ಬೌಲರ್ಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದು ಕುತೂಹಲ
ಹೋರಾಟ ಧೈರ್ಯಶಾಲಿಯಾಗಿಸುತ್ತೆ, ನಾಯಕತ್ವಕ್ಕೆ ಧೈರ್ಯ ಬೇಕು
ಪಾಕ್ನ ಮಾಜಿ ಪ್ರಧಾನಿ ಹೆಸರು ಪ್ರಸ್ತಾಪಿಸಿದ ಜಸ್ಪ್ರಿತ್ ಬೂಮ್ರಾ
ಸೂರ್ಯಕುಮಾರ್ ಟಿ20 ಕ್ಯಾಪ್ಟನ್. ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ಫಾರ್ಮೆಟ್ನ ನಾಯಕ. ಸದ್ಯಕ್ಕಂತೂ ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಸೀಟ್ ಖಾಲಿ ಇಲ್ಲ. ಈಗಿದ್ರೂ ಸ್ಟಾರ್ ಬೌಲರ್ವೊಬ್ಬರು ನನಗೆ ಕ್ಯಾಪ್ಟನ್ಸಿ ಕೊಡಿ ಎಂದು ಬಿಸಿಸಿಐಗೆ ಡಿಮ್ಯಾಂಡ್ ಮಾಡಿದ್ದಾರೆ.
ಇದನ್ನೂ ಓದಿ: ಗಂಗಾವಳಿ ನದಿ ರಭಸಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಕ್.. 3 ಮೃತದೇಹಗಳ ಬಗ್ಗೆ ಏನ್ ಹೇಳಿದ್ದಾರೆ?
ಜಸ್ಪ್ರೀತ್ ಬೂಮ್ರಾ ಟೀಮ್ ಇಂಡಿಯಾದ ಯಶಸ್ವಿ ಬೌಲರ್. ಹಂಗಾಮಿ ನಾಯಕನಾಗಿ ತಂಡವನ್ನ ಮುನ್ನಡೆಸಿದ ಹಮ್ಮೀರ. ಆದ್ರೆ ಬಿಸಿಸಿಐ ಯಾವತ್ತೂ ಸ್ಟಾರ್ ವೇಗಿಯನ್ನ ಕ್ಯಾಪ್ಟನ್ ಆಯ್ಕೆಯಲ್ಲಿ ಸಿರೀಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ರೋಹಿತ್ ಉತ್ತರಾಧಿಕಾಯಾಗಿ ಪಾಂಡ್ಯ ಹಾಗೂ ಸೂರ್ಯಕುಮಾರ್ ಹೆಸರು ಕೇಳಿ ಬಂದ್ವು. ಆಗಲೂ ಬೂಮ್ರಾ ಹೆಸರು ನಾಪತ್ತೆ. ಇದೀಗ ಈ ಸ್ಟಾರ್ ವೇಗಿ ಕ್ಯಾಪ್ಟನ್ಸಿ ಕನಸನ್ನ ಬಿಚ್ಚಿಟ್ಟಿದ್ದು, ಬಿಗ್ಬಾಸ್ಗಳಿಗೆ ಗೂಗ್ಲಿ ಎಸೆದಿದ್ದಾರೆ.
ಇದನ್ನೂ ಓದಿ: ಗೆಲುವು ಟೀಮ್ ಇಂಡಿಯಾದಿಂದ ಕೈಜಾರಿತ್ತು.. ಕೊನೆಯಲ್ಲಿ 22 ರನ್ಗೆ 7 ವಿಕೆಟ್ ಕಿತ್ತು ರೋಚಕ ಫಿನಿಶಿಂಗ್..!
ಕ್ಯಾಪ್ಟನ್ಸಿ ನೀಡಲು ಬಿಸಿಸಿಐಗೆ ಓಪನ್ ಡಿಮ್ಯಾಂಡ್..?
ಮೊದಲ ಬಾರಿ ನಾಯಕತ್ವದ ಬಗ್ಗೆ ಆಸೆ ವ್ಯಕ್ತಪಡಿಸಿರೋ ಬೂಮ್ರಾ ಬಿಸಿಸಿಐಗೆ ಕ್ಯಾಪ್ಟನ್ಸಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ನಾನು ತಂಡದ ಹಿರಿಯ ಆಟಗಾರ. ಉನ್ನತ ಗ್ರೇಡ್ ಕೂಡ ಹೊಂದಿದ್ದೇನೆ. ಹೀಗಾಗಿ ನನಗೆ ಕ್ಯಾಪ್ಟನ್ಸಿ ಕೊಡಿ ಎಂದು ಬಿಗ್ಬಾಸ್ಗಳಿಗೆ ಮನದಾಳ ವ್ಯಕ್ತಪಡಿಸಿದ್ದಾರೆ.
ನೀವು ನನ್ನನ್ನ ನಾಯಕನನ್ನಾಗಿ ಮಾಡಿ ಎಂದು ತಂಡಕ್ಕೆ ಹೋಗಿ ಹೇಳಲು ಸಾಧ್ಯವಿಲ್ಲ. ಇದು ನನ್ನ ವೇತನ ಶ್ರೇಣಿಗಿಂತ ಮೇಲಿದ್ದು. ಬೌಲರ್ಸ್ ನಿಜಕ್ಕೂ ಬುದ್ಧಿವಂತರು ಎಂದು ಭಾವಿಸುತ್ತೇನೆ, ಯಾಕೆಂದರೆ ನಾವು ಬ್ಯಾಟ್ಸ್ಮನ್ಗಳನ್ನ ಔಟ್ ಮಾಡಬೇಕು. ಬ್ಯಾಟ್ಸ್ಮನ್ಗಳು ಉತ್ತಮವಾಗಿ ಆಡುವುದರಿಂದ, ಸಣ್ಣ ಮೈದಾನದಲ್ಲಿ ಸದಾ ಹೋರಾಡುತ್ತೇವೆ. ಚೆಂಡನ್ನ ಸ್ವಿಂಗ್ ಮಾಡಲು ಬರುವ ಯಾವುದೇ ಆರ್ಟಿಕಲ್ ಅಥವಾ ತಂತ್ರಜ್ಞಾನ ನನಗೆ ನೆನಪಿಗೆ ಬರಲ್ಲ. ಜನರು ಬಾಲ್ ಎಸೆಯುವುದನ್ನ ಖುಷಿ ಪಡುತ್ತಾರೆ ಹಾಗೂ ಸಿಕ್ಸರ್ಗಳನ್ನ ಹೊಡೆಯುವುದನ್ನ ಕೂಡ ಆನಂದಿಸುತ್ತಾರೆ.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ಬೌಲರ್ಗಳು ಹಾರ್ಡ್ವರ್ಕ್ ಮಾಡ್ತಾರೆ, ಚಾಲೆಂಜ್ಗೆ ಹೆದರಲ್ಲ
ಇನ್ನು ಆನ್ಫೀಲ್ಡ್ನಲ್ಲಿ ಬೌಲರ್ಗಳ ಪಾತ್ರ ಬಗ್ಗೆ ಬೂಮ್ರಾ ಇಂಟ್ರಸ್ಟಿಂಗ್ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಯಾವ ಸವಾಲುಗಳಿಗೂ ಅಂಜದೇ ಹೊಸ ದಾರಿ ಕಂಡುಕೊಂಡು ಮುನ್ನುಗ್ಗುತ್ತಾರೆ ಎಂದು ಹೇಳಿದ್ದಾರೆ.
ಬೌಲರ್ಗಳು ಕಠಿಣ ಕೆಲಸ ನಿರ್ವಹಿಸುತ್ತಾರೆ. ಅವರು ಬ್ಯಾಟ್ನ ಹಿಂದೆ ಅಡಗಲ್ಲ. ಫ್ಲ್ಯಾಟ್ ವಿಕೆಟ್ ಹಿಂದೆ ಕೂಡ ಅಡಗಲ್ಲ. ಆಟದಲ್ಲಿ ಸೋತಾಗ ಬೌಲರ್ಗಳನ್ನ ದೂಷಣೆ ಮಾಡಲಾಗುತ್ತೆ. ನಿಜಕ್ಕೂ ಬೌಲಿಂಗ್ ಮಾಡೋದು ಕಠಿಣ ಕೆಲಸ, ತುಂಬಾ ಹೆಮ್ಮೆ ಪಡುತ್ತೇನೆ. ಈ ಸವಾಲುಗಳಿಗಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಬೌಲರ್ಗಳು ಯಶಸ್ಸು ಕಾಣಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹೋರಾಟ ನಿಮ್ಮನ್ನ ಧೈರ್ಯಶಾಲಿಯನ್ನಾಗಿಸುತ್ತೆ, ನಾಯಕತ್ವಕ್ಕೆ ಧೈರ್ಯದ ಅಗತ್ಯವಿದೆ.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ಬೌಲರ್ಸ್ ಕ್ಯಾಪ್ಟನ್ ಆಗೋದ್ರಲ್ಲಿ ತಪ್ಪೇನಿದೆ..?
ಟೀಮ್ ಇಂಡಿಯಾದಲ್ಲಿ ಬೌಲರ್ಗಳು ಕ್ಯಾಪ್ಟನ್ ಆಗೋದು ವಿರಳವಾಗಿದೆ. ಬ್ಯಾಟ್ಸ್ಮನ್ಗಳೇ ಹೆಚ್ಚಾಗಿ ತಂಡ ಮುನ್ನಡೆಸುತ್ತಾರೆ. ಇದಕ್ಕೆ ಮ್ಯಾಚ್ ವಿನ್ನರ್ ಬೂಮ್ರಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ
ಪ್ಯಾಟ್ ಕಮಿನ್ಸ್ ಉತ್ತಮವಾಗಿ ನಾಯಕತ್ವ ನಿಭಾಯಿಸೋದನ್ನ ನೋಡಿದ್ದೇವೆ. ನಾಯಕರಾಗಿ ವಾಸಿಂ ಅಕ್ರಂ ಕೂಡ ತಂಡ ಮುನ್ನಡೆಸಿದ್ದಾರೆ. ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ನಾಯಕರಾಗಿ ವಿಶ್ವಕಪ್ ಗೆಲ್ಲಿಸಿ ಕೊಟ್ಟಿದ್ದಾರೆ. ಬೌಲರ್ಸ್ ನಿಜಕ್ಕೂ ಬುದ್ಧಿವಂತರು. ಕೆಲವೊಮ್ಮೆ ದೈಹಿಕವಾಗಿ ಆಯಾಸಗೊಳ್ಳುತ್ತಾರೆ. ಹೀಗಾಗಿ ಬ್ಯಾಟ್ಸ್ಮನ್ಗಳು ಕ್ಯಾಪ್ಟನ್ ಆಗುತ್ತಾರೆ.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ನಾಯಕತ್ವ ಹೊರೆಯಲ್ಲ, ಜವಾಬ್ದಾರಿ ಹೊರಬೇಕು
ಇನ್ನು ನಾಯಕನಾದ ಮಾತ್ರಕ್ಕೆ ಒತ್ತಡ ಹೆಚ್ಚಾಗುತ್ತೆ ಅನ್ನೋ ಮಾತಿದೆ. ಅದಕ್ಕೆ ಬೂಮ್ರಾ ಕೂಡ ಧ್ವನಿಗೂಡಿಸಿದ್ದು, ನಾಯಕರಾಗಿ ಎಲ್ಲ ತೆರೆನಾದ ಜವಾಬ್ದಾರಿ ಹೊರಲು ಸಿದ್ಧನಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸುನೀಲ್ ಬೋಸ್.. ಸಂಸದನ ನಡೆ ಬಗ್ಗೆ ಭಾರೀ ಚರ್ಚೆ..!
Jasprit bumrah said 🗣️- “I consider myself lucky that I got a captain like Rohit Sharma and I was able to play under his leadership for a long time.”
leader Rohit Sharma make jasprit bumrah the world class bowler🐐🔥
The kingmaker @ImRo45 🐐🔥
— 𝐑𝐮𝐬𝐡𝐢𝐢𝐢⁴⁵ (@rushiii_12) July 25, 2024
ಗ್ರಹಿಕೆಯಿಂದ ಫಲಿತಾಂಶ ಬದಲಾಗುತ್ತೆ. ಈ ಬೌಲಿಂಗ್ ಕೆಲಸ ಮಾಡಲ್ಲ ಎಂಬ ಗ್ರಹಿಕೆಯಿಂದ ನಾನು ಬಂದಿದ್ದೇನೆ. ಆದರೆ ಈಗ ಜನರು ಅದನ್ನು ಕಾಪಿ ಮಾಡಲು ಪ್ರಯತ್ನಿಸುತ್ತಾರೆ. ನೀವು ವಿಷಯಗಳನ್ನು ಹೇಳಲು ಪ್ರಯತ್ನಿಸಬೇಡಿ; ನಿಮ್ಮ ಫಲಿತಾಂಶ ಮಾತನಾಡಲಿ. ಪ್ಯಾಟ್ ಕಮಿನ್ಸ್ ಇದಕ್ಕೆ ಒಂದು ದೊಡ್ಡ ಉದಾಹರಣೆ. ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಗೆದ್ದಿದ್ದಾರೆ. ನಾಯಕತ್ವ ನಿಜಕ್ಕೂ ಹೊರೆಯಲ್ಲ, ಕ್ರಿಕೆಟ್ ಆಡುವಾಗ ನೀವು ಜವಾಬ್ದಾರಿ ಹೊರಬೇಕು.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ಜಸ್ಪ್ರೀತ್ ಬೂಮ್ರಾರ ಕ್ಯಾಪ್ಟನ್ಸಿ ಮಾತುಗಳು ಬಿಸಿಸಿಐಗೆ ಬಿಸಿತುಪ್ಪ ಆಗಿರೋದಂತೂ ನಿಜ. ಆದ್ರೆ ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಸೀಟ್ ಖಾಲಿ ಇಲ್ಲ. ಭವಿಷ್ಯದಲ್ಲಾದ್ರು ಬೂಮ್ರಾಗೆ ಕ್ಯಾಪ್ಟನ್ಸಿ ಪಟ್ಟ ಒಲಿಯುತ್ತಾ?. ಸ್ಟಾರ್ ವೇಗಿಯ ಓಪನ್ ಡಿಮ್ಯಾಂಡ್ ವರ್ಕ್ ಆಗುತ್ತಾ ಅನ್ನೋದನ್ನ ಕಾದು ನೋಡೋಣ…
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಬೌಲರ್ಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದು ಕುತೂಹಲ
ಹೋರಾಟ ಧೈರ್ಯಶಾಲಿಯಾಗಿಸುತ್ತೆ, ನಾಯಕತ್ವಕ್ಕೆ ಧೈರ್ಯ ಬೇಕು
ಪಾಕ್ನ ಮಾಜಿ ಪ್ರಧಾನಿ ಹೆಸರು ಪ್ರಸ್ತಾಪಿಸಿದ ಜಸ್ಪ್ರಿತ್ ಬೂಮ್ರಾ
ಸೂರ್ಯಕುಮಾರ್ ಟಿ20 ಕ್ಯಾಪ್ಟನ್. ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ಫಾರ್ಮೆಟ್ನ ನಾಯಕ. ಸದ್ಯಕ್ಕಂತೂ ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಸೀಟ್ ಖಾಲಿ ಇಲ್ಲ. ಈಗಿದ್ರೂ ಸ್ಟಾರ್ ಬೌಲರ್ವೊಬ್ಬರು ನನಗೆ ಕ್ಯಾಪ್ಟನ್ಸಿ ಕೊಡಿ ಎಂದು ಬಿಸಿಸಿಐಗೆ ಡಿಮ್ಯಾಂಡ್ ಮಾಡಿದ್ದಾರೆ.
ಇದನ್ನೂ ಓದಿ: ಗಂಗಾವಳಿ ನದಿ ರಭಸಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಕ್.. 3 ಮೃತದೇಹಗಳ ಬಗ್ಗೆ ಏನ್ ಹೇಳಿದ್ದಾರೆ?
ಜಸ್ಪ್ರೀತ್ ಬೂಮ್ರಾ ಟೀಮ್ ಇಂಡಿಯಾದ ಯಶಸ್ವಿ ಬೌಲರ್. ಹಂಗಾಮಿ ನಾಯಕನಾಗಿ ತಂಡವನ್ನ ಮುನ್ನಡೆಸಿದ ಹಮ್ಮೀರ. ಆದ್ರೆ ಬಿಸಿಸಿಐ ಯಾವತ್ತೂ ಸ್ಟಾರ್ ವೇಗಿಯನ್ನ ಕ್ಯಾಪ್ಟನ್ ಆಯ್ಕೆಯಲ್ಲಿ ಸಿರೀಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ರೋಹಿತ್ ಉತ್ತರಾಧಿಕಾಯಾಗಿ ಪಾಂಡ್ಯ ಹಾಗೂ ಸೂರ್ಯಕುಮಾರ್ ಹೆಸರು ಕೇಳಿ ಬಂದ್ವು. ಆಗಲೂ ಬೂಮ್ರಾ ಹೆಸರು ನಾಪತ್ತೆ. ಇದೀಗ ಈ ಸ್ಟಾರ್ ವೇಗಿ ಕ್ಯಾಪ್ಟನ್ಸಿ ಕನಸನ್ನ ಬಿಚ್ಚಿಟ್ಟಿದ್ದು, ಬಿಗ್ಬಾಸ್ಗಳಿಗೆ ಗೂಗ್ಲಿ ಎಸೆದಿದ್ದಾರೆ.
ಇದನ್ನೂ ಓದಿ: ಗೆಲುವು ಟೀಮ್ ಇಂಡಿಯಾದಿಂದ ಕೈಜಾರಿತ್ತು.. ಕೊನೆಯಲ್ಲಿ 22 ರನ್ಗೆ 7 ವಿಕೆಟ್ ಕಿತ್ತು ರೋಚಕ ಫಿನಿಶಿಂಗ್..!
ಕ್ಯಾಪ್ಟನ್ಸಿ ನೀಡಲು ಬಿಸಿಸಿಐಗೆ ಓಪನ್ ಡಿಮ್ಯಾಂಡ್..?
ಮೊದಲ ಬಾರಿ ನಾಯಕತ್ವದ ಬಗ್ಗೆ ಆಸೆ ವ್ಯಕ್ತಪಡಿಸಿರೋ ಬೂಮ್ರಾ ಬಿಸಿಸಿಐಗೆ ಕ್ಯಾಪ್ಟನ್ಸಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ನಾನು ತಂಡದ ಹಿರಿಯ ಆಟಗಾರ. ಉನ್ನತ ಗ್ರೇಡ್ ಕೂಡ ಹೊಂದಿದ್ದೇನೆ. ಹೀಗಾಗಿ ನನಗೆ ಕ್ಯಾಪ್ಟನ್ಸಿ ಕೊಡಿ ಎಂದು ಬಿಗ್ಬಾಸ್ಗಳಿಗೆ ಮನದಾಳ ವ್ಯಕ್ತಪಡಿಸಿದ್ದಾರೆ.
ನೀವು ನನ್ನನ್ನ ನಾಯಕನನ್ನಾಗಿ ಮಾಡಿ ಎಂದು ತಂಡಕ್ಕೆ ಹೋಗಿ ಹೇಳಲು ಸಾಧ್ಯವಿಲ್ಲ. ಇದು ನನ್ನ ವೇತನ ಶ್ರೇಣಿಗಿಂತ ಮೇಲಿದ್ದು. ಬೌಲರ್ಸ್ ನಿಜಕ್ಕೂ ಬುದ್ಧಿವಂತರು ಎಂದು ಭಾವಿಸುತ್ತೇನೆ, ಯಾಕೆಂದರೆ ನಾವು ಬ್ಯಾಟ್ಸ್ಮನ್ಗಳನ್ನ ಔಟ್ ಮಾಡಬೇಕು. ಬ್ಯಾಟ್ಸ್ಮನ್ಗಳು ಉತ್ತಮವಾಗಿ ಆಡುವುದರಿಂದ, ಸಣ್ಣ ಮೈದಾನದಲ್ಲಿ ಸದಾ ಹೋರಾಡುತ್ತೇವೆ. ಚೆಂಡನ್ನ ಸ್ವಿಂಗ್ ಮಾಡಲು ಬರುವ ಯಾವುದೇ ಆರ್ಟಿಕಲ್ ಅಥವಾ ತಂತ್ರಜ್ಞಾನ ನನಗೆ ನೆನಪಿಗೆ ಬರಲ್ಲ. ಜನರು ಬಾಲ್ ಎಸೆಯುವುದನ್ನ ಖುಷಿ ಪಡುತ್ತಾರೆ ಹಾಗೂ ಸಿಕ್ಸರ್ಗಳನ್ನ ಹೊಡೆಯುವುದನ್ನ ಕೂಡ ಆನಂದಿಸುತ್ತಾರೆ.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ಬೌಲರ್ಗಳು ಹಾರ್ಡ್ವರ್ಕ್ ಮಾಡ್ತಾರೆ, ಚಾಲೆಂಜ್ಗೆ ಹೆದರಲ್ಲ
ಇನ್ನು ಆನ್ಫೀಲ್ಡ್ನಲ್ಲಿ ಬೌಲರ್ಗಳ ಪಾತ್ರ ಬಗ್ಗೆ ಬೂಮ್ರಾ ಇಂಟ್ರಸ್ಟಿಂಗ್ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಯಾವ ಸವಾಲುಗಳಿಗೂ ಅಂಜದೇ ಹೊಸ ದಾರಿ ಕಂಡುಕೊಂಡು ಮುನ್ನುಗ್ಗುತ್ತಾರೆ ಎಂದು ಹೇಳಿದ್ದಾರೆ.
ಬೌಲರ್ಗಳು ಕಠಿಣ ಕೆಲಸ ನಿರ್ವಹಿಸುತ್ತಾರೆ. ಅವರು ಬ್ಯಾಟ್ನ ಹಿಂದೆ ಅಡಗಲ್ಲ. ಫ್ಲ್ಯಾಟ್ ವಿಕೆಟ್ ಹಿಂದೆ ಕೂಡ ಅಡಗಲ್ಲ. ಆಟದಲ್ಲಿ ಸೋತಾಗ ಬೌಲರ್ಗಳನ್ನ ದೂಷಣೆ ಮಾಡಲಾಗುತ್ತೆ. ನಿಜಕ್ಕೂ ಬೌಲಿಂಗ್ ಮಾಡೋದು ಕಠಿಣ ಕೆಲಸ, ತುಂಬಾ ಹೆಮ್ಮೆ ಪಡುತ್ತೇನೆ. ಈ ಸವಾಲುಗಳಿಗಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಬೌಲರ್ಗಳು ಯಶಸ್ಸು ಕಾಣಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹೋರಾಟ ನಿಮ್ಮನ್ನ ಧೈರ್ಯಶಾಲಿಯನ್ನಾಗಿಸುತ್ತೆ, ನಾಯಕತ್ವಕ್ಕೆ ಧೈರ್ಯದ ಅಗತ್ಯವಿದೆ.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ಬೌಲರ್ಸ್ ಕ್ಯಾಪ್ಟನ್ ಆಗೋದ್ರಲ್ಲಿ ತಪ್ಪೇನಿದೆ..?
ಟೀಮ್ ಇಂಡಿಯಾದಲ್ಲಿ ಬೌಲರ್ಗಳು ಕ್ಯಾಪ್ಟನ್ ಆಗೋದು ವಿರಳವಾಗಿದೆ. ಬ್ಯಾಟ್ಸ್ಮನ್ಗಳೇ ಹೆಚ್ಚಾಗಿ ತಂಡ ಮುನ್ನಡೆಸುತ್ತಾರೆ. ಇದಕ್ಕೆ ಮ್ಯಾಚ್ ವಿನ್ನರ್ ಬೂಮ್ರಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ
ಪ್ಯಾಟ್ ಕಮಿನ್ಸ್ ಉತ್ತಮವಾಗಿ ನಾಯಕತ್ವ ನಿಭಾಯಿಸೋದನ್ನ ನೋಡಿದ್ದೇವೆ. ನಾಯಕರಾಗಿ ವಾಸಿಂ ಅಕ್ರಂ ಕೂಡ ತಂಡ ಮುನ್ನಡೆಸಿದ್ದಾರೆ. ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ನಾಯಕರಾಗಿ ವಿಶ್ವಕಪ್ ಗೆಲ್ಲಿಸಿ ಕೊಟ್ಟಿದ್ದಾರೆ. ಬೌಲರ್ಸ್ ನಿಜಕ್ಕೂ ಬುದ್ಧಿವಂತರು. ಕೆಲವೊಮ್ಮೆ ದೈಹಿಕವಾಗಿ ಆಯಾಸಗೊಳ್ಳುತ್ತಾರೆ. ಹೀಗಾಗಿ ಬ್ಯಾಟ್ಸ್ಮನ್ಗಳು ಕ್ಯಾಪ್ಟನ್ ಆಗುತ್ತಾರೆ.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ನಾಯಕತ್ವ ಹೊರೆಯಲ್ಲ, ಜವಾಬ್ದಾರಿ ಹೊರಬೇಕು
ಇನ್ನು ನಾಯಕನಾದ ಮಾತ್ರಕ್ಕೆ ಒತ್ತಡ ಹೆಚ್ಚಾಗುತ್ತೆ ಅನ್ನೋ ಮಾತಿದೆ. ಅದಕ್ಕೆ ಬೂಮ್ರಾ ಕೂಡ ಧ್ವನಿಗೂಡಿಸಿದ್ದು, ನಾಯಕರಾಗಿ ಎಲ್ಲ ತೆರೆನಾದ ಜವಾಬ್ದಾರಿ ಹೊರಲು ಸಿದ್ಧನಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸುನೀಲ್ ಬೋಸ್.. ಸಂಸದನ ನಡೆ ಬಗ್ಗೆ ಭಾರೀ ಚರ್ಚೆ..!
Jasprit bumrah said 🗣️- “I consider myself lucky that I got a captain like Rohit Sharma and I was able to play under his leadership for a long time.”
leader Rohit Sharma make jasprit bumrah the world class bowler🐐🔥
The kingmaker @ImRo45 🐐🔥
— 𝐑𝐮𝐬𝐡𝐢𝐢𝐢⁴⁵ (@rushiii_12) July 25, 2024
ಗ್ರಹಿಕೆಯಿಂದ ಫಲಿತಾಂಶ ಬದಲಾಗುತ್ತೆ. ಈ ಬೌಲಿಂಗ್ ಕೆಲಸ ಮಾಡಲ್ಲ ಎಂಬ ಗ್ರಹಿಕೆಯಿಂದ ನಾನು ಬಂದಿದ್ದೇನೆ. ಆದರೆ ಈಗ ಜನರು ಅದನ್ನು ಕಾಪಿ ಮಾಡಲು ಪ್ರಯತ್ನಿಸುತ್ತಾರೆ. ನೀವು ವಿಷಯಗಳನ್ನು ಹೇಳಲು ಪ್ರಯತ್ನಿಸಬೇಡಿ; ನಿಮ್ಮ ಫಲಿತಾಂಶ ಮಾತನಾಡಲಿ. ಪ್ಯಾಟ್ ಕಮಿನ್ಸ್ ಇದಕ್ಕೆ ಒಂದು ದೊಡ್ಡ ಉದಾಹರಣೆ. ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಗೆದ್ದಿದ್ದಾರೆ. ನಾಯಕತ್ವ ನಿಜಕ್ಕೂ ಹೊರೆಯಲ್ಲ, ಕ್ರಿಕೆಟ್ ಆಡುವಾಗ ನೀವು ಜವಾಬ್ದಾರಿ ಹೊರಬೇಕು.
ಜಸ್ಪ್ರಿತ್ ಬೂಮ್ರಾ, ಕ್ರಿಕೆಟಿಗ
ಜಸ್ಪ್ರೀತ್ ಬೂಮ್ರಾರ ಕ್ಯಾಪ್ಟನ್ಸಿ ಮಾತುಗಳು ಬಿಸಿಸಿಐಗೆ ಬಿಸಿತುಪ್ಪ ಆಗಿರೋದಂತೂ ನಿಜ. ಆದ್ರೆ ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಸೀಟ್ ಖಾಲಿ ಇಲ್ಲ. ಭವಿಷ್ಯದಲ್ಲಾದ್ರು ಬೂಮ್ರಾಗೆ ಕ್ಯಾಪ್ಟನ್ಸಿ ಪಟ್ಟ ಒಲಿಯುತ್ತಾ?. ಸ್ಟಾರ್ ವೇಗಿಯ ಓಪನ್ ಡಿಮ್ಯಾಂಡ್ ವರ್ಕ್ ಆಗುತ್ತಾ ಅನ್ನೋದನ್ನ ಕಾದು ನೋಡೋಣ…
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ