/newsfirstlive-kannada/media/post_attachments/wp-content/uploads/2024/08/darshan-9-1.jpg)
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದಾರೆ. ಗುರುವಾರದಂದು ಬೆಳಗ್ಗೆ ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿದ್ದಾರೆ. ​​ಸದ್ಯ 511 ನಂಬರ್​ನ ಕೈದಿಯಾಗಿರುವ A2 ಆರೋಪಿ ಕುರಿತು ಡಿಐಜಿ ಟಿಪಿ ಶೇಷಾ ಮಾತನಾಡಿದ್ದಾರೆ. ಈ ವೇಳೆ ಹಲವು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.​
ಮಾಧ್ಯಮದವರೊಂದಿಗೆ ಮಾತನಾಡಿದ ಡಿಐಜಿ ಟಿಪಿ ಶೇಷಾರವರು, ಬಳ್ಳಾರಿ ಜೈಲಿನಲ್ಲಿ ಜಾಮರ್ ವರ್ಕ್ ಆಗೋದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಹೊಸ ಜಾಮರ್ ಅಳವಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೂರ್ಯ, ಚಂದ್ರ ಹಗಲು ರಾತ್ರಿ ಇದ್ರೆನೇ ಚಂದ; ದರ್ಶನ್ ಕುರಿತ ವಿಚಾರಕ್ಕೆ ಸುದೀಪ್ ಖಡತ್ ಮಾತು
ಬಳಿಕ ಮಾತನಾಡಿದ ಅವರು, ದರ್ಶನ್​ ಅವರನ್ನು ಬೇರೆಡೆ ಸೆಲ್ಗೆ ಸ್ಥಳಾಂತರ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಮನವಿ ಮಾಡಿದ್ರೂ ಮಾಡೋದಿಲ್ಲ ಎಂದಿದ್ದಾರೆ.
ಇನ್ನು ಜಿಮ್​ ಬೇಡಿಕೆಗಳನ್ನು ಕೇಳಿದ್ರೂ ಮಾಡಿಸಲ್ಲ. ದೇಹದ ತೂಕವನ್ನು ಬಳಸಿಕೊಂಡು ವ್ಯಾಯಾಮ ಮಾಡಬಹುದು. ಮೊದಲೆಲ್ಲಾ ಜಿಮ್​ ಇತ್ತಾ. ಗರಡಿ ಮನೆಗಳು ಇದ್ದವು. ಅದಕ್ಕೂ ಮುಂಚೆ ಪುಶ್​ ಅಪ್​​ ಮಾಡಿಕೊಂಡು ಇರುತ್ತಿದ್ದರಲ್ಲ ಎಂದು ಟಿಪಿ ಶೇಷಾ ಹೇಳಿದ್ದಾರೆ.
ದರ್ಶನ್​ ಮಾಡಿರೋ ಮನವಿ ಏನು?
ಸದ್ಯ ದರ್ಶನ್​ ಜೈಲಾಧಿಕಾರಿಗಳ ಬಳಿ ಸರ್ಜಿಕಲ್ ಚೇರ್ಗೆ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡ್ತೀವಿ. ಅದರ ಬಳಿಕ ಏನು ನಿರ್ಣಯ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೀವೆ ಎಂದು ಡಿಐಜಿ ಟಿಪಿ ಶೇಷಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us