/newsfirstlive-kannada/media/post_attachments/wp-content/uploads/2024/10/TERRORIST-ATTACK.jpg)
ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಲೇಹ್ ಹಾಗೂ ಲಡಾಖ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸುರಂಗ ಕಾಮಗಾರಿ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿರುವ ಉಗ್ರರು ವೈದ್ಯರೊಬ್ಬರನ್ನು ಸೇರಿ ಒಟ್ಟು 6 ಜನರನ್ನು ಹತ್ಯೆ ಮಾಡಿದ್ದಾರೆ. ಗಂಡೆರ್ಬಾಲ್​ ಜಿಲ್ಲೆಯ ಬಳಿ ರವಿವಾರ ಈ ಒಂದು ಭೀಕರ ಘಟನೆ ನಡೆದಿದೆ.
ಗಂಡೆರ್ಬಾಲ್ ಜಿಲ್ಲೆಯ ಬಳಿ ಸುರಂಗ ಮಾರ್ಗದ ಕಾಮಗಾರಿ ಮುಗಿಸಿಕೊಂಡು ಸಂಜೆ ವೇಳೆ ಕಾರ್ಮಿಕರು ತಮ್ಮ ಕ್ಯಾಂಪ್​ಗೆ ಹಿಂದಿರುಗುತ್ತಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ವೈದ್ಯರೊಬ್ಬರು ಸೇರಿ 6 ಕಾರ್ಮಿಕರು ಹತ್ಯೆಯಾಗಿದ್ದಾರೆ.
ಇದನ್ನೂ ಓದಿ:‘ಜಾಸ್ತಿ ಮಕ್ಕಳನ್ನು ಮಾಡಿಕೊಳ್ಳಿ‘; ಆಂಧ್ರಪ್ರದೇಶದ ಸಿಎಂ ಕೊಟ್ರು ಅಚ್ಚರಿಯ ಆಫರ್!
The dastardly terror attack on civilians in Gagangir, J&K, is a despicable act of cowardice. Those involved in this heinous act will not be spared and will face the harshest response from our security forces. At this moment of immense grief, I extend my sincerest condolences to…
— Amit Shah (@AmitShah) October 20, 2024
">October 20, 2024
ಸ್ಥಳೀಯರು ಹಾಗೂ ಬೇರೆಕಡೆಯಿಂದ ಬಂದಿದ್ದ ಕಾರ್ಮಿಕರೆಲ್ಲರೂ ಸೇರಿ ಸುರಂಗ ಮಾರ್ಗದ ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಸಂಜೆ ವೇಳೆ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ಈ ದುರಂತ ನಡೆದಿದೆ. ಪ್ರತ್ಯಕ್ಷದರ್ಶಿಗಳು ಹೇಳವು ಪ್ರಕಾರ, ಒಟ್ಟು ಇಬ್ಬರು ಉಗ್ರರು ಈ ಕೃತ್ಯ ನಡೆಸಿದ್ದಾರಂತೆ. ಸಂಜೆ ಕ್ಯಾಂಪ್​​ಗೆ ವಾಪಸ್ ಬರುವಾಗ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದರು. ಗುಂಡಿನ ದಾಳಿಗೆ ತುತ್ತಾದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ವೈದ್ಯರು ಸೇರಿ ಉಳಿದ ನಾಲ್ಕು ಕಾರ್ಮಿಕರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಇನ್ನೂ ಐದು ಜನರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಮಾಜಿ ವಿಜ್ಞಾನಿ ಹಾಗೂ ಪತ್ನಿಯನ್ನು ಸೆರೆಯಾಳಾಗಿ ಹಿಡಿದ ಕಳ್ಳರು! ಆಮೇಲಾಗಿದ್ದೇನು?
ಮೃತಪಟ್ಟವರನ್ನು ಡಾ. ಶಹನವಾಜ್, ಫಹೀಮ್ ನಾಜೀರ್, ಖಲೀಮ್, ಮೊಹಮ್ಮದ್ ಹನೀಫ್, ಶಶಿ ಅಬ್ರೋಲಾ, ಅನಿಲ್ ಶುಕ್ಲಾ ಹಾಗೂ ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಾದ ಈ ಘಟನೆಯ ಹಿಂದಿರುವವರ ಪತ್ತೆಗಾಗಿ ಭದ್ರತಾ ಪಡೆ ಜಾಲ ಬೀಸಿದೆ. ಈಗಾಗಲೇ ಶೋಧಕಾರ್ಯ ನಡೆದಿದ್ದು. ಹಂತಕರನ್ನು ಹೊಡೆದುರುಳಿಸುವ ಕಾರ್ಯಕ್ಕೆ ಸಿದ್ಧತೆ ನಡೆದಿದೆ.
ಇನ್ನು ಘಟನೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಗನ್​ಗಿರ್​ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಅತ್ಯಂತ ಹೇಡಿಗಳ ಕಾರ್ಯವಾಗಿದೆ. ಯಾರು ಕಾರ್ಯದಲ್ಲಿ ನಿರತರಾಗಿದ್ದಾರೋ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮ ಭದ್ರತಾ ಪಡೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಈ ವೇಳೆ ನಾನು ಈ ಘಟನೆಯಲ್ಲಿ ಮೃತಪಟ್ಟಿರುವವರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಗಾಯಗೊಂಡವರು ಕೂಡಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us