ಆರ್ಸಿಬಿ-ಸಿಎಸ್ಕೆಯ ಉದ್ಘಾಟನಾ ಪಂದ್ಯ ನಡೆಯುತ್ತಿರುವುದೆಲ್ಲಿ?
ಕಪ್ ಗೆಲ್ಲುವ ಉತ್ಸಾದಲ್ಲಿ ಅಖಾಡಕ್ಕೆ ಇಳಿಯುತ್ತಿದೆ ಬೆಂಗಳೂರು
ಚೆನ್ನೈ ಕ್ಯಾಕ್ಟನ್ಸಿಗೆ ಧೋನಿ ರಾಜೀನಾಮೆ, ಹೊಸ ನಾಯಕ ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್- 17ರ ವೇದಿಕೆ ಗ್ರ್ಯಾಂಡ್ ಆಗಿ ರೆಡಿಯಾಗಿದ್ದು ಅದ್ಧೂರಿ ಸಮಾರಂಭದ ಮೂಲಕ ಇಂದು ಸಂಜೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಖಾಡಕ್ಕೆ ಇಳಿಯಲಿದೆ. ಒಟ್ಟು 10 ತಂಡಗಳಿಂದ ರೋಚಕವಾದ ಸಿಕ್ಸರ್ಗಳು, ಬೌಂಡರಿ, ವಿಕೆಟ್ಗಳ ಬೇಟೆ, ರನ್ಗಳ ಸುರಿಮಳೆ ಸೇರಿದಂತೆ ಪಂದ್ಯಗಳಲ್ಲಿ ಕೆಲವೊಂದು ಸನ್ನಿವೇಶಗಳನ್ನು ಐಪಿಎಲ್ ಫ್ಯಾನ್ಸ್ ಎಂಜಾಯ್ ಮಾಡಲಿದ್ದಾರೆ.
ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಸಂಜೆ ಅದ್ಧೂರಿ ಕಾರ್ಯಕ್ರಮದ ಬಳಿಕ ಮೊದಲ ಪಂದ್ಯ 8 ಗಂಟೆಗೆ ಆರಂಭವಾಗಲಿದೆ. ಆರ್ಸಿಬಿ ಪರ ಫಾಫ್ ಡುಪ್ಲೆಸ್ಸಿ ನಾಯಕತ್ವ ವಹಿಸಿದ್ರೆ, ಅತ್ತ ಧೊನಿ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರಿಂದ ಚೆನ್ನೈ ಸಾರಥ್ಯವನ್ನು ಋತುರಾಜ್ ಗಾಯಕ್ವಾಡ್ ವಹಿಸಲಿದ್ದಾರೆ. ಮೊದಲೇ ಬೆಂಗಳೂರು ಮತ್ತು ಚೆನ್ನೈ ಪಂದ್ಯವೆಂದರೆ ಐಪಿಎಲ್ ಫ್ಯಾನ್ಸ್ಗೆ ಎಲ್ಲಿಲ್ಲದ ಕುತೂಹಲ. ಕಪ್ ಗೆದ್ದಿಲ್ಲವೆಂದರೂ ಪರವಾಗಿಲ್ಲ, ಚೆನ್ನೈಯನ್ನು ಆರಂಭಿಕ ಪಂದ್ಯದಲ್ಲೇ ಸೋಲಿಸಿದರೆ ಅದೇ ನಮಗೆ ದೊಡ್ಡ ಗೆಲುವು ಎನ್ನುವುದು ಆರ್ಸಿಬಿ ಫ್ಯಾನ್ಸ್ಗಳ ಮನದಾಳ ಮಾತಾಗಿದೆ.
16 ಸೀಸನ್ಗಳನ್ನ ಆಡಿ 17 ಸೀಸನ್ಗೆ ಆಡಿರುವ ಆರ್ಸಿಬಿ ಟೀಮ್ ಕಪ್ ಗೆಲ್ಲುವ ಉತ್ಸಾಹದಲ್ಲಿ ಈ ಬಾರಿ ಅಖಾಡಕ್ಕೆ ಇಳಿಯುತ್ತಿದೆ. ಈ ಹಿಂದೆಯು 3 ಬಾರಿ ಫೈನಲ್ಗೆ ಪ್ರವೇಶ ಪಡೆದಿದ್ದರೂ ಕಪ್ ಗೆಲ್ಲಲಾಗಿರಲಿಲ್ಲ. ಈ ಬಾರಿಯ 2ನೇ ಆವೃತ್ತಿಯಲ್ಲೇ ಮಹಿಳಾ ಆರ್ಸಿಬಿ ಟೀಮ್ ಕಪ್ಗೆ ಮುತ್ತಿಟ್ಟಿದೆ. ಹೀಗಾಗಿ ಆರ್ಸಿಬಿಯ ಪುರುಷರ ಟೀಮ್ ಮೇಲೆ ತುಸು ಒತ್ತಡ ಹೆಚ್ಚಾಗಿದೆ. ಇವತ್ತಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿಯ ಎಲ್ಲರ ಕಣ್ಣು ನೆಟ್ಟಿದೆ. ಆಕ್ರಮಣಕಾರಿ ಕಿಂಗ್ ಕೊಹ್ಲಿ ಹಾಗೂ ಕೂಲ್ ಕ್ಯಾಪ್ಟನ್ ನಡುವೆ ಗೆಲ್ಲುವುದು ಯಾರೆಂಬುದು ಕುತೂಹಲ ಇನ್ನಷ್ಟು ದುಪ್ಪಾಟ್ಟಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಆರ್ಸಿಬಿ-ಸಿಎಸ್ಕೆಯ ಉದ್ಘಾಟನಾ ಪಂದ್ಯ ನಡೆಯುತ್ತಿರುವುದೆಲ್ಲಿ?
ಕಪ್ ಗೆಲ್ಲುವ ಉತ್ಸಾದಲ್ಲಿ ಅಖಾಡಕ್ಕೆ ಇಳಿಯುತ್ತಿದೆ ಬೆಂಗಳೂರು
ಚೆನ್ನೈ ಕ್ಯಾಕ್ಟನ್ಸಿಗೆ ಧೋನಿ ರಾಜೀನಾಮೆ, ಹೊಸ ನಾಯಕ ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್- 17ರ ವೇದಿಕೆ ಗ್ರ್ಯಾಂಡ್ ಆಗಿ ರೆಡಿಯಾಗಿದ್ದು ಅದ್ಧೂರಿ ಸಮಾರಂಭದ ಮೂಲಕ ಇಂದು ಸಂಜೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಖಾಡಕ್ಕೆ ಇಳಿಯಲಿದೆ. ಒಟ್ಟು 10 ತಂಡಗಳಿಂದ ರೋಚಕವಾದ ಸಿಕ್ಸರ್ಗಳು, ಬೌಂಡರಿ, ವಿಕೆಟ್ಗಳ ಬೇಟೆ, ರನ್ಗಳ ಸುರಿಮಳೆ ಸೇರಿದಂತೆ ಪಂದ್ಯಗಳಲ್ಲಿ ಕೆಲವೊಂದು ಸನ್ನಿವೇಶಗಳನ್ನು ಐಪಿಎಲ್ ಫ್ಯಾನ್ಸ್ ಎಂಜಾಯ್ ಮಾಡಲಿದ್ದಾರೆ.
ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಸಂಜೆ ಅದ್ಧೂರಿ ಕಾರ್ಯಕ್ರಮದ ಬಳಿಕ ಮೊದಲ ಪಂದ್ಯ 8 ಗಂಟೆಗೆ ಆರಂಭವಾಗಲಿದೆ. ಆರ್ಸಿಬಿ ಪರ ಫಾಫ್ ಡುಪ್ಲೆಸ್ಸಿ ನಾಯಕತ್ವ ವಹಿಸಿದ್ರೆ, ಅತ್ತ ಧೊನಿ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರಿಂದ ಚೆನ್ನೈ ಸಾರಥ್ಯವನ್ನು ಋತುರಾಜ್ ಗಾಯಕ್ವಾಡ್ ವಹಿಸಲಿದ್ದಾರೆ. ಮೊದಲೇ ಬೆಂಗಳೂರು ಮತ್ತು ಚೆನ್ನೈ ಪಂದ್ಯವೆಂದರೆ ಐಪಿಎಲ್ ಫ್ಯಾನ್ಸ್ಗೆ ಎಲ್ಲಿಲ್ಲದ ಕುತೂಹಲ. ಕಪ್ ಗೆದ್ದಿಲ್ಲವೆಂದರೂ ಪರವಾಗಿಲ್ಲ, ಚೆನ್ನೈಯನ್ನು ಆರಂಭಿಕ ಪಂದ್ಯದಲ್ಲೇ ಸೋಲಿಸಿದರೆ ಅದೇ ನಮಗೆ ದೊಡ್ಡ ಗೆಲುವು ಎನ್ನುವುದು ಆರ್ಸಿಬಿ ಫ್ಯಾನ್ಸ್ಗಳ ಮನದಾಳ ಮಾತಾಗಿದೆ.
16 ಸೀಸನ್ಗಳನ್ನ ಆಡಿ 17 ಸೀಸನ್ಗೆ ಆಡಿರುವ ಆರ್ಸಿಬಿ ಟೀಮ್ ಕಪ್ ಗೆಲ್ಲುವ ಉತ್ಸಾಹದಲ್ಲಿ ಈ ಬಾರಿ ಅಖಾಡಕ್ಕೆ ಇಳಿಯುತ್ತಿದೆ. ಈ ಹಿಂದೆಯು 3 ಬಾರಿ ಫೈನಲ್ಗೆ ಪ್ರವೇಶ ಪಡೆದಿದ್ದರೂ ಕಪ್ ಗೆಲ್ಲಲಾಗಿರಲಿಲ್ಲ. ಈ ಬಾರಿಯ 2ನೇ ಆವೃತ್ತಿಯಲ್ಲೇ ಮಹಿಳಾ ಆರ್ಸಿಬಿ ಟೀಮ್ ಕಪ್ಗೆ ಮುತ್ತಿಟ್ಟಿದೆ. ಹೀಗಾಗಿ ಆರ್ಸಿಬಿಯ ಪುರುಷರ ಟೀಮ್ ಮೇಲೆ ತುಸು ಒತ್ತಡ ಹೆಚ್ಚಾಗಿದೆ. ಇವತ್ತಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿಯ ಎಲ್ಲರ ಕಣ್ಣು ನೆಟ್ಟಿದೆ. ಆಕ್ರಮಣಕಾರಿ ಕಿಂಗ್ ಕೊಹ್ಲಿ ಹಾಗೂ ಕೂಲ್ ಕ್ಯಾಪ್ಟನ್ ನಡುವೆ ಗೆಲ್ಲುವುದು ಯಾರೆಂಬುದು ಕುತೂಹಲ ಇನ್ನಷ್ಟು ದುಪ್ಪಾಟ್ಟಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ