿಸಿ ಮುನ್ನುಗ್ಗುತ್ತಿದೆ. ಆರ್​ಸಿಬಿ ದಂತಕತೆ ವಿರಾಟ್ ಕೊಹ್ಲಿ 17 ರನ್​ಗಳಿಸಿ ಭರವಸೆ ಮೂಡಿಸಿದ್ದಾರೆ. ಕೊಹ್ಲಿಗೆ ನಾಯಕ ರಜತ್ ಪಾಟೀದಾರ್​ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಆರ್​ಸಿಬಿ ಮೊದಲು ಬ್ಯಾಟಿಂಗ್.. ಪಂಜಾಬ್ ವಿರುದ್ಧ ಆಡುವ ಬಲಿಷ್ಠ ತಂಡ ಪ್ರಕಟ..!
ಐಪಿಎಲ್ ಟೂರ್ನಿ ಆರಂಭವಾಗಿ 18 ವರ್ಷಗಳು ಕಳೆದಿವೆ. ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿ ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. ಹೀಗಾಗಿ 18 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳಲು ಎರಡು ತಂಡಗಳು ಸೆಣಸಾಟ ನಡೆಸುತ್ತಿವೆ. ಆರ್​ಸಿಬಿ ತಂಡವನ್ನು ರಜತ್ ಪಾಟೀದಾರ್​ ಮುನ್ನಡೆಸುತ್ತಿದ್ದರೆ, ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್​ ಲೀಡ್ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us