newsfirstkannada.com

ಅರ್ಜುನ್​​ ಹುಡುಕಲು ನೀರಿಗಿಳಿದ ಈಶ್ವರ್​ ಮಲ್ಪೆ.. ಲಾರಿ ಜಾಕ್​ ಪತ್ತೆ! ಅಲ್ಲೇ ಟ್ರಕ್​ ಇರೋದು ಪಕ್ಕನಾ?

Share :

Published August 14, 2024 at 7:44am

    ಶಿರೂರು ಗುಡ್ಡಕುಸಿತ ಪ್ರಕರಣ ಸಂಭವಿಸಿ ಇಂದಿಗೆ 30 ದಿನ

    ಲಾರಿ ಚಾಲಕ ಅರ್ಜುನ್​, ಜಗನ್ನಾಥ ನಾಯ್ಕ, ಲೋಕೇಶ್​ಗಾಗಿ ಹುಡುಕಾಟ

    ಮುಳುಗು ತಜ್ಞ ಈಶ್ವರ್​ ಮಲ್ಪೆಯವರಿಂದ ನೀರಿನಾಳಕ್ಕೆ ಇಳಿದು ಶೋಧ

ಅಂಕೋಲಾ ಶಿರೂರು ಗುಡ್ಡಕುಸಿತ ಪ್ರಕರಣ ಸಂಭವಿಸಿ ಇಂದಿಗೆ 30 ದಿನ. ಲಾರಿ ಚಾಲಕ ಅರ್ಜುನ್​, ಜಗನ್ನಾಥ ನಾಯ್ಕ, ಲೋಕೇಶ್​ ಮೃತದೇಹ ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ನಿನ್ನೆ ಎರಡನೇಯ ಹಂತದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮುಳುಗು ತಜ್ಞ ಈಶ್ವರ್​ ಮಲ್ಪೆಯವರು ನೀರಿನಾಳಕ್ಕೆ ಇಳಿದು ಶೋಧ ನಡೆಸಿದ್ದಾರೆ. ಈ ವೇಳೆ ಕೆಲವು ಕುರುಹುಗಳು ಪತ್ತೆಯಾಗಿವೆ

ಗಂಗಾವಳಿ ನದಿಯ ಹರಿವು ಕಡಿಮೆಯಾಗಿರುವ ಹಿನ್ನಲೆ ನಿನ್ನೆ ಶೋಧ ಕಾರ್ಯ ಪುನರಾರಂಭಿಸಿದ್ದಾರೆ. ಈಶ್ವರ್ ಮಲ್ಪೆ ತಂಡದಿಂದ ಅರ್ಜುನ್​ ಲಾರಿಗಾಗಿ ಹುಡುಕಾಟ ನಡೆದಿದೆ. ಈ ವೇಳೆ ಲಾರಿಯ ವೀಲ್ ಜಾಕ್ ಈಶ್ವರ್ ಮಲ್ಪೆಗೆ ಸಿಕ್ಕಿದೆ. ಮಾತ್ರವಲ್ಲದೆ, ಲಾರಿಯ ಪಾರ್ಟ್​ ಒಂದು ಸಿಕ್ಕಿದೆ.

ಇದನ್ನೂ ಓದಿ: ಭೋವಿ ಹಗರಣಗಳ ತನಿಖೆ ಚುರುಕು.. ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳ ಬೇಟೆಯಾಡಲು ನಿಂತ ಕಾಂಗ್ರೆಸ್

ಇಂದು ಸಹ ಗಂಗಾವಳಿ ನದಿಯಲ್ಲಿ ಶೋಧ ಮುಂದುವರೆಯಲಿದೆ. ಬೆಳಿಗ್ಗೆ 8:30ರ ನಂತರ ಕಾರ್ಯಾಚರಣೆ ಆರಂಭ ಮಾಡುವ ಸಾಧ್ಯತೆ ಇದೆ. NDRF, SDRF, ನೌಕಾನೆಲೆ ತಂಡದಿಂದಲೂ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಗಾಂಜಾ ಸೇದ್ತಿದ್ದ, ತನ್ನದೇ ಮನೆಯಲ್ಲೇ ಕಳ್ಳತನ ಮಾಡ್ತಿದ್ದ! ದುನಿಯಾ ವಿಜಯ್​ ಜೊತೆ ಸತ್ಯ ಬಿಚ್ಚಿಟ್ಟ 16 ವರ್ಷದ ಬಾಲಕ

ಶಾಸಕ ಸತೀಶ್ ಸೈಲ್ ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಮುಂದುವರೆಸುವುದಾಗಿ ತಿಳಿಸಿದ್ದು, ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌ಗಾಗಿ ಶೋಧ ಇಂದು ಕೂಡ ನಡೆಯಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರ್ಜುನ್​​ ಹುಡುಕಲು ನೀರಿಗಿಳಿದ ಈಶ್ವರ್​ ಮಲ್ಪೆ.. ಲಾರಿ ಜಾಕ್​ ಪತ್ತೆ! ಅಲ್ಲೇ ಟ್ರಕ್​ ಇರೋದು ಪಕ್ಕನಾ?

https://newsfirstlive.com/wp-content/uploads/2024/08/Arjun-1.jpg

    ಶಿರೂರು ಗುಡ್ಡಕುಸಿತ ಪ್ರಕರಣ ಸಂಭವಿಸಿ ಇಂದಿಗೆ 30 ದಿನ

    ಲಾರಿ ಚಾಲಕ ಅರ್ಜುನ್​, ಜಗನ್ನಾಥ ನಾಯ್ಕ, ಲೋಕೇಶ್​ಗಾಗಿ ಹುಡುಕಾಟ

    ಮುಳುಗು ತಜ್ಞ ಈಶ್ವರ್​ ಮಲ್ಪೆಯವರಿಂದ ನೀರಿನಾಳಕ್ಕೆ ಇಳಿದು ಶೋಧ

ಅಂಕೋಲಾ ಶಿರೂರು ಗುಡ್ಡಕುಸಿತ ಪ್ರಕರಣ ಸಂಭವಿಸಿ ಇಂದಿಗೆ 30 ದಿನ. ಲಾರಿ ಚಾಲಕ ಅರ್ಜುನ್​, ಜಗನ್ನಾಥ ನಾಯ್ಕ, ಲೋಕೇಶ್​ ಮೃತದೇಹ ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ನಿನ್ನೆ ಎರಡನೇಯ ಹಂತದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮುಳುಗು ತಜ್ಞ ಈಶ್ವರ್​ ಮಲ್ಪೆಯವರು ನೀರಿನಾಳಕ್ಕೆ ಇಳಿದು ಶೋಧ ನಡೆಸಿದ್ದಾರೆ. ಈ ವೇಳೆ ಕೆಲವು ಕುರುಹುಗಳು ಪತ್ತೆಯಾಗಿವೆ

ಗಂಗಾವಳಿ ನದಿಯ ಹರಿವು ಕಡಿಮೆಯಾಗಿರುವ ಹಿನ್ನಲೆ ನಿನ್ನೆ ಶೋಧ ಕಾರ್ಯ ಪುನರಾರಂಭಿಸಿದ್ದಾರೆ. ಈಶ್ವರ್ ಮಲ್ಪೆ ತಂಡದಿಂದ ಅರ್ಜುನ್​ ಲಾರಿಗಾಗಿ ಹುಡುಕಾಟ ನಡೆದಿದೆ. ಈ ವೇಳೆ ಲಾರಿಯ ವೀಲ್ ಜಾಕ್ ಈಶ್ವರ್ ಮಲ್ಪೆಗೆ ಸಿಕ್ಕಿದೆ. ಮಾತ್ರವಲ್ಲದೆ, ಲಾರಿಯ ಪಾರ್ಟ್​ ಒಂದು ಸಿಕ್ಕಿದೆ.

ಇದನ್ನೂ ಓದಿ: ಭೋವಿ ಹಗರಣಗಳ ತನಿಖೆ ಚುರುಕು.. ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳ ಬೇಟೆಯಾಡಲು ನಿಂತ ಕಾಂಗ್ರೆಸ್

ಇಂದು ಸಹ ಗಂಗಾವಳಿ ನದಿಯಲ್ಲಿ ಶೋಧ ಮುಂದುವರೆಯಲಿದೆ. ಬೆಳಿಗ್ಗೆ 8:30ರ ನಂತರ ಕಾರ್ಯಾಚರಣೆ ಆರಂಭ ಮಾಡುವ ಸಾಧ್ಯತೆ ಇದೆ. NDRF, SDRF, ನೌಕಾನೆಲೆ ತಂಡದಿಂದಲೂ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಗಾಂಜಾ ಸೇದ್ತಿದ್ದ, ತನ್ನದೇ ಮನೆಯಲ್ಲೇ ಕಳ್ಳತನ ಮಾಡ್ತಿದ್ದ! ದುನಿಯಾ ವಿಜಯ್​ ಜೊತೆ ಸತ್ಯ ಬಿಚ್ಚಿಟ್ಟ 16 ವರ್ಷದ ಬಾಲಕ

ಶಾಸಕ ಸತೀಶ್ ಸೈಲ್ ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಮುಂದುವರೆಸುವುದಾಗಿ ತಿಳಿಸಿದ್ದು, ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌ಗಾಗಿ ಶೋಧ ಇಂದು ಕೂಡ ನಡೆಯಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More