/newsfirstlive-kannada/media/post_attachments/wp-content/uploads/2024/11/Jasprit-Bumrah.jpg)
ಟೀಮ್ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ ಸ್ಥಾನ ತುಂಬೋದು ಸುಲಭವಲ್ಲ. ಆದ್ರೀಗ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಈ ಪ್ರಶ್ನೆ ಎದುರಾಗಿದೆ. ಇದೇ ಪ್ರಶ್ನೆಯೇ ಟೀಮ್ ಮ್ಯಾನೇಜ್ಮೆಂಟ್ಗೂ ಹೊಸ ತಲೆನೋವು ಸೃಷ್ಟಿಸಿದೆ. ಆ ಕೊರತೆ ನೀಗಿಸಬಲ್ಲವನು ಕನ್ನಡಿಗ ಕೃಷ್ಣ ಮಾತ್ರ.
ಇಂಡೋ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ಭರ್ಜರಿ ಸಿದ್ದತೆ ನಡೆಸಿರುವ ಉಭಯ ತಂಡಗಳು, ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿ ನಿಂತಿವೆ. ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಅಘಾತದ ಜೊತೆಗೆ ಹೊಸ ತಲೆನೋವು ಎದುರಾಗಿದೆ. ಇದಕ್ಕೆ ಕಾರಣ ಮ್ಯಾಚ್ ವಿನ್ನರ್ ಜಸ್ಪ್ರೀತ್ ಬೂಮ್ರಾ.
ಇದನ್ನೂ ಓದಿ: ಗೋಲ್ಡ್ ಸುರೇಶ್ಗೆ ಬಿಗ್ ಶಾಕ್ ನೀಡಲು ಮುಂದಾದ ಯುವಕ.. ವಂಚನೆ ಕೇಸ್ಗೆ ಟ್ವಿಸ್ಟ್..!
ಟೀಮ್ ಇಂಡಿಯಾ ಇನ್ ಟ್ರಬಲ್..!
ಜಸ್ಪ್ರೀತ್ ಬುಮ್ರಾ.. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೇ ಟೀಮ್ ಇಂಡಿಯಾದ ಬ್ರಹಾಸ್ತ್ರ. ಟೀಮ್ ಇಂಡಿಯಾ ಗೆಲುವಿನ ಹಿಂದಿನ ಶಕ್ತಿ ಆಗಿರುವ ಬೂಮ್ರಾ. ಐದರ ಪೈಕಿ ಎರಡು ಟೆಸ್ಟ್ಗಳಿಗೆ ಅಲಭ್ಯರಾಗಿದ್ದಾರೆ. ಇದೇ ಈಗ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದೆ. ಪ್ರಮುಖವಾಗಿ ಬೂಮ್ರಾ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗಿಂತ ಆತನ ಕೊರತೆ ನೀಗಿಸುವುದ್ಯಾರು ಎಂಬ ಪ್ರಶ್ನೆಯೇ ಹೆಚ್ಚಾಗಿ ಕಾಡ್ತಿದೆ. ಇದಕ್ಕೆ ಕಾರಣ ಬೂಮ್ರಾಗೆ ಮ್ಯಾಚ್ ವಿನ್ನಿಂಗ್ ಸ್ಪೆಲ್ಗಳು.
ಯಾವುದೇ ಕಂಡೀಷನ್ಸ್ ಆಗಲಿ, ಎದುರಾಳಿ ಯಾರೇ ಆಗಿರಲಿ ಡೆಡ್ಲಿ ಸ್ಪೆಲ್ಸ್ ಹಾಕುವ ಬೂಮ್ರಾ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಇಂಗ್ಲೆಂಡ್ನಂಥ ಸೇನಾ ರಾಷ್ಟ್ರಗಳಲ್ಲಿ ಮೋಸ್ಟ್ ಡೇಂಜರಸ್. ಇದೇ ಮ್ಯಾಚ್ ವಿನ್ನರ್ ಇಲ್ಲದ ಕೊರತೆ ನೀಗಿಸುವುದ್ಯಾರು ಅನ್ನೋದೇ ದೊಡ್ಡ ತಲೆನೋವಾಗಿ ಕಾಡ್ತಿದೆ. ಈ ಕೊರತೆ ನೀಗಿಸಬಲ್ಲವರು ಒನ್ ಅಂಡ್ ಒನ್ಲಿ ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್ ಕಂಡೀಷನ್ಸ್ಗೆ ಕನ್ನಡಿಗ ಪ್ರಸಿದ್ಧ್ ‘ಪರ್ಫೆಕ್ಟ್’
ಜಸ್ಪ್ರೀತ್ ಬೂಮ್ರಾ ಅಲಭ್ಯತೆಯಲ್ಲಿ ಅರ್ಷದೀಪ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಚಾನ್ಸ್ ಇದ್ದೇ ಇದೆ. ಜಸ್ಪ್ರೀತ್ ಬೂಮ್ರಾ ಇಲ್ಲದ ಕೊರತೆ ಯಾರು ನೀಗಿಸ್ತಾರೆ ಎಂಬ ಪ್ರಶ್ನೆಗೆ ಉತ್ತರ ಕನ್ನಡಿಗ ಪ್ರಸಿದ್ಧ ಕೃಷ್ಣನೇ ಆಗಿದ್ದಾರೆ. ಇದು ಸುಖಾಸುಮ್ಮನೆ ಹೇಳ್ತಿರುವ ಮಾತಲ್ಲ. ಇದಕ್ಕೆ ನಾನಾ ಕಾರಣಗಳೂ ಇವೆ.
ಇದನ್ನೂ ಓದಿ: ಗ್ರ್ಯಾಂಡ್ ಆಗಿ ಪತ್ನಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ವಿನೋದ್ ಪ್ರಭಾಕರ್; ಫೋಟೋಸ್ ಇಲ್ಲಿವೆ!
ಇಂಗ್ಲೆಂಡ್ನಲ್ಲಿ ಪ್ರಸಿದ್ಧ್ ಕೃಷ್ಣ ಎಕ್ಸ್ ಫ್ಯಾಕ್ಟರ್ ಆಗ್ತಾರೆ. ಇಂಗ್ಲೆಂಡ್ನಂತ ಪೇಸ್ ಅಂಡ್ ಬೌನ್ಸಿ ಪಿಚ್ನಲ್ಲಿ 6.2 ಅಡಿಯ ಪ್ರಸಿದ್ಧ್ ಕೃಷ್ಣ ಮೋಸ್ಟ್ ಎಫೆಕ್ಟೀವ್ ಆಗಬಲ್ಲರು. ಸ್ವಿಂಗ್, ಬೌನ್ಸ್, ಪೇಸ್, ಲೈನ್ ಆ್ಯಂಡ್ ಲೆನ್ತ್ ಮೂಲಕ ಎದುರಾಳಿಯನ್ನ ಟ್ರಬಲ್ ಮಾಡಬಲ್ಲ ಪ್ರಸಿದ್ಧ್, 140ರ ವೇಗದಲ್ಲಿ ದಾಳಿ ಸಂಘಟಿಸ್ತಾರೆ. ಎರಡೂ ಕಡೆಯೂ ಸ್ವಿಂಗ್ ಮಾಡಬಲ್ಲ ಪ್ರಸಿದ್ಧ್, ವೇರಿಯೇಷನ್ಸ್ ಜೊತೆಗೆ ಯಾರ್ಕರ್ಸ್ ಎಸೆಯೋ ಕಲೆಗಾರ. ಹೀಗಾಗಿ ಇಂಗ್ಲೆಂಡ್ ಕಂಡೀಷನ್ಸ್ಗೆ ಪ್ರಸಿದ್ ಹೇಳಿ ಮಾಡಿಸಿರುವ ಪ್ಲೇಯರ್ ಅನ್ನೋದ್ರಲ್ಲಿ ಡೌಟೇ ಇಲ್ಲ.
ಆ ಒಂದು ಸ್ಪೆಲ್ ಹೇಳುತ್ತೆ ಪ್ರಸಿದ್ಧ್ ಕೃಷ್ಣರ ಸಾಮರ್ಥ್ಯದ ಕಥೆ..!
ಕೇವಲ 3 ಟೆಸ್ಟ್ ಪಂದ್ಯಗಳನ್ನಾಡಿರುವ ಪ್ರಸಿದ್ಧ್, ಇಂಗ್ಲೆಂಡ್ನಲ್ಲಿ ಏನ್ ಮಾಡಬಲ್ಲರು ಅನ್ನೋ ಪ್ರಶ್ನೆ ಕಾಡ್ತಿರಬಹುದು. ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್ನಲ್ಲಿ ಪ್ರಸಿದ್ಧ್ ಕೃಷ್ಣ ಹಾಕಿದ ಆ ಒಂದು ಸ್ಪೆಲ್, ಕನ್ನಡಿಗ ಸಾಮರ್ಥ್ಯದ ಕಥೆ ಹೇಳುತ್ತೆ. ಸಿಡ್ನಿ ಟೆಸ್ಟ್ನ ಮೊದಲ ಇನ್ನಿಂಗ್ಸ್ ಸ್ಟೀವ್ ಸ್ಮಿತ್, ವೆಬ್ಸ್ಟರ್ ಬಿಗ್ ಇನ್ನಿಂಗ್ಸ್ ಕಟ್ಟಿದ್ರು. ಟೀಮ್ ಇಂಡಿಯಾಗೆ ಕಾಡ್ತಿದ್ರು. ಈ ವೇಳೆ ಸ್ಟೀವ್ ಸ್ಮಿತ್, ವೆಬ್ ಸ್ಟರ್, ಅಲೆಕ್ಸ್ ಕೇರಿ ವಿಕೆಟ್ ಬೇಟೆಯಾಡಿ ಟೀಮ್ ಇಂಡಿಯಾಗೆ ಮೇಲುಗೈ ತಂದುಕೊಟ್ಟಿದ್ದು, ಇದೇ ಪ್ರಸಿದ್ಧ ಕೃಷ್ಣ.
ಇದನ್ನೂ ಓದಿ: ಗ್ರ್ಯಾಂಡ್ ಆಗಿ ಪತ್ನಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ವಿನೋದ್ ಪ್ರಭಾಕರ್; ಫೋಟೋಸ್ ಇಲ್ಲಿವೆ!
2ನೇ ಇನ್ನಿಂಗ್ಸ್ನಲ್ಲಿ ಇಂಜುರಿ ಕಾರಣಕ್ಕೆ ಬೂಮ್ರಾ ಮೈದಾನದಿಂದ ದೂರ ಉಳಿಯಬೇಕಾಯ್ತು. ಈ ವೇಳೆ ಸಿರಾಜ್ಗಿಂತ ಆಸ್ಟ್ರೇಲಿಯನ್ನರನ್ನು ಕಾಡಿದ್ದು ಪ್ರಸಿದ್ಧ್ ಕೃಷ್ಣ. ಆರಂಭದಲ್ಲೇ ಅಪಾಯಕಾರಿ ಸ್ಯಾಮ್ ಕಾನ್ಸ್ಟಾಸ್ಗೆ ಪೆವಿಲಿಯನ್ ದಾರಿ ತೋರಿದ್ದ ಕನ್ನಡಿಗ, ಬ್ಯಾಕ್ ಟು ಬ್ಯಾಕ್ ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್ಗೆ ಪೆವಿಲಿಯನ್ಗೆ ಕಳುಹಿಸಿದ್ರು. ಅವತ್ತು ಪ್ರಸಿದ್ಧ್ಗೆ ಇತರರಿಂದ ಉತ್ತಮ ಸಾಥ್ ಸಿಕ್ಕಿದ್ರೆ ಸಿಡ್ನಿ ಟೆಸ್ಟ್ ಗೆದ್ದು ಸರಣಿ ಡ್ರಾ ಮಾಡಿಕೊಳ್ಳುವ ಸುವರ್ಣವಕಾಶ ಟೀಮ್ ಇಂಡಿಯಾ ಸಿಕ್ತಿತ್ತು.
ಟೆಸ್ಟ್ ಕರಿಯರ್ ರೂಪಿಸಿಕೊಳ್ಳಲು ಗೋಲ್ಡನ್ ಚಾನ್ಸ್
2023ರ ಡಿಸೆಂಬರ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ದ ಪ್ರಸಿದ್ದ್, ಇದುವರೆಗೆ ಆಡಿರೋದು ಜಸ್ಟ್ ಮೂರೇ ಮೂರು ಟೆಸ್ಟ್ ಪಂದ್ಯಗಳನ್ನ ಮಾತ್ರ. ಆಸ್ಟ್ರೇಲಿಯಾ ಟೆಸ್ಟ್ನೊಂದಿಗೆ ಕಮ್ಬ್ಯಾಕ್ ಮಾಡಿದ್ದ ಪ್ರಸಿದ್ಧ್ ಕೃಷ್ಣ, ಈ ಹಿಂದೆಗಿಂತಲೂ ಪ್ರಬುದ್ಧರಾಗಿ ಕಾಣ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸೀಸನ್-18ರ ಐಪಿಎಲ್ ಟೂರ್ನಿ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಇದು ಫಾರ್ಮೆಟ್ ಬೇರೆ ಇರಬಹುದು. ವೈಟ್ಬಾಲ್ಗಿಂತ ರೆಡ್ ಬಾಲ್ನಲ್ಲೇ ಪ್ರಸಿದ್ಧ್ ಕೃಷ್ಣ ಅಪಾಯಕಾರಿ. ಈ ಅವಕಾಶ ಸದ್ಭಳಕೆ ಮಾಡಿಕೊಂಡ್ರೆ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಫಿಕ್ಸ್. ಆಂಗ್ಲರ ನಾಡಿನಲ್ಲಿ ಪ್ರಸಿದ್ಧ ಪರಾಕ್ರಮ ತೋರಲಿ. ಜಬರ್ದಸ್ತ್ ಪ್ರದರ್ಶನದಿಂದ ತಂಡಕ್ಕೆ ಗೆಲುವು ತಂದುಕೊಡಲಿ. ಆ ಮೂಲಕ ಕನ್ನಡಿಗರಿಗೆ ಹೆಮ್ಮೆ ತರಲಿ ಅನ್ನೋದೇ ನಮ್ಮ ಆಶಯ.
ಇದನ್ನೂ ಓದಿ: 38 ವರ್ಷಗಳ ಬಳಿಕ ನನಸಾಗುತ್ತಿದೆ ಅಣ್ಣಾವ್ರ ಕನಸು.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ನಿರೀಕ್ಷೆ..
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ