/newsfirstlive-kannada/media/post_attachments/wp-content/uploads/2025/03/Bangalore-Jayadeva-Hospital.jpg)
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಕಂಡು ಬಂದಿರುವ ಹಾರ್ಟ್​ ಅಟ್ಯಾಕ್ ಕೇಸ್ಗಳ ಬಗ್ಗೆ ಕೇಳಿದ್ರೆ ಜನರಿಗೆ ಆತಂಕ ಆಗೋದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೃದ್ರೋಗ ಸಮಸ್ಯೆಗಳಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 1 ವರ್ಷದಲ್ಲೇ 18,953 ಹೃದ್ರೋಗಿಗಳಿಗೆ ಜಯದೇವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರತಿ ನಿತ್ಯ ಸುಮಾರು 50ಕ್ಕೂ ಹೆಚ್ಚು ರೋಗಿಗಳು ಜಯದೇವ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2023/06/HEART_ATTACK.jpg)
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಇತ್ತೀಚೆಗೆ ನಡೆದ ಆಘಾತಕಾರಿ ಘಟನೆಗಳೇ ಸಾಕ್ಷಿಯಾಗಿದೆ.
/newsfirstlive-kannada/media/post_attachments/wp-content/uploads/2025/03/Heart-attack-case-1.jpg)
ಘಟನೆ-1: ಕಳೆದ ಮಾರ್ಚ್ 24ರಂದು ದಾವಣಗೆರೆಯಲ್ಲಿ ಕಾರು ಚಲಾಯಿಸುತ್ತಿದ್ದಾಗಲೇ ವ್ಯಕ್ತಿಯೊಬ್ಬ ಹಾರ್ಟ್​ ಅಟ್ಯಾಕ್ಗೆ ಬಲಿಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/03/Heart-attack-case-2.jpg)
ಘಟನೆ - 2: ಮಾರ್ಚ್ 19ರಂದು ಭಟ್ಕಳದ ವ್ಯಕ್ತಿ ದುಬೈಗೆ ಹೋಗುತ್ತಿದ್ದಾಗ ವಿಮಾನದಲ್ಲೇ ಆಗಿದ್ದ ಹೃದಯಾಘಾತವಾಗಿದೆ.
/newsfirstlive-kannada/media/post_attachments/wp-content/uploads/2025/03/Heart-attack-case.jpg)
ಘಟನೆ - 3: ಕಳೆದ ಫೆ.12ರಂದು ಚಾಮರಾಜನಗರದಲ್ಲಿ ಗ್ರಾಹಕರಿಗೆ ಸ್ವೀಟ್ ಪಾರ್ಸೆಲ್ ಮಾಡುವಾಗ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬ ಬಿಗ್ಬಾಸ್ ಸ್ಪರ್ಧಿಯ ಯಡವಟ್ಟು.. ಇಂದು ರಕ್ಷಕ್ ಬುಲೆಟ್ ವಿರುದ್ಧ ದೂರು ದಾಖಲು; ಆಗಿದ್ದೇನು?
ಹೃದಯಾಘಾತಕ್ಕೆ 7 ಕಾರಣಗಳು
1. ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆ & ಕೊಲೆಸ್ಟ್ರಾಲ್
2. ಅತಿಯಾದ ಧೂಮಪಾನ, ಮದ್ಯಪಾನ ಮಾಡುವುದು
3. ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳಿಂದ ದೂರ ಇರುವುದು
4. ನಿಗದಿತ ಸಮಯವಿಲ್ಲದೆ, ಸಿಕ್ಕ ಸಿಕ್ಕ ಜಂಕ್​ ಫುಡ್​ಗಳೂ ಸೇವನೆ
5. ವರ್ಕೌಟ್​ಗೆ ಅಂತ ಜಿಮ್​ಗೆ ಹೋದ್ರೂ ಅಲ್ಲಿ ಅಶಿಸ್ತಿನ ವ್ಯಾಯಾಮ
6. ಕುಟುಂಬ ಸದಸ್ಯರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಇದ್ದರೆ
7. ಹೆಚ್ಚುತ್ತಿರುವ ವಾಯು ಮಾಲಿನ್ಯವೂ ಹೃದಯಾಘಾತಕ್ಕೆ ಕಾರಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us