ಪ್ರೇಮಿಗಳಿಗೆ ಶುಭದಿನ, ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಎದುರಾಗುತ್ತೆ.. ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಸಮಾಜ ಯಾವುದನ್ನ ಒಪ್ಪುತ್ತೋ ಅದನ್ನ ನಿಮ್ಮ ಮನಸ್ಸು ಒಪ್ಪಲ್ಲ
  • ಕಂಪನಿಗಳಿಂದ ಉತ್ತಮ ಕೆಲಸಗಳಿಗೆ ಆಹ್ವಾನ ಬರಬಹುದು
  • ಮಾತನಾಡುವಾಗ ಒಳ್ಳೆಯ ಭಾಷೆ ನಿಮ್ಮ ಸ್ವಾಧೀನದಲ್ಲಿರಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಅನಗತ್ಯ ಕೆಲಸಗಳಲ್ಲಿ ಮನಸ್ಸು ಆಸಕ್ತಿ ತೋರಿಸುತ್ತದೆ
  • ಈ ದಿನ ತುಂಬಾ ತಾಳ್ಮೆ ಇದ್ದರೆ ಒಳ್ಳೆದು
  • ಸಮಾಜ ಯಾವುದನ್ನ ಒಪ್ಪತ್ತೊ ಅದನ್ನ ನಿಮ್ಮ ಮನಸ್ಸು ಒಪ್ಪುವುದಿಲ್ಲ
  • ಹಣ ಖರ್ಚಾಗಬಾರದು ಎಲ್ಲಾ ಕೆಲಸವಾಗಬೇಕು ಅನ್ನೋ ಮನೋಭಾವ ನಿಮ್ಮಲ್ಲಿ ಹೆಚ್ಚು ಆಳವಾಗಿದೆ
  • ಕೋಪದಿಂದ ಹೋರಾಟ ಮಾಡಿ ಕೊನೆಗೆ ಸೋಲನ್ನು ಅನುಭವಿಸುತ್ತೀರಿ
  • ಮನೆಯಲ್ಲಿಯೂ ಸಣ್ಣ ಪುಟ್ಟ ಸಮಸ್ಯೆಗಳು ಕಾಡಬಹುದು
  • ಸಪ್ತಋಷಿಗಳ ಧ್ಯಾನ ಮಾಡಿ

ವೃಷಭ

publive-image

  • ಹಳೆಯ ಸ್ನೇಹಿತರ ಸಲಹೆ ಕೆಲವು ಸಹಾಯ ಆಗಲಿದೆ
  • ವಿದೇಶಿ ಕಂಪನಿಗಳಿಂದ ಉತ್ತಮವಾದ ಕೆಲಸಗಳಿಗೆ ಆಹ್ವಾನ ಬರಬಹುದು
  • ನಿಮ್ಮ ಸಮಸ್ಯೆಗಳನ್ನು ಬಿಡಿಸಿ ಹೇಳಿ ಪರಿಹಾರ ಕಂಡುಕೊಳ್ಳಬಹುದು
  • ಭೋಗ ಜೀವನ ನಡೆಸುವವರಿಗೆ ಅನ್ನದ ಬೆಲೆ ತಿಳಿಯುವಂತದ್ದು
  • ಪಿತ್ರಾರ್ಜಿತ ಆಸ್ತಿಯ ವಿಚಾರಗಳಿಗೆ ಕೋರ್ಟ್​ ಮೆಟ್ಟಿಲೇರುವ ಸಾಧ್ಯತೆಗಳಿವೆ
  • ಹಲವಾರು ವಾದ-ವಿವಾದಗಳು ಏರ್ಪಾಡಾಗುತ್ತದೆ
  • ಶುಕ್ರಗ್ರಹ ಮಂತ್ರ ಪಠಿಸಿ

ಮಿಥುನ

publive-image

  • ಎರಡನೇ ಮದುವೆ ಆದವರಿಗೆ ತುಂಬಾ ತೊಡಕುಗಳು ಎದುರಾಗುತ್ತದೆ
  • ಹಣದ ಖರ್ಚು, ಮಾನಸಿಕವಾಗಿ ಬೇಸರ ಬಂಧುಗಳಲ್ಲಿ ವಿರಸ ಕಾಡಬಹುದು
  • ವ್ಯಾಪಾರ ವ್ಯವಹಾರಗಳಲ್ಲಿ ಹಣದ ಹೂಡಿಕೆ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಕೆಲವು ವೇಳೆ ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು
  • ಸಾಯಂಕಾಲ ಹೊತ್ತಿಗೆ ವ್ಯವಹಾರದಲ್ಲಿ ಹಿನ್ನಡೆ ಕಾಣುತ್ತದೆ
  • ವ್ಯಾಘ್ರವಾಹನ ಚಾಮುಂಡೇಶ್ವರಿಯನ್ನು ಪೂಜಿಸಿ

ಕಟಕ

publive-image

  • ಕುಟುಂಬದ ಸದಸ್ಯರಾಗಲಿ ಅಥವಾ ಸ್ನೇಹಿತರಾಗಲಿ ಯಾರು ಸಹಾಯ ಮಾಡುವುದಿಲ್ಲ
  • ಮಾತನಾಡುವಾಗ ಒಳ್ಳೆಯ ಭಾಷೆ ನಿಮ್ಮ ಸ್ವಾಧೀನದಲ್ಲಿರಬೇಕು
  • ಜೊತೆಯಲ್ಲಿಯೇ ಇರುವವರಿಗೆ ನಿಮ್ಮ ಕೋಪದಿಂದ ತೊಂದರೆಯಾಗುವ ಸಾಧ್ಯತೆ ಇದೆ
  • ನೀವು ಮಾಡುತ್ತಿರುವ ಕೆಲಸದ ಬಗ್ಗೆ ತೃಪ್ತಿ ಇರುವುದರಿಂದ ಆ ವಿಚಾರವನ್ನು ಕೈ ಬಿಡುವ ಸಾಧ್ಯತೆ ಇದೆ
  • ಕುಟುಂಬದಲ್ಲಿ ಎಲ್ಲಾ ವಿಚಾರಗಳಿಗೂ ಭಿನ್ನಾಭಿಪ್ರಾಯ ಹುಟ್ಟುತ್ತದೆ
  • ಜನರಿಂದ ನಿಮ್ಮ ಭಾವನೆಗಳಿಗೆ ಗೌರವ, ಮನ್ನಣೆ ದೊರೆಯುತ್ತದೆ
  • ಕೆಲಸ ಕಾರ್ಯಗಳಲ್ಲಿ ಭವಿಷ್ಯ ಚೆನ್ನಾಗಿರುತ್ತದೆ
  • ಮುಂಚಿತವಾಗಿ ಸಿದ್ಧಪಡಿಸಿಟ್ಟ ಅಹಾರ ಸೇವನೆಯಿಂದ ತೊಂದರೆಯಾಗಬಹುದು
  • ವೈಷ್ಣವೀ ಮಂತ್ರ ಪಠಣೆ ಮಾಡಿ

ಸಿಂಹ

publive-image

  • ಮುಖ್ಯವಾಗಿ ಗಂಟಲಿನ ಸಮಸ್ಯೆ ಕಾಣಬಹುದು ಜಾಗ್ರತೆವಹಿಸಿ
  • ಅನಗತ್ಯ ವಿವಾದಗಳು ಏರ್ಪಾಟಾಗುತ್ತದೆ
  • ಈ ದಿನ ಸಿಟ್ಟು ತಾರಕಕ್ಕೆ ಏರಬಹುದು
  • ನಿಮ್ಮ ಆಸೆ ಮತ್ತು ಶಿಸ್ತನ್ನು ಬೇರೆಯವರ ಮೇಲೆ ಹೇರಿಕೆ ಮಾಡಬಾರದು
  • ಈಜು ಪಟುಗಳಿಗೆ ಗಾಯವಾಗುವ ಸೂಚನೆಗಳಿವೆ ನಿಗಾವಹಿಸಿ
  • ಆದರೆ ಮಾತಿನಿಂದ ನಿಮ್ಮ ಗೌರವ ಹೆಚ್ಚಾಗಬಹುದು
  • ನ್ಯಾಯ ಸಮ್ಮತವಾದ ವಿಚಾರಕ್ಕೆ ಅಡ್ಡಿಯಾಗಿ ಕೋಪ ಬರುವ ಸಾಧ್ಯತೆ ಇದೆ
  • ದಕ್ಷಿಣ ಕಾಳಿಯನ್ನು ನೀಲಿ ಹೂಗಳಿಂದ ಅರ್ಚಿಸಿ

ಕನ್ಯಾ

publive-image

  • ಖರೀದಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ
  • ಜನರೊಂದಿಗೆ ನೀವು ವರ್ತಿಸುವ ರೀತಿ ನಾಟಕೀಯದಂತೆ ಕಾಣತ್ತೆ ಸ್ವಾಭಾವಿಕವಾಗಿ ಇರಲು ಪ್ರಯತ್ನಿಸಿ
  • ಹಣ ಉಳಿಸುವುದಕ್ಕೆ ತುಂಬಾ ಹೋರಾಟ ಮಾಡಿ ವಿಫಲರಾಗುತ್ತೀರಿ
  • ಹಿರಿಯರ ಬೆಂಬಲ ನಿಮಗೆ ಹಲವಾರು ರೀತಿಯಲ್ಲಿ ಅನುಕೂಲತೆಯಾಗುವ ಸೂಚನೆ ತೋರಿಸುತ್ತದೆ
  • ವೈಶ್ರವಣ ಮಂತ್ರವನ್ನು 108 ಬಾರಿ ಪಠಿಸಿ

ತುಲಾ

publive-image

  • ಧಾರ್ಮಿಕ ಕ್ಷೇತ್ರಗಳ ವಿಚಾರವಾಗಿ ಅಸಭ್ಯವಾಗಿ ವರ್ತಿಸಿ ಸಿಕ್ಕಿಹಾಕಿಕೊಳ್ಳುತ್ತೀರಿ
  • ಅನೇಕ ಕೆಲಸಗಳು ನಿಮ್ಮ ಜವಾಬ್ದಾರಿಯಿಂದ ಬೇಗ ಪೂರ್ಣಗೊಳ್ಳುತ್ತವೆ
  • ಶಿಸ್ತುಬದ್ಧವಾದ ಜೀವನ ನಿಮಗೆ ಸ್ಫೂರ್ತಿದಾಯಕವಾಗಿರುತ್ತದೆ
  • ಮಕ್ಕಳನ್ನ ಪ್ರೀತಿಯಿಂದ ಸಹನೆಯಿಂದ ಉಪಚಾರ ಮಾಡಿ
  • ಪ್ರೇಮ ವಿಚಾರಕ್ಕೆ ಮನೆಯಲ್ಲಿ ಗಲಾಟೆಯ ಸಂಭವವಿರುತ್ತದೆ ಜಾಗ್ರತೆ
  • ನವಗ್ರಹ ಮಂತ್ರ ಪಠಿಸಿ

ವೃಶ್ಚಿಕ

publive-image

  • ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶಗಳಿವೆ
  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನವಹಿಸಬೇಕಾಗುತ್ತದೆ
  • ಗಣಿತ ಶಾಸ್ತ್ರವನ್ನು ಅಭ್ಯಾಸ ಮಾಡುವವರಿಗೆ ಶುಭವಿದೆ
  • ಉದ್ಯೋಗದಲ್ಲಿದ್ದ ಭಯ ಈ ದಿನ ನಿವಾರಣೆಯಾಗುತ್ತದೆ
  • ಹಲವು ದಿನಗಳಿಂದ ಸ್ಥಗಿತವಾಗಿದ್ದ ಕೆಲವು ಕೆಲಸಗಳಿಗೆ ಚಾಲನೆ ಸಿಗಲಿದೆ
  • ದಿನದ ದೃಷ್ಠಿಯಿಂದ ಅದೃಷ್ಟ ಚೆನ್ನಾಗಿದೆ ಎಂದು ಅಂದುಕೊಳ್ಳುವ ರೀತಿಯಲ್ಲಿರುವುದಿಲ್ಲ
  • ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ
  • ಅನಗತ್ಯ ಪ್ರಯಾಣ ಕಾಲಾಹರಣವನ್ನು ತಡೆಹಿಡಿಯಬೇಕಾಗುತ್ತದೆ
  • ಸಾಮ್ರಾಜ್ಯ ಲಕ್ಷ್ಮಿಯನ್ನು ಆರಾಧನೆ ಮಾಡಿ

ಧನಸ್ಸು

publive-image

  • ವಿದ್ಯಾರ್ಥಿಗಳು ಹೊಸ ತಂತ್ರ ಬಳಸಿ ನಿಮ್ಮ ಪ್ರಗತಿ ತೋರಿಸಬಹುದು
  • ಸಾಲ ಮಾಡುವುದರಿಂದ ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗುತ್ತದೆ
  • ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ
  • ಪ್ರೇಮಿಗಳಿಗೆ ಶುಭದಿನ ಆದರೆ ಒತ್ತಡ ಸಮಯಾಭಾವ ಇರುತ್ತದೆ
  • ತಮ್ಮ ಜೊತೆ ಪ್ರಯಾಣಿಸುವವರಿಗೆ ತೊಂದರೆಯಿದೆ ಗಮನವಹಿಸಿ
  • ಅಗ್ನೈಶ್ವರ್ಯ ಮಂತ್ರ ಜಪಿಸಿ

ಮಕರ

publive-image

  • ಪೋಷಕರ ಮತ್ತು ಅಧ್ಯಾಪಕರ ಸಲಹೆ ಮೇರೆಗೆ ಮಾಡುವಂತಹ ಕೆಲಸಗಳು ಜಯಪ್ರದವಾಗಲಿದೆ
  • ಚಿಕ್ಕ ಮಕ್ಕಳಿಗೆ ಮಾತಿನ ಸಮಸ್ಯೆ ಅಥವಾ ಗಂಟಲಿನ ಸಮಸ್ಯೆ ಹೆಚ್ಚಾಗಿ ಕಾಡುವಂತದಿದೆ
  • ಪೋಷಕರ ನಡುವೆ ಮಾತು ಮಾತಿಗೆ ಜಗಳ ಉಂಟಾಗುವ ಸಾಧ್ಯತೆ ಇದೆ
  • ಮಾನಸಿಕ ಆರ್ಥಿಕ ಹೂಡೆತಗಳು ಎರಡೂ ಕೂಡ ಒಟ್ಟಿಗೆ ಕಾಡುವಂತದ್ದು
  • ದಿನಸಿ ವ್ಯಾಪಾರಿಗಳಿಗೆ ಶುಭದಾಯಕವಾಗಿದೆ
  • ಸಂಪತ್ಪ್ರದ ಗೌರಿದೇವಿಯನ್ನು ಆರಾಧಿಸಿ

ಕುಂಭ

publive-image

  • ನಿವೃತ್ತ ಜೀವನ ನಡೆಸುತ್ತಿರುವವರಿಗೆ ಸ್ಥಾನ ಪಲ್ಲಟವಾಗಬಹುದು
  • ಹಣವನ್ನು ಮತ್ತೆ ಸಂಪಾದನೆ ಮಾಡುವ ಶಕ್ತಿಯಿದ್ದರೂ ಮನೋಬಲ ಕಡಿಮೆಯಾಗುತ್ತದೆ
  • ತಾಯಿಯ ಆರೋಗ್ಯ ಚೆನ್ನಾಗಿದೆ ಎಂದು ತೀರ್ಮಾನಿಸಲಾಗುವುದಿಲ್ಲ
  • ಮಕ್ಕಳಿಗೆ ತಮ್ಮ ಕೆಲಸವೆ ಹೆಚ್ಚಾಗುತ್ತದೆ ಇದರಿಂದ ಪೋಷಕರ ಬಗ್ಗೆ ಗಮನವಿರುವುದಿಲ್ಲ
  • ವಿರೋಧಿಗಳ ಬಗ್ಗೆ ಎಚ್ಚರವಿದ್ದರೂ ಸಹ ಮೋಸ ಹೋಗುವ ಸಾಧ್ಯತೆಗಳಿವೆ
  • ಬೇರೆ ವ್ಯವಸ್ಥೆಗಳು ಸಮಯಕ್ಕೆ ಸರಿಯಾಗಿ ಸಿಗದೆ ತೊಂದರೆ ಎದುರಿಸುತ್ತೀರಿ
  • ಚಿಕ್ಕಮಕ್ಕಳ ಚರ್ಮಕ್ಕೆ ತೊಂದರೆ ಕಾಣುತ್ತೆ ಜಾಗ್ರತೆ
  • ರಾಜರಾಜೇಶ್ವರಿಯನ್ನು ಆರಾಧಿಸಿ

ಮೀನ 

publive-image

  • ಕೆಲಸದ ಆಮಿಷ ಒಡ್ಡಿ ಹಣವನ್ನು ನಿಮ್ಮಿಂದ ಕಸಿದುಕೊಳ್ಳಬಹುದು ಜಾಗ್ರತೆ
  • ನಕಾರಾತ್ಮಕ ಚಿಂತನೆ ಇರುವ ಮಕ್ಕಳ ವಿಷಯದಲ್ಲಿ ದೂರ ಇದ್ದರೆ ಒಳ್ಳೆಯದು
  • ಕಷ್ಟಪಟ್ಟು ಸಂಪಾದಿಸಿದ ಹಣ ಅನುಪಯುಕ್ತವಾದ ಕೆಲಸಕ್ಕೆ ಖರ್ಚಾಗುವ ಸಾಧ್ಯತೆ ಹೆಚ್ಚು
  • ಹಣದ ಬೆಲೆ ನಿಮಗೆ ಗೊತ್ತಾಗುವ ದಿನ
  • ಬೇರೆಯವರ ಬಗ್ಗೆ ನಂಬಿಕೆಯಿಲ್ಲದಿರುವುದು
  • ಆಹಾರ ಸಕಾಲದಲ್ಲಿ ಸಿಗದೆ ಶರೀರದಲ್ಲಿ ಸುಸ್ತು ಕಾಣಬಹುದು
  • ಕೆಲವು ನಿರ್ಧಾರಗಳು ಇದಕ್ಕಿದ್ದ ಹಾಗೆ ಬದಲಾಗುವ ಸೂಚನೆಗಳಿವೆ
  • ಮಾನಸಿಕ ಬೇಸರ ಉಂಟಾಗುತ್ತದೆ
  • ಕನಕದುರ್ಗಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment