/newsfirstlive-kannada/media/post_attachments/wp-content/uploads/2025/06/IRAN-INDIA.jpg)
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ದಿನದಿಂದ ದಿನಕ್ಕೆ ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತಾರಕಕ್ಕೇರುತ್ತಲೇ ಇದೆ.. ಎರಡು ದೇಶಗಳು ಕ್ಷಿಪಣಿಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಇದೀಗ ಭೀಕರ ಸ್ವರೂಪ ಪಡೆದುಕೊಳ್ತಿದೆ. ಈ ಮಧ್ಯೆ ಇರಾನ್ನಲ್ಲಿ ಸಿಲುಕಿರೋ ಭಾರತೀಯರನ್ನ ಸುರಕ್ಷಿತವಾಗಿ ಕರೆತರೋ ಕಾರ್ಯವೂ ಭರದಿಂದ ಸಾಗಿದೆ.
ಇರಾನ್ನಲ್ಲಿ ಸಿಲುಕಿರೋ ಭಾರತೀಯರ ರಕ್ಷಣೆ ಬಿರುಸು
ಸಂಘರ್ಷಪೀಡಿತ ಇರಾನ್ನಲ್ಲಿ 10 ಸಾವಿರ ಭಾರತೀಯರು ಸಿಲುಕಿದ್ದಾರೆ. ಅದರಲ್ಲಿ 1500, 2000 ವಿದ್ಯಾರ್ಥಿಗಳು ಹಾಗೂ 6 ಸಾವಿರ ಜನರು ಲಾಕ್ ಆಗಿದ್ದಾರೆ. ಇತ್ತ ತಮ್ಮವರನ್ನು ಸುರಕ್ಷಿತವಾಗಿ ಕರೆ ತರುವಂತೆ ಪೋಷಕರು ಸರ್ಕಾರಗಳ ಬಳಿ ಮನವಿ ಮಾಡಿಕೊಳ್ತಿದ್ದಾರೆ. ಈಗಾಗಲೇ ಭಾರತೀಯರನ್ನ ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಸರ್ವ ರೀತಿ ಪ್ರಯತ್ನ ಮಾಡ್ತಿದೆ.
ಇವತ್ತು ಮೊದಲ ತಂಡ ಅರ್ಮೇನಿಯಾದಿಂದ ಭಾರತಕ್ಕೆ ಏರ್ಲಿಫ್ಟ್ ಆಗುವ ಸಾಧ್ಯತೆ ಇದೆ. ನಿನ್ನೆ ಟೆಹ್ರಾನ್ನಿಂದ 110 ಭಾರತೀಯರ ತಂಡ. ಭೂಮಾರ್ಗವಾಗಿ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿತ್ತು. ಇವತ್ತು ಅರ್ಮೇನಿಯಾದಿಂದ ಭಾರತಕ್ಕೆ ಬರಲಿದ್ದಾರೆ. ಇವರೆಲ್ಲೂ ಉರ್ಮಿ ಯುನಿವರ್ಸಿಟಿಯ ವಿದ್ಯಾರ್ಥಿಗಳು ಎನ್ನಲಾಗಿದ್ದು, ಜಮ್ಮು-ಕಾಶ್ಮೀರ ಭಾಗದವರಾಗಿದ್ದಾರೆ. ಇವರಲ್ಲದೇ ಸುಮಾರು 600-700 ಜನರನ್ನು ಮಧ್ಯ ಇರಾನ್ನ ಸುರಕ್ಷಿತ ನಗರವಾದ ಕೋಮ್ಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಶರಣಾಗಲು ಇರಾನ್ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..
ರಷ್ಯಾ-ಉಕ್ರೇನ್ ಸಂದರ್ಭದಲ್ಲಿ ಆಪರೇಷನ್ ಗಂಗಾ ಹೆಸರಲ್ಲಿ ಭಾರತ ಯುದ್ಧಪೀಡಿತ ಸ್ಥಳಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್ಲಿಫ್ಟ್ ಮಾಡಿತ್ತು. ಸುಮಾರು 22 ಸಾವಿರ ಭಾರತೀಯರನ್ನು ಮಿಂಚಿನ ವೇಗದಲ್ಲಿ ಭಾರತ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಏರ್ಲಿಫ್ಟ್ ಮಾಡಿತ್ತು. ಆದ್ರೆ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಮಾತ್ರ ಭಾರತೀಯರ ರಕ್ಷಣೆ ಆಮೆನಡಿಗೆಯಲ್ಲಿ ಸಾಗಿದೆ. ಇದಕ್ಕೆ ಕೆಲವೊಂದು ಕಾರಣಗಳಿವೆ.
ಯಾಕೆ..?
ಇರಾನ್ನಿಂದ ದೊಡ್ಡ ಪ್ರಮಾಣದಲ್ಲಿ ಭಾರತೀಯರನ್ನು ಸ್ಥಳಾಂತರಿಸುವುದು ಸುಲಭದ ಮಾತಲ್ಲ. ಯಾಕಂದ್ರೆ, ರಕ್ಷಣಾ ಕಾರ್ಯಾಚರಣೆಗೆ ಭೌಗೋಳಿಕ ರಾಜಕೀಯ ಅಡ್ಡಿಯಾಗಿದೆ. ಇದರ ಜೊತೆಗೆ ಸ್ಥಳಾಂತರಿಸುವ ಮಾರ್ಗಗಳು ಮತ್ತು ಆಯ್ಕೆಗಳು ಕೂಡ ಸೀಮಿತವಾಗಿವೆ. ರಸ್ತೆ, ರೈಲು ಸಂಪರ್ಕವು ವಿಶ್ವಾಸರ್ಹವಲ್ಲ. ಇರಾನ್ನ ಪೂರ್ವ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮೂಲಕ ಸ್ಥಳಾಂತರ ಮಾಡುವುದು ಸವಾಲಿನ ಮಾತು. ಪಾಕ್ ವಾಯುಪ್ರದೇಶವು ಭಾರತಕ್ಕೆ ಮುಚ್ಚಲ್ಪಟ್ಟಿದೆ. ಇನ್ನು ಭೂ ಮಾರ್ಗವಾಗಿ ಕರೆತರುವುದು ಭದ್ರತಾ ದೃಷ್ಟಿಯಿಂದ ಕಷ್ಟದ ಮಾತು. ಈ ಎಲ್ಲ ಕಾರಣಗಳಿಂದಲೇ ಇರಾನ್ನಿಂದ ಭೂಮಾರ್ಗವಾಗಿ ಅರ್ಮೇನಿಯಾಗೆ ಕರೆತಂದು ಅಲ್ಲಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಬೇಕಾಗಿದೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ.. ಇದುವರೆಗೂ 163 ಮಂದಿ ಗುರುತು ಪತ್ತೆ; ಇಂದು ಕುಟುಂಬಸ್ಥರಿಗೆ ಹಸ್ತಾಂತರ
ಇರಾನ್ ಮಾತ್ರವಲ್ಲ ಇಸ್ರೇಲ್ನಲ್ಲೂ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದಿಂದ ಇಸ್ರೇಲ್ಗೆ ತೆರಳಿದ್ದ ತಂಡವೊಂದು ಇಸ್ರೇಲ್ನಲ್ಲೇ ಲಾಕ್ ಆಗಿದೆ. ಸದ್ಯ ಟೆಲ್ಅವೀವ್ ನಿಂದ ಕೆಪಿಸಿಸಿ ವಕ್ತಾರ ನಟರಾಜ್ಗೌಡ, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. 2-3 ದಿನದಲ್ಲಿ ಬೆಂಗಳೂರು ವಾಪಸ್ ಆಗ್ತೇವೆ.. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂದೇಶ ರವಾನಿಸಿದ್ದಾರೆ.
ಒಟ್ಟಿನಲ್ಲಿ ಇರಾನ್, ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಭಾರತ ಇರಾನ್ನಲ್ಲಿ ನೆಲೆಸಿರೋ ಭಾರತೀಯರನ್ನ ಕರೆತರಲು ಮುಂದಾಗಿದ್ದು, ಸುರಕ್ಷಿತವಾಗಿ ತಮ್ಮವರು ಹಿಂದಿರುಗಲಿ ಅಂತ ಕುಟುಂಬಸ್ಥರು ಪ್ರಾರ್ಥಿಸ್ತಿದ್ದಾರೆ.
ಇದನ್ನೂ ಓದಿ: ಶರಣಾಗಲು ಇರಾನ್ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ