ರಿಷಭ್ ಪಂತ್ ಸ್ಥಾನವನ್ನೇ ನಿರಾಕರಿಸಿದ ಇಶನ್ ಕಿಶನ್​.. ಇಂಗ್ಲೆಂಡ್​ಗೆ ಹೋಗಲ್ಲವೆಂದ ಯಂಗ್ ವಿಕೆಟ್​ ಕೀಪರ್!

author-image
Bheemappa
Updated On
ರಿಷಭ್ ಪಂತ್ ಸ್ಥಾನವನ್ನೇ ನಿರಾಕರಿಸಿದ ಇಶನ್ ಕಿಶನ್​.. ಇಂಗ್ಲೆಂಡ್​ಗೆ ಹೋಗಲ್ಲವೆಂದ ಯಂಗ್ ವಿಕೆಟ್​ ಕೀಪರ್!
Advertisment
  • ವಿಕೆಟ್​ ಕೀಪರ್​ ಸ್ಥಾನಕ್ಕೆ ಮೊದಲ ಆಯ್ಕೆಯೇ ಇಶನ್ ಕಿಶನ್
  • ಆಯ್ಕೆ ಸಮಿತಿಯ ಕರೆಗೆ ನೋ ಎಂದು ಹೇಳಿದ ವಿಕೆಟ್ ಕೀಪರ್
  • ಬ್ಯಾಟರ್, ಕೀಪರ್ ಇಶನ್ ಕಿಶನ್ ಕೊಟ್ಟ ಬಲವಾದ ಕಾರಣ..?

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್​​ ಸರಣಿಯ 4ನೇ ಪಂದ್ಯ ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿದೆ. ಈಗಾಗಲೇ ಬ್ಯಾಟಿಂಗ್ ಮಾಡಿರುವ ಗಿಲ್​ ಪಡೆ ಕೇವಲ 358ಕ್ಕೆ ಆಲೌಟ್​ ಆಗಿ ಸಂಕಷ್ಟದಲ್ಲಿದೆ. ಇದರ ಜೊತೆಗೆ ಟೀಮ್ ಇಂಡಿಯಾಕ್ಕೆ ಗಾಯಗಳ ಸಮಸ್ಯೆ ಕಾಡುತ್ತಿದ್ದು ರಿಷಭ್ ಪಂತ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಈ ಸ್ಥಾನಕ್ಕೆ ಯುವ ವಿಕೆಟ್ ಕೀಪರ್ ಇಶನ್ ಕಿಶನ್ ಅವರನ್ನ ಆಯ್ಕೆ ಮಾಡಲಾಗಿತ್ತು. ಆದರೆ ಇದನ್ನು ಯಂಗ್ ವಿಕೆಟ್​ ಕೀಪರ್ ನಿರಾಕರಣೆ ಮಾಡಿದ್ದಾರೆ.​​

ಕ್ರೀಸ್​​ನಲ್ಲಿ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಕಾಲಿನ ಗಾಯಕ್ಕೆ ಒಳಗಾಗಿದ್ದರು. ಚೆಂಡು ಬಲವಾಗಿ ಬಡಿದಿದ್ದರಿಂದ ಪಂತ್ ಕಾಲಿನಿಂದ ರಕ್ತ ಚಿಮ್ಮಿತ್ತು. ಹೀಗಾಗಿ ಅವರು ಸರಣಿಯಿಂದ ಹೊರಗುಳಿದಿದ್ದಾರೆ. ಈ ಸ್ಥಾನಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಮೊದಲ ಆಯ್ಕೆಯಾಗಿ ಯುವ ವಿಕೆಟ್ ಕೀಪರ್ ಇಶನ್ ಕಿಶನ್ ಅವರನ್ನು ಆಯ್ಕೆ ಮಾಡಿತ್ತು. ಇಂಗ್ಲೆಂಡ್​ಗೆ ಬರಲು ಆಗುವುದಿಲ್ಲ ಎಂದು ಇಶನ್ ಕಿಶನ್ ಕಾರಣ ನೀಡಿ ಆಫರ್ ರಿಜೆಕ್ಟ್ ಮಾಡಿದ್ದಾರೆ.

ಇದನ್ನೂ  ಓದಿ: ಕೊಹ್ಲಿಯಂತೆ ಕಠಿಣ ಡಯಟ್.. ಕೇವಲ 2 ತಿಂಗಳು, 17 Kg ತೂಕ ಇಳಿಸಿದ ಸರ್ಫರಾಜ್ ಖಾನ್!

publive-image

ಟೀಮ್ ಇಂಡಿಯಾದಲ್ಲಿ ಪಂತ್​ಗೆ ಗಾಯವಾದ ಕಾರಣ ಬಿಸಿಸಿಐ ತನ್ನ ಮೊದಲ ಆಯ್ಕೆಯಾಗಿ ವಿಕೆಟ್ ಕೀಪರ್ ಇಶನ್​ ಕಿಶನ್​​ರನ್ನ ಆಯ್ಕೆ ಮಾಡಿ ಸಂಪರ್ಕ ಮಾಡಿತ್ತು. ಈ ವೇಳೆ ಎಡಗಾಲಿನ ಪಾದದ ಗಾಯ (Ankle Injury) ದಿಂದ ಬಳಲುತ್ತಿದ್ದೇನೆ. ಹೀಗಾಗಿ ಬ್ರಿಟನ್​ಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಫೈನಲ್​ ಟೆಸ್ಟ್​ನಲ್ಲಿ ಆಡುವ ಅವಕಾಶವನ್ನ ಇಶನ್ ಕಿಶನ್ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಭಾರತದ ಯುವ ವಿಕೆಟ್ ಕೀಪರ್ ಆಗಿರುವ ಇಶನ್ ಕಿಶನ್ ಅವರು ಸ್ಕೂಟಿಯಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಇಶನ್​ ಅವರ ಕಾಲಿನ ಪಾದಕ್ಕೆ ಗಂಭೀರವಾದ ಗಾಯವಾಗಿದೆ. ಈ ಗಾಯಕ್ಕೆ ವೈದ್ಯರು ಹೊಲಿಗೆ ಕೂಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಮೈದಾನದಲ್ಲಿ ಆಡಲು ಆಗುವುದಿಲ್ಲ. ಹೀಗಾಗಿಯೇ ಮುಂದಿನ ಪಂದ್ಯಕ್ಕೆ ಬರಲು ಆಗುವುದಿಲ್ಲ ಎಂದು ಇಶನ್ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment