/newsfirstlive-kannada/media/post_attachments/wp-content/uploads/2025/05/Jacob_Bethell.jpg)
ಕೂಲ್ ಕ್ಯಾಪ್ಟನ್​ ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಯುವ ಆಟಗಾರ ಜಾಕೋಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್​ನಿಂದ ಹಾಫ್​​ಸೆಂಚುರಿ ಬಾರಿಸಿದ್ದಾರೆ. ಬ್ಯಾಟಿಂಗ್ ಮಾಡುವಾಗ ಬೆಥೆಲ್ ಅವರ ಬ್ಯಾಟ್ ಮುರಿದು ಹೋದ ಕಾರಣ ಔಟ್ ಆಗಿ ನಿರಾಶೆ ಅನುಭವಿಸಿದರು.
ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎಂ.ಎಸ್ ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ವಿರಾಟ್​ ಕೊಹ್ಲಿ ಹಾಗೂ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್​ ಆರ್​ಸಿಬಿ ಪರವಾಗಿ ಓಪನರ್​ಗಳಾಗಿ ಕ್ರೀಸ್​ಗೆ ಆಗಮಿಸಿದ್ದು ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/05/Jacob_Bethell_batting.jpg)
ತವರಿನ ನೆಲದಲ್ಲಿ ಚೆನ್ನೈ ಬೌಲರ್​ಗಳನ್ನು ಮನಬಂದಂತೆ ಚಚ್ಚಿದ ಯುವ ಆಟಗಾರ ಬೆಥೆಲ್ ಒಳ್ಳೆಯ ರನ್​ಗಳನ್ನು ಕೊಳ್ಳೆ ಹೊಡೆದು ಅರ್ಧಶತಕ ಸಿಡಿಸಿದರು. 2ನೇ ಪಂದ್ಯದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಚೆನ್ನೈ ವಿರುದ್ಧ 28 ಎಸೆತಗಳನ್ನು ಎದುರಿಸಿದ ಬೆಥೆಲ್ 8 ಅದ್ಭುತವಾದ ಬೌಂಡರಿಗಳು ಹಾಗೂ 2 ಅಮೋಘವಾಗ ಸಿಕ್ಸರ್​ನಿಂದ 53 ರನ್​ಗಳನ್ನು ಬಾರಿಸಿದರು.
ಇನ್ನು ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಸಿಡಿಸಿದ್ದು ವಿಶೇಷ ಎನಿಸಿತು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದ ಜಾಕೋಬ್ ಬೆಥೆಲ್ ಅವರು ಈಗ ಟ್ರ್ಯಾಕ್​ಗೆ ಮರಳಿದಂತೆ ಆಗಿದೆ. ಫಿಲ್ ಸಾಲ್ಟ್ ಇಲ್ಲದ ಬರವನ್ನು ಬೆಥೆಲ್ ನೀಗಿಸಿದಂತೆ ಆಗಿದೆ. 55 ರನ್​ ಗಳಿಸಿ ಆಡುವಾಗ ಡೆವಾಲ್ಡ್​ ಬ್ರೆವಿಸ್​ ಅವರಿಗೆ ಕ್ಯಾಚ್​ ಕೊಡುವ ಮೂಲಕ ವಿಕೆಟ್​ ಒಪ್ಪಿಸಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಬೆಥೆಲ್ 91 ರನ್​ಗಳ ಜೊತೆಯಾಟವಾಡಿದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us