‘ನಾನು ಯಾಕೆ ಪಾಕಿಸ್ತಾನಕ್ಕೆ ಹೋಗ್ತಿದ್ದೀನಿ ಎಂದರೆ..’ ಸಚಿವ ಜೈಶಂಕರ್ ಹೇಳಿದ್ದೇನು..?

author-image
Ganesh
Updated On
‘ನಾನು ಯಾಕೆ ಪಾಕಿಸ್ತಾನಕ್ಕೆ ಹೋಗ್ತಿದ್ದೀನಿ ಎಂದರೆ..’ ಸಚಿವ ಜೈಶಂಕರ್ ಹೇಳಿದ್ದೇನು..?
Advertisment
  • ಭಾರತ-ಪಾಕ್ ಮಧ್ಯೆ ಯಾವುದೇ ಮಾತುಕತೆ ಇಲ್ಲ
  • ಅಕ್ಟೋಬರ್ 15, 16 ರಂದು ಪಾಕ್ ಪ್ರವಾಸ
  • ಸಚಿವರ ಜೊತೆ ನಿಯೋಗ ಕೂಡ ಹೋಗಲಿದೆ

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಕ್ಟೋಬರ್ 15-16 ರಂದು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಇಸ್ಲಾಮಾಬಾದ್‌ನಲ್ಲಿ SCO ಸದಸ್ಯ ರಾಷ್ಟ್ರಗಳ ನಡುವೆ ಹಣಕಾಸು, ಆರ್ಥಿಕ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಮಾನವೀಯ ಸಹಕಾರ ಸಂಬಂಧ ಕುರಿತ ಸಭೆಗಳು ನಡೆಯಲಿವೆ. ಈ ಸಭೆಯಲ್ಲಿ ಜೈಶಂಕರ್ ಭಾಗಿಯಾಗಲಿದ್ದಾರೆ.

9 ವರ್ಷಗಳಲ್ಲಿ ಭಾರತದ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಆಗಸ್ಟ್ 29 ರಂದು ಎಸ್‌ಸಿಒ ಸಭೆಗೆ ಪ್ರಧಾನಿ ಮೋದಿ ಅವರನ್ನು ಪಾಕಿಸ್ತಾನ ಆಹ್ವಾನಿಸಿತ್ತು. ಪಾಕ್ ಭೇಟಿಗೆ ಸಂಬಂಧಿಸಿದಂತೆ ಎಸ್.ಜೈಶಂಕರ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ:9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಹೊರಟ ಭಾರತದ ಸಚಿವರು; ಎಸ್​ ಜೈ ಶಂಕರ್​ ಪಾಕ್​ ಭೇಟಿಯ ಹಿಂದಿನ ರಹಸ್ಯವೇನು?

ನನ್ನ ಭೇಟಿ ಬಹುಪಕ್ಷೀಯ ಕಾರ್ಯಕ್ರಮಕ್ಕಾಗಿ. ನಾನು ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸಲು ಹೋಗುತ್ತಿಲ್ಲ. SCO ರಾಷ್ಟ್ರಗಳ ಉತ್ತಮ ಸದಸ್ಯ ಭಾರತ ಕೂಡ ಒಂದು. ಅದಕ್ಕೆ ತಕ್ಕಂತೆ ಭಾರತ ನಡೆದುಕೊಳ್ಳಲಿದೆ. ನಾನೊಬ್ಬ ಸಭ್ಯ ವ್ಯಕ್ತಿ ಎಂದು ನಿಮಗೆ ತಿಳಿದಿದೆ. ಅದಕ್ಕೆ ತಕ್ಕಂತೆ ನಾನು ವರ್ತಿಸುತ್ತೇನೆ.

ಜೈಶಂಕರ್ ಪಾಕಿಸ್ತಾನ ಭೇಟಿ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್.. ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಸಭೆಯಲ್ಲಿ ವಿದೇಶಾಂಗ ಸಚಿವರು ಭಾರತವನ್ನು ಪ್ರತಿನಿಧಿಸುತ್ತಾರೆ. ಅವರ ಜೊತೆ ನಿಯೋಗವೂ ಬರಲಿದೆ ಎಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಹೊರತಾಗಿ, ಕಜಕಿಸ್ತಾನ್, ಚೀನಾ, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಉನ್ನತ ನಾಯಕರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಜೈಶಂಕರ್​ಗೆ​​ ಕೊಹ್ಲಿ ಸಹಿ ಮಾಡಿದ​​ ಬ್ಯಾಟ್ ಹಾಗೂ ಗಣೇಶನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ಬ್ರಿಟನ್​​​ ಪ್ರಧಾನಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment