/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳು ಬರಬಹುದು
- ಹಣದ ಸಮಸ್ಯೆ, ಉದ್ಯೋಗ ಸಮಸ್ಯೆ, ಆರೋಗ್ಯವೂ ಕೂಡ ಕೈ ಕೊಡಬಹುದು
- ಅತಿಯಾದ ಆತ್ಮವಿಶ್ವಾಸ ನಿಮಗೆ ತೊಂದರೆಯಾಗಬಹುದು
- ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
- ಉನ್ನತ ಹುದ್ದೆಯಲ್ಲಿರುವವರಿಗೂ ನಿರಾಶೆಯಾಗಬಹುದು
- ಪ್ರೇಮಿಗಳಿಗೆ ಹಿನ್ನಡೆ, ಉದ್ವಿಗ್ನತೆ ಕಾಡಬಹುದು
- ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
- ಅಪರಿಚಿತರ ಭಯ ಕಾಡಬಹುದು, ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
- ನೌಕರರಿಗೆ , ವಿದ್ಯಾರ್ಥಿಗಳಿಗೆ ತಾಳ್ಮೆ ಪರೀಕ್ಷಿಸುವ ದಿನ
- ಅತಿ ಮುಖ್ಯವಾದ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು
- ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನಿಮ್ಮನ್ನು ಪ್ರಶಂಸಿಸುತ್ತಾರೆ
- ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ
- ದಾಂಪತ್ಯ ಜೀವನ ಸುಖಮಯವಾಗಿರುತ್ತದೆ, ವಿನಾಕಾರಣ ಮಾತು ಬೇಡ
- ಶಿಂಶುಮಾರ ಮಂತ್ರವನ್ನು ಜಪ ಮಾಡಿಸಿ
ಮಿಥುನ
- ವಿರೋಧಿಗಳು ನಿಮ್ಮೆಲ್ಲಾ ಸಂತೋಷವನ್ನು ಹಾಳು ಮಾಡಬಹುದು
- ವ್ಯಾಪಾರ ವಿಸ್ತರಿಸಲು ಕೈ ಹಾಕಿ ನಷ್ಟವಾಗಬಹುದು
- ಕಾರ್ಯಕ್ಷೇತ್ರದಲ್ಲಿ ಕೆಲವು ಅರಿವಿಲ್ಲದ ಸಮಸ್ಯೆಗಳುಂಟಾಗಬಹುದು
- ಕುಟುಂಬದ ವಾತಾವರಣ, ವ್ಯಾಪಾರ, ವ್ಯವಹಾರ ಚೆನ್ನಾಗಿಯೇ ಕಾಣುತ್ತದೆ
- ಮನೆಯಲ್ಲಿ ಕೆಲಸಗಾರರಿದ್ದರೆ ಸ್ವಲ್ಪ ಜಾಗ್ರತೆವಹಿಸಿ
- ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆಯಿರುತ್ತದೆ
- ಕಾಮಧೇನು ಮಂತ್ರವನ್ನು ಜಪಿಸಿ
ಕಟಕ
- ವಿದೇಶ ಪ್ರಯಾಣಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಈ ದಿನ ಶುಭವಿದೆ
- ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
- ನಿಮ್ಮ ಧೈರ್ಯ ಹಾಗೂ ಭಾವನೆಗಳಿಗೆ ಭಂಗ ಬರಬಹುದು ಎಚ್ಚರಿಕೆಯಿರಲಿ
- ಸ್ನೇಹಿತರೊಂದಿಗೆ ಸೇರಿ ಹೊಸ ಯೋಜನೆ ರೂಪಿಸಲು ಅವಕಾಶವಿದೆ
- ಹಣ ಮತ್ತು ದ್ರವ್ಯ ಕಳೆದುಕೊಳ್ಳುವ ಸಾಧ್ಯತೆಗಳಿವೆ
- ಚಿಕ್ಕ ಮಕ್ಕಳಿಗೆ ಸಮಸ್ಯೆಯಾಗಬಹುದು ಜಾಗ್ರತೆವಹಿಸಿ
- ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿ
ಸಿಂಹ
- ಕೌಶಲ್ಯದ ಕೆಲಸ ನಿಮಗೆ ಸಹಾಯವಾಗುವಂತೆ ಮಾಡಬಹುದು
- ಒಂದೇ ಸಮಯದಲ್ಲಿ 2-3 ಕೆಲಸಗಳಾಗುವ ಸಾಧ್ಯತೆಗಳಿವೆ
- ಮನೋರಂಜನೆಯನ್ನು ಅನುಭವಿಸುವ ಮೂಲಕ ಸಂತೋಷರಾಗಿರುತ್ತೀರಿ
- ಮಾಟ -ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
- ಸಾಧನೆ, ಪ್ರಗತಿಯ ಬಗ್ಗೆ ಅಹಂಭಾವ ಬೇಡ
- ಸಮಾಜ ಕಾರ್ಯ, ಜನಸೇವೆಯಲ್ಲಿ ಉತ್ಸುಕರಾಗಿರುತ್ತೀರಿ
- ದುರ್ಗಾದೇವಿಯನ್ನು ಆರಾಧನೆ ಮಾಡಿ
ಕನ್ಯಾ
- ಸಾಂಸಾರಿಕವಾಗಿ ಮಕ್ಕಳ ವಿಚಾರವಾಗಿದ್ದ ಚಿಂತೆ ದೂರವಾಗಬಹುದು
- ಕೆಲಸದಲ್ಲಿ ಬಡ್ತಿ ಅಥವಾ ಹಣ ಕೈ ಸೇರುತ್ತದೆ
- ಇಂದು ಅವಿವಾಹಿತರಿಗೆ ಸಿಹಿ ಸುದ್ದಿ
- ವಿನಾಕಾರಣ ವಾದ - ವಿವಾದಗಳು ಬೇಡ
- ವೈದ್ಯಕೀಯ ವಿದ್ಯಾರ್ಥಿಗಳಿಗೆ, ವೈದ್ಯರಿಗೆ ಶುಭಫಲವಿದೆ
- ನಿಮ್ಮ ಜವಾಬ್ದಾರಿಯುತ ಕೆಲಸಗಳು ಸಕಾಲದಲ್ಲಿ ಮುಗಿಯಬಹುದು
- ಪ್ರತ್ಯಂಗಿರಾ ಹೋಮ ಮಾಡಿಸಿ
ತುಲಾ
- ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸೋಲಿಸುತ್ತೀರಿ
- ಪ್ರೇಮಿಗಳಿಗೆ ಆಶುಭ, ಹೆಚ್ಚು ಧೈರ್ಯ ಬೇಡ ಭವಿಷ್ಯಕ್ಕೆ ತೊಂದರೆಯಾಗಬಹುದು
- ಇಂದು ಜಗಳ ಬೇಡ ಮಾತಿನಿಂದ ನೀವು ಹೇಳಬೇಕಾದ್ದನ್ನು ಹೇಳಿ ಪರಿಹರಿಸಿಕೊಳ್ಳಿ
- ನಿಮ್ಮ ತತ್ತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಬೇಡ
- ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
- ಮದುವೆಗೆ ನಿಶ್ಚಯದ ಸೂಚನೆಗಳಿವೆ
- ಸ್ವಲ್ಪ ಆಸಕ್ತಿಯನ್ನು ಗಟ್ಟಿಮಾಡಿಕೊಳ್ಳಬೇಕು
- ಸುದರ್ಶನನನ್ನು ಪ್ರಾರ್ಥಿಸಿ
ವೃಶ್ಚಿಕ
- ಹವಾಮಾನ ವೈಪರೀತ್ಯ ಶೀತಸಂಬಂಧಿ ತೊಂದರೆ ಕುಟುಂಬದಲ್ಲಿ ಕಾಣಿಸಬಹುದು
- ನಯವಂಚಕರಿಂದ ದೂರವಿರಬೇಕಾಗುತ್ತದೆ
- ಮೇಲಾಧಿಕಾರಿಗಳ ಜೊತೆ, ಕುಟುಂಬದ ಹಿರಿಯರ ಜೊತೆ ವಾದಿಸಬಾರದು
- ನಿಮ್ಮ ಸ್ಥಾನ, ಸಂಬಂಧಗಳ ತಿಳುವಳಿಕೆ ನಿಮಗಿರಬೇಕಾಗುತ್ತದೆ
- ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನಹರಿಸಿ
- ಕೋಪಬೇಡ, ಕೆಲಹೊತ್ತು ವಾತಾವರಣ ಚೆನ್ನಾಗಿರುವುದಿಲ್ಲ
- ಜವಾಬ್ದಾರಿಯ ಬಗ್ಗೆ ನಿಗಾವಹಿಸಬೇಕಾದ್ದು ನಿಮಗೆ ಅನಿವಾರ್ಯವಾಗುತ್ತದೆ
- ಕುಲದೇವತಾ ಆರಾಧನೆ ಮಾಡಿ
ಧನಸ್ಸು
- ಹಳೆಯ ನಷ್ಟಕ್ಕೆ , ಅವಮಾನಕ್ಕೆ ಇಂದು ಪ್ರತೀಕಾರದ ಸಮಯವಾಗಿರುತ್ತದೆ
- ಬೇರೆಯವರಿಗೆ ಸಾಲದ ರೂಪದಲ್ಲಿ ಹಣ ಪದಾರ್ಥ ನೀಡಬಾರದು
- ನಿಮ್ಮ ಸಾಮರ್ಥ್ಯ ನೋಡಿ ಜವಾಬ್ದಾರಿಯುತ ಕೆಲಸ ನಿಮ್ಮ ಹೆಗಲೇರಲಿದೆ
- ಆದಾಯದ ಮೂಲ ನೋಡಿ. ಖರ್ಚಿಗೆ ಮುಂದಾಗಬೇಕು
- ಇಂದು ದುಬಾರಿ ವಸ್ತುಗಳ ಖರೀದಿ ಬೇಡ
- ಧಾರ್ಮಿಕ ಮುಖಂಡರಿಗೆ ಹಿನ್ನಡೆ ಅವಮಾನ ಇರುತ್ತದೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಮಕರ
- ಹಣಕಾಸಿನ ಸಮಸ್ಯೆಯಿಂದ ಕೆಲವು ಕೆಲಸಗಳು ಸ್ಥಗಿತವಾಗಬಹುದು
- ಕುಟುಂಬ ಸದಸ್ಯರ ಸ್ವಭಾವದಿಂದ ನಿಮಗೆ ಬೇಸರವಾಗಬಹುದು
- ಈ ದಿನ ದುಂದುವೆಚ್ಚ ಬೇಡ
- ಪೂರ್ವಿಕರ ಆಸ್ತಿ ವಿಚಾರಗಳಲ್ಲಿ ಒಂದು ತಿರುವು ಬರಬಹುದು
- ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು
- ಸಹೋದರರ ವೈಮನಸ್ಸು ಇರಬಹುದು. ತಾಳ್ಮೆಯಿರಲಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಆರಾಧನೆ ಮಾಡಿ
ಕುಂಭ
- ಈ ದಿನ ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
- ಪುಸಕ್ತ ಪ್ರೇಮಿಗಳಿಗೆ, ವ್ಯಾಪಾರಸ್ಥರಿಗೆ ಶುಭವಿದೆ
- ವಿದ್ಯಾರ್ಥಿಗಳಿಗೆ ಗಂಭೀರ ವಿಷಯಗಳನ್ನು ಅಧ್ಯಯನ ಮಾಡಲು ಆಸಕ್ತಿ ಬರಬಹುದು
- ಬೇರೆಯವರ ನಿರ್ಲಕ್ಷದಿಂದ ನಿಮ್ಮ ಕೆಲಸಕ್ಕೆ ಹಿನ್ನಡೆಯಾಗಬಹುದು
- ಇಂದು ಆರ್ಥಿಕ ಸಮಸ್ಯೆ ಕಾಡಬಹುದು
- ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆಯಾಗಿ, ನೆಮ್ಮದಿ ಸಿಗಲಿದೆ
- ಸ್ರಷ್ಟಾ ಮಂತ್ರ ಜಪದಿಂದ ಶುಭವಿದೆ
ಮೀನ
- ತಾಯಿಯ ಆಶೀರ್ವಾದೊಂದಿಗೆ ಈ ದಿನದ ಕೆಲಸವನ್ನು ಆರಂಭಿಸಿ
- ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರಬಹುದು
- ಖರ್ಚನ್ನು ಗಮನಿಸಿ, ಆದಾಯಕ್ಕೆ ಹೊಂದಿಕೆಯಾಗುವಂತೆ ಮಾಡಿ
- ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ
- ಇಂದು ಕೆಂಪುವಸ್ತ್ರ ಧರಿಸಿ ಶುಭವಾಗಲಿದೆ
- ಅಧಿಕಾರದ ಭಯದಿಂದ ಸ್ಥಾನ ಚ್ಯುತಿಯಾಗಬಹುದು
- ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸಗಳಿಸಿ
- ಇಷ್ಟದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ