/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ನಿದ್ದೆ ಮತ್ತು ಆಹಾರದಿಂದ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು
- ಮಾನಸಿಕ ಮತ್ತು ಕೆಲಸದ ಒತ್ತಡಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
- ಕಣ್ಣು ಮತ್ತು ಕಿವಿಗೆ ಹಾನಿಯಾಗುವ ಸೂಚನೆಗಳಿವೆ ಎಚ್ಚರಿಕೆ
- ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಗಮನವಿರಲಿ
- ಬಂಧುತ್ವದಲ್ಲಿ ಬಿರುಕು, ವಿನಾಕಾರಣ ಮಾತಿನ ಸುರಿಮಳೆ, ಮನಸ್ಸಿಗೆ ಬೇಸರ
- ನಿಮ್ಮ ಆರೋಗ್ಯ ಚೆನ್ನಾಗಿರಲಿದೆ
- ವೈದ್ಯರಿಗೆ ಬಿಡುವಿಲ್ಲದ ಕೆಲಸ ತುಂಬಾ ಆಯಾಸ ಹೊಂದಬಹುದು
- ಈ ದಿನ ಮನೆಯಲ್ಲಿರುವುದು ಕಷ್ಟ ಆಗಬಹುದು
- ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ
ವೃಷಭ
- ಹೆಚ್ಚು ಹೆಚ್ಚು ಖರ್ಚನ್ನು ನೋಡಿ ನಿರಾಶೆಯಾಗಬಹುದು
- ಅನಗತ್ಯ ವಿಚಾರಗಳಿಗಾಗಿ ಚಿಂತಿಸಿ ಬೇಸರಗೊಳ್ಳುತ್ತೀರಿ
- ನಿಮಗೆ ಸಂಬಂಧ ಪಡದೆಯಿರುವ ವಿಚಾರಗಳಿಂದ ದೂರವಿದ್ದರೆ ಒಳ್ಳೆಯದು
- ಕೆಲಸಗಾರರಿಂದ ತೊಂದರೆಯಾಗಬಹುದು ಆದರೆ ಗಾಬರಿ ಬೇಡ
- ನಿಮ್ಮ ಸಂಶೋಧನೆ ಮತ್ತು ಸಾಧನೆ ಸಮಾಜದಲ್ಲಿ ಆಕರ್ಷಣೀಯವಾಗಿರುತ್ತದೆ
- ಅತಿಯಾದ ನಂಬಿಕೆ ವಿಶ್ವಾಸ ನಿಮಗೆ ತೊಂದರೆ ಮಾಡಬಹುದು
- ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ
ಮಿಥುನ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ, ಮಾನಸಿಕವಾಗಿ ಬೇಸರ ಬೇಡ
- ನಿಮ್ಮ ಅಭಿವೃದ್ಧಿಯನ್ನು, ಬೆಳವಣಿಗೆಯನ್ನ ಸಹಿಸದವರು ನಿಮ್ಮ ವಿರುದ್ಧ ನಿಲ್ಲುತ್ತಾರೆ ಎಚ್ಚರ
- ಪರೀಕ್ಷಾ ಫಲಿತಾಂಶಗಳು ಬರುವುದಿದ್ದರೆ ನಿಮ್ಮ ಪರವಾಗಬಹುದು
- ಕೋರ್ಟ್,​ ಕಚೇರಿಯ ಹಳೆಯ ಕೇಸ್​ಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ
- ಸಮಾಜದಲ್ಲಿ ಹೆಸರು ಕೆಡುವಂತಹ ಸಂದರ್ಭಗಳೇ ಹೆಚ್ಚಾಗಿವೆ ಜಾಗ್ರತೆಯಿರಲಿ
- ಕೆಲಸದ ಒತ್ತಡದಿಂದಾಗಿ ಕಚೇರಿಯಲ್ಲಿ ಅನಿವಾರ್ಯವಾಗಿ ಇರಬೇಕಾಗಬಹುದು
- ಪರಮೇಶ್ವರಿಯನ್ನು ಆರಾಧಿಸಿ
ಕಟಕ
- ಪತಿ-ಪತ್ನಿಯರ ಮಧ್ಯೆ ವಿರಸ ದೂರವಾಗಿ ಅನ್ಯೋನ್ಯವಾಗಿರುವ ಸಮಯ
- ಹಣ ಹೂಡಿಕೆಗೆ ಮಾತುಕತೆ ನಡೆಯಬಹುದು
- ಹೊಸ ವಾಹನ ಖರೀದಿ ಮಾಡುವ ಸಾಧ್ಯತೆಯಿದೆ
- ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ಸಾಧ್ಯತೆ, ಹೂಡಿಕೆ ಮುಂದೂಡಿದರೆ ಒಳ್ಳೆಯದು
- ಮನೆಯಲ್ಲಿ ಕಳ್ಳತನದ ಹೆದರಿಕೆ ಕಾಡಬಹುದು ಎಚ್ಚರಿಕೆವಹಿಸಿ
- ಸುಖವಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
- ಮಾನಸಿಕ ಕಿರಿಕಿರಿಯೊಂದಿಗೆ ದಿನ ಮುಕ್ತಾಯವಾಗುತ್ತದೆ
- ಅಶ್ವಿನಿ ದೇವತೆಗಳನ್ನು ಆರಾಧಿಸಿ
ಸಿಂಹ
- ಆಯಸ್ಸು ಮತ್ತು ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಬಾರದು
- ಪ್ರೀತಿ ಪಾತ್ರರ ಜೊತೆಯಲ್ಲಿ ಕಾಲ ಕಳೆಯಲು ಹೋಗಿ ಅವಮಾನವಾಗಬಹುದು ಜಾಗ್ರತೆ
- ಈ ಹಿಂದೆ ಆಪರೇಶನ್​ ಆಗಿರುವವರಿಗೆ ಸ್ವಲ್ಪ ಸಮಸ್ಯೆ ಕಾಡಬಹುದು, ಜಾಗ್ರತೆಯಿರಲಿ
- ವಿದ್ಯಾರ್ಥಿಗಳು ತಮ್ಮ ಗುರಿಯನ್ನ ತಲುಪುವ ವಿಚಾರದಲ್ಲಿ ಹೆಚ್ಚು ಗಮನಹರಿಸಿ
- ಮಕ್ಕಳಿಗೆ ಉಸಿರಾಟದ ಅಥವಾ ಶ್ವಾಸಕೋಶದ ಸಮಸ್ಯೆ ಕಾಣಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
- ಅತಿಯಾದ ಉತ್ಸಾಹ, ಆತುರದಿಂದ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ
- ಶಾರೀರಿಕವಾಗಿ ಸುಖವಿರುವುದಿಲ್ಲ, ನರದೌರ್ಬಲ್ಯ ಕಾಡಬಹುದು
- ಹೊಸ ಸಂಬಂಧಗಳಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು
- ಕುಟುಂಬದವರ ಸಹಮತದಿಂದ ನೀವು ಪಾರಾಗಬಹುದು
- ಪೋಷಕರಿಗೆ ದುಃಖದಾಯಕವಾದ ದಿನ, ದೊಡ್ಡವರ ವಿಚಾರದಲ್ಲಿ ಕಾಳಜಿವಹಿಸಿ
- ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ಇರಲಿ
- ನಿಮ್ಮದಲ್ಲದ ತಪ್ಪಿಗೆ ನೀವು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ
- ಈಶ್ವರಾರಾಧನೆ ಮಾಡಿ, ಗೋವಿಗೆ ಅಕ್ಕಿಬೆಲ್ಲ ಕೊಡಿ
ತುಲಾ
- ರಾಜಕಾರಣಿಗಳು ತಮ್ಮ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರಿಕೆಯಿರಲಿ
- ಪ್ರಯಾಣ, ಪ್ರವಾಸದ ಬಗ್ಗೆ ಚರ್ಚೆ ನಡೆದು ಕೊನೆಗೆ ಬೇಡವೆಂದು ಬೇಸರವಾಗಬಹುದು
- ಸಂಬಂಧಿಕರಿಂದ ಧನಲಾಭ, ದ್ರವ್ಯಲಾಭ ಯೋಗವಿದೆ
- ಕೆಲಸದ ಜಾಗದಲ್ಲಿ, ವೃತ್ತಿಯಲ್ಲಿ ಋಣಾತ್ಮಕ ವಾತಾವರಣ
- ಈ ದಿನ ಮಾನಸಿಕ ಬೇಸರ ಸಾಧ್ಯತೆ
- ಪ್ರೇಮ ಸಂಬಂಧ ವಿಚಾರದಲ್ಲಿ ಜಗಳ, ವಿರಸ ಸಾಧ್ಯತೆ
- ಮಾತೆ ಸೀತೆಯನ್ನು ಆರಾಧನೆ ಮಾಡಿ
ವೃಶ್ಚಿಕ
- ಕಹಿ ಮಾತುಗಳಿಂದ ಮನಸ್ಸಿನ ಮೇಲೆ ಪರಿಣಾಮ ಸಾಧ್ಯತೆ ಹಗುರವಾಗಿ ತೆಗೆದುಕೊಳ್ಳಿ
- ಮಕ್ಕಳ ಮಾತು ಈ ದಿನ ನಿಮ್ಮ ಶುಭಫಲ ನೀಡಬಹುದು ತಾತ್ಸಾರ ಮಾಡಬೇಡಿ
- ರಾಜಕಾರಣಿಗಳಿಂದ ಭಯ ಕಾಡಬಹುದು, ಅಗತ್ಯವಾಗಿ ರಾಜಿಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು
- ನಿಮಗಿಂತ ಬಲಶಾಲಿಗಳೊಂದಿಗೆ ಸ್ಪರ್ಧೆ, ವಾಗ್ವಾದಗಳು ಬೇಡ
- ಸಿಟ್ಟಿಗೆ ಯಾವುದೇ ಕಾರಣಕ್ಕೂ ಬುದ್ಧಿ ಕೊಡಬಾರದು
- ಈಶ್ವರನನ್ನು ಆರಾಧನೆ ಮಾಡಿ
ಧನಸ್ಸು
- ಪ್ರಯಾಣ ಅಥವಾ ಪ್ರವಾಸದಿಂದ ಪ್ರಯಾಸವಾಗುವ ಸಾಧ್ಯತೆ ಇದೆ
- ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ದೂರವಿರಿ
- ಮನಸ್ಸಿಗೆ ಬಂದಂತೆ ವರ್ತಿಸಿದ್ರೆ ಅನಾಹುತವಾಗಬಹುದು ಎಚ್ಚರ
- ನಿಮ್ಮ ಕೋಪ ನಿಮ್ಮ ಹಿಡಿತದಲ್ಲಿರಲಿ
- ವಿದ್ಯಾರ್ಥಿಗಳಿಗೆ ವಿರಾಮವಿದ್ದರೂ ಮುಂದಿನ ವಿದ್ಯಾಭ್ಯಾಸ ಬಗ್ಗೆ ಚಿಂತಿಸಿ ಆಯಾಸವಾಗುವ ಸಾಧ್ಯತೆಯಿದೆ
- ಚಾಮುಂಡೇಶ್ವರಿಯನ್ನು ಕೆಂಪು ಹೂವಿನಿಂದ ಆರ್ಚಿಸಿ
ಮಕರ
- ಕಟ್ಟಡ ಸಾಮಾಗ್ರಿಗಳನ್ನು ಮಾರುವವರಿಗೆ, ಕಟ್ಟಡ ಕಾರ್ಯನಿರ್ವಹಣೆ ಮಾಡುವವರಿಗೆ ಶುಭವಿದೆ
- ನೀವು ಕೂಡ ಹೊಸ ಆಸ್ತಿ ಖರೀದಿಯ ಚಿಂತನೆ ಮಾಡಬಹುದು
- ವ್ಯಾಪಾರದಲ್ಲಿ ಅತಿ ಬೇಡಿಕೆ, ಅವಕಾಶಗಳು ನಿಮ್ಮದಾಗುವ ಸಾಧ್ಯತೆಯಿದೆ
- ಜಾಹೀರಾತುದಾರರಿಗೆ ಹಿನ್ನಡೆ, ನಷ್ಟ ಆಗುವ ಸಾಧ್ಯತೆಯಿದೆ
- ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಗುರುತಿಸಿಕೊಂಡಿರುವುದು ತೊಂದರೆಯಾಗಬಹುದು
- ಇಷ್ಟ ದೇವತೆಯನ್ನು ಸ್ಮರಣೆ ಮಾಡಿ
ಕುಂಭ
- ಬಹಳ ಸಂತೋಷವಾಗಿ ಈ ದಿನ ಕಳೆಯಲು ಪ್ಲಾನ್ ಮಾಡಿರುತ್ತೀರಿ
- ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಇರುವವರಿಗೆ ಪುರಸ್ಕಾರ, ಗೌರವ ಸಿಗಬಹುದು
- ಆದರೆ ನಿಮ್ಮ ಮರೆವಿನಿಂದ ನಿಮ್ಮೆಲ್ಲಾ ಕಾರ್ಯಗಳು ಅಸ್ತವ್ಯಸ್ತವಾಗಬಹುದು
- ಆದಾಯದ ಮೂಲಗಳು ನಿಮ್ಮಲಿಗೆ ಹುಡುಕಿಕೊಂಡು ಬರಬಹುದು
- ತ್ರ್ಯಂಬಕರುದ್ರ ಮಂತ್ರ ಜಪ ಮಾಡಿ
ಮೀನ
- ಇಂದು ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ ಏರ್ಪಡಬಹುದು
- ದೀರ್ಘಕಾಲದ ರೋಗಗಳು ಉಲ್ಬಣವಾಗುವ ಸೂಚನೆಯಿದೆ
- ತಾಯಿಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು, ತಾತ್ಸಾರ ಮಾಡಬೇಡಿ
- ಸಾಯಂಕಾಲ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ
- ಮಹಾದೇವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ