/newsfirstlive-kannada/media/post_attachments/wp-content/uploads/2025/05/abdul-rauf-asghar.jpg)
ಆಪರೇಷನ್ ಸಿಂಧೂರ್ನಲ್ಲಿ ಉಗ್ರ ಮಸೂದ್ ಅಜರ್ನ ಸೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್ನ ನೆತ್ತರು ಹರಿದಿದೆ. ಈತ IC-814 ಪ್ರಯಾಣಿಕ ವಿಮಾನದ ಹೈಜಾಕ್ನ (Indian Airlines Flight 814) ಮಾಸ್ಟರ್ ಮೈಂಡ್ ಆಗಿದ್ದ. 1999 ಡಿಸೆಂಬರ್ 24 ರಂದು ವಿಮಾನವನ್ನು ಹೈಜಾಕ್ ಮಾಡಲಾಗಿತ್ತು.
ಆಪರೇಷನ್ ಸಿಂಧೂರ್ನಲ್ಲಿ ಅಸ್ಗರ್ ಪ್ರಾಣಬಿಟ್ಟಿದ್ದಾನೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್ನನ್ನು ಅಬ್ದುಲ್ ರೌಫ್ ಅಜರ್ ಅಂತಲೂ ಕರೆಯಲಾಗುತ್ತದೆ. ರೌಫ್ ಅಜರ್, ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಉಗ್ರ, ಈಗ ಏರ್ ಸ್ಟ್ರೈಕ್ನಲ್ಲಿ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್..!
ಇನ್ನು ಭಾರತದ ಏರ್ಸ್ಟ್ರೈಕ್ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಮಸೂದ್ ಅಜರ್, ನನ್ನ ಕುಟುಂಬದ 10 ಮಂದಿಯ ಜೀವ ಹೋಗಿದೆ ಎಂದು ತಿಳಿಸಿದ್ದ. ಮಸೂದ್ ಅಜರ್ನನ್ನು ಐಸಿ-814 ಪ್ರಯಾಣಿಕರ ಬಿಡುಗಡೆಗಾಗಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಪಾಕ್ಗೆ ಹೋಗಿ ಜೈಷ್-ಇ-ಮೊಹಮ್ಮದ್ ಸಂಘಟನೆ ಕಟ್ಟಿಕೊಂಡಿದ್ದಾನೆ.
ಇತನ ಜೈಷ್-ಇ-ಮೊಹಮ್ಮದ್ ಸಂಘಟನೆಯೇ 2001ರಲ್ಲಿ ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿತ್ತು. ಮಸೂದ್ ಅಜರ್ ಅನುಪಸ್ಥಿತಿಯಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆ ಮುನ್ನೆಡೆಸಿದ್ದ ರೌಫ್ ಅಜರ್ ಮುನ್ನಡೆಸಿದ್ದ. ಈಗ ಮಸೂದ್ ಅಜರ್ನ ಬಲಗೈ ಭಂಟನಂತಿದ್ದ ರೌಫ್ ಅಜರ್ನ ಹೊಡೆದುರುಳಿಸುವಲ್ಲಿ ಅಪರೇಷನ್ ಸಿಂಧೂರು ಯಶಸ್ವಿ ಆಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ