newsfirstkannada.com

ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ಇಶಿತಾ ವರ್ಷ; ಯಾವ ಸೀರಿಯಲ್​ ಗೊತ್ತಾ?

Share :

Published April 15, 2024 at 4:41pm

    ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಅದ್ಭುತ ನಟನೆ ಮೂಲಕ ಫ್ಯಾನ್ಸ್​ ಮನಸ್ಸು ಗೆದ್ದಿದ್ದರು

    ಅಗ್ನಿಸಾಕ್ಷಿ ನಂತರ ಹೆಚ್ಚಾಗಿ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಇಶಿತಾ

    ವಿಶೇಷವಾದ ಹೊಸ ಪಾತ್ರದ ಮೂಲಕ ಎಂಟ್ರಿ ಕೊಡಲು ಸಜ್ಜಾದ ಕಿರುತೆರೆ ನಟಿ

ವಿಶೇಷವಾದ ತಿರುವುಗಳ ಮೂಲಕ ವೀಕ್ಷಕರನ್ನ ರಂಜಿಸುತ್ತಿದೆ ಪುಟ್ಟಕ್ಕನ ಮಕ್ಕಳು. ಮೂವರು ಹೆಣ್ಮಕ್ಕಳ ಜೀವನ ತನ್ನಂತೆ ಆಗಬಾರದು. ಸಮಾಜದಲ್ಲಿ ತಗ್ಗಿ ಬಗ್ಗಿ ನಡೆದುಕೊಂಡು ಸಂಸಾರ ಸಾಗಿಸಬೇಕು ಎಂಬ ಪುಟ್ಟಕ್ಕನ ಕನಸು ನನಸು ಆಗೋ ಥರ ಕಾಣ್ತಿಲ್ಲ. ಹೌದು, ಒಬ್ಬಳು ಮಗಳ ಬಾಳು ಸರಿ ಹೋಯ್ತು ಅನ್ನೋವಾಗಲೇ ಮತ್ತೋಬ್ಬಳ ಕುಟುಂಬದ ಕಲಹ ಬೀದಿಗೆ ಬಂದಿರುತ್ತೆ. ಇದು ಪ್ರತಿ ಮನೆ ಮನೆಯ ಕತೆ.

ಇದನ್ನೂ ಓದಿ: ಬೈಕ್​, ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಅದರಲ್ಲೂ ಹೆಣ್ಣು ಹೆತ್ತ ತಂದೆ-ತಾಯಿಯ ಸಂಕಟ, ತವರು ಮನೆ-ಗಂಡನ ಮನಯ ಸಂಕಷ್ಟದ ನಡುವೆ ಬದುಕುತ್ತಿರೋ ಅದೆಷ್ಟೋ ಹೆಣ್ಮಕ್ಕಳ ಬದುಕಿನ ಕತೆ. ಅದಕ್ಕೆ ವೀಕ್ಷಕರ ಮನಸ್ಸಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ವಿಶೇಷವಾದ ಸ್ಥಾನ ಇರೋದು ಅನ್ಸುತ್ತೆ. ಸದ್ಯ, ಸಹನಾ ಬದುಕು ಛಿದ್ರವಾಗಿದೆ. ಪ್ರೀತಿಸಿ ಮದುವೆ ಆದ ಮುರುಳಿ ಮನೆಯವರು ನಡೆದುಕೊಂಡ ರೀತಿ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಅಷ್ಟೇಯಲ್ಲ, ಮುರಳಿಯಿಂದ ಬಿಡುಗಡೆಯಾಗಬೇಕು ಅಂತಾ ಧೈರ್ಯದಿಂದ ಪಣ ತೋಟ್ಟಿದ್ದಾಳೆ ಸಹನಾ. ಡೈವರ್ಸ್​ ತಗೋಬೇಕು ಅಂತಾ ಲಾಯರ್​ ಚಂದ್ರಣ್ಣ ಹತ್ತಿರ ಕೇಳ್ತಿದ್ದಾಳೆ. ಇದಕ್ಕೆ ಚಂದ್ರು-ಕಠಿ ಶಾಕ್​ ಆಗಿದ್ದು, ಆದ್ರೇ ಸಹನಾಳ ದಿಟ್ಟ ನಿರ್ಧಾರ ಅವರನ್ನ ಕಂಗೆಡೇಸಿದೆ. ಈ ಮಧ್ಯೆ ವಿಶೇಷವಾದ ಹೊಸ ಪಾತ್ರ ಒಂದು ಎಂಟ್ರಿ ಕೊಡಲಿದೆ.

ಹೌದು, ಸಹನಾಗೆ ಸಹಾಯ ಮಾಡಲು ಹೊಸ ಲಾಯರ್ ಒಬ್ಬರು ಎಂಟ್ರಿಕೊಡಲಿದ್ದಾರೆ. ಆ ಪಾತ್ರವನ್ನ ನಟಿ ಇಶಿತಾ ವರ್ಷ ಮಾಡಲಿದ್ದಾರಂತೆ. ವೈಲ್ಡ್​ ಲೈಫ್​ ಫೋಟೋಗ್ರಾಫಿಯನ್ನು ಮಾಡ್ತಾ ಕಾಡು-ಮೇಡು ಸುತ್ತುತ್ತಿರೋ ನಟಿ ಇಶಿತಾ ಮತ್ತೆ ಸೀರಿಯಲ್​ಗೆ ಮರಳುತ್ತಿದ್ದಾರಂತೆ. ಪುಟ್ಟಕ್ಕನ ಮಕ್ಕಳಿಗೆ ಸಹಾಯ ಮಾಡೋ ಲಾಯರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಆ ಎಪಿಸೋಡ್​ಗಳು ಶೂಟಿಂಗ್​ ಆಗಿದ್ದು, ಕೆಲವೇ ದಿನಗಳಲ್ಲಿ ಇಶಿತಾ ಎಂಟ್ರಿಯಾಗಲಿದೆ. ಅಗ್ನಿಸಾಕ್ಷಿ ನಂತರ ಇಶಿತಾ ಹೆಚ್ಚಾಗಿ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಸುದ್ದಿ ನಿಜ ಆದ್ರೇ ಅವರ ಅಭಿಮಾನಿಗಳಿಗೆ ಖುಷಿ ಕೊಡೋದ್ರಲ್ಲಿ ಡೌಟ್​ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ಇಶಿತಾ ವರ್ಷ; ಯಾವ ಸೀರಿಯಲ್​ ಗೊತ್ತಾ?

https://newsfirstlive.com/wp-content/uploads/2024/04/ishitha1.jpg

    ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಅದ್ಭುತ ನಟನೆ ಮೂಲಕ ಫ್ಯಾನ್ಸ್​ ಮನಸ್ಸು ಗೆದ್ದಿದ್ದರು

    ಅಗ್ನಿಸಾಕ್ಷಿ ನಂತರ ಹೆಚ್ಚಾಗಿ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಇಶಿತಾ

    ವಿಶೇಷವಾದ ಹೊಸ ಪಾತ್ರದ ಮೂಲಕ ಎಂಟ್ರಿ ಕೊಡಲು ಸಜ್ಜಾದ ಕಿರುತೆರೆ ನಟಿ

ವಿಶೇಷವಾದ ತಿರುವುಗಳ ಮೂಲಕ ವೀಕ್ಷಕರನ್ನ ರಂಜಿಸುತ್ತಿದೆ ಪುಟ್ಟಕ್ಕನ ಮಕ್ಕಳು. ಮೂವರು ಹೆಣ್ಮಕ್ಕಳ ಜೀವನ ತನ್ನಂತೆ ಆಗಬಾರದು. ಸಮಾಜದಲ್ಲಿ ತಗ್ಗಿ ಬಗ್ಗಿ ನಡೆದುಕೊಂಡು ಸಂಸಾರ ಸಾಗಿಸಬೇಕು ಎಂಬ ಪುಟ್ಟಕ್ಕನ ಕನಸು ನನಸು ಆಗೋ ಥರ ಕಾಣ್ತಿಲ್ಲ. ಹೌದು, ಒಬ್ಬಳು ಮಗಳ ಬಾಳು ಸರಿ ಹೋಯ್ತು ಅನ್ನೋವಾಗಲೇ ಮತ್ತೋಬ್ಬಳ ಕುಟುಂಬದ ಕಲಹ ಬೀದಿಗೆ ಬಂದಿರುತ್ತೆ. ಇದು ಪ್ರತಿ ಮನೆ ಮನೆಯ ಕತೆ.

ಇದನ್ನೂ ಓದಿ: ಬೈಕ್​, ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಅದರಲ್ಲೂ ಹೆಣ್ಣು ಹೆತ್ತ ತಂದೆ-ತಾಯಿಯ ಸಂಕಟ, ತವರು ಮನೆ-ಗಂಡನ ಮನಯ ಸಂಕಷ್ಟದ ನಡುವೆ ಬದುಕುತ್ತಿರೋ ಅದೆಷ್ಟೋ ಹೆಣ್ಮಕ್ಕಳ ಬದುಕಿನ ಕತೆ. ಅದಕ್ಕೆ ವೀಕ್ಷಕರ ಮನಸ್ಸಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ವಿಶೇಷವಾದ ಸ್ಥಾನ ಇರೋದು ಅನ್ಸುತ್ತೆ. ಸದ್ಯ, ಸಹನಾ ಬದುಕು ಛಿದ್ರವಾಗಿದೆ. ಪ್ರೀತಿಸಿ ಮದುವೆ ಆದ ಮುರುಳಿ ಮನೆಯವರು ನಡೆದುಕೊಂಡ ರೀತಿ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಅಷ್ಟೇಯಲ್ಲ, ಮುರಳಿಯಿಂದ ಬಿಡುಗಡೆಯಾಗಬೇಕು ಅಂತಾ ಧೈರ್ಯದಿಂದ ಪಣ ತೋಟ್ಟಿದ್ದಾಳೆ ಸಹನಾ. ಡೈವರ್ಸ್​ ತಗೋಬೇಕು ಅಂತಾ ಲಾಯರ್​ ಚಂದ್ರಣ್ಣ ಹತ್ತಿರ ಕೇಳ್ತಿದ್ದಾಳೆ. ಇದಕ್ಕೆ ಚಂದ್ರು-ಕಠಿ ಶಾಕ್​ ಆಗಿದ್ದು, ಆದ್ರೇ ಸಹನಾಳ ದಿಟ್ಟ ನಿರ್ಧಾರ ಅವರನ್ನ ಕಂಗೆಡೇಸಿದೆ. ಈ ಮಧ್ಯೆ ವಿಶೇಷವಾದ ಹೊಸ ಪಾತ್ರ ಒಂದು ಎಂಟ್ರಿ ಕೊಡಲಿದೆ.

ಹೌದು, ಸಹನಾಗೆ ಸಹಾಯ ಮಾಡಲು ಹೊಸ ಲಾಯರ್ ಒಬ್ಬರು ಎಂಟ್ರಿಕೊಡಲಿದ್ದಾರೆ. ಆ ಪಾತ್ರವನ್ನ ನಟಿ ಇಶಿತಾ ವರ್ಷ ಮಾಡಲಿದ್ದಾರಂತೆ. ವೈಲ್ಡ್​ ಲೈಫ್​ ಫೋಟೋಗ್ರಾಫಿಯನ್ನು ಮಾಡ್ತಾ ಕಾಡು-ಮೇಡು ಸುತ್ತುತ್ತಿರೋ ನಟಿ ಇಶಿತಾ ಮತ್ತೆ ಸೀರಿಯಲ್​ಗೆ ಮರಳುತ್ತಿದ್ದಾರಂತೆ. ಪುಟ್ಟಕ್ಕನ ಮಕ್ಕಳಿಗೆ ಸಹಾಯ ಮಾಡೋ ಲಾಯರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಆ ಎಪಿಸೋಡ್​ಗಳು ಶೂಟಿಂಗ್​ ಆಗಿದ್ದು, ಕೆಲವೇ ದಿನಗಳಲ್ಲಿ ಇಶಿತಾ ಎಂಟ್ರಿಯಾಗಲಿದೆ. ಅಗ್ನಿಸಾಕ್ಷಿ ನಂತರ ಇಶಿತಾ ಹೆಚ್ಚಾಗಿ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಸುದ್ದಿ ನಿಜ ಆದ್ರೇ ಅವರ ಅಭಿಮಾನಿಗಳಿಗೆ ಖುಷಿ ಕೊಡೋದ್ರಲ್ಲಿ ಡೌಟ್​ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More