ವಿದ್ಯಾರ್ಥಿಗಳಿಗೆ ಹಿನ್ನಡೆ, ಈ ರಾಶಿಯವರು ನಂಬಿ ಮೋಸ ಹೋಗಬಹುದು; ಇಲ್ಲಿದೆ ನಿಮ್ಮ ಭವಿಷ್ಯ..!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ದೊಡ್ಡವರ, ತಂದೆಯವರ ಮಾರ್ಗದರ್ಶನ ಉತ್ತಮವಾಗಿ ದೊರೆಯುತ್ತದೆ
  • ಪದವೀಧರರಿಗೆ ಉತ್ತಮ ನೌಕರಿಯ ಅವಕಾಶಗಳು ಸಿಗುವ ಯೋಗ
  • ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆಯಿಂದ ಬೇಸರವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ  ಇರಲಿದೆ.

ಮೇಷ ರಾಶಿ

publive-image

  • ದೊಡ್ಡವರ, ತಂದೆಯವರ ಮಾರ್ಗದರ್ಶನ ಉತ್ತಮವಾಗಿ ದೊರೆಯುತ್ತದೆ
  • ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಚ್ಚರಿಕೆ
  • ಇದು ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುವಂತದ್ದು
  • ವಿದ್ಯಾರ್ಥಿಗಳು ಕೆಲಸದಲ್ಲಿ ತುಂಬಾ ಆತುರವಾಗಿ ಮುಂದುವರೆಯುವುದರಿಂದ ಯಶಸ್ಸಿಗೆ ಅಡ್ಡಿ ಉಂಟಾಗಬಹುದು
  • ಜನರು ನಿಮ್ಮ ದೌರ್ಬಲ್ಯಗಳನ್ನು ಅಸ್ತ್ರವನ್ನಾಗಿಟ್ಟುಕೊಂಡು ನಿಮಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ
  • ಇಂದು ಸ್ತ್ರೀಯರಿಗೆ ಅನುಕೂಲಕರವಾದ ದಿನ
  • ಈ ದಿನ ಖರೀದಿಗೆ ಹೆಚ್ಚು ಅವಕಾಶಗಳಿವೆ
  • ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರಿಕೆ
  • ಮನೆ ದೇವರನ್ನು ಪ್ರಾರ್ಥಿಸಿ

ವೃಷಭ

publive-image

  • ಇಂದು ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಬಹುದು
  • ಇಂದು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ
  • ಅನಗತ್ಯ ಖರ್ಚನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು
  • ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭ ಸಾಧ್ಯತೆ
  • ಪದವೀಧರರಿಗೆ ಉತ್ತಮ ನೌಕರಿಯ ಅವಕಾಶಗಳು ಸಿಗುವ ಯೋಗವಿದೆ
  • ಮಧ್ಯಾಹ್ನದ ನಂತರ ಹಲವು ಕೆಲಸಗಳು ಶುಭವಾಗಲಿದೆ
  • ಈ ದಿನ ನಿಮಗೆ ಹಳೆಯ ನೆನಪುಗಳು ಕಾಡಬಹುದು
  • ಹಸಿದವರಿಗೆ ಅನ್ನವನ್ನು ದಾನ ಮಾಡಿ

ಮಿಥುನ

publive-image

  • ಹೊಸ ವ್ಯಾಪಾರ, ಉದ್ಯೋಗ ಆರಂಭಿಸಲು ಶುಭ ದಿನ
  • ಇಂದು ಮಾನಸಿಕವಾಗಿ ಆಯಾಸವಾಗುವ ದಿನ
  • ಯಾವುದೇ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೀಡಾಗುತ್ತೀರಿ
  • ಬೇರೆಯವರನ್ನು ವಿನಾಕಾರಣ ನಂಬುವುದು ಒಳ್ಳೆಯದಲ್ಲ
  • ಸಹೋದ್ಯೋಗಿಗಳು ಮೋಸ ಮಾಡುವ ಸಾಧ್ಯತೆ ಜಾಗ್ರತೆ ಇರಲಿ
  • ನೀವು ಲಾಭದ ದೃಷ್ಠಿಯಿಂದ ಯಾವುದೇ ಕೆಲಸ ಮಾಡಿದರು ಅದು ನಿಮಗೆ ಶುಭವಾಗುತ್ತದೆ
  • ಸ್ಥಿರವಾದ ಮನಸ್ಸಿನಿಂದ ಮುಂದುವರೆದರೆ ಒಳ್ಳೆಯದು
  • ಇಲ್ಲದೆ ಇದ್ರೆ ಅವಕಾಶ ವಂಚಿತರಾಗುತ್ತೀರಿ
  • ಶ್ರೀರಾಮದೂತ ಆಂಜನೇಯನನ್ನು ಸ್ಮರಿಸಿ

ಕಟಕ

publive-image

  • ನಿಮ್ಮ ಕುಟುಂಬದವರ ನಡವಳಿಕೆ, ಸ್ವಭಾವದಿಂದ ನಿಮ್ಮ ಗೌರವ ಹೆಚ್ಚಾಗುವ ದಿನ
  • ನಿಮ್ಮನ್ನು ಎಲ್ಲರೂ ಮೆಚ್ಚಿಕೊಂಡು, ಅಭಿಮಾನದಿಂದ ಕಾಣ್ತಾರೆ
  • ನಿಮ್ಮ ಚುರುಕುತನ, ಬುದ್ಧಿವಂತಿಕೆ ನಿಮಗೆ ಗೌರವ,ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ
  • ನಿಮ್ಮ ಕೆಲಸದಲ್ಲಿ ತುಂಬಾ ಪರಿಶ್ರಮ ಪಡುತ್ತೀರಿ ಇದಕ್ಕೆ ಪ್ರತಿಫಲ ಸಿಗುವ ದಿನ
  • ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ಇಂದು ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳಾಗಬಹುದು
  • ನಿಮ್ಮ ಸಣ್ಣ-ಪುಟ್ಟ ಬದಲಾವಣೆಗಳನ್ನು ಜನರು ಮೆಚ್ಚಿ ಅಭಿನಂದಿಸುತ್ತಾರೆ
  • ನವದುರ್ಗೆಯರನ್ನು ಆರಾಧಿಸಿ

ಸಿಂಹ

publive-image

  • ನಿಮ್ಮ ಆತ್ಮ ವಿಶ್ವಾಸದ ಬಗ್ಗೆ ನಿಮಗೆ ನಿರ್ದಿಷ್ಟವಾದ ನಂಬಿಕೆ ಇರಬೇಕು
  • ನಿಮ್ಮ ಕೆಲಸವನ್ನು ನೋಡಿ ಎಲ್ಲರೂ ಸಹ ಆಕರ್ಷಿತರಾಗುತ್ತಾರೆ
  • ಸೇವಾ ಮನೋಭಾವನೆಯನ್ನು ಮನಸ್ಸಲ್ಲಿ ಬೆಳೆಸಿಕೊಳ್ಳಿ
  • ಹಿರಿಯರಿಗೆ ಅಗತ್ಯವಿರುವ ಸೇವೆಯನ್ನು ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಿ
  • ಮನೆ ಮತ್ತು ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ
  • ನಿಮ್ಮ ವಿರೋಧಿಗಳೂ ನಿಮ್ಮ ಕಾರ್ಯ ವೈಖರಿ ನೋಡಿ ಹೊಗಳುತ್ತಾರೆ
  • ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆಯಿಂದ ಬೇಸರವಾಗಬಹುದು
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಕುಟುಂಬದ ಸದಸ್ಯರ ಜೊತೆ ಸಂತೋಷವಾಗಿರಲು ಬಯಸುತ್ತೀರಿ
  • ಆದರೆ ಕೆಲಸದ ಒತ್ತಡದಿಂದ ಯಾವುದಕ್ಕೂ ಅವಕಾಶ ಆಗುವುದಿಲ್ಲ
  • ಪ್ರತಿಫಲ ನಿರೀಕ್ಷೆಯಲ್ಲಿ ಪರಿಶ್ರಮ ಪಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ
  • ನಿಮಗೂ ಮನೆಯವರಿಗೂ ಬೇಸರವಾಗುವ ದಿನ
  • ಆಸ್ತಿಯ ವಿಚಾರ ಪ್ರಸ್ತಾಪ ಆಗುವ ಸಾಧ್ಯತೆಗಳಿವೆ
  • ಯೋಚನೆಗಳು ಮತ್ತು ಯೋಜನೆಗಳು ಫಲಪ್ರದವಾಗುವಂತಹ ದಿನ
  • ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ದಂಡ ತೆರಬೇಕಾಗಬಹುದು ಎಚ್ಚರಿಕೆ
  • ಕುಲದೇವರನ್ನು ಪ್ರಾರ್ಥಿಸಿ

ತುಲಾ

publive-image

  • ಯಾವುದೇ ಸೂಚನೆಗಳಿಲ್ಲದೆ ಆರೋಗ್ಯದಲ್ಲಿ ಏರುಪೇರಾಗಬಹುದು
  • ತಾತ್ಸಾರ ಮಾಡದೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ
  • ಮನೆಯವರೆಲ್ಲ ನಿಮ್ಮ ವಿಚಾರಕ್ಕೆ ಆತಂಕಕ್ಕೆ ಒಳಗಾಗುತ್ತಾರೆ
  • ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗುವ ದಿನವಾಗಿರುತ್ತದೆ
  • ದೇವರಿಗೆ ಹಳೆಯ ಹರಕೆಯನ್ನು ತೀರಿಸುವುದರಿಂದ ಒಳ್ಳೆಯದಾಗುತ್ತದೆ
  • ಕಷ್ಟ ಬಂದಾಗ ಮಾತ್ರ ದೇವರನ್ನು ಸ್ಮರಿಸುವ ಕೆಲಸ ಮಾಡಬೇಡಿ
  • ದೇವರ ಬಗ್ಗೆ ನಂಬಿಕೆ ಇರಲಿ ಅಪನಂಬಿಕೆ ಬೇಡ
  • ಇಂದು ಹಣದ ಹೂಡಿಕೆಯನ್ನು ಮಾಡಬಹುದು
  • ಇಂದ್ರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಇಂದು ಯೋಗ್ಯವಲ್ಲದ ಕಾರ್ಯಗಳಲ್ಲಿ ಭಾಗವಹಿಸಬೇಡಿ
  • ನಂಬಿ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ
  • ಹಣ ಉಳಿಸಲು ಪ್ರಯತ್ನಿಸಿ, ವಿನಾಕಾರಣ ಖರ್ಚು ಬೇಡ
  • ನೀವು ಮಾಡುವ ಕೆಲಸದಲ್ಲಿ ನಿಮಗೆ ಸಮಾಧಾನವಿರುವುದಿಲ್ಲ
  • ಬೇರೆ ಕೆಲಸಕ್ಕೆ ಈ ದಿನ ಪ್ರಯತ್ನ ಪಡಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಕಟ್ಟುಪಾಡು, ನಿಯಮಗಳು ಹೆಚ್ಚಾಗಿ ಬೇಸರವಾಗಬಹುದು
  • ಈ ರಾಶಿಯವರಿಗೆ ಸಂಪತ್ತಿನ ಕನಸು ಬೀಳುವುದರಿಂದ ಸಂಪತ್ತು ನಷ್ಟವಾಗುವ ಸಾಧ್ಯತೆಯಿದೆ ಎಚ್ಚರ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ಧನಸ್ಸು

publive-image

  • ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು, ಹಿರಿಯರ ಆರೋಗ್ಯದಲ್ಲಿ ತೊಂದರೆ ಸಾಧ್ಯತೆ
  • ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ
  • ವ್ಯಾಪಾರದಲ್ಲಿ ಹಲವು ವರ್ಷಗಳ ಅನುಭವವಿದ್ದರು ಮೋಸ, ನಷ್ಟ ಸಾಧ್ಯತೆ ಎಚ್ಚರ
  • ಇಂದು ಸರಿಯಾದ ಅನುಭವಿಗಳಿಂದ ಮಾರ್ಗದರ್ಶನ ಪಡೆಯಿರಿ
  • ಅಸ್ತಮ ರೋಗಿಗಳಿಗೆ ಆರೋಗ್ಯದಲ್ಲಿ ತೊಂದರೆಗಳಾಗಬಹುದು ಜಾಗ್ರತೆ
  • ಇಂದು ಕೋಪದ ಮೇಲೆ ಹಿಡಿತವಿರಲಿ
  • ಅಧಿಕಾರಕ್ಕಾಗಿ ಪ್ರಯತ್ನ ಪಡುವಿರಿ ಆದರೆ ಪ್ರಯೋಜನವಾಗುವುದಿಲ್ಲ
  • ಕುಲದೇವರನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ನಿಮಗೆ ಉದ್ಯೋಗದಲ್ಲಿ ಸಮಾಧಾನ, ತೃಪ್ತಿ ಸಿಗುವ ದಿನ
  • ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ
  • ಪ್ರೇಮಿಗಳು ತುಂಬಾ ಜಾಗರೂಕರಾಗಿರಿ ತೊಂದರೆಯಾಗುವ ಸಾಧ್ಯತೆಗಳಿವೆ
  • ವಿದ್ಯಾರ್ಥಿಗಳಿಗೆ ಶುಭ ದಿನ, ಓದಿನ ಜೊತೆ ಬೇರೆ ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಿ
  • ವಿದ್ಯಾರ್ಥಿಗಳು ಸಂತಸದಿಂದ ತಮ್ಮ ಶೈಕ್ಷಣಿಕ ಕ್ಷೇತ್ರವನ್ನು ಸ್ವೀಕರಿಸಿ ಮುಂದುವರೆಯಿರಿ
  • ಕೈ ಭಾಗದಲ್ಲಿ ಪೆಟ್ಟಾಗುವ ಸಾಧ್ಯತೆಯಿದೆ, ರಕ್ತದ ಬಗ್ಗೆ ಗಮನವಿರಲಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಸಮಾಜದ ಹಿತದೃಷ್ಟಿಯಿಂದ ಮುಂದಾಲೋಚನೆ ಮಾಡಿ ಅಧ್ಯಯನ ಮಾಡಿದರೆ ಒಳಿತು
  • ಹಲವರು ನಿಮಗೆ ಧನ್ಯವಾದಗಳನ್ನು ಹೇಳುತ್ತಾ ನಿಮ್ಮ ಉಪಕಾರ ಸ್ಮರಣೆ ಮಾಡುತ್ತಾರೆ
  • ಪ್ರತಿಫಲ ನಿರೀಕ್ಷೆಯಲ್ಲಿ ಪರಿಶ್ರಮ ಪಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ
  • ಗಂಭೀರವಾದ ಚಿಂತನೆಗಳನ್ನು ವಿದ್ಯಾರ್ಥಿಗಳು ನಡೆಸಬೇಕಾಗುತ್ತದೆ
  • ನಿಮಗಿರುವ ಹಲವು ಸವಾಲುಗಳನ್ನು ಈ ದಿನ ನೀವು ಎದುರಿಸಿ ಜಯಶೀಲರಾಗುತ್ತೀರಿ
  • ವಿದ್ಯಾರ್ಥಿಗಳಿಗೆ ಅಲ್ಪ ಸಂತೋಷ ಸಾಧ್ಯತೆ, ಬೇಸರ ಮಾಡಿಕೊಳ್ಳಬಾರದು
  • ಏಕಾಗ್ರತೆಯಿಂದ ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿ
  • ಈಶ್ವರ ಆರಾಧನೆ ಮಾಡಿ

ಮೀನ 

publive-image

  • ಇಂದು ಆದಾಯ ಬರುವಂತ ದಿನವಾಗಿದೆ
  • ನಿಮಗಿರುವ ಹಲವು ಸವಾಲುಗಳನ್ನು ಈ ದಿನ ಎದುರಿಸಿ ಜಯಶೀಲರಾಗುತ್ತೀರಿ
  • ವಿದ್ಯಾರ್ಥಿಗಳು ಅಧ್ಯಯನದ ದೃಷ್ಠಿಯಿಂದ ತೀವ್ರವಾಗಿ ಪರಿಶ್ರಮ ಪಡುವ ಸಾಧ್ಯತೆ
  • ಸರ್ಕಾರಿ ಕೆಲಸಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುವ ಸಾಧ್ಯತೆ
  • ನಿಮ್ಮ ಮಧ್ಯಸ್ಥಿಕೆಯಲ್ಲಿ ನಡೆಯುವ ವ್ಯವಹಾರಗಳು ಸುಖಾಂತ್ಯವಾಗುತ್ತವೆ
  • ಯಾವುದೇ ನಿರೀಕ್ಷೆಯಿಲ್ಲದೆ ಬೇರೆಯವರಿಗೆ ಸಹಾಯ ಮಾಡಿ ಗೌರವ ಹೆಚ್ಚಾಗುತ್ತದೆ
  • ಇಂದು ಉಪಕೃತರು ನಿಮ್ಮನ್ನು ಮನಸಾರೆ ಗೌರವಿಸುವ ಸಾಧ್ಯತೆಯಿದೆ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment