Advertisment

ನದಿಯಲ್ಲಿ ಈಶ್ವರ್​ ಮಲ್ಪೆಗೆ ಸಿಕ್ತು 15kg ಲೋಹದ ಸಾಮಾಗ್ರಿ! ಅದನ್ನು ಕಂಡು ಅರ್ಜುನ್​ ಲಾರಿ ಮಾಲೀಕ ಏನಂದ್ರು ಗೊತ್ತಾ?

author-image
AS Harshith
Updated On
ನದಿಯಲ್ಲಿ ಈಶ್ವರ್​ ಮಲ್ಪೆಗೆ ಸಿಕ್ತು 15kg ಲೋಹದ ಸಾಮಾಗ್ರಿ! ಅದನ್ನು ಕಂಡು ಅರ್ಜುನ್​ ಲಾರಿ ಮಾಲೀಕ ಏನಂದ್ರು ಗೊತ್ತಾ?
Advertisment
  • ಕೊಟ್ಟ ಮಾತಿಗೆ ತಪ್ಪದ ಈಶ್ವರ್​ ಮಲ್ಪೆ ಮತ್ತು ತಂಡ
  • ನದಿ ಆಳಕ್ಕೆ ಹೋಗಿ 15 ಕೆಜಿ ತೂಕದ ಸಾಮಾಗ್ರಿ ತಂಡ ಈಶ್ವರ್​ ಮಲ್ಪೆ
  • ಪತ್ತೆಯಾದ ಸಾಮಾಗ್ರಿ ಅರ್ಜುನ್​ ಲಾರಿಯದ್ದಾ? ಇಲ್ಲಿದೆ ಮಾಹಿತಿ

ಶಿರೂರು ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಡ್ರೈವರ್​ ಅರ್ಜುನ್ ನಾಪತ್ತೆಯಾಗಿದ್ದರು. ಅಂದು ಗಂಗಾವಳಿ ನೀರಿನ ರಭಸ ಜೋರಿದ್ದ ಕಾರಣ ಅರ್ಜುನ್​ ಮತ್ತು ಲಾರಿಯನ್ನು ಹುಡುಕಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಮುಳುಗು ತಜ್ಞ ಈಶ್ವರ್​ ಮಲ್ಪೆ ನೀರಿಗೆ ಇಳಿದು ಅರ್ಜುನ್​ಗಾಗಿ ಹುಡುಕಾಡಿದರು. ಅವರಿಗೂ ಸಹ ಗಂಗಾವಳಿ ನದಿಯ ರಭಸ ಕಾರ್ಯಚರಣೆಗೆ ಅಡ್ಡಿ ಮಾಡಿತ್ತು. ಕೊನೆಗೆ ಈಶ್ವರ್ ಮಲ್ಪೆ ನೀರಿನ ರಭಸ ಕಡಿಮೆಯಾದಂತೆ ಹುಡುಕಿ ಕೊಡುವುದಾಗಿ ಅರ್ಜುನ್​ ಫ್ಯಾಮಿಲಿಗೆ ಭರವಸೆ ನೀಡಿದ್ದರು.

Advertisment

ಕೊಟ್ಟ ಮಾತಿಗೆ ತಪ್ಪದ ಈಶ್ವರ್​ ಮಲ್ಪೆ ಮತ್ತೆ ಗಂಗಾವಳಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಲಾರಿ ಜಾಕ್ ಜೊತೆಗೆ ಲೋಹದ ಸಾಮಾಗ್ರಿ ಪತ್ತೆಯಾಗಿದೆ. ಆದರೀಗ ಪತ್ತೆಯಾದ ಸಾಮಾಗ್ರಿ​​ ಕುರಿತಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಸಮೋಸಾ ಬೆಲೆಗೆ ಸಿಗುತ್ತಿದೆ ಪಾಕ್​​​ ಟೆಸ್ಟ್​​ ಪಂದ್ಯದ ಟಿಕೆಟ್​! ಆದ್ರೂ ಸ್ಟೇಡಿಯಂ ಯಾಕೆ ಖಾಲಿ?

publive-image

ಶುಕ್ರವಾರದಂದು ಈಶ್ವರ್​ ಮಲ್ಪೆ ನದಿ ಆಳಕ್ಕೆ ಹೋಗಿ 15 ಕೆಜಿ ತೂಕದ ಸಾಮಾಗ್ರಿಯೊಂದನ್ನು ಪತ್ತೆಹಚ್ಚಿ ತೆಗೆದುಕೊಂಡು ದಡಕ್ಕೆ ಬಂದಿದ್ದರು. ಆದರೀಗ ಈ ಸಾಮಾಗ್ರಿ​ ಅರ್ಜುನ್​ ಲಾರಿಯದ್ದಲ್ಲ ಎಂಬ ಸತ್ಯ ಹೊರಬಿದ್ದಿದೆ. ಲಾರಿ ಮಾಲೀಕ ಇದು ತನ್ನ ಲಾರಿಯದ್ದಲ್ಲ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ಅಂತಿಮ ಘಟ್ಟ ತಲುಪಿದ ದರ್ಶನ್ ಕೇಸ್​.. ಶೇ.70ರಷ್ಟು ಕೈ ಸೇರಿದ ರಿಪೋರ್ಟ್​ ಬಗ್ಗೆ​ ಕಮಿಷನರ್ ಏನಂದ್ರು ಗೊತ್ತಾ?

ಸದ್ಯ ಲಾರಿ ಸಾಮಾಗ್ರಿ​ ಪತ್ತೆಯಾದಾಗಿನಿಂದ ಸ್ಥಳೀಯರಿಗೆ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ನೀರಿನಡಿಯಲ್ಲಿ ಮತ್ತೊಂದು ಲಾರಿ ಇದೆಯಾ ಎಂಬ ಪ್ರಶ್ನೆ ಕಾಡಿದೆ.

publive-image

ಇನ್ನು ಶಿರೂರು ಗುಡ್ಡ ಕುಸಿತದಲ್ಲಿ 3 ಗ್ಯಾಸ್​​ ಟ್ಯಾಂಕರ್​ ನದಿ ಪಾಲಾಗಿತ್ತು. ಸದ್ಯ ಆ ಮೂರರಲ್ಲಿ ಒಂದು ಲಾರಿಯ ಸಾಮಾಗ್ರಿ​ ಇದಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಈ ಸಾಮಾಗ್ರಿ​ ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment