ಯಂಗ್ ವಿಕೆಟ್​ ಕೀಪರ್​ಗೆ ಭಾರತ ತಂಡದಲ್ಲಿ ಸ್ಥಾನ.. ಪಂತ್ ಬದಲಿಗೆ ಯುವ ಬ್ಯಾಟರ್​ಗೆ ಒಲಿದ ಅವಕಾಶ

author-image
Bheemappa
Updated On
ಯಂಗ್ ವಿಕೆಟ್​ ಕೀಪರ್​ಗೆ ಭಾರತ ತಂಡದಲ್ಲಿ ಸ್ಥಾನ.. ಪಂತ್ ಬದಲಿಗೆ ಯುವ ಬ್ಯಾಟರ್​ಗೆ ಒಲಿದ ಅವಕಾಶ
Advertisment
  • ಪ್ರಥಮ ದರ್ಜೆಯಲ್ಲಿ ಯುವ ಆಟಗಾರನ ಸಾಧನೆಗಳು ಹೇಗಿವೆ?
  • ರಿಷಭ್ ಪಂತ್ ಬದಲಿ ಸ್ಥಾನವನ್ನ ನಿರಾಕರಣೆ ಮಾಡಿದ ಕಿಶನ್
  • ಯುವ ಬ್ಯಾಟರ್ ಕಮ್ ವಿಕೆಟ್ ಕೀಪರ್ ಯಾವ ರಾಜ್ಯದವರು?

ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ನಡುವೆ ಸರಣಿಯ 4ನೇ ಪಂದ್ಯ ನಡೆಯುತ್ತಿದ್ದು ಈಗಾಗಲೇ ಬ್ಯಾಟಿಂಗ್ ಮಾಡಿದ ಶುಭ್​ಮನ್​ ಗಿಲ್​ ಪಡೆ ಕೇವಲ 358ಕ್ಕೆ ಆಲೌಟ್​ ಆಗಿದೆ. ಈ ಪಂದ್ಯ ಗೆದ್ದು ಸಮಬಲ ಕಾಯ್ದುಕೊಳ್ಳುವ ಅನಿವಾರ್ಯ ಭಾರತಕ್ಕಿದೆ. ಆದರೆ ಗಾಯಗೊಂಡಿರುವ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದು ಈ ಸ್ಥಾನಕ್ಕೆ ಯುವ ಆಟಗಾರನಿಗೆ ಬುಲಾವ್ ನೀಡಲಾಗಿದೆ.

ರಿಷಭ್ ಪಂತ್ ಅವರು ಬ್ಯಾಟಿಂಗ್ ಮಾಡುವಾಗ ಕಾಲಿಗೆ ಚೆಂಡು ತಾಗಿ ಬಲವಾಗಿ ಗಾಯಗೊಂಡಿದ್ದರು. ಚೆಂಡು ಬಡಿದ ರಭಸಕ್ಕೆ ಕಾಲಿನಿಂದ ರಕ್ತ ಬಂದಿತ್ತು. ಇದಕ್ಕೂ ಮೊದಲಿನ ಟೆಸ್ಟ್​ನಲ್ಲಿ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದರು. ಗಾಯದ ಬಳಿಕ ಗಾಯಗೊಂಡಿರುವ ರಿಷಭ್ ಪಂತ್ 5ನೇ ಟೆಸ್ಟ್​ ಪಂದ್ಯದಲ್ಲಿ ಆಡಲ್ಲ. ಇದೀಗ ಪಂತ್ ಸ್ಥಾನಕ್ಕೆ ತಮಿಳುನಾಡಿನ ಯಂಗ್ ಬ್ಯಾಟರ್ ಹಾಗೂ ವಿಕೆಟ್​ ಕೀಪರ್ ಎನ್​ ಜಗದೀಶನ್ ಇಂಗ್ಲೆಂಡ್​ಗೆ ಹಾರುವುದು ಬಹುತೇಕ ಖಚಿತವಾಗಿದೆ.​

ಇದನ್ನೂ ಓದಿ: ರಿಷಭ್ ಪಂತ್ ಸ್ಥಾನವನ್ನೇ ನಿರಾಕರಿಸಿದ ಇಶನ್ ಕಿಶನ್​.. ಇಂಗ್ಲೆಂಡ್​ಗೆ ಹೋಗಲ್ಲವೆಂದ ಯಂಗ್ ವಿಕೆಟ್​ ಕೀಪರ್!

publive-image

ತಮಿಳುನಾಡಿನ ಯುವ ಆಟಗಾರ ಆಗಿರುವ ಎನ್​ ಜಗದೀಶನ್ ಅವರು ಬಲಗೈ ಬ್ಯಾಟರ್ ಆಗಿದ್ದಾರೆ. ಅಲ್ಲದೇ ವಿಕೆಟ್ ಕೀಪರ್​ ಮಾಡುವಲ್ಲಿ ಎತ್ತಿದ ಕೈ. ಹೀಗಾಗಿ ಪಂತ್ ಸ್ಥಾನಕ್ಕೆ ಎನ್​ ಜಗದೀಶನ್​ ಸೂಕ್ತ ಎಂದು ಬಿಸಿಸಿಐ ಆಯ್ಕೆ ಸಮಿತಿ ಎನ್​ ಜಗದೀಶನ್​ರನ್ನ ಸಂಪರ್ಕ ಮಾಡಿದೆ. ಹೀಗಾಗಿ ಮುಂದಿನ 5ನೇ ಟೆಸ್ಟ್​ನಲ್ಲಿ ಎನ್​ ಜಗದೀಶನ್​ ಭಾರತ ತಂಡದಲ್ಲಿ ಡೆಬ್ಯೂ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ.

ಎನ್​ ಜಗದೀಶನ್​ ಈ ವರೆಗೆ 52 ಪ್ರಥಮ ದರ್ಜೆ ಪಂದ್ಯ ಆಡಿದ್ದು ಇದರಲ್ಲಿ 133 ಕ್ಯಾಚ್​ಗಳನ್ನು ಹಿಡಿದಿರುವುದು ಶ್ರೇಷ್ಟವಾಗಿದೆ. 14 ಸ್ಟಂಪ್​ ಔಟ್ ಮಾಡಿದ್ದಾರೆ. ಈ ಎಲ್ಲದಕ್ಕಿಂತ ಮಿಗಿಲಾಗಿ 3,373 ರನ್​ಗಳನ್ನು ಗಳಿಸಿದ್ದಾರೆ. ಬಿಸಿಸಿಐ ಮೊದಲ ಆಯ್ಕೆ ಆಗಿ ಇಶನ್​ ಕಿಶನ್​ಗೆ ಆಫರ್ ನೀಡಲಾಗಿತ್ತು. ಆದರೆ ಕಾರಣ ನೀಡಿ ಇಶನ್​ ಇಂಗ್ಲೆಂಡ್​ಗೆ ಪ್ರಯಾಣ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಎನ್​ ಜಗದೀಶನ್​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಒಲಿದು ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment