RCBಗೆ ಗುಡ್​ನ್ಯೂಸ್​; ವಾಪಸ್ ಬಂದ ಬಲಿಷ್ಠ ಪ್ಲೇಯರ್​.. ತಂಡಕ್ಕೆ ಬಂತು ಆನೆಬಲ

author-image
Bheemappa
Updated On
ಈ ಆಟಗಾರನ ಕೈಯಲ್ಲಿದೆ RCB ಫೈನಲ್ ಭವಿಷ್ಯ.. ಇವತ್ತು ಸೆಂಟರ್ ಆಫ್ ಅಟ್ರಾಕ್ಷನ್ ಇವರೇ..!
Advertisment
  • ಲೀಗ್​ನ ಕೊನೆ ಪಂದ್ಯದಲ್ಲಿ ಜಯ ಸಾಧಿಸಿದ್ರೆ RCBಗೆ ಅದೃಷ್ಟ
  • ಆಟಗಾರ ಮರಳಿರುವ ಬಗ್ಗೆ ಮಾಹಿತಿ ಶೇರ್ ಮಾಡಿದ ಆರ್​ಸಿಬಿ
  • ಹೈದ್ರಾಬಾದ್ ವಿರುದ್ಧ ಸೋತಿರುವುದು ಆರ್​ಸಿಬಿಗೆ ದೊಡ್ಡ ನಷ್ಟ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನಲ್ಲಿ ಟಾಪ್- 2 ಸ್ಥಾನ ಪಡೆಯಲು ತುದಿಗಾಲಲ್ಲಿ ನಿಂತಿದೆ. ಆದರೆ ಹೈದ್ರಾಬಾದ್ ವಿರುದ್ಧ ಪಂದ್ಯ ಸೋತಿರುವುದು ದೊಡ್ಡ ನಷ್ಟವಾಗಿದೆ. ಇದಕ್ಕೆ ಆರ್​ಸಿಬಿಗೆ ಮತ್ತೊಂದು ಅವಕಾಶ ಇದ್ದು ಲೀಗ್​ನ ಕೊನೆ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇದರ ನಡುವೆ ಬೆಂಗಳೂರು ತಂಡಕ್ಕೆ ಬಲಿಷ್ಠ ಬೌಲರ್ ಮರಳಿರುವುದು ಆನೆಬಲ ಬಂದಂತೆ ಆಗಿದೆ.

ಆಸ್ಟ್ರೇಲಿಯಾದ ವೇಗಿ ಹಾಗೂ ಆರ್​ಸಿಬಿಯ ಭರವಸೆಯ ಬೌಲರ್ ಆಗಿರುವ ಜೋಶ್ ಹೇಜಲ್​ವುಡ್ ಅವರು ಮತ್ತೆ ಆರ್​ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಈ ಬಗ್ಗೆ ಆರ್​ಸಿಬಿ ಫ್ರಾಂಚೈಸಿಯೇ ಇದೀಗ ಅಧಿಕೃತವಾಗಿ ಪೋಸ್ಟ್​ವೊಂದನ್ನು ಶೇರ್ ಮಾಡಿ ಮಾಹಿತಿ ನೀಡಿದೆ. ಭಾರತ ಮತ್ತು ಪಾಕ್​​ ನಡುವೆ ಬಿಕ್ಕಟ್ಟು ಸಂಭವಿಸಿ ಕೆಲವು ದಿನ ಐಪಿಎಲ್​ಗೆ ಬ್ರೇಕ್ ನೀಡಲಾಗಿತ್ತು. ಇದೇ ಸಮಯದಲ್ಲಿ ಜೋಶ್ ಹೇಜಲ್​ವುಡ್ ತವರಿಗೆ ವಾಪಸ್ ಹೋಗಿದ್ದರು.

ಇದನ್ನೂ ಓದಿ: IPL 6ನೇ ಟ್ರೋಫಿ ಮೇಲೆ ಕಣ್ಣು.. ಈ ಬಲಿಷ್ಠ ಪ್ಲೇಯರ್​ ಬಂದ ಮೇಲೆ ತಂಡದ ಲಕ್ ಬದಲಾಯ್ತಾ?

publive-image

ಈಗಾಗಲೇ ಆರ್​ಸಿಬಿ ತಂಡ ಲಕ್ನೋದಲ್ಲಿ ಇದ್ದು ಅಭ್ಯಾಸ ಪ್ರಾರಂಭ ಮಾಡಿದೆ. ಈ ತಂಡವನ್ನು ಜೋಶ್ ಹೇಜಲ್​ವುಡ್ ಅವರು ಸೇರಿಕೊಂಡಿದ್ದಾರೆ. ಸಹ ಆಟಗಾರರ ಜೊತೆ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿವೆ. ಆರ್​ಸಿಬಿಯ ಸ್ಥಾನ ಇನ್ನೂ ನಿರ್ಧಾರವಾಗಿಲ್ಲ. ಪಾಯಿಂಟ್ಸ್ ಟೇಬಲ್​​ನಲ್ಲಿ ಮೊದಲ ಮತ್ತು ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್​ಸಿಬಿಗೆ ಲೀಗ್ ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ.

ಉತ್ತರ ಪ್ರದೇಶದ ಲಕ್ನೋದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಲ್​ಎಸ್​ಜಿ ವಿರುದ್ಧ ಆರ್​ಸಿಬಿ ಲೀಗ್​ನ ಕೊನೆ ಪಂದ್ಯ ಆಡಲಿದೆ. ಜೋಶ್ ಹೇಜಲ್​ವುಡ್ ತಂಡಕ್ಕೆ ಮರಳಿರುವುದು ಸಂತಸದ ಜೊತೆಗೆ ದೊಡ್ಡ ತಿರುವು ಕೂಡ ಸಿಗುವ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಆರ್​​ಸಿಬಿ ಜಯ ಸಾಧಿಸಿದರೆ ಟಾಪ್​-2 ಸ್ಥಾನ ಸಿಗಲಿದೆ. ಒಂದು ವೇಳೆ ಲಕ್ನೋ ತಂಡ ಗೆಲುವು ಪಡೆದರೆ ಯಾವುದೇ ಲಾಭವಿಲ್ಲ. ಆದರೆ ಆರ್​ಸಿಬಿಗೆ ದೊಡ್ಡ ನಷ್ಟವಾಗುವುದಂತು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment