ಅಪರಿಚಿತ ವ್ಯಕ್ತಿಯಿಂದ ಮೋಸ, ಹೊಸ ವಾಹನ ಖರೀದಿಗೆ ಅವಕಾಶ.. ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಅಕಸ್ಮಾತ್ತಾಗಿ ಸಾಧುಗಳ ಅಥವಾ ಯೋಗಿಗಳ ದರ್ಶನವಾಗಬಹುದು
  • ಹೊಸ ವ್ಯಾಪಾರ, ವ್ಯವಹಾರ,ವಿಚಾರಗಳು ಮನಸ್ಸಿಗೆ ಉತ್ಸಾಹ ತರಲಿದೆ
  • ಮನೆಯಲ್ಲಿ ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರ ವರೆಗೆ ಇರಲಿದೆ.

ಮೇಷ ರಾಶಿ

publive-image

  • ಕುಟುಂಬದ ವಾತಾವರಣವು ಬಹಳ ಚೆನ್ನಾಗಿರುತ್ತದೆ
  • ನಿಮ್ಮ ಸ್ವಭಾವ ಶಾಂತವಾಗಿದ್ದರೆ ಒಳ್ಳೆಯದು
  • ಮಾನಸಿಕ ಸಂತೋಷಕ್ಕೆ ಬೆಲೆ ಕಟ್ಟಲಾಗುವುದಿಲ್ಲ
  • ಅಕಸ್ಮಾತ್ತಾಗಿ ಸಾಧುಗಳ ಅಥವಾ ಯೋಗಿಗಳ ದರ್ಶನವಾಗಬಹುದು
  • ಆಕಸ್ಮಿಕವಾಗಿ ಸ್ನೇಹಿತರನ್ನ ಭೇಟಿ ಮಾಡುವ ಸಾಧ್ಯತೆಗಳಿವೆ
  • ಪ್ರೇಮಿಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ
  • ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುವಂತಹ ಅವಕಾಶಗಳಿವೆ
  • ಮಹಾವಿಷ್ಣುವನ್ನು ಪ್ರಾರ್ಥಿಸಿ

ವೃಷಭ

publive-image

  • ಅಪರಿಚಿತ ವ್ಯಕ್ತಿಯು ನಿಮಗೆ ಮೋಸಮಾಡಲು ಕಾಯ್ತಾ ಇರುತ್ತಾರೆ ಎಚ್ಚರಿಕೆ
  • ಹೊಸ ವ್ಯಾಪಾರ, ವ್ಯವಹಾರ,ವಿಚಾರಗಳು ಮನಸ್ಸಿಗೆ ಉತ್ಸಾಹ ತರಲಿದೆ
  • ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
  • ಮನೆಯಲ್ಲಿ ಸ್ತ್ರೀಯರು ಮೋಸಕ್ಕೆ, ವಂಚನೆಗೆ ಒಳಗಾಗುವ ಸಂದರ್ಭಗಳು ಏರ್ಪಡುತ್ತದೆ ಜಾಗ್ರತೆ
  • ಕೆಲವರ ಮಾತಿನಿಂದ ನಿಮ್ಮ ಜೀವನದಲ್ಲಿ ಪರಿವರ್ತನೆಯಾಗಲಿದೆ
  • ನಿಮಗೆ ಹೊಟ್ಟೆನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆ
  • ಮನೆಯಲ್ಲಿ ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಜಾಗ್ರತೆವಹಿಸಿ
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

publive-image

  • ನಿಮ್ಮ ಜೀವನದ ಶೈಲಿ, ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗಬಹುದು
  • ವಿದ್ಯಾರ್ಥಿಗಳು ತಮ್ಮ ವಿದ್ಯೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ದಿನವಾಗಿರುತ್ತದೆ
  • ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
  • ಸಂಬಂಧಿಕರು, ಸ್ನೇಹಿತರು ತಮ್ಮ ಮನೆಗೆ ಬರಬಹುದು ಇದರಿಂದ ಮನಸ್ಸಿಗೆ ಸಮಾಧಾನವಾಗಲಿದೆ
  • ಸಾಕು ಪ್ರಾಣಿಗಳ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು ಚಿಕಿತ್ಸೆ ಕೊಡಿಸಿ
  • ಕುಟುಂಬದವರಿಗೆ, ಸಂಬಂಧಿಕರಿಗೆ ನಿಮ್ಮ ಆರೋಗ್ಯದ ವಿಚಾರದಲ್ಲಿ ತುಂಬಾ ಆತಂಕ ಉಂಟಾಗಬಹುದು
  • ಬಲವಂತವಾಗಿ ಮಾಡಿದ ಕೆಲಸಗಳಿಂದ ಯಶಸ್ಸಿರುವುದಿಲ್ಲ
  • ಸಹೋದ್ಯೋಗಿಗಳು, ಅಕ್ಕ ಪಕ್ಕದವರು ನಿಮಗೆ ಸಮಾಧಾನ ಹೇಳುವಂತಹ ಕೆಲಸ ಮಾಡುತ್ತಾರೆ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ

ಕಟಕ

publive-image

  • ಅಪರಿಚಿತ ವ್ಯಕ್ತಿಗಳ ಮೇಲೆ ನಂಬಿಕೆ ಇಟ್ಟರೆ ತೊಂದರೆಯಾಗಬಹುದು
  • ದುಬಾರಿ ವಸ್ತುಗಳ ಖರೀದಿಗೆ ಅವಕಾಶ ಒದಗಿ ಬರಲಿದೆ
  • ಮಗಳ ಮದುವೆಯ ವಿಚಾರದಲ್ಲಿ ಅಡ್ಡಿಗಳಿದ್ದರೆ ಈ ದಿನ ಸಮಸ್ಯೆ ದೂರವಾಗುವ ಸಾಧ್ಯತೆಗಳಿವೆ
  • ನಿಮ್ಮ ಆದಾಯ ಹೆಚ್ಚಾಗುವ ಸೂಚನೆಗಳಿವೆ
  • ಬೇರೆಯವರಿಗಾಗಿ ತೋರಿಕೆಯ ಕೆಲಸವನ್ನು ಮಾಡಬೇಡಿ
  • ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದಿರಿ
  • ಮೂಳೆ ಅಥವಾ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಾಣಬಹುದು ಜಾಗ್ರತೆ
  • ನೀವು ಕೂಡಾ ಬೇಡದಿರುವ ಅಪವಾದಗಳಿಗೆ ಒಳಗಾಗುತ್ತೀರಿ
  • ನಿಮ್ಮ ಗುರುಗಳನ್ನು ಸ್ಮರಿಸಿ

ಸಿಂಹ

publive-image

  • ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಶುಭದಾಯಕವಾಗಿರುವುದಿಲ್ಲ
  • ಹಲವಾರು ಜಟಿಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
  • ಸಾಮಾಜಿಕ ಮಟ್ಟದಲ್ಲಿ ನಿಮ್ಮ ಗೌರವ, ಪ್ರತಿಷ್ಠೆಗಳು ಹೆಚ್ಚಾಗಬಹುದು
  • ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚು ಮಹತ್ವ ಪಡೆಯುವ ಸಾಧ್ಯತೆ
  • ತುಂಬಾ ದಿನದಿಂದ ಸಮಸ್ಯೆಯಾಗಿಯೇ ಉಳಿದಿದ್ದ ಒಂದು ವ್ಯವಹಾರ ಇಂದು ಸುಖಾಂತ್ಯಗೊಳ್ಳಲಿದೆ
  • ಕುಟುಂಬದವರೊಡನೆ ಸಂತೋಷವನ್ನು ಹಂಚಿಕೊಳ್ಳಲು ಅವಕಾಶಗಳಿವೆ
  • ಈ ದಿನ ದಂಪತಿಗಳಿಗೆ ಸುಖಸಮಯ
  • ಭವಿಷ್ಯದ ಬಗ್ಗೆ ಯಾವ ಚಿಂತೆಯನ್ನು ಮಾಡಬೇಡಿ
  • ಶನೈಶ್ವರನನ್ನು ಪೂಜಿಸಿ

ಕನ್ಯಾ

publive-image

  • ಮಾತಿನಲ್ಲಿ ನಮ್ರತೆಯಿರಲಿ, ನಿಮ್ಮ ಮಾತು ಗೌರವವನ್ನು ಹೆಚ್ಚಿಸಲಿದೆ
  • ಕುಟುಂಬದಲ್ಲಿ ಮಂಗಳ ಕಾರ್ಯದ ವಿಚಾರವನ್ನು ಪ್ರಸ್ತಾಪ ಮಾಡುತ್ತೀರಿ
  • ಈ ದಿನ ತಾಳ್ಮೆ ಇದ್ದರೆ ಒಳ್ಳೆಯದು
  • ದೂರದ ಸಂಬಂಧಿಕರು ನಿಮ್ಮ ಜೊತೆಯಲ್ಲಿರುತ್ತಾರೆ
  • ದೂರದಿಂದ ಶುಭ ಸುದ್ಧಿಯು ಬರುವಂತಹ ಸಾಧ್ಯತೆ
  • ವಾಹನ ಕಳುವಾಗಬಹುದು ಎಚ್ಚರಿಕೆವಹಿಸಿ
  • ಜೌದುಂಬರ ವೃಕ್ಷವನ್ನು ದರ್ಶನ ಮಾಡಿ

ತುಲಾ

publive-image

  • ನಿಮ್ಮ ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಬಹುದು
  • ನಿರೀಕ್ಷಿತ ಸಾಧನೆ ಮಾಡಲು ಆಗಲಿಲ್ಲವೆಂದು ಬೇಸರವಾಗಬಹುದು
  • ಸಾಲದ ವಿಚಾರವಾಗಿ ಒಳ್ಳೆಯ ವಾತಾವರಣ ಇರುವುದಿಲ್ಲ
  • ಕುಟುಂಬದಲ್ಲಿಯೂ ಅಸಮಾಧಾನ ವಾತಾವರಣ ಉಂಟಾಗಬಹುದು
  • ಕೆಲಸವನ್ನು ನಿರ್ಧಾರ ಮಾಡಬೇಕಾದರೆ ಬಹಳ ಯೋಚನೆ ಮಾಡಿ
  • ದಕ್ಷಿಣಾಮೂರ್ತಿಯನ್ನು ಸ್ಮರಿಸಿ

ವೃಶ್ಚಿಕ

publive-image

  • ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆವಹಿಸಿ
  • ಇಂದು ನಿಮಗೆ ಬೇಸರದ ದಿನವಾಗಿರುತ್ತದೆ
  • ತಾಳ್ಮೆಯನ್ನು ಕಳೆದುಕೊಳ್ಳಬೇಡಿ
  • ಮನೆ ಕಟ್ಟುವ ವಿಚಾರ ಮುಂದೂಡಬಹುದು
  • ಗಂಡ ಹೆಂಡತಿಯ ನಡುವೆ ವೈಮನಸ್ಯ ಉಂಟಾಗಬಹುದು
  • ಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಾಡಿಸಿ

ಧನಸ್ಸು

publive-image

  • ಕೋರ್ಟ್ ವಿಚಾರಗಳು ಬಗೆಹರಿಯಲಿದೆ
  • ನಿಮ್ಮ ಹಳೆಯ ಖಾಯಿಲೆಯಿಂದ ಮುಕ್ತರಾಗುತ್ತೀರಿ
  • ಇಂದು ಹೊಸ ವಾಹನ ಖರೀದಿಗೆ ಅವಕಾಶವಿದೆ
  • ಪ್ರೀತಿ ಪ್ರೇಮ ವಿಚಾರದಲ್ಲಿ ತುಂಬಾ ಭಾವುಕರಾಗಿ ನೋವನ್ನು ಅನುಭವಿಸುತ್ತೀರಿ
  • ಇಂದು ಪ್ರಯಾಣವು ಅಷ್ಟು ಶುಭಕರವಾಗಿರುವುದಿಲ್ಲ
  • ಮಾನಸಿಕ ಒತ್ತಡದಿಂದ ಹೊರಬಂದ್ರೆ ನಿಮ್ಮ ಸಮಸ್ಯೆ ದೂರವಾಗಬಹುದು
  • ಕುಲದೇವರನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ದಿನದ ಕೊನೆಯಲ್ಲಿ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಒದಗಿ ಬರಬಹುದು
  • ಈ ರಾಶಿಯ ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಜಾಗ್ರತೆವಹಿಸಿ
  • ಈ ದಿವಸ ಆಸ್ತಿ ನಷ್ಟವಾಗಬಹುದು
  • ಕಹಿ ಸನ್ನಿವೇಶಗಳು ಸಂಬಂಧಿಕರಲ್ಲಿ ಕಾಣಬಹುದು
  • ನಿಮ್ಮ ಮಾತುಗಳಲ್ಲಿ ಮೃದುತ್ವ ಇರಲಿ
  • ಬಂಧುಗಳು ಹಳೆ ವಿಷಯವನ್ನು ಮಾತಾಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು
  • ಆತಂಕ, ಕೋಪಗಳ ಮಧ್ಯೆ ಮನಸ್ಸನ್ನು ಶಾಂತ ಮಾಡಿಕೊಂಡು ಧ್ಯಾನಕ್ಕೆ ಶರಣು ಹೋಗಿ
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಈ ದಿನ ಸ್ವಲ್ಪ ಮನಸ್ಸಿಗೆ ಸಮಾಧಾನ ಸಿಗಲಿದೆ
  • ವೃತ್ತಿಗೆ, ನೌಕರಿಗೆ ಸಂಬಂಧಿಸಿದಂತೆ ಬೇರೆ ಬೇರೆ ಆಲೋಚನೆಗಳು ಬರಬಹುದು
  • ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ
  • ಮಕ್ಕಳ ವಿದ್ಯಾಭ್ಯಾಸಕ್ಕೆ, ಬೇರೆ ಚಟುವಟಿಕೆಗಳಿಗೆ ಹಣವನ್ನು ಒದಗಿಸಬೇಕಾಗಬಹುದು
  • ಕೂಡಿಟ್ಟಿದ್ದ ಹಣದ ಪ್ರಸ್ತಾಪ ಮಾಡಿ ನಿಷ್ಠೂರವಾಗುವ ಸಾಧ್ಯತೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ಮೀನ 

publive-image

  • ಹೆಚ್ಚು ಅನುಭವಿಗಳ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡಲು ಅವಕಾಶ ಸಿಗುತ್ತದೆ
  • ಮನೆಯಲ್ಲಿ ಪೂಜೆ, ಹೋಮ, ಧಾರ್ಮಿಕ ಕಾರ್ಯಗಳನ್ನು ಮಾಡುವ ಬಗ್ಗೆ ಚರ್ಚೆ ನಡೆಸುತ್ತೀರಿ
  • ಸ್ನೇಹಿತರಿಗೆ, ಬಂಧುಗಳಿಗೆ ಉತ್ತಮ ಭೋಜನವನ್ನು ಏರ್ಪಾಟು ಮಾಡಬೇಕೆಂಬ ಆಸೆ ನಿಮ್ಮದಾಗಿರುತ್ತದೆ
  • ಆಹಾರದ ಅಗತ್ಯವಿರುವವರಿಗೆ ಅನ್ನದಾನವನ್ನು ಮಾಡಿ
  • ವ್ಯಾವಹಾರಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಬಂಧ ಕೆಡಬಹುದು ಸರಿಯಾಗಿ ನಿಭಾಯಿಸುವುದು ಒಳ್ಳೆಯದು
  • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment