ಪರೋಕ್ಷವಾಗಿ ಡೊಮೆಸ್ಟಿಕ್ ಆಡುವಂತೆ ಹೇಳುತ್ತಿರುವ ದ್ರಾವಿಡ್
ರಣಜಿ ಟ್ರೋಫಿ ಟೂರ್ನಿ ಕಡೆಗೆ ಮುಖ ಮಾಡದ ಇಶನ್ ಕಿಶನ್
ಜಿತೇಶ್ ಶರ್ಮಾಗೆ ಮಣೆ ಹಾಕಿರುವುದರ ಹಿಂದಿದೆ ಅಸಲಿ ಕಾರಣ
ಸೌತ್ ಆಫ್ರಿಕಾ ಪ್ರವಾಸದಲ್ಲಿದ್ದ ಇಶನ್ ಕಿಶನ್ ಇದ್ದಕ್ಕಿದ್ದಂತೆ ಭಾರತಕ್ಕೆ ವಾಪಸ್ ಆಗಿದ್ಯಾಕೆ. ಈ ಪ್ರಶ್ನೆ ಅವತ್ತಿಂದ ಇವತ್ತಿನವರೆಗೆ ಹಲವು ಉತ್ತರಗಳು ಸಿಕ್ಕಿದೆ. ಮಾನಸಿಕ ಒತ್ತಡ, ವರ್ಕ್ಲೋಡ್ ಮ್ಯಾನೇಜ್ಮೆಂಟ್ ಹೀಗೆ ಹಲವು ಕಾರಣಗಳು ರಿವೀಲ್ ಆದ್ವು. ಆದ್ರೆ, ಅಸಲಿ ಮ್ಯಾಟರ್ ಬೇರೆನೆ ಇದೆ.
ಕಳೆದ ಡಿಸೆಂಬರ್ನಲ್ಲಿ ಟೀಮ್ ಇಂಡಿಯಾ ಜತೆ ಸೌತ್ ಆಫ್ರಿಕಾಗೆ ತೆರಳಿದ್ದ ಕಿಶನ್ ಎಲ್ಲರಿಗೂ ಶಾಕ್ ನೀಡಿದ್ರು. ಟೆಸ್ಟ್ ಸರಣಿ ಆಡಬೇಕಿದ್ದ ಕಿಶನ್ ಟಿ20 ಸರಣಿಯ ಮುಗಿದ ಬೆನ್ನಲ್ಲೇ, ವೈಯಕ್ತಿಕ ಕಾರಣ ನೀಡಿ ತವರಿಗೆ ವಾಪಸ್ ಆಗಿದ್ರು. ಟೀಮ್ ಇಂಡಿಯಾದಲ್ಲಿ ಒಂದೊಂದು ಸ್ಥಾನಕ್ಕೂ ತೀವ್ರ ಪೈಪೋಟಿ ಇರೋವಾಗ ಸಿಕ್ಕ ಅವಕಾಶವನ್ನ ಕಿಶನ್ ಬಿಟ್ಟು ಬಂದಿದ್ರು. ಹೀಗಾಗಿ ಈ ಸರ್ಪ್ರೈಸಿಂಗ್ ನಿರ್ಧಾರ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು.
ಕಿಶನ್ ದುಬೈನಲ್ಲಿ ಮೋಜು- ಮಸ್ತಿ
ಮಾನಸಿಕ ಒತ್ತಡದಿಂದಾಗಿ ಕಿಶನ್ ತವರಿಗೆ ವಾಪಸ್ ಆಗಿದ್ದಾರೆ ಅನ್ನೋ ಸುದ್ದಿ ಆರಂಭದಲ್ಲಿ ಹಬ್ಬಿತ್ತು. ಆದ್ರೆ, ನಂತರದಲ್ಲಿ ಆಗಿದ್ದೇ ಬೇರೆ. ಭಾರತಕ್ಕೆ ಬಂದಿಳಿದ ಕಿಶನ್, ಕೌನ್ ಬನೇಗಾ ಕ್ರೋರ್ಪತಿಯಲ್ಲಿ ಕಾಣಿಸಿಕೊಂಡರು. ಆ ಬಳಿಕ ದುಬೈನಲ್ಲಿ ಮೋಜು- ಮಸ್ತಿ ಮಾಡಿದ್ರು. ಇದ್ರಿಂದಾಗಿ ಬಿಸಿಸಿಐ ಬಾಸ್ಗಳ ಕೆಂಗಣ್ಣಿಗೆ ಗುರಿಯಾದ್ರು. ಹೀಗಾಗಿ ಅಫ್ಘಾನ್ ಎದುರಿನ ಟಿ20 ಹಾಗೂ ಈಗ ನಡೀತಿರೋ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರ ಬಿದ್ರು. ಇಷ್ಟೇ ಅಲ್ಲ, ಕಮ್ಬ್ಯಾಕ್ ಮಾಡಬೇಕಂದ್ರೆ, ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಕೋಚ್ ದ್ರಾವಿಡ್ ಪರೋಕ್ಷವಾಗಿ ಸೂಚನೆಯನ್ನೂ ನೀಡಿದ್ರು.
ಕಮ್ಬ್ಯಾಕ್ ಮಾಡಬೇಕಂದ್ರೆ ಕಿಶನ್ಗೆ ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಕೋಚ್ ದ್ರಾವಿಡ್ ಪರೋಕ್ಷವಾಗಿ ಹೇಳ್ತಾನೆ ಬರ್ತಿದ್ದಾರೆ. ಆದ್ರೆ, ಕಿಶನ್ ಮಾತ್ರ ಈ ಮಾತಿಗೆ ಬೆಲೆನೇ ಕೊಡ್ತಿಲ್ಲ. ರಣಜಿ ಟ್ರೋಫಿ ಟೂರ್ನಿ ಕಡೆಗೆ ಮುಖ ಮಾಡದ ಕಿಶನ್, ಬರೋಡಾದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ಆರಂಭಿಸಿದ್ದಾರೆ. ಅಲ್ಲಿಗೆ ಐಪಿಎಲ್ಗೆ ಕಮ್ಬ್ಯಾಕ್ ಮಾಡೋದು ಕಿಶನ್ ಗುರಿ ಅನ್ನೋದು ಕನ್ಫರ್ಮ್ ಆಗಿದೆ.
ಮ್ಯಾನೇಜ್ಮೆಂಟ್ ಮೇಲೆ ಕಿಶನ್ಗೆ ಕೆಂಡದಂಥಾ ಕೋಪ.!
ಇಶನ್ ಕಿಶನ್ ಟೀಮ್ ಮ್ಯಾನೇಜ್ಮೆಂಟ್ ಮೇಲೆ ಹಗೆತನ ಸಾಧಿಸ್ತಾ ಇದ್ದಾರೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಟೀಮ್ ಮ್ಯಾನೇಜ್ಮೆಂಟ್ ಮೇಲೆ ಕಿಶನ್ಗೆ ಕೆಂಡದಂಥಾ ಕೋಪವಿದೆ. ಇದಕ್ಕೆಲ್ಲ ಕಾರಣ ಜಿತೇಶ್ ಶರ್ಮಾ ಸೆಲೆಕ್ಷನ್. ಕಿಶನ್ರನ್ನ ಕಡೆಗಣಿಸಿ ಜಿತೇಶ್ ಶರ್ಮಾರನ್ನ ಟಿ20 ತಂಡದ ನಂಬರ್- 1 ಆಯ್ಕೆ ಮಾಡಿರೋ ಮ್ಯಾನೇಜ್ಮೆಂಟ್ನ ನಡೆಯೇ ಕಿಶನ್ ಕೋಪಕ್ಕೆ ಕಾರಣವಾಗಿದೆ.
ಕಿಶನ್ ಕಡೆಗಣನೆ.. ಜಿತೇಶ್ ಮೇಲೆ ಒಲವು.?
ಏಕದಿನ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕಿಶನ್ ಆಡಿದ್ರು. ಸರಣಿಯ ಮೊದಲ 2 ಪಂದ್ಯದಲ್ಲಿ ಕಿಶನ್, ಸತತ 2 ಹಾಫ್ ಸೆಂಚುರಿ ಇನ್ನಿಂಗ್ಸ್ ಕಟ್ಟಿದ್ರು. ದುರಾದೃಷ್ಟವಶಾತ್, 3ನೇ ಪಂದ್ಯದಲ್ಲಿ ಡಕೌಟ್ ಆಗಿ ನಿರ್ಗಮಿಸಿದ್ರು. ಇಷ್ಟೇ ತಡ.. ನಂತರದ 2 ಪಂದ್ಯಗಳಿಂದ ಕಿಶನ್ಗೆ ಗೇಟ್ ಪಾಸ್ ನೀಡಲಾಯ್ತು. ಆ ಬಳಿಕ ಸೌತ್ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲೂ ಕಿಶನ್, ಬೆಂಚ್ಗೆ ಸೀಮಿತವಾದ್ರು. ಕಿಶನ್ ಬದಲಿಗೆ ಜಿತೇಶ್ ಶರ್ಮಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರು.
ಕಿಶನ್ ವಿಶ್ವಕಪ್ ಸ್ಥಾನಕ್ಕೂ ಕುತ್ತು ತಂದ ಜಿತೇಶ್.?
ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಟಿ20 ವಿಶ್ವಕಪ್ನಲ್ಲಿ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಕಿಶನ್ಗೆ ಆರಂಭಿಕನ ಸ್ಥಾನ ಸಿಗಲ್ಲ. ಮಿಡಲ್ ಆರ್ಡರ್ನಲ್ಲಿ ಸ್ಥಾನಕ್ಕೆ ತೀವ್ರ ಪೈಪೋಟಿಯಿದ್ದು, ಫಿನಿಷಿಂಗ್ ಸ್ಕಿಲ್ನಿಂದ ಜಿತೇಶ್ ಶರ್ಮಾ ಮ್ಯಾನೇಜ್ಮೆಂಟ್ನ ಮನ ಗೆದ್ದಿದ್ದಾರೆ. ಹೀಗಾಗಿ ವಿಶ್ವಕಪ್ ತಂಡದಲ್ಲೂ ಜಿತೇಶ್, ಕಿಶನ್ನ ಓವರ್ಟೇಕ್ ಮಾಡೋ ಸಾಧ್ಯತೆಯಿದೆ.
2023ರಲ್ಲಿ ವಿಶ್ವಕಪ್, ಏಷ್ಯಾಕಪ್ ಟೂರ್ನಿ ಸೇರಿದಂತೆ ಟೀಮ್ ಇಂಡಿಯಾ ಆಡಿದ ಬಹುತೇಕ ಎಲ್ಲ ಸರಣಿಗಳ ತಂಡದಲ್ಲಿ ಕಿಶನ್ ಇದ್ರು. ಆದ್ರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಸಿಕ್ಕಿದ್ದು ಮಾತ್ರ ಕೆಲವೇ ಕೆಲವು ಅವಕಾಶ. ಪರ್ಫಾಮ್ ಮಾಡಿದ್ರು ಚಾನ್ಸ್ ಸಿಗಲಿಲ್ಲ ಅಂದ್ರೆ ಯಾರಿಗೆ ತಾನೆ ಕೋಪ ಬರಲ್ಲ ಹೇಳಿ, ಈಗ ಕಿಶನ್ ವಿಚಾರದಲ್ಲೂ ಅದೇ ಆಗಿದ್ದು, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಪರೋಕ್ಷವಾಗಿ ಡೊಮೆಸ್ಟಿಕ್ ಆಡುವಂತೆ ಹೇಳುತ್ತಿರುವ ದ್ರಾವಿಡ್
ರಣಜಿ ಟ್ರೋಫಿ ಟೂರ್ನಿ ಕಡೆಗೆ ಮುಖ ಮಾಡದ ಇಶನ್ ಕಿಶನ್
ಜಿತೇಶ್ ಶರ್ಮಾಗೆ ಮಣೆ ಹಾಕಿರುವುದರ ಹಿಂದಿದೆ ಅಸಲಿ ಕಾರಣ
ಸೌತ್ ಆಫ್ರಿಕಾ ಪ್ರವಾಸದಲ್ಲಿದ್ದ ಇಶನ್ ಕಿಶನ್ ಇದ್ದಕ್ಕಿದ್ದಂತೆ ಭಾರತಕ್ಕೆ ವಾಪಸ್ ಆಗಿದ್ಯಾಕೆ. ಈ ಪ್ರಶ್ನೆ ಅವತ್ತಿಂದ ಇವತ್ತಿನವರೆಗೆ ಹಲವು ಉತ್ತರಗಳು ಸಿಕ್ಕಿದೆ. ಮಾನಸಿಕ ಒತ್ತಡ, ವರ್ಕ್ಲೋಡ್ ಮ್ಯಾನೇಜ್ಮೆಂಟ್ ಹೀಗೆ ಹಲವು ಕಾರಣಗಳು ರಿವೀಲ್ ಆದ್ವು. ಆದ್ರೆ, ಅಸಲಿ ಮ್ಯಾಟರ್ ಬೇರೆನೆ ಇದೆ.
ಕಳೆದ ಡಿಸೆಂಬರ್ನಲ್ಲಿ ಟೀಮ್ ಇಂಡಿಯಾ ಜತೆ ಸೌತ್ ಆಫ್ರಿಕಾಗೆ ತೆರಳಿದ್ದ ಕಿಶನ್ ಎಲ್ಲರಿಗೂ ಶಾಕ್ ನೀಡಿದ್ರು. ಟೆಸ್ಟ್ ಸರಣಿ ಆಡಬೇಕಿದ್ದ ಕಿಶನ್ ಟಿ20 ಸರಣಿಯ ಮುಗಿದ ಬೆನ್ನಲ್ಲೇ, ವೈಯಕ್ತಿಕ ಕಾರಣ ನೀಡಿ ತವರಿಗೆ ವಾಪಸ್ ಆಗಿದ್ರು. ಟೀಮ್ ಇಂಡಿಯಾದಲ್ಲಿ ಒಂದೊಂದು ಸ್ಥಾನಕ್ಕೂ ತೀವ್ರ ಪೈಪೋಟಿ ಇರೋವಾಗ ಸಿಕ್ಕ ಅವಕಾಶವನ್ನ ಕಿಶನ್ ಬಿಟ್ಟು ಬಂದಿದ್ರು. ಹೀಗಾಗಿ ಈ ಸರ್ಪ್ರೈಸಿಂಗ್ ನಿರ್ಧಾರ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು.
ಕಿಶನ್ ದುಬೈನಲ್ಲಿ ಮೋಜು- ಮಸ್ತಿ
ಮಾನಸಿಕ ಒತ್ತಡದಿಂದಾಗಿ ಕಿಶನ್ ತವರಿಗೆ ವಾಪಸ್ ಆಗಿದ್ದಾರೆ ಅನ್ನೋ ಸುದ್ದಿ ಆರಂಭದಲ್ಲಿ ಹಬ್ಬಿತ್ತು. ಆದ್ರೆ, ನಂತರದಲ್ಲಿ ಆಗಿದ್ದೇ ಬೇರೆ. ಭಾರತಕ್ಕೆ ಬಂದಿಳಿದ ಕಿಶನ್, ಕೌನ್ ಬನೇಗಾ ಕ್ರೋರ್ಪತಿಯಲ್ಲಿ ಕಾಣಿಸಿಕೊಂಡರು. ಆ ಬಳಿಕ ದುಬೈನಲ್ಲಿ ಮೋಜು- ಮಸ್ತಿ ಮಾಡಿದ್ರು. ಇದ್ರಿಂದಾಗಿ ಬಿಸಿಸಿಐ ಬಾಸ್ಗಳ ಕೆಂಗಣ್ಣಿಗೆ ಗುರಿಯಾದ್ರು. ಹೀಗಾಗಿ ಅಫ್ಘಾನ್ ಎದುರಿನ ಟಿ20 ಹಾಗೂ ಈಗ ನಡೀತಿರೋ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರ ಬಿದ್ರು. ಇಷ್ಟೇ ಅಲ್ಲ, ಕಮ್ಬ್ಯಾಕ್ ಮಾಡಬೇಕಂದ್ರೆ, ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಕೋಚ್ ದ್ರಾವಿಡ್ ಪರೋಕ್ಷವಾಗಿ ಸೂಚನೆಯನ್ನೂ ನೀಡಿದ್ರು.
ಕಮ್ಬ್ಯಾಕ್ ಮಾಡಬೇಕಂದ್ರೆ ಕಿಶನ್ಗೆ ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಕೋಚ್ ದ್ರಾವಿಡ್ ಪರೋಕ್ಷವಾಗಿ ಹೇಳ್ತಾನೆ ಬರ್ತಿದ್ದಾರೆ. ಆದ್ರೆ, ಕಿಶನ್ ಮಾತ್ರ ಈ ಮಾತಿಗೆ ಬೆಲೆನೇ ಕೊಡ್ತಿಲ್ಲ. ರಣಜಿ ಟ್ರೋಫಿ ಟೂರ್ನಿ ಕಡೆಗೆ ಮುಖ ಮಾಡದ ಕಿಶನ್, ಬರೋಡಾದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ಆರಂಭಿಸಿದ್ದಾರೆ. ಅಲ್ಲಿಗೆ ಐಪಿಎಲ್ಗೆ ಕಮ್ಬ್ಯಾಕ್ ಮಾಡೋದು ಕಿಶನ್ ಗುರಿ ಅನ್ನೋದು ಕನ್ಫರ್ಮ್ ಆಗಿದೆ.
ಮ್ಯಾನೇಜ್ಮೆಂಟ್ ಮೇಲೆ ಕಿಶನ್ಗೆ ಕೆಂಡದಂಥಾ ಕೋಪ.!
ಇಶನ್ ಕಿಶನ್ ಟೀಮ್ ಮ್ಯಾನೇಜ್ಮೆಂಟ್ ಮೇಲೆ ಹಗೆತನ ಸಾಧಿಸ್ತಾ ಇದ್ದಾರೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಟೀಮ್ ಮ್ಯಾನೇಜ್ಮೆಂಟ್ ಮೇಲೆ ಕಿಶನ್ಗೆ ಕೆಂಡದಂಥಾ ಕೋಪವಿದೆ. ಇದಕ್ಕೆಲ್ಲ ಕಾರಣ ಜಿತೇಶ್ ಶರ್ಮಾ ಸೆಲೆಕ್ಷನ್. ಕಿಶನ್ರನ್ನ ಕಡೆಗಣಿಸಿ ಜಿತೇಶ್ ಶರ್ಮಾರನ್ನ ಟಿ20 ತಂಡದ ನಂಬರ್- 1 ಆಯ್ಕೆ ಮಾಡಿರೋ ಮ್ಯಾನೇಜ್ಮೆಂಟ್ನ ನಡೆಯೇ ಕಿಶನ್ ಕೋಪಕ್ಕೆ ಕಾರಣವಾಗಿದೆ.
ಕಿಶನ್ ಕಡೆಗಣನೆ.. ಜಿತೇಶ್ ಮೇಲೆ ಒಲವು.?
ಏಕದಿನ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕಿಶನ್ ಆಡಿದ್ರು. ಸರಣಿಯ ಮೊದಲ 2 ಪಂದ್ಯದಲ್ಲಿ ಕಿಶನ್, ಸತತ 2 ಹಾಫ್ ಸೆಂಚುರಿ ಇನ್ನಿಂಗ್ಸ್ ಕಟ್ಟಿದ್ರು. ದುರಾದೃಷ್ಟವಶಾತ್, 3ನೇ ಪಂದ್ಯದಲ್ಲಿ ಡಕೌಟ್ ಆಗಿ ನಿರ್ಗಮಿಸಿದ್ರು. ಇಷ್ಟೇ ತಡ.. ನಂತರದ 2 ಪಂದ್ಯಗಳಿಂದ ಕಿಶನ್ಗೆ ಗೇಟ್ ಪಾಸ್ ನೀಡಲಾಯ್ತು. ಆ ಬಳಿಕ ಸೌತ್ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲೂ ಕಿಶನ್, ಬೆಂಚ್ಗೆ ಸೀಮಿತವಾದ್ರು. ಕಿಶನ್ ಬದಲಿಗೆ ಜಿತೇಶ್ ಶರ್ಮಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರು.
ಕಿಶನ್ ವಿಶ್ವಕಪ್ ಸ್ಥಾನಕ್ಕೂ ಕುತ್ತು ತಂದ ಜಿತೇಶ್.?
ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಟಿ20 ವಿಶ್ವಕಪ್ನಲ್ಲಿ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಕಿಶನ್ಗೆ ಆರಂಭಿಕನ ಸ್ಥಾನ ಸಿಗಲ್ಲ. ಮಿಡಲ್ ಆರ್ಡರ್ನಲ್ಲಿ ಸ್ಥಾನಕ್ಕೆ ತೀವ್ರ ಪೈಪೋಟಿಯಿದ್ದು, ಫಿನಿಷಿಂಗ್ ಸ್ಕಿಲ್ನಿಂದ ಜಿತೇಶ್ ಶರ್ಮಾ ಮ್ಯಾನೇಜ್ಮೆಂಟ್ನ ಮನ ಗೆದ್ದಿದ್ದಾರೆ. ಹೀಗಾಗಿ ವಿಶ್ವಕಪ್ ತಂಡದಲ್ಲೂ ಜಿತೇಶ್, ಕಿಶನ್ನ ಓವರ್ಟೇಕ್ ಮಾಡೋ ಸಾಧ್ಯತೆಯಿದೆ.
2023ರಲ್ಲಿ ವಿಶ್ವಕಪ್, ಏಷ್ಯಾಕಪ್ ಟೂರ್ನಿ ಸೇರಿದಂತೆ ಟೀಮ್ ಇಂಡಿಯಾ ಆಡಿದ ಬಹುತೇಕ ಎಲ್ಲ ಸರಣಿಗಳ ತಂಡದಲ್ಲಿ ಕಿಶನ್ ಇದ್ರು. ಆದ್ರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಸಿಕ್ಕಿದ್ದು ಮಾತ್ರ ಕೆಲವೇ ಕೆಲವು ಅವಕಾಶ. ಪರ್ಫಾಮ್ ಮಾಡಿದ್ರು ಚಾನ್ಸ್ ಸಿಗಲಿಲ್ಲ ಅಂದ್ರೆ ಯಾರಿಗೆ ತಾನೆ ಕೋಪ ಬರಲ್ಲ ಹೇಳಿ, ಈಗ ಕಿಶನ್ ವಿಚಾರದಲ್ಲೂ ಅದೇ ಆಗಿದ್ದು, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ