/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರ ವರೆಗೆ ಇರಲಿದೆ.
ಮೇಷ ರಾಶಿ
- ಕುಟುಂಬದ ವಾತಾವರಣವು ಬಹಳ ಚೆನ್ನಾಗಿರುತ್ತದೆ
- ನಿಮ್ಮ ಸ್ವಭಾವ ಶಾಂತವಾಗಿದ್ದರೆ ಒಳ್ಳೆಯದು
- ಮಾನಸಿಕ ಸಂತೋಷಕ್ಕೆ ಬೆಲೆ ಕಟ್ಟಲಾಗುವುದಿಲ್ಲ
- ಅಕಸ್ಮಾತ್ತಾಗಿ ಸಾಧುಗಳ ಅಥವಾ ಯೋಗಿಗಳ ದರ್ಶನವಾಗಬಹುದು
- ಆಕಸ್ಮಿಕವಾಗಿ ಸ್ನೇಹಿತರನ್ನ ಭೇಟಿ ಮಾಡುವ ಸಾಧ್ಯತೆಗಳಿವೆ
- ಪ್ರೇಮಿಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ
- ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುವಂತಹ ಅವಕಾಶಗಳಿವೆ
- ಮಹಾವಿಷ್ಣುವನ್ನು ಪ್ರಾರ್ಥಿಸಿ
ವೃಷಭ
- ಅಪರಿಚಿತ ವ್ಯಕ್ತಿಯು ನಿಮಗೆ ಮೋಸಮಾಡಲು ಕಾಯ್ತಾ ಇರುತ್ತಾರೆ ಎಚ್ಚರಿಕೆ
- ಹೊಸ ವ್ಯಾಪಾರ, ವ್ಯವಹಾರ,ವಿಚಾರಗಳು ಮನಸ್ಸಿಗೆ ಉತ್ಸಾಹ ತರಲಿದೆ
- ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
- ಮನೆಯಲ್ಲಿ ಸ್ತ್ರೀಯರು ಮೋಸಕ್ಕೆ, ವಂಚನೆಗೆ ಒಳಗಾಗುವ ಸಂದರ್ಭಗಳು ಏರ್ಪಡುತ್ತದೆ ಜಾಗ್ರತೆ
- ಕೆಲವರ ಮಾತಿನಿಂದ ನಿಮ್ಮ ಜೀವನದಲ್ಲಿ ಪರಿವರ್ತನೆಯಾಗಲಿದೆ
- ನಿಮಗೆ ಹೊಟ್ಟೆನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆ
- ಮನೆಯಲ್ಲಿ ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಜಾಗ್ರತೆವಹಿಸಿ
- ಕುಲದೇವತಾ ಪ್ರಾರ್ಥನೆ ಮಾಡಿ
ಮಿಥುನ
- ನಿಮ್ಮ ಜೀವನದ ಶೈಲಿ, ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗಬಹುದು
- ವಿದ್ಯಾರ್ಥಿಗಳು ತಮ್ಮ ವಿದ್ಯೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ದಿನವಾಗಿರುತ್ತದೆ
- ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
- ಸಂಬಂಧಿಕರು, ಸ್ನೇಹಿತರು ತಮ್ಮ ಮನೆಗೆ ಬರಬಹುದು ಇದರಿಂದ ಮನಸ್ಸಿಗೆ ಸಮಾಧಾನವಾಗಲಿದೆ
- ಸಾಕು ಪ್ರಾಣಿಗಳ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು ಚಿಕಿತ್ಸೆ ಕೊಡಿಸಿ
- ಕುಟುಂಬದವರಿಗೆ, ಸಂಬಂಧಿಕರಿಗೆ ನಿಮ್ಮ ಆರೋಗ್ಯದ ವಿಚಾರದಲ್ಲಿ ತುಂಬಾ ಆತಂಕ ಉಂಟಾಗಬಹುದು
- ಬಲವಂತವಾಗಿ ಮಾಡಿದ ಕೆಲಸಗಳಿಂದ ಯಶಸ್ಸಿರುವುದಿಲ್ಲ
- ಸಹೋದ್ಯೋಗಿಗಳು, ಅಕ್ಕ ಪಕ್ಕದವರು ನಿಮಗೆ ಸಮಾಧಾನ ಹೇಳುವಂತಹ ಕೆಲಸ ಮಾಡುತ್ತಾರೆ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಕಟಕ
- ಅಪರಿಚಿತ ವ್ಯಕ್ತಿಗಳ ಮೇಲೆ ನಂಬಿಕೆ ಇಟ್ಟರೆ ತೊಂದರೆಯಾಗಬಹುದು
- ದುಬಾರಿ ವಸ್ತುಗಳ ಖರೀದಿಗೆ ಅವಕಾಶ ಒದಗಿ ಬರಲಿದೆ
- ಮಗಳ ಮದುವೆಯ ವಿಚಾರದಲ್ಲಿ ಅಡ್ಡಿಗಳಿದ್ದರೆ ಈ ದಿನ ಸಮಸ್ಯೆ ದೂರವಾಗುವ ಸಾಧ್ಯತೆಗಳಿವೆ
- ನಿಮ್ಮ ಆದಾಯ ಹೆಚ್ಚಾಗುವ ಸೂಚನೆಗಳಿವೆ
- ಬೇರೆಯವರಿಗಾಗಿ ತೋರಿಕೆಯ ಕೆಲಸವನ್ನು ಮಾಡಬೇಡಿ
- ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದಿರಿ
- ಮೂಳೆ ಅಥವಾ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಾಣಬಹುದು ಜಾಗ್ರತೆ
- ನೀವು ಕೂಡಾ ಬೇಡದಿರುವ ಅಪವಾದಗಳಿಗೆ ಒಳಗಾಗುತ್ತೀರಿ
- ನಿಮ್ಮ ಗುರುಗಳನ್ನು ಸ್ಮರಿಸಿ
ಸಿಂಹ
- ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಶುಭದಾಯಕವಾಗಿರುವುದಿಲ್ಲ
- ಹಲವಾರು ಜಟಿಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
- ಸಾಮಾಜಿಕ ಮಟ್ಟದಲ್ಲಿ ನಿಮ್ಮ ಗೌರವ, ಪ್ರತಿಷ್ಠೆಗಳು ಹೆಚ್ಚಾಗಬಹುದು
- ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚು ಮಹತ್ವ ಪಡೆಯುವ ಸಾಧ್ಯತೆ
- ತುಂಬಾ ದಿನದಿಂದ ಸಮಸ್ಯೆಯಾಗಿಯೇ ಉಳಿದಿದ್ದ ಒಂದು ವ್ಯವಹಾರ ಇಂದು ಸುಖಾಂತ್ಯಗೊಳ್ಳಲಿದೆ
- ಕುಟುಂಬದವರೊಡನೆ ಸಂತೋಷವನ್ನು ಹಂಚಿಕೊಳ್ಳಲು ಅವಕಾಶಗಳಿವೆ
- ಈ ದಿನ ದಂಪತಿಗಳಿಗೆ ಸುಖಸಮಯ
- ಭವಿಷ್ಯದ ಬಗ್ಗೆ ಯಾವ ಚಿಂತೆಯನ್ನು ಮಾಡಬೇಡಿ
- ಶನೈಶ್ವರನನ್ನು ಪೂಜಿಸಿ
ಕನ್ಯಾ
- ಮಾತಿನಲ್ಲಿ ನಮ್ರತೆಯಿರಲಿ, ನಿಮ್ಮ ಮಾತು ಗೌರವವನ್ನು ಹೆಚ್ಚಿಸಲಿದೆ
- ಕುಟುಂಬದಲ್ಲಿ ಮಂಗಳ ಕಾರ್ಯದ ವಿಚಾರವನ್ನು ಪ್ರಸ್ತಾಪ ಮಾಡುತ್ತೀರಿ
- ಈ ದಿನ ತಾಳ್ಮೆ ಇದ್ದರೆ ಒಳ್ಳೆಯದು
- ದೂರದ ಸಂಬಂಧಿಕರು ನಿಮ್ಮ ಜೊತೆಯಲ್ಲಿರುತ್ತಾರೆ
- ದೂರದಿಂದ ಶುಭ ಸುದ್ಧಿಯು ಬರುವಂತಹ ಸಾಧ್ಯತೆ
- ವಾಹನ ಕಳುವಾಗಬಹುದು ಎಚ್ಚರಿಕೆವಹಿಸಿ
- ಜೌದುಂಬರ ವೃಕ್ಷವನ್ನು ದರ್ಶನ ಮಾಡಿ
ತುಲಾ
- ನಿಮ್ಮ ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಬಹುದು
- ನಿರೀಕ್ಷಿತ ಸಾಧನೆ ಮಾಡಲು ಆಗಲಿಲ್ಲವೆಂದು ಬೇಸರವಾಗಬಹುದು
- ಸಾಲದ ವಿಚಾರವಾಗಿ ಒಳ್ಳೆಯ ವಾತಾವರಣ ಇರುವುದಿಲ್ಲ
- ಕುಟುಂಬದಲ್ಲಿಯೂ ಅಸಮಾಧಾನ ವಾತಾವರಣ ಉಂಟಾಗಬಹುದು
- ಕೆಲಸವನ್ನು ನಿರ್ಧಾರ ಮಾಡಬೇಕಾದರೆ ಬಹಳ ಯೋಚನೆ ಮಾಡಿ
- ದಕ್ಷಿಣಾಮೂರ್ತಿಯನ್ನು ಸ್ಮರಿಸಿ
ವೃಶ್ಚಿಕ
- ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆವಹಿಸಿ
- ಇಂದು ನಿಮಗೆ ಬೇಸರದ ದಿನವಾಗಿರುತ್ತದೆ
- ತಾಳ್ಮೆಯನ್ನು ಕಳೆದುಕೊಳ್ಳಬೇಡಿ
- ಮನೆ ಕಟ್ಟುವ ವಿಚಾರ ಮುಂದೂಡಬಹುದು
- ಗಂಡ ಹೆಂಡತಿಯ ನಡುವೆ ವೈಮನಸ್ಯ ಉಂಟಾಗಬಹುದು
- ಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಾಡಿಸಿ
ಧನಸ್ಸು
- ಕೋರ್ಟ್ ವಿಚಾರಗಳು ಬಗೆಹರಿಯಲಿದೆ
- ನಿಮ್ಮ ಹಳೆಯ ಖಾಯಿಲೆಯಿಂದ ಮುಕ್ತರಾಗುತ್ತೀರಿ
- ಇಂದು ಹೊಸ ವಾಹನ ಖರೀದಿಗೆ ಅವಕಾಶವಿದೆ
- ಪ್ರೀತಿ ಪ್ರೇಮ ವಿಚಾರದಲ್ಲಿ ತುಂಬಾ ಭಾವುಕರಾಗಿ ನೋವನ್ನು ಅನುಭವಿಸುತ್ತೀರಿ
- ಇಂದು ಪ್ರಯಾಣವು ಅಷ್ಟು ಶುಭಕರವಾಗಿರುವುದಿಲ್ಲ
- ಮಾನಸಿಕ ಒತ್ತಡದಿಂದ ಹೊರಬಂದ್ರೆ ನಿಮ್ಮ ಸಮಸ್ಯೆ ದೂರವಾಗಬಹುದು
- ಕುಲದೇವರನ್ನು ಪ್ರಾರ್ಥನೆ ಮಾಡಿ
ಮಕರ
- ದಿನದ ಕೊನೆಯಲ್ಲಿ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಒದಗಿ ಬರಬಹುದು
- ಈ ರಾಶಿಯ ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಜಾಗ್ರತೆವಹಿಸಿ
- ಈ ದಿವಸ ಆಸ್ತಿ ನಷ್ಟವಾಗಬಹುದು
- ಕಹಿ ಸನ್ನಿವೇಶಗಳು ಸಂಬಂಧಿಕರಲ್ಲಿ ಕಾಣಬಹುದು
- ನಿಮ್ಮ ಮಾತುಗಳಲ್ಲಿ ಮೃದುತ್ವ ಇರಲಿ
- ಬಂಧುಗಳು ಹಳೆ ವಿಷಯವನ್ನು ಮಾತಾಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು
- ಆತಂಕ, ಕೋಪಗಳ ಮಧ್ಯೆ ಮನಸ್ಸನ್ನು ಶಾಂತ ಮಾಡಿಕೊಂಡು ಧ್ಯಾನಕ್ಕೆ ಶರಣು ಹೋಗಿ
- ಈಶ್ವರನನ್ನು ಪ್ರಾರ್ಥನೆ ಮಾಡಿ
ಕುಂಭ
- ಈ ದಿನ ಸ್ವಲ್ಪ ಮನಸ್ಸಿಗೆ ಸಮಾಧಾನ ಸಿಗಲಿದೆ
- ವೃತ್ತಿಗೆ, ನೌಕರಿಗೆ ಸಂಬಂಧಿಸಿದಂತೆ ಬೇರೆ ಬೇರೆ ಆಲೋಚನೆಗಳು ಬರಬಹುದು
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ
- ಮಕ್ಕಳ ವಿದ್ಯಾಭ್ಯಾಸಕ್ಕೆ, ಬೇರೆ ಚಟುವಟಿಕೆಗಳಿಗೆ ಹಣವನ್ನು ಒದಗಿಸಬೇಕಾಗಬಹುದು
- ಕೂಡಿಟ್ಟಿದ್ದ ಹಣದ ಪ್ರಸ್ತಾಪ ಮಾಡಿ ನಿಷ್ಠೂರವಾಗುವ ಸಾಧ್ಯತೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಮೀನ
- ಹೆಚ್ಚು ಅನುಭವಿಗಳ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡಲು ಅವಕಾಶ ಸಿಗುತ್ತದೆ
- ಮನೆಯಲ್ಲಿ ಪೂಜೆ, ಹೋಮ, ಧಾರ್ಮಿಕ ಕಾರ್ಯಗಳನ್ನು ಮಾಡುವ ಬಗ್ಗೆ ಚರ್ಚೆ ನಡೆಸುತ್ತೀರಿ
- ಸ್ನೇಹಿತರಿಗೆ, ಬಂಧುಗಳಿಗೆ ಉತ್ತಮ ಭೋಜನವನ್ನು ಏರ್ಪಾಟು ಮಾಡಬೇಕೆಂಬ ಆಸೆ ನಿಮ್ಮದಾಗಿರುತ್ತದೆ
- ಆಹಾರದ ಅಗತ್ಯವಿರುವವರಿಗೆ ಅನ್ನದಾನವನ್ನು ಮಾಡಿ
- ವ್ಯಾವಹಾರಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಬಂಧ ಕೆಡಬಹುದು ಸರಿಯಾಗಿ ನಿಭಾಯಿಸುವುದು ಒಳ್ಳೆಯದು
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ