ಗೆಲುವಿನ ಹಳಿಯಲ್ಲಿರೋವಾಗ ಈ ನಿರ್ಧಾರ ಬೇಕಿತ್ತಾ..?
ಈ ಆಟಗಾರ ಆಡದಿದ್ರೆ ಭಾರತಕ್ಕೆ ಬಿಗ್ ಲಾಸ್
ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ 4ನೇ ಟೆಸ್ಟ್ ಪಂದ್ಯ
ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಪಂದ್ಯ ಗೆದ್ದಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಕಣ್ಣು ಇದೀಗ ಸರಣಿ ಮೇಲೆ ನೆಟ್ಟಿದೆ. ಆದ್ರೆ ಎಲ್ಲವೂ ಸರಿ ಇದೆ, ನೆಕ್ಸ್ಟ್ ಮ್ಯಾಚ್ ಗೆಲ್ತಾರೆ ಅಂದುಕೊಳ್ಳುವಾಗ್ಲೇ ಸ್ಟಾರ್ ವೇಗಿ ತಂಡದಿಂದ ಬೀಳುವ ಸುದ್ದಿ ಕೇಳಿ ಬರ್ತಿದೆ. ಒಂದು ವೇಳೆ ಈ ಮ್ಯಾಚ್ ವಿನ್ನರ್ ಅಲಭ್ಯರಾಗಿದ್ದೆ ಆದ್ರೆ ಭಾರತದ ಬೌಲಿಂಗ್ ಲೈನ್ಅಪ್ ಹಳಿ ತಪ್ಪೋದು ಗ್ಯಾರಂಟಿ. ಅಷ್ಟಕ್ಕೂ ಆ ಸ್ಟಾರ್ ಬೌಲರ್?
ರಾಂಚಿ ಟೆಸ್ಟ್ನಿಂದ ಜಸ್ಪ್ರಿತ್ ಬೂಮ್ರಾ ಔಟ್..?
ಸೋಲಿನೊಂದಿಗೆ ಸರಣಿಯಲ್ಲಿ ಅಭಿಯಾನ ಆರಂಭಿಸಿದ್ದ ಟೀಮ್ ಇಂಡಿಯಾ 3 ಪಂದ್ಯಗಳ ಮುಕ್ತಾಯಕ್ಕೆ 2-1ರ ಮುನ್ನಡೆ ಸಾಧಿಸಿದೆ. ಹೈದ್ರಾಬಾದ್ನಲ್ಲಿ ಮುಗ್ಗರಿಸಿ, ವೈಜಾಗ್ ಹಾಗೂ ರಾಜ್ಕೋಟ್ನಲ್ಲಿ ವಿಜಯ ಪತಾಕೆ ಹಾರಿಸಿದೆ. ರಾಂಚಿ ಪಂದ್ಯ ಗೆದ್ದರೆ ಸಾಕು ಸರಣಿ ಭಾರತದ ಪಾಲಾಗಲಿದೆ. ಕೋಟ್ಯಾನುಕೋಟಿ ಫ್ಯಾನ್ಸ್ ಪ್ರಾರ್ಥನೆ ಕೂಡ ಅದಕ್ಕಾಗಿ ಕಾಯ್ತಿದ್ದಾರೆ. ಇಂತ ಹೊತ್ತಲ್ಲೆ ತಂಡದ ಬೆಂಕಿ ಬೌಲರ್ ಜಸ್ಪ್ರಿತ್ ಬೂಮ್ರಾ ರಾಂಚಿ ಟೆಸ್ಟ್ ಆಡಲ್ಲ ಎಂಬ ಶಾಕಿಂಗ್ ಸುದ್ದಿ ಕೇಳಿ ಬಂದಿದೆ.
ಭಾರತ ತಂಡ ಬ್ಯಾಕ್ ಟು ಬ್ಯಾಕ್ ಪಂದ್ಯ ಗೆದ್ದ ಬೆನ್ನಲ್ಲೆ ಬಿಸಿಸಿಐ ಸ್ಟಾರ್ ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲು ಮುಂದಾಗಿದೆ. ಸದ್ಯ ಬಗ್ಗೆ ಬಿಗ್ ಡಿಬೇಟ್ ನಡೀತಿದೆ. ಕೆಲವರು ಮ್ಯಾಚ್ ವಿನ್ನರ್ಗೆ ರೆಸ್ಟ್ ನೀಡ್ಬಾರ್ದು ಅಂತ ಹೇಳಿದ್ರೆ ಮತ್ತೆ ಕೆಲವರು ಸೀನಿಯರ್ ಬೌಲರ್ಗೆ ವಿಶ್ರಾಂತಿ ನೀಡ್ಬೇಕು ಅಂತ ವಾದಿಸ್ತಿದ್ದಾರೆ. ಆದರೆ ಸರಣಿ ಗೆಲುವಿನ ದೃಷ್ಟಿಯಿಂದ ಬೂಮ್ರಾ ರಾಂಚಿ ಟೆಸ್ಟ್ನಲ್ಲಿ ಕಣಕ್ಕಿಳಿಯಲೇಬೇಕು.
ಸ್ಟಾರ್ ಬೌಲರ್ಗೆ ರೆಸ್ಟ್ ನೀಡೋದು ಬೇಡವೇ ಬೇಡ
ಜಸ್ಪ್ರೀತ್ ಬೂಮ್ರ ಮ್ಯಾಚ್ ವಿನ್ನರ್ ಬೌಲರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಮಿಂಚಿನ ದಾಳಿ ನಡೆಸಿ ಎದುರಾಳಿಯನ್ನ ಮಣ್ಣು ಮುಕ್ಕಿಸ್ತಿದ್ದಾರೆ. ಇವರ ಬೆಂಕಿ ಬಿರುಗಾಳಿ ದಾಳಿಯನ್ನ ಎದುರಿಸಲಾಗದೇ ಸ್ಟೋಕ್ಸ್ ಪಡೆ ಹೇಳ ಹೆಸರಿಲ್ಲದೇ ಬಿಲ ಸೇರ್ತಿದೆ. ಇದಕ್ಕೆ ಪ್ರಸಕ್ತ ಇಂಗ್ಲೆಂಡ್ ಸರಣಿಯಲ್ಲಿ ಅವರು ನೀಡಿದ ಅದ್ಭುತ ಪ್ರದರ್ಶನವೇ ಸಾಕ್ಷಿ
ಪ್ರಸಕ್ತ ಸರಣಿಯಲ್ಲಿ ಬೂಮ್ರಾ
ಸದ್ಯ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಜಸ್ಪ್ರಿತ್ ಬೂಮ್ರಾ ಆರು ಇನ್ನಿಂಗ್ಸ್ ಆಡಿದ್ದು 2.87ರ ಎಕಾನಮಿಯಲ್ಲಿ 17 ವಿಕೆಟ್ ಕಬಳಿಸಿದ್ದಾರೆ. 45 ರನ್ಗೆ 6 ವಿಕೆಟ್ ಪಡೆದಿರೋದು ಬೆಸ್ಟ್ ಬೌಲಿಂಗ್ ಸಾಧನೆ ಆಗಿದೆ. ಇಂತಹ ಮ್ಯಾಚ್ ವಿನ್ನಿಂಗ್ ಬೌಲರ್ಗೆ ಬಿಸಿಸಿಐ ರೆಸ್ಟ್ ಕೊಡಲು ಹೋಗ್ತಿರೋದು ಸರಿನಾ ನೀವೆ ಹೇಳಿ? ಹೈದ್ರಾಬಾದ್ ಟೆಸ್ಟ್ನಲ್ಲಿ ಭಾರತ ತಂಡ ಸೋತು ಸುಣ್ಣವಾಗಿತ್ತು. ವೈಜಾಗ್ನಲ್ಲಿ ಗೆಲುವಿನ ಗಿಫ್ಟ್ ಕೊಟ್ಟಿದ್ದೇ ಈ ಬೂಮ್ ಬೂಮ್ ಬೂಮ್ರ. ಎರಡು ಇನ್ನಿಂಗ್ಸ್ ಸೇರಿ 6 ವಿಕೆಟ್ ಕಬಳಿಸಿ ಆಂಗ್ಲರ ಹೆಡೆಮುರಿ ಕಟ್ಟಿದ್ರು. ರಾಜ್ಕೋಟ್ನಲ್ಲೂ ಅದೇ ಖದರ್ ಮರುಕಳಿಸ್ತು.
ಬೂಮ್ರಾ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ
ಬೂಮ್ರಾ ರಾಂಚಿ ಟೆಸ್ಟ್ನಿಂದ ಹೊರಬಿದ್ರೆ ಅವರ ಸ್ಥಾನಕ್ಕೆ ಬೇರೆ ಆಟಗಾರ ಬರಬಹುದು. ಆದ್ರೆ ಅವರಂತೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಬೌಲರ್ಗಳಿಲ್ಲ. ವಿಕೆಟ್ ಟೇಕರ್ ಮೊಹಮ್ಮದ್ ಶಮಿ ಸರಣಿ ಆಡುತ್ತಿಲ್ಲ. ಮುಖೇಶ್ ಕುಮಾರ್ ಇದ್ರೂ ಪರಿಣಾಮಕಾರಿ ಸ್ಪೆಲ್ ನಡೆಸ್ತಿಲ್ಲ. ಉಮೇಶ್ ಯಾದವ್ ತಂಡದಿಂದ ಹೊರಬಿದ್ದು ಅದೆಷ್ಟೋ ದಿನಗಳಾಗಿದೆ. ಹೀಗಾಗಿ ಬೂಮ್ರಾ ಮುಂದಿನ ಟೆಸ್ಟ್ನಲ್ಲಿ ಆಡ್ಲೇಬೇಕು. ಇಲ್ಲವಾದ್ರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಭಾರತದ ಫಾಸ್ಟ್ ಬೌಲಿಂಗ್ ಡೆಪ್ತ್ ಮಾಯ
ಕಳೆದೆರಡು ವರ್ಷಗಳಿಂದ ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಡೆಪ್ತ್ ಇಲ್ಲವಾಗಿದೆ. ಒಂದು ಟೈಮ್ನಲ್ಲಿ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಹೀಗೆ ಸಾಲು ಸಾಲು ಬೌಲರ್ಸ್ ಟೆಸ್ಟ್ ತಂಡದಲ್ಲಿದ್ರು. ಆದ್ರೀಗ, ಬೆರಳಣಿಕೆಯಷ್ಟೆ ಫಾಸ್ಟ್ ಬೌಲರ್ಗಳಿದ್ದಾರೆ. ಇಂತಾ ಹೊತ್ತಲ್ಲಿ ಬಿಸಿಸಿಐ ಬೂಮ್ರಾಗೆ ರೆಸ್ಟ್ ನೀಡುವ ನಿರ್ಧಾರ ಸರೀನಾ ಅನ್ನೋದು ಸದ್ಯ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಗೆಲುವಿನ ಹಳಿಯಲ್ಲಿರೋವಾಗ ಈ ನಿರ್ಧಾರ ಬೇಕಿತ್ತಾ..?
ಈ ಆಟಗಾರ ಆಡದಿದ್ರೆ ಭಾರತಕ್ಕೆ ಬಿಗ್ ಲಾಸ್
ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ 4ನೇ ಟೆಸ್ಟ್ ಪಂದ್ಯ
ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಪಂದ್ಯ ಗೆದ್ದಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಕಣ್ಣು ಇದೀಗ ಸರಣಿ ಮೇಲೆ ನೆಟ್ಟಿದೆ. ಆದ್ರೆ ಎಲ್ಲವೂ ಸರಿ ಇದೆ, ನೆಕ್ಸ್ಟ್ ಮ್ಯಾಚ್ ಗೆಲ್ತಾರೆ ಅಂದುಕೊಳ್ಳುವಾಗ್ಲೇ ಸ್ಟಾರ್ ವೇಗಿ ತಂಡದಿಂದ ಬೀಳುವ ಸುದ್ದಿ ಕೇಳಿ ಬರ್ತಿದೆ. ಒಂದು ವೇಳೆ ಈ ಮ್ಯಾಚ್ ವಿನ್ನರ್ ಅಲಭ್ಯರಾಗಿದ್ದೆ ಆದ್ರೆ ಭಾರತದ ಬೌಲಿಂಗ್ ಲೈನ್ಅಪ್ ಹಳಿ ತಪ್ಪೋದು ಗ್ಯಾರಂಟಿ. ಅಷ್ಟಕ್ಕೂ ಆ ಸ್ಟಾರ್ ಬೌಲರ್?
ರಾಂಚಿ ಟೆಸ್ಟ್ನಿಂದ ಜಸ್ಪ್ರಿತ್ ಬೂಮ್ರಾ ಔಟ್..?
ಸೋಲಿನೊಂದಿಗೆ ಸರಣಿಯಲ್ಲಿ ಅಭಿಯಾನ ಆರಂಭಿಸಿದ್ದ ಟೀಮ್ ಇಂಡಿಯಾ 3 ಪಂದ್ಯಗಳ ಮುಕ್ತಾಯಕ್ಕೆ 2-1ರ ಮುನ್ನಡೆ ಸಾಧಿಸಿದೆ. ಹೈದ್ರಾಬಾದ್ನಲ್ಲಿ ಮುಗ್ಗರಿಸಿ, ವೈಜಾಗ್ ಹಾಗೂ ರಾಜ್ಕೋಟ್ನಲ್ಲಿ ವಿಜಯ ಪತಾಕೆ ಹಾರಿಸಿದೆ. ರಾಂಚಿ ಪಂದ್ಯ ಗೆದ್ದರೆ ಸಾಕು ಸರಣಿ ಭಾರತದ ಪಾಲಾಗಲಿದೆ. ಕೋಟ್ಯಾನುಕೋಟಿ ಫ್ಯಾನ್ಸ್ ಪ್ರಾರ್ಥನೆ ಕೂಡ ಅದಕ್ಕಾಗಿ ಕಾಯ್ತಿದ್ದಾರೆ. ಇಂತ ಹೊತ್ತಲ್ಲೆ ತಂಡದ ಬೆಂಕಿ ಬೌಲರ್ ಜಸ್ಪ್ರಿತ್ ಬೂಮ್ರಾ ರಾಂಚಿ ಟೆಸ್ಟ್ ಆಡಲ್ಲ ಎಂಬ ಶಾಕಿಂಗ್ ಸುದ್ದಿ ಕೇಳಿ ಬಂದಿದೆ.
ಭಾರತ ತಂಡ ಬ್ಯಾಕ್ ಟು ಬ್ಯಾಕ್ ಪಂದ್ಯ ಗೆದ್ದ ಬೆನ್ನಲ್ಲೆ ಬಿಸಿಸಿಐ ಸ್ಟಾರ್ ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲು ಮುಂದಾಗಿದೆ. ಸದ್ಯ ಬಗ್ಗೆ ಬಿಗ್ ಡಿಬೇಟ್ ನಡೀತಿದೆ. ಕೆಲವರು ಮ್ಯಾಚ್ ವಿನ್ನರ್ಗೆ ರೆಸ್ಟ್ ನೀಡ್ಬಾರ್ದು ಅಂತ ಹೇಳಿದ್ರೆ ಮತ್ತೆ ಕೆಲವರು ಸೀನಿಯರ್ ಬೌಲರ್ಗೆ ವಿಶ್ರಾಂತಿ ನೀಡ್ಬೇಕು ಅಂತ ವಾದಿಸ್ತಿದ್ದಾರೆ. ಆದರೆ ಸರಣಿ ಗೆಲುವಿನ ದೃಷ್ಟಿಯಿಂದ ಬೂಮ್ರಾ ರಾಂಚಿ ಟೆಸ್ಟ್ನಲ್ಲಿ ಕಣಕ್ಕಿಳಿಯಲೇಬೇಕು.
ಸ್ಟಾರ್ ಬೌಲರ್ಗೆ ರೆಸ್ಟ್ ನೀಡೋದು ಬೇಡವೇ ಬೇಡ
ಜಸ್ಪ್ರೀತ್ ಬೂಮ್ರ ಮ್ಯಾಚ್ ವಿನ್ನರ್ ಬೌಲರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಮಿಂಚಿನ ದಾಳಿ ನಡೆಸಿ ಎದುರಾಳಿಯನ್ನ ಮಣ್ಣು ಮುಕ್ಕಿಸ್ತಿದ್ದಾರೆ. ಇವರ ಬೆಂಕಿ ಬಿರುಗಾಳಿ ದಾಳಿಯನ್ನ ಎದುರಿಸಲಾಗದೇ ಸ್ಟೋಕ್ಸ್ ಪಡೆ ಹೇಳ ಹೆಸರಿಲ್ಲದೇ ಬಿಲ ಸೇರ್ತಿದೆ. ಇದಕ್ಕೆ ಪ್ರಸಕ್ತ ಇಂಗ್ಲೆಂಡ್ ಸರಣಿಯಲ್ಲಿ ಅವರು ನೀಡಿದ ಅದ್ಭುತ ಪ್ರದರ್ಶನವೇ ಸಾಕ್ಷಿ
ಪ್ರಸಕ್ತ ಸರಣಿಯಲ್ಲಿ ಬೂಮ್ರಾ
ಸದ್ಯ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಜಸ್ಪ್ರಿತ್ ಬೂಮ್ರಾ ಆರು ಇನ್ನಿಂಗ್ಸ್ ಆಡಿದ್ದು 2.87ರ ಎಕಾನಮಿಯಲ್ಲಿ 17 ವಿಕೆಟ್ ಕಬಳಿಸಿದ್ದಾರೆ. 45 ರನ್ಗೆ 6 ವಿಕೆಟ್ ಪಡೆದಿರೋದು ಬೆಸ್ಟ್ ಬೌಲಿಂಗ್ ಸಾಧನೆ ಆಗಿದೆ. ಇಂತಹ ಮ್ಯಾಚ್ ವಿನ್ನಿಂಗ್ ಬೌಲರ್ಗೆ ಬಿಸಿಸಿಐ ರೆಸ್ಟ್ ಕೊಡಲು ಹೋಗ್ತಿರೋದು ಸರಿನಾ ನೀವೆ ಹೇಳಿ? ಹೈದ್ರಾಬಾದ್ ಟೆಸ್ಟ್ನಲ್ಲಿ ಭಾರತ ತಂಡ ಸೋತು ಸುಣ್ಣವಾಗಿತ್ತು. ವೈಜಾಗ್ನಲ್ಲಿ ಗೆಲುವಿನ ಗಿಫ್ಟ್ ಕೊಟ್ಟಿದ್ದೇ ಈ ಬೂಮ್ ಬೂಮ್ ಬೂಮ್ರ. ಎರಡು ಇನ್ನಿಂಗ್ಸ್ ಸೇರಿ 6 ವಿಕೆಟ್ ಕಬಳಿಸಿ ಆಂಗ್ಲರ ಹೆಡೆಮುರಿ ಕಟ್ಟಿದ್ರು. ರಾಜ್ಕೋಟ್ನಲ್ಲೂ ಅದೇ ಖದರ್ ಮರುಕಳಿಸ್ತು.
ಬೂಮ್ರಾ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ
ಬೂಮ್ರಾ ರಾಂಚಿ ಟೆಸ್ಟ್ನಿಂದ ಹೊರಬಿದ್ರೆ ಅವರ ಸ್ಥಾನಕ್ಕೆ ಬೇರೆ ಆಟಗಾರ ಬರಬಹುದು. ಆದ್ರೆ ಅವರಂತೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಬೌಲರ್ಗಳಿಲ್ಲ. ವಿಕೆಟ್ ಟೇಕರ್ ಮೊಹಮ್ಮದ್ ಶಮಿ ಸರಣಿ ಆಡುತ್ತಿಲ್ಲ. ಮುಖೇಶ್ ಕುಮಾರ್ ಇದ್ರೂ ಪರಿಣಾಮಕಾರಿ ಸ್ಪೆಲ್ ನಡೆಸ್ತಿಲ್ಲ. ಉಮೇಶ್ ಯಾದವ್ ತಂಡದಿಂದ ಹೊರಬಿದ್ದು ಅದೆಷ್ಟೋ ದಿನಗಳಾಗಿದೆ. ಹೀಗಾಗಿ ಬೂಮ್ರಾ ಮುಂದಿನ ಟೆಸ್ಟ್ನಲ್ಲಿ ಆಡ್ಲೇಬೇಕು. ಇಲ್ಲವಾದ್ರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಭಾರತದ ಫಾಸ್ಟ್ ಬೌಲಿಂಗ್ ಡೆಪ್ತ್ ಮಾಯ
ಕಳೆದೆರಡು ವರ್ಷಗಳಿಂದ ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಡೆಪ್ತ್ ಇಲ್ಲವಾಗಿದೆ. ಒಂದು ಟೈಮ್ನಲ್ಲಿ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಹೀಗೆ ಸಾಲು ಸಾಲು ಬೌಲರ್ಸ್ ಟೆಸ್ಟ್ ತಂಡದಲ್ಲಿದ್ರು. ಆದ್ರೀಗ, ಬೆರಳಣಿಕೆಯಷ್ಟೆ ಫಾಸ್ಟ್ ಬೌಲರ್ಗಳಿದ್ದಾರೆ. ಇಂತಾ ಹೊತ್ತಲ್ಲಿ ಬಿಸಿಸಿಐ ಬೂಮ್ರಾಗೆ ರೆಸ್ಟ್ ನೀಡುವ ನಿರ್ಧಾರ ಸರೀನಾ ಅನ್ನೋದು ಸದ್ಯ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್