Advertisment

ಜಮ್ಮು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದ ಭಯೋತ್ಪಾದಕರು; ಉಗ್ರರ ದಾಳಿಗೆ ಬಲಿಯಾದ 7 ಜನ

author-image
Gopal Kulkarni
Updated On
ಜಮ್ಮು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದ ಭಯೋತ್ಪಾದಕರು; ಉಗ್ರರ ದಾಳಿಗೆ ಬಲಿಯಾದ 7 ಜನ
Advertisment
  • ಜಮ್ಮು ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ ಭಯೋತ್ಪಾದಕರು
  • ಗಂಡೆರ್ಬಾಲ್ ಜಿಲ್ಲೆಯಲ್ಲಿ ಕಾರ್ಮಿಕರ ಗುಂಪಿನ ಮೇಲೆ ದಾಳಿ
  • ಗುಂಡಿನ ದಾಳಿಗೆ ವೈದ್ಯರು ಸೇರಿ ಆರು ಜನ ಕಾರ್ಮಿಕರು ಬಲಿ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಲೇಹ್ ಹಾಗೂ ಲಡಾಖ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸುರಂಗ ಕಾಮಗಾರಿ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿರುವ ಉಗ್ರರು ವೈದ್ಯರೊಬ್ಬರನ್ನು ಸೇರಿ ಒಟ್ಟು 6 ಜನರನ್ನು ಹತ್ಯೆ ಮಾಡಿದ್ದಾರೆ. ಗಂಡೆರ್ಬಾಲ್​ ಜಿಲ್ಲೆಯ ಬಳಿ ರವಿವಾರ ಈ ಒಂದು ಭೀಕರ ಘಟನೆ ನಡೆದಿದೆ.

Advertisment

ಗಂಡೆರ್ಬಾಲ್ ಜಿಲ್ಲೆಯ ಬಳಿ ಸುರಂಗ ಮಾರ್ಗದ ಕಾಮಗಾರಿ ಮುಗಿಸಿಕೊಂಡು ಸಂಜೆ ವೇಳೆ ಕಾರ್ಮಿಕರು ತಮ್ಮ ಕ್ಯಾಂಪ್​ಗೆ ಹಿಂದಿರುಗುತ್ತಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ವೈದ್ಯರೊಬ್ಬರು ಸೇರಿ 6 ಕಾರ್ಮಿಕರು ಹತ್ಯೆಯಾಗಿದ್ದಾರೆ.

ಇದನ್ನೂ ಓದಿ:‘ಜಾಸ್ತಿ ಮಕ್ಕಳನ್ನು ಮಾಡಿಕೊಳ್ಳಿ‘; ಆಂಧ್ರಪ್ರದೇಶದ ಸಿಎಂ ಕೊಟ್ರು ಅಚ್ಚರಿಯ ಆಫರ್!

Advertisment


">October 20, 2024


ಸ್ಥಳೀಯರು ಹಾಗೂ ಬೇರೆಕಡೆಯಿಂದ ಬಂದಿದ್ದ ಕಾರ್ಮಿಕರೆಲ್ಲರೂ ಸೇರಿ ಸುರಂಗ ಮಾರ್ಗದ ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಸಂಜೆ ವೇಳೆ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ಈ ದುರಂತ ನಡೆದಿದೆ. ಪ್ರತ್ಯಕ್ಷದರ್ಶಿಗಳು ಹೇಳವು ಪ್ರಕಾರ, ಒಟ್ಟು ಇಬ್ಬರು ಉಗ್ರರು ಈ ಕೃತ್ಯ ನಡೆಸಿದ್ದಾರಂತೆ. ಸಂಜೆ ಕ್ಯಾಂಪ್​​ಗೆ ವಾಪಸ್ ಬರುವಾಗ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದರು. ಗುಂಡಿನ ದಾಳಿಗೆ ತುತ್ತಾದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ವೈದ್ಯರು ಸೇರಿ ಉಳಿದ ನಾಲ್ಕು ಕಾರ್ಮಿಕರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಇನ್ನೂ ಐದು ಜನರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಾಜಿ ವಿಜ್ಞಾನಿ ಹಾಗೂ ಪತ್ನಿಯನ್ನು ಸೆರೆಯಾಳಾಗಿ ಹಿಡಿದ ಕಳ್ಳರು! ಆಮೇಲಾಗಿದ್ದೇನು?

ಮೃತಪಟ್ಟವರನ್ನು ಡಾ. ಶಹನವಾಜ್, ಫಹೀಮ್ ನಾಜೀರ್, ಖಲೀಮ್, ಮೊಹಮ್ಮದ್ ಹನೀಫ್, ಶಶಿ ಅಬ್ರೋಲಾ, ಅನಿಲ್ ಶುಕ್ಲಾ ಹಾಗೂ ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಾದ ಈ ಘಟನೆಯ ಹಿಂದಿರುವವರ ಪತ್ತೆಗಾಗಿ ಭದ್ರತಾ ಪಡೆ ಜಾಲ ಬೀಸಿದೆ. ಈಗಾಗಲೇ ಶೋಧಕಾರ್ಯ ನಡೆದಿದ್ದು. ಹಂತಕರನ್ನು ಹೊಡೆದುರುಳಿಸುವ ಕಾರ್ಯಕ್ಕೆ ಸಿದ್ಧತೆ ನಡೆದಿದೆ.

Advertisment

ಇನ್ನು ಘಟನೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಗನ್​ಗಿರ್​ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಅತ್ಯಂತ ಹೇಡಿಗಳ ಕಾರ್ಯವಾಗಿದೆ. ಯಾರು ಕಾರ್ಯದಲ್ಲಿ ನಿರತರಾಗಿದ್ದಾರೋ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮ ಭದ್ರತಾ ಪಡೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಈ ವೇಳೆ ನಾನು ಈ ಘಟನೆಯಲ್ಲಿ ಮೃತಪಟ್ಟಿರುವವರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಗಾಯಗೊಂಡವರು ಕೂಡಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment