newsfirstkannada.com

ಬೈಕ್​​ನಲ್ಲಿ ಬಂದು JDU ಯುವ ಮುಖಂಡನ ಗುಂಡಿಟ್ಟು ಸಾಯಿಸಿ ಪರಾರಿ

Share :

Published April 25, 2024 at 11:01am

Update April 25, 2024 at 11:03am

    ಮದುವೆ ಮನೆಗೆ ಹೋಗಿ ವಾಪಸ್ ಬರುವಾಗ ಕೃತ್ಯ

    ಬೈಕ್​​ನಲ್ಲಿ ಬಂದ ನಾಲ್ವರು ಕೃತ್ಯ ನಡೆಸಿ ಎಸ್ಕೇಪ್ ಆಗಿದ್ದಾರೆ

    ಗುಡಿನ ದಾಳಿ ವೇಳೆ ಮತ್ತೊಬ್ಬನಿಗೆ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಬುಧವಾರ ರಾತ್ರಿ ಪಾಟ್ನಾದಲ್ಲಿ ಜೆಡಿಯು ಪಕ್ಷದ ಯುವ ಮುಖಂಡರೊಬ್ಬರನ್ನು ಗುಂಡಿಟ್ಟು ಬರ್ಬರವಾಗಿ ಕೊಲ್ಲಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೌರಭ್ ಕುಮಾರ್ ಅಪರಿಚಿತರ​ ಗುಂಡೇಟಿಗೆ ಬಲಿಯಾದ ಯುವ ನಾಯಕ.

ನಾಲ್ವರು ದಾಳಿ ಕೋರರು ಬೈಕ್​ನಲ್ಲಿ ಬಂದು, ಫೈರಿಂಗ್ ಮಾಡಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗಿದ್ದ ಸೌರಭ್, ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ವಾಪಸ್ ಆಗುತ್ತಿದ್ದರು. ಈ ವೇಳೆ ದಾಳಿ ಮಾಡಿ ಪರಾರಿ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಕಾಂಗ್ರೆಸ್​ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ದಾಳಿಕೋರರು ಬೈಕ್​​ನಲ್ಲಿ ಬಂದು ಸೌರಭ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮದುವೆಯ ರಿಸೆಪ್ಷನ್ ಮುಗಿಸಿ ವಾಪಸ್ ಬರುತ್ತಿದ್ದಾಗ ದಾಳಿಯಾಗಿದೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಕೂಡ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ಎಸ್​ಪಿ ಭರತ್ ಸೋನಿ ತಿಳಿಸಿದ್ದಾರೆ.

ಸೌರಭ್ ಕುಮಾರ್​​ ತಲೆಗೆ ಮತ್ತು ಕುತ್ತಿಗೆ ಬಾಗಗಕ್ಕೆ ಗುಂಡುಗಳು ಹೊಕ್ಕಿವೆ. ಕೆಲವು ಸಿಸಿಟಿವಿ ದೃಶ್ಯಗಳು ಸೆರೆ ಸಿಕ್ಕಿದ್ದು, ಅವುಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:Video: ಪಂತ್ ಹೊಡೆದ ಬಾಲ್​​​ನಿಂದ ಕ್ಯಾಮರಾಮ್ಯಾನ್​ಗೆ ಪೆಟ್ಟು; ಕ್ಷಮೆ ಕೇಳಿ ವಿನಯತೆ ಮೆರೆದ ನಾಯಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​​ನಲ್ಲಿ ಬಂದು JDU ಯುವ ಮುಖಂಡನ ಗುಂಡಿಟ್ಟು ಸಾಯಿಸಿ ಪರಾರಿ

https://newsfirstlive.com/wp-content/uploads/2024/04/SOURABH-KUMAR.jpg

    ಮದುವೆ ಮನೆಗೆ ಹೋಗಿ ವಾಪಸ್ ಬರುವಾಗ ಕೃತ್ಯ

    ಬೈಕ್​​ನಲ್ಲಿ ಬಂದ ನಾಲ್ವರು ಕೃತ್ಯ ನಡೆಸಿ ಎಸ್ಕೇಪ್ ಆಗಿದ್ದಾರೆ

    ಗುಡಿನ ದಾಳಿ ವೇಳೆ ಮತ್ತೊಬ್ಬನಿಗೆ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಬುಧವಾರ ರಾತ್ರಿ ಪಾಟ್ನಾದಲ್ಲಿ ಜೆಡಿಯು ಪಕ್ಷದ ಯುವ ಮುಖಂಡರೊಬ್ಬರನ್ನು ಗುಂಡಿಟ್ಟು ಬರ್ಬರವಾಗಿ ಕೊಲ್ಲಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೌರಭ್ ಕುಮಾರ್ ಅಪರಿಚಿತರ​ ಗುಂಡೇಟಿಗೆ ಬಲಿಯಾದ ಯುವ ನಾಯಕ.

ನಾಲ್ವರು ದಾಳಿ ಕೋರರು ಬೈಕ್​ನಲ್ಲಿ ಬಂದು, ಫೈರಿಂಗ್ ಮಾಡಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗಿದ್ದ ಸೌರಭ್, ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ವಾಪಸ್ ಆಗುತ್ತಿದ್ದರು. ಈ ವೇಳೆ ದಾಳಿ ಮಾಡಿ ಪರಾರಿ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಕಾಂಗ್ರೆಸ್​ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ದಾಳಿಕೋರರು ಬೈಕ್​​ನಲ್ಲಿ ಬಂದು ಸೌರಭ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮದುವೆಯ ರಿಸೆಪ್ಷನ್ ಮುಗಿಸಿ ವಾಪಸ್ ಬರುತ್ತಿದ್ದಾಗ ದಾಳಿಯಾಗಿದೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಕೂಡ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ಎಸ್​ಪಿ ಭರತ್ ಸೋನಿ ತಿಳಿಸಿದ್ದಾರೆ.

ಸೌರಭ್ ಕುಮಾರ್​​ ತಲೆಗೆ ಮತ್ತು ಕುತ್ತಿಗೆ ಬಾಗಗಕ್ಕೆ ಗುಂಡುಗಳು ಹೊಕ್ಕಿವೆ. ಕೆಲವು ಸಿಸಿಟಿವಿ ದೃಶ್ಯಗಳು ಸೆರೆ ಸಿಕ್ಕಿದ್ದು, ಅವುಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:Video: ಪಂತ್ ಹೊಡೆದ ಬಾಲ್​​​ನಿಂದ ಕ್ಯಾಮರಾಮ್ಯಾನ್​ಗೆ ಪೆಟ್ಟು; ಕ್ಷಮೆ ಕೇಳಿ ವಿನಯತೆ ಮೆರೆದ ನಾಯಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More