ಸ್ತ್ರೀಯರಿಗೆ ನೌಕರಿಯಲ್ಲಿ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ
  • ಶತ್ರುಬಾಧೆ, ವ್ಯವಹಾರಕ್ಕೆ ಸ್ವಲ್ಪ ನಿಧಾನ ಆಗಬಹುದು
  • ಯಾವುದೇ ಮರಣದ ವಾರ್ತೆ ಕೇಳಬೇಕಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಹಿಂದಿನ ದಿನಗಳ ವಿಚಾರದಲ್ಲಿ ಆತ್ಮಾವಲೋಕನದಿಂದ ಉತ್ತರ ಸಿಗಲಿದೆ
  • ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ
  • ಪೂರ್ವಜನ್ಮದ ಸುಕೃತವು ನಿಮ್ಮನ್ನು ಕಾಪಾಡಬೇಕಾಗಿದೆ
  • ಕೆಲವು ಕೆಲಸಗಳಿಗೆ ಹಣವನ್ನು ಮುಂಗಡಕೊಟ್ಟು ಮೋಸಹೋಗಬಹುದು
  • ನಿಮ್ಮ ವ್ಯಕ್ತಿತ್ವ ನಿಮಗೆ ಗೌರವ ತರಲಿದೆ
  • ಈಶ್ವರನನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಬೇರೆಯವರಿಗೆ ಉಪಕಾರ ಮಾಡಲು ಶುಭದಿನ
  • ಧನಲಾಭ , ಐಶ್ವರ್ಯ ವೃದ್ಧಿ ಆಗಲಿದೆ
  • ಭೂಮಿ ಖರೀದಿಯ ಚಿಂತನೆಯಲ್ಲಿರುತ್ತೀರಿ
  • ಶತ್ರುಬಾಧೆ, ವ್ಯವಹಾರಕ್ಕೆ ಸ್ವಲ್ಪ ನಿಧಾನ ಆಗಬಹುದು
  • ಸಾಮೂಹಿಕ ತಿರಸ್ಕಾರ ಮಾಡುವ ಜನರಲ್ಲಿ ನೀವೂ ಒಬ್ಬರಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ನಿಮ್ಮ ಸಾಧನೆಯ ಸಂತೋಷವನ್ನು ಬೇರೆಯವರಿಗೆ ಹಂಚಿಕೊಳ್ಳಿ ಅವಕಾಶವಿದೆ
  • ಇಂದು ಸಹೋದರರಿಂದ ಕಲಹವಿರಬಹುದು
  • ಈ ದಿನ ಸಮಾಧಾನವಾಗಿರುವುದು ಒಳಿತು
  • ಯಾವುದೇ ಮರಣದ ವಾರ್ತೆ ಕೇಳಬೇಕಾಗಬಹುದು
  • ಅಕಾಲ ಭೋಜನ, ಬೇಸರ ಆಗಬಹುದು
  • ಹೊಂದಾಣಿಕೆ ಮಾಡಿಕೊಂಡ್ರೆ ಕೈ ಹಾಕಿದ ಕೆಲಸ ಉತ್ತಮ ಮುಟ್ಟದಾಗಬಹುದು
  • ಭೈರವೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಸಂಶೋಧಕರಿಗೆ ಮಹತ್ಮ ಪೂರ್ಣ ದಿನ
  • ಅನಿರೀಕ್ಷಿತವಾಗಿ ಯಾವುದೋ ಶುಭಸುದ್ದಿಯಿಂದ ಸಂತೋಷವುಂಟಾಗಲಿದೆ
  • ತುಂಬಾ ತುರ್ತಾಗಿರುವ ವಿಚಾರದತ್ತ ಗಮನಹರಿಸಿ
  • ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಿದ್ದರೂ ಬೇರೆಯವರ ಮಾತಿನಿಂದ ಬಿರುಕು
  • ವ್ಯವಹಾರದಲ್ಲಿ, ಆರೋಗ್ಯ ವಿಚಾರದಲ್ಲಿ ಶುಭವಿದೆ
  • ಶತ್ರುನಾಶ, ಉತ್ತಮ ಭೋಜನ
  • ಬೇರೆಯವರನ್ನು ದೂಷಿಸಬಾರದು ಅದು ನಿಮಗೆ ತಿರುಗಬಹುದು
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಸ್ತ್ರೀಯರಿಗೆ ನೌಕರಿಯಲ್ಲಿ ಕಿರಿಕಿರಿ, ವರ್ಗಾವಣೆ ಸಾಧ್ಯತೆ
  • ನಿಮ್ಮ ಪ್ರಯತ್ನ ಸಫಲವಾದ ದಿನ
  • ಹಲವರಲ್ಲಿ ಮೈಮನಸ್ಸು ಬೆಳೆಯಬಹುದು
  • ಆಹಾರದಿಂದ ವ್ಯತ್ಯಾಸವಾಗಿ ಆತಂಕ ಆಗಬಹುದು
  • ಈ ದಿನ ಮನೆಯಲ್ಲಿ ಕಲಹವಾಗಬಹುದು
  • ಹಿರಿಯರನ್ನು ಅಗೌರವಿಸುತ್ತೀರಿ ಜಾಗ್ರತೆ
  • ನಿಮ್ಮ ಕೆಲಸಗಳಲ್ಲಿ ಹಿನ್ನಡೆಯಾಗುವುದರಿಂದ ನೋವಿನಲ್ಲಿರುತ್ತೀರಿ
  • ಮಾರುತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಮನೆಯ ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ
  • ರಾಜಕೀಯದ ವಿಚಾರಗಳು ಮುನ್ನಲೆಗೆ ಬರುತ್ತದೆ
  • ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸಾಧ್ಯತೆಗಳಿವೆ
  • ಬೇರೆ ವ್ಯವಹಾರಕ್ಕೆ ಹಣದ ಹೂಡಿಕೆ ಮಾಡುತ್ತೀರಿ
  • ಚಿನ್ನಾಭರಣ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ ತಂದುಕೊಳ್ಳಬೇಕಾಗುತ್ತದೆ
  • ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ, ತೊಂದರೆಯಿದೆ
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಮನೆಯಲ್ಲಿ ಸಂಭ್ರಮದ ವಾತಾವರಣ
  • ನಿಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ
  • ಸಾಲಬಾಧೆಗೆ ನೀವು ಹೆದರುವುದಿಲ್ಲ ಆದರೆ ಧೈರ್ಯ ಕಡಿಮೆಯಾಗಬಹುದು
  • ಉದ್ಯೋಗದಲ್ಲಿ ಕಿರಿ ಕಿರಿ ಉಂಟಾಗಬಹುದು
  • ಈ ದಿನ ಸ್ಥಳ ಬದಲಾವಣೆಯ ವಿಚಾರ ಬರುತ್ತದೆ
  • ಶುಭ ಸಮಾಚಾರ ನಿಮಗೆ ಉತ್ಸಾಹ ನೀಡುತ್ತದೆ
  • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಸಾಮಾಜಿಕ ಬದುಕಿನಲ್ಲಿ ಬದಲಾವಣೆ ಗಾಳಿ ಬೀಸುತ್ತದೆ
  • ಉನ್ನತ ಅಧಿಕಾರ ಪ್ರಾಪ್ತಿಯಾಗಬಹುದು
  • ಸರಳ ಜೀವನದ ಕಡೆ ಮನಸ್ಸು ಹೋಗಬಹುದು
  • ಸಹೋದರರ ಕಿರಿ ಕಿರಿಯನ್ನು ಸಹಿಸಬೇಕಾಗುತ್ತದೆ, ನೆಮ್ಮದಿಯಿರುವುದಿಲ್ಲ
  • ಪಿತ್ರ್ರಾರ್ಜಿತ ಆಸ್ತಿಯನ್ನು ನೀವೇ ಖರೀದಿಸಲು ಮುಂದಾಗುತ್ತೀರಿ
  • ಹಣವನ್ನು ಹೊಂದಿಸಿಕೊಳ್ಳುವ, ಸಾಲಪಡೆಯುವ ಬಗ್ಗೆ ಚಿಂತಿಸುವಿರಿ ಶುಭವಿದೆ
  • ನಂದೀಶ್ವರನನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ವಿಚಿತ್ರ ಸನ್ನಿವೇಶಗಳಿಂದ ನಿಮಗೆ ಅಚ್ಚರಿಯುಂಟಾಗಬಹುದು
  • ಸಂಬಂಧಗಳಿಂದ ದೂರವಾಗಲು ಯತ್ನಿಸುತ್ತೀರಿ
  • ಶಸ್ತ್ರ ಚಿಕಿತ್ಸೆಯ ಸಂಭವವಿದೆ
  • ಇಂದು ಧನನಷ್ಟ ,ಮಾನಸಿಕ ಕ್ಷೋಭೆ
  • ಮಕ್ಕಳ ಬಗ್ಗೆ ಗಮನವಿರಲಿ, ಒಬ್ಬರನ್ನೇ ಬಿಡುವುದು ಒಳಿತಲ್ಲ
  • ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಮಾಡಿ

ಮಕರ

publive-image

  • ತುಂಬಾ ದಿನಗಳಿಂದ ಬರಬೇಕಾದ ಹಣ ಸಾಯಂಕಾಲ ಕೈ ಸೇರಬಹುದು
  • ಹಣ ಕೈಯಲ್ಲಿದ್ದರೂ ಮಾನಸಿಕ ನೆಮ್ಮದಿಯಿರುವುದಿಲ್ಲ
  • ನಿಮ್ಮ ಆಲಸ್ಯ ಅಥವಾ ಕೆಲಸವನ್ನು ಮುಂದೂಡುವಿಕೆಯಿಂದ ನಷ್ಟವಾಗುತ್ತದೆ
  • ಲೆಕ್ಕಾಧಿಕಾರಿಗಳಿಗೆ ತುಂಬಾ ಶುಭ ಲಾಭವಿದೆ
  • ಹತ್ತಿ ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
  • ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸಿ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ದೈನಂದಿನ ಚಟುವಟಿಕೆಯನ್ನು ಹೊರತಾಗಿ ಬೇರೆ ಕೆಲಸಗಳಲ್ಲಿ ಆಸಕ್ತಿವಹಿಸುವಿರಿ
  • ಮಹಿಳೆಯರಿಗೆ ವಸ್ತ್ರ ಆಭರಣ ಪ್ರಾಪ್ತಿಯಾಗಲಿದೆ
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
  • ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ
  • ಆಸ್ತಿ, ವಸ್ತು, ದ್ರವ್ಯ ನಷ್ಟವಾಗುವ ಸೂಚನೆಯಿದೆ
  • ನಿಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಬದಿಗಿಟ್ಟು ಭಗವಂತನಿಗೆ ಶರಣು ಹೋಗಬೇಕು
  • ಹಿರಿಯರ ಆಶೀರ್ವಾದ ಪಡೆಯಿರಿ

ಮೀನ 

publive-image

  • ಸ್ನೇಹಿತರ, ಬಂಧುಗಳ ಮಧ್ಯದಲ್ಲಿದ್ದ ಗೊಂದಲವನ್ನು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುತ್ತೀರಿ
  • ಸುಖ-ದುಃಖ, ಮಾನಾಪಮಾನಗಳೆರಡನ್ನು ಸಮಾನವಾಗಿ ಸ್ವೀಕರಿಸಿ
  • ಇಂದು ಯಾರನ್ನು ತುಂಬಾ ನಂಬಬೇಡಿ
  • ಈ ದಿನ ಅಪನಿಂದನೆಯೂ ಬರಬಹುದು
  • ವ್ಯವಹಾರದ ಮಾತುಕತೆ ಫಲಪ್ರದವಾಗಬಹುದು
  • ಅನರ್ಥಗಳಿಂದ ಮಾನಹಾನಿಯಾಗುವ ಸಾಧ್ಯತೆಗಳಿವೆ
  • ಗುರುಗಳಿಗೆ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment