newsfirstkannada.com

ದ್ರಾವಿಡ್​​​​​ ಮಾತಿಗೆ ಕ್ಯಾರೇ ಎನ್ನದ ಸ್ಟಾರ್​ ಆಟಗಾರರು; ಇಶಾನ್​​, ಶ್ರೇಯಸ್​​ಗೆ ಬಿಗ್​ ಶಾಕ್​​​ ಕೊಟ್ಟ ಬಿಸಿಸಿಐ!

Share :

Published February 23, 2024 at 4:17pm

    ದ್ರಾವಿಡ್​​, ಅಗರ್ಕರ್​ ಮಾತಿಗೆ ಸೊಪ್ಪು ಹಾಕದ ಸ್ಟಾರ್​ ಆಟಗಾರರು

    ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

    ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್​​, ಅಯ್ಯರ್​​!

ಟೀಮ್​ ಇಂಡಿಯಾದ ಹೆಡ್​​ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್​​ ಕಿಶನ್​​, ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ.

ಉದ್ದೇಪೂರ್ವಕವಾಗಿ 2024ರ ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಇಶಾನ್ ಕಿಶನ್​​, ಶ್ರೇಯಸ್​ ಅಯ್ಯರ್​​​​ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​​​ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ.

ಹೌದು, ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಕಳೆದ ವರ್ಷ ಮಾರ್ಚ್​​ ತಿಂಗಳಲ್ಲಿ 3 ಕೋಟಿ ರೂ. ನೀಡುವ ಬಿ ಗ್ರೇಡ್​ ಒಪ್ಪಂದಕ್ಕೆ ಸೇರಿಸಿಕೊಂಡಿತ್ತು. ಇಶನ್ ಕಿಶನ್ ಕೂಡ ವಾರ್ಷಿಕ 1 ಕೋಟಿ ರೂ. ಗಳಿಸೋ C ಗ್ರೇಡ್‌ಗೆ ಸೇರ್ಪಡೆಯಾಗಿದ್ದರು.

ಈಗ ಸಿಕ್ಕಿರೋ ಮಾಹಿತಿ ಪ್ರಕಾರ ಬಿಸಿಸಿಐ ಸದ್ಯದಲ್ಲೇ ಆಟಗಾರರಿಗೆ ಹೊಸ ಸೆಂಟ್ರಲ್​​ ಕಾಂಟ್ರ್ಯಾಕ್ಟ್​​​ ಅನೌನ್ಸ್​ ಮಾಡಲಿದೆ. ಹೀಗಾಗಿ ರಣಜಿ ಕ್ರಿಕೆಟ್​ ಆಡದ ಕಾರಣ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್​​​ ಬಿಸಿಸಿಐ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ದ್ರಾವಿಡ್​​​​​ ಮಾತಿಗೆ ಕ್ಯಾರೇ ಎನ್ನದ ಸ್ಟಾರ್​ ಆಟಗಾರರು; ಇಶಾನ್​​, ಶ್ರೇಯಸ್​​ಗೆ ಬಿಗ್​ ಶಾಕ್​​​ ಕೊಟ್ಟ ಬಿಸಿಸಿಐ!

https://newsfirstlive.com/wp-content/uploads/2024/01/Ishan-Kishan_Shreyas-Iyer.jpg

    ದ್ರಾವಿಡ್​​, ಅಗರ್ಕರ್​ ಮಾತಿಗೆ ಸೊಪ್ಪು ಹಾಕದ ಸ್ಟಾರ್​ ಆಟಗಾರರು

    ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

    ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್​​, ಅಯ್ಯರ್​​!

ಟೀಮ್​ ಇಂಡಿಯಾದ ಹೆಡ್​​ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್​​ ಕಿಶನ್​​, ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ.

ಉದ್ದೇಪೂರ್ವಕವಾಗಿ 2024ರ ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಇಶಾನ್ ಕಿಶನ್​​, ಶ್ರೇಯಸ್​ ಅಯ್ಯರ್​​​​ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​​​ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ.

ಹೌದು, ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಕಳೆದ ವರ್ಷ ಮಾರ್ಚ್​​ ತಿಂಗಳಲ್ಲಿ 3 ಕೋಟಿ ರೂ. ನೀಡುವ ಬಿ ಗ್ರೇಡ್​ ಒಪ್ಪಂದಕ್ಕೆ ಸೇರಿಸಿಕೊಂಡಿತ್ತು. ಇಶನ್ ಕಿಶನ್ ಕೂಡ ವಾರ್ಷಿಕ 1 ಕೋಟಿ ರೂ. ಗಳಿಸೋ C ಗ್ರೇಡ್‌ಗೆ ಸೇರ್ಪಡೆಯಾಗಿದ್ದರು.

ಈಗ ಸಿಕ್ಕಿರೋ ಮಾಹಿತಿ ಪ್ರಕಾರ ಬಿಸಿಸಿಐ ಸದ್ಯದಲ್ಲೇ ಆಟಗಾರರಿಗೆ ಹೊಸ ಸೆಂಟ್ರಲ್​​ ಕಾಂಟ್ರ್ಯಾಕ್ಟ್​​​ ಅನೌನ್ಸ್​ ಮಾಡಲಿದೆ. ಹೀಗಾಗಿ ರಣಜಿ ಕ್ರಿಕೆಟ್​ ಆಡದ ಕಾರಣ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್​​​ ಬಿಸಿಸಿಐ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More