RCBಯಲ್ಲಿ ಇಂದು ಯಾರು ಆಡ್ತಾರೆ, ಯಾರು ಆಡಲ್ಲ.. ಹೊಸ ಪ್ಲೇಯರ್ಸ್​ ಎಂಟ್ರಿ ಕೊಡ್ತಾರಾ?

author-image
Bheemappa
Updated On
RCB ಈ ಸಲ ಕಪ್​ ಗೆಲ್ಲದಿದ್ರೆ, ಇನ್ಮುಂದೆ ಟ್ರೋಫಿಗೆ ಮುತ್ತಿಡುವ ಅವಕಾಶ ಸಿಗಲ್ವಾ..?
Advertisment
  • ಜೋಶ್ ಹ್ಯಾಜಲ್ವುಡ್​ ಸೇರಿ ಯಾರು ಯಾರು ಅಲಭ್ಯರಾಗಲಿದ್ದಾರೆ?
  • ಮ್ಯಾಚ್ ಗೆದ್ದರೇ ಆರ್​ಸಿಬಿಯ ಅದೃಷ್ಟನೇ ಬದಲಾವಣೆ ಆಗಲಿದೆ
  • RCBಯಲ್ಲಿ ಬ್ಲೆಸ್ಸಿಂಗ್ ಮುಜರಾಬಾನಿಗೆ ಇಂದೇ ಅವಕಾಶ ಸಿಗುತ್ತಾ?

ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ, ಮಹತ್ವದ ಪಂದ್ಯಕ್ಕೆ ಸಜ್ಜುಗೊಂಡಿದೆ. ಇಂದು ಲಕ್ನೋದಲ್ಲಿ ನಡೆಯಲಿರೋ ಪಂದ್ಯದಲ್ಲಿ ಆರ್​ಸಿಬಿ, ಸನ್​ರೈಸರ್ಸ್​ ಹೈದ್ರಾಬಾದ್​​ ತಂಡಕ್ಕೆ ಸೋಲಿನ ರುಚಿ ತೋರಿಸೋ ಲೆಕ್ಕಾಚಾರದಲ್ಲಿದೆ. ಅಷ್ಟೇ ಅಲ್ಲ, ಈ ಪಂದ್ಯವನ್ನ ಗೆದ್ದು ಪಾಯಿಂಟ್ ಟೇಬಲ್​ನಲ್ಲಿ ಟಾಪ್ 2 ಸ್ಥಾನದಲ್ಲಿ ಉಳಿಯೋ ಲೆಕ್ಕಾಚಾರದಲ್ಲಿದೆ. ಹಾಗಾದ್ರೆ ಈ ಪಂದ್ಯಕ್ಕೆ ಬೆಂಗಳೂರು ತಂಡದ ಪ್ರಿಪರೇಷನ್ ಹೇಗಿದೆ?.

ಐಪಿಎಲ್​ ಸೀಸನ್​-18ರ ಪ್ಲೇ ಆಫ್​​ಗೆ, ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಎಂಟ್ರಿ ಕೊಟ್ಟಾಯ್ತು. ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ಸಮಾಧಾನ ಆರ್​ಸಿಬಿಗಿದೆ. ಆದ್ರೀಗ ಬೆಂಗಳೂರು ತಂಡಕ್ಕೆ, ಮತ್ತೊಂದು ಟೆನ್ಶನ್ ಶುರುವಾಗಿದೆ. ಲೀಗ್ ಸ್ಟೇಜ್​ನಲ್ಲಿ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡಿದೆ ನಿಜ. ಆದ್ರೆ ಪ್ಲೇ ಆಫ್​​ಗೂ ಮುನ್ನ ನಡೆಯೋ ಕ್ಲೈಮ್ಯಾಕ್ಸ್​ ಪಂದ್ಯಗಳಲ್ಲಿ, ಆರ್​ಸಿಬಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ.

publive-image

ಬ್ರೇಕ್​​ನ ಬಳಿಕ RCBಯ ಮೊದಲ ಪಂದ್ಯ..!

ಆಪರೇಷನ್ ಸಿಂಧೂರ್ ಬಳಿಕ ಆರ್​ಸಿಬಿ, ಇದೇ ಮೊದಲ ಐಪಿಎಲ್ ಪಂದ್ಯವನ್ನ ಆಡಲಿದೆ. ಬ್ರೇಕ್​ನ ಬಳಿಕ ಐಪಿಎಲ್ ಟೂರ್ನಿ ಶುರುವಾದ್ರೂ, ಮಳೆಯಿಂದ ಆರ್​ಸಿಬಿ ಮತ್ತು ಕೆಕೆಆರ್ ಪಂದ್ಯ ರದ್ದಾಗಿತ್ತು. ಹಾಗಾಗಿ ಇಂದು ನಡೆಯೋ ಸನ್​ರೈಸರ್ಸ್ ಹೈದ್ರಾಬಾದ್​ ವಿರುದ್ಧದ ಪಂದ್ಯ, ಆರ್​ಸಿಬಿಗೆ ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯವನ್ನ ಆರ್​ಸಿಬಿ ಗೆಲ್ಲಲೇಬೇಕಿದೆ.

ಟಾಪ್ 2 ಸ್ಥಾನದ ಮೇಲೆ ಬೆಂಗಳೂರು ಕಣ್ಣು..!

ಆರ್​ಸಿಬಿ ಆಡಿರೋ 12 ಪಂದ್ಯಗಳಲ್ಲಿ, 8 ಪಂದ್ಯಗಳನ್ನ ಗೆದ್ದಿದೆ. 3 ಪಂದ್ಯಗಳನ್ನ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾದ ಕಾರಣ, ಫಲಿತಾಂಶ ಬಂದಿಲ್ಲ. ಸದ್ಯ 17 ಅಂಕಗಳೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿರುವ ಆರ್​​ಸಿಬಿ, ಉಳಿದೆರೆಡು ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಆ ಎರಡೂ ಪಂದ್ಯಗಳನ್ನ ಗೆದ್ರೆ ಆರ್​ಸಿಬಿ, 21 ಅಂಕಗಳಿಸಲಿದೆ. ಆ ಮೂಲಕ ಬೆಂಗಳೂರು ತಂಡಕ್ಕೆ ಟಾಪ್ 2ನಲ್ಲಿ, ಒಂದು ಸ್ಥಾನ ಫಿಕ್ಸ್ ಆಗಲಿದೆ.​

ಕಿಂಗ್ ವಿರಾಟ್ ಕೊಹ್ಲಿಯತ್ತ ಎಲ್ಲರ ಕಣ್ಣು..!

ಆರ್​ಸಿಬಿಯ ಬ್ಯಾಟಿಂಗ್ ಸ್ಟಾರ್, ವಿರಾಟ್ ಕೊಹ್ಲಿ. ಈ ಸೀಸನ್​ನಲ್ಲಿ ಕೊಹ್ಲಿ ಕನ್ಸಿಸ್ಟೆಂಟ್ ಆಗಿ ಪರ್ಫಾಮ್ ಮಾಡ್ತಿದ್ದಾರೆ. ಅದ್ರಲ್ಲೂ ಚೇಸಿಂಗ್​ನಲ್ಲಿ ವಿರಾಟ್, ಮಾಸ್ಟರ್​ನಂತೆ ರನ್​​​ಗಳಿಸುತ್ತಿದ್ದಾರೆ. ಕೊಹ್ಲಿ ಆಡಿರೋ 11 ಪಂದ್ಯಗಳಲ್ಲಿ 143.46ರ ಸ್ಟ್ರೈಕ್​ರೇಟ್​ನಲ್ಲಿ 505 ರನ್​ಗಳಿಸಿದ್ದಾರೆ. 7 ಆಕರ್ಷಕ ಅರ್ಧಶತಕಗಳು, ಕೊಹ್ಲಿ ಬ್ಯಾಟ್​ನಿಂದ ದಾಖಲಾಗಿದೆ. ವಿರಾಟ್ ಬೆಂಗಳೂರಿನ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಹಾಗಾಗಿ ಇಂದು ಕೊಹ್ಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ತಂಡಕ್ಕೆ ಕಾಡುತ್ತಾ ಹೇಝಲ್​ವುಡ್ ಅಲಭ್ಯತೆ..?

ಹೈದ್ರಾಬಾದ್​​ನಂತಹ ಡೇಂಜರಸ್ ಟೀಮ್ ವಿರುದ್ಧ ಆರ್​ಸಿಬಿ, ಜೋಷ್ ಹೇಝಲ್​​ವುಡ್​ನಂತಹ ಅನುಭವಿ ವೇಗಿಯನ್ನ ಮಿಸ್ ಮಾಡಿಕೊಳ್ಳುತ್ತದೆ. ಜೇಝಲ್​ವುಡ್​​ ಇದ್ರೆ, ಬೌಲಿಂಗ್ ಅಟ್ಯಾಕ್​​ನಲ್ಲಿ ಫುಲ್ ಜೋಷ್ ಇರುತ್ತೆ. AWAY ಮ್ಯಾಚ್​ಗಳಲ್ಲಿ 10 ವಿಕೆಟ್ ಪಡೆದು ಗೇಮ್​​ ಚೇಂಜರ್ ಎನಿಸಿಕೊಂಡಿದ್ದ ಜೋಷ್ ಅಲಭ್ಯತೆ, ಕಂಡಿತ ಆರ್​ಸಿಬಿಗೆ ಕಾಡಲಿದೆ. ಆದ್ರೆ ಯಾರೇ ರೀಪ್ಲೇಸ್​​​​ಮೆಂಟ್​​​​​​ ಬಂದ್ರು, ಹೇಝಲ್​ವುಡ್ ಸ್ಥಾನವನ್ನ ತುಂಬೋದು ಕಷ್ಟವೇ ಬಿಡಿ. ​​​​​​

3ನೇ ವೇಗಿಯಾಗ್ತಾರಾ 6.8 ಎತ್ತರದ ಬ್ಲೆಸಿಂಗ್ ಮುಜರಬಾನಿ..?

ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪ್ರಿಪರೇಶನ್​​​​​​ಗಾಗಿ, ವೇಗಿ ಲುಂಗಿ ಎಂಗಿಡಿ ಆರ್​ಸಿಬಿ ತಂಡವನ್ನ ತೊರೆಯುತ್ತಿದ್ದಾರೆ. ಇವ್ರ ಸ್ಥಾನಕ್ಕೆ ಜಿಂಬಾಬ್ವೆಯ 6.8 ಅಡಿ ಎತ್ತರದ ವೇಗಿ ಬ್ಲೆಸಿಂಗ್ ಮುಜರಬಾನಿ, ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಗ್ಲೋಬಲ್ ಟಿ-ಟ್ವೆಂಟಿ ಲೀಗ್​ಗಳನ್ನ ಆಡಿರುವ ಮುಜರಾಬಾನಿ, ಉಪಖಂಡದಲ್ಲಿ ಸಿಕ್ಕಾಪಟ್ಟೆ ಎಫೆಕ್ಟೀವ್ ಬೌಲರ್ ಎನಿಸಿಕೊಂಡಿದ್ದಾರೆ. ಇಂದು ಮುಜರಾಬಾನಿಯನ್ನ ಸರ್​ಪ್ರೈಸ್​​ ಆಗಿ ಕಣಕ್ಕಿಳಿಸುತ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.

ಜೇಕಬ್ ಬೆಥಲ್ ಬದಲು ಟಿಮ್ ಸೀಫರ್ಟ್ ಎಂಟ್ರಿ..!

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್​​ನ ಜೇಕಬ್ ಬೆಥಲ್, ಆರ್​ಸಿಬಿ ತಂಡವನ್ನ ತೊರೆಯುತ್ತಿದ್ದಾರೆ. ಇವ್ರ ಸ್ಥಾನಕ್ಕೆ ನ್ಯೂಜಿಲೆಂಡ್​​ನ ಟಿ-ಟ್ವೆಂಟಿ ಸ್ಪೆಷಲಿಸ್ಟ್ ಟಿಮ್ ಸೀಫರ್ಟ್​​​​​​​​, ಆರ್​ಸಿಬಿ ಕ್ಯಾಂಪ್ ಸೇರ್ಪಡೆಗೊಂಡಿದ್ದಾರೆ. ಆರಂಭದಲ್ಲಿ ಅಬ್ಬರಿಸಿದ ಫಿಲ್ ಸಾಲ್ಟ್ ನಂತರ ಫುಲ್ ಸೈಲೆಂಟ್ ಆಗ್ಬಿಟ್ರು. ಸಾಲ್ಟ್​​​ ಇನ್​​ಕನ್ಸಿಸ್ಟೆನ್ಸಿ ಮತ್ತು ಬೆಥಲ್ ನಿರ್ಗಮನದಿಂದ ಆರ್​ಸಿಬಿ, ಕಿವೀಸ್​ ಟಿ-ಟ್ವೆಂಟಿ ಸ್ಪೆಷಲಿಸ್ಟ್​​​ ಸೀಫರ್ಟ್​​ನ ರಿಸ್ಕ್​​ ತೆಗೆದುಕೊಂಡು ಆಡಿಸಬೇಕಾ ಬೇಡವಾ ಅನ್ನೋ ಚಿಂತೆಯಲ್ಲಿದೆ. ​

ಇದನ್ನೂ ಓದಿ:RCBಗೆ ಇಂದು ಮಹತ್ವದ ಪಂದ್ಯ.. ಎದುರಾಳಿಯ 5 ಬ್ಯಾಟರ್ಸ್​ ಔಟ್ ​​ಮಾಡೋದೆ ಚಾಲೆಂಜ್​​!

publive-image

RCB ಪಾರ್ಟಿ ಕೆಡಿಸಲು ಹೈದ್ರಾಬಾದ್ ರೆಡಿ​​​ ..!

ಐಪಿಎಲ್ ಆರಂಭದಲ್ಲಿ ಸನ್​ರೈಸರ್ಸ್ ಹೈದ್ರಾಬಾದ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಸೂಪರ್​ ಬ್ಯಾಟಿಂಗ್ ಲೈನ್​ಅಪ್ ಮತ್ತು ಬ್ಯಾಲೆನ್ಸ್​ಡ್​ ಬೌಲಿಂಗ್ ಅಟ್ಯಾಕ್ ಹೊಂದಿದ್ದ ಎಸ್​​​ಆರ್​ಹೆಚ್, ಟೂರ್ನಿ ಗೆಲ್ಲೋ ಫೇವರಿಟ್​ ತಂಡಗಳಲ್ಲಿ ಒಂದು ಎನಿಸಿಕೊಂಡಿತ್ತು. ಆದ್ರೆ ಹೈದ್ರಾಬಾದಾದ್ ತಂಡದ ಸಡನ್ ಫೇಲ್ಯೂರ್, ತಂಡಕ್ಕೆ ಭಾರೀ ಹಿನ್ನಡೆ ಉಂಟುಮಾಡಿತು. ಕಳೆದ ಪಂದ್ಯದಲ್ಲಿ ಲಕ್ನೋ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಹೈದ್ರಾಬಾದ್, ಇಂದು ಬೆಂಗಳೂರು ತಂಡದ ಗೆಲುವಿಗೆ ಮುಳುವಾಗೋಕೆ ಮುಂದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದಾದ್ರೆ, ಹೈದ್ರಾಬಾದ್​​ ತಂಡಕ್ಕೆ ಉಳಿದೆರೆಡು ಪಂದ್ಯಗಳನ್ನ ಗೆದ್ದು, ಟೂರ್ನಿಗೆ ಗುಡ್​ಬೈ ಹೇಳೋ ಲೆಕ್ಕಾಚಾರವಾಗಿದೆ. ಲಕ್ನೋದಲ್ಲಿ ಯಾವ ತಂಡಕ್ಕೆ ಲಕ್ ಒಲಿಯಲಿದೆ ಅನ್ನೋದನ್ನ, ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment