/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಹಿಂದಿನ ದಿನಗಳ ವಿಚಾರದಲ್ಲಿ ಆತ್ಮಾವಲೋಕನದಿಂದ ಉತ್ತರ ಸಿಗಲಿದೆ
- ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ
- ಪೂರ್ವಜನ್ಮದ ಸುಕೃತವು ನಿಮ್ಮನ್ನು ಕಾಪಾಡಬೇಕಾಗಿದೆ
- ಕೆಲವು ಕೆಲಸಗಳಿಗೆ ಹಣವನ್ನು ಮುಂಗಡಕೊಟ್ಟು ಮೋಸಹೋಗಬಹುದು
- ನಿಮ್ಮ ವ್ಯಕ್ತಿತ್ವ ನಿಮಗೆ ಗೌರವ ತರಲಿದೆ
- ಈಶ್ವರನನ್ನು ಪ್ರಾರ್ಥನೆ ಮಾಡಿ
ವೃಷಭ
- ಬೇರೆಯವರಿಗೆ ಉಪಕಾರ ಮಾಡಲು ಶುಭದಿನ
- ಧನಲಾಭ , ಐಶ್ವರ್ಯ ವೃದ್ಧಿ ಆಗಲಿದೆ
- ಭೂಮಿ ಖರೀದಿಯ ಚಿಂತನೆಯಲ್ಲಿರುತ್ತೀರಿ
- ಶತ್ರುಬಾಧೆ, ವ್ಯವಹಾರಕ್ಕೆ ಸ್ವಲ್ಪ ನಿಧಾನ ಆಗಬಹುದು
- ಸಾಮೂಹಿಕ ತಿರಸ್ಕಾರ ಮಾಡುವ ಜನರಲ್ಲಿ ನೀವೂ ಒಬ್ಬರಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ನಿಮ್ಮ ಸಾಧನೆಯ ಸಂತೋಷವನ್ನು ಬೇರೆಯವರಿಗೆ ಹಂಚಿಕೊಳ್ಳಿ ಅವಕಾಶವಿದೆ
- ಇಂದು ಸಹೋದರರಿಂದ ಕಲಹವಿರಬಹುದು
- ಈ ದಿನ ಸಮಾಧಾನವಾಗಿರುವುದು ಒಳಿತು
- ಯಾವುದೇ ಮರಣದ ವಾರ್ತೆ ಕೇಳಬೇಕಾಗಬಹುದು
- ಅಕಾಲ ಭೋಜನ, ಬೇಸರ ಆಗಬಹುದು
- ಹೊಂದಾಣಿಕೆ ಮಾಡಿಕೊಂಡ್ರೆ ಕೈ ಹಾಕಿದ ಕೆಲಸ ಉತ್ತಮ ಮುಟ್ಟದಾಗಬಹುದು
- ಭೈರವೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ
- ಸಂಶೋಧಕರಿಗೆ ಮಹತ್ಮ ಪೂರ್ಣ ದಿನ
- ಅನಿರೀಕ್ಷಿತವಾಗಿ ಯಾವುದೋ ಶುಭಸುದ್ದಿಯಿಂದ ಸಂತೋಷವುಂಟಾಗಲಿದೆ
- ತುಂಬಾ ತುರ್ತಾಗಿರುವ ವಿಚಾರದತ್ತ ಗಮನಹರಿಸಿ
- ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಿದ್ದರೂ ಬೇರೆಯವರ ಮಾತಿನಿಂದ ಬಿರುಕು
- ವ್ಯವಹಾರದಲ್ಲಿ, ಆರೋಗ್ಯ ವಿಚಾರದಲ್ಲಿ ಶುಭವಿದೆ
- ಶತ್ರುನಾಶ, ಉತ್ತಮ ಭೋಜನ
- ಬೇರೆಯವರನ್ನು ದೂಷಿಸಬಾರದು ಅದು ನಿಮಗೆ ತಿರುಗಬಹುದು
- ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಸ್ತ್ರೀಯರಿಗೆ ನೌಕರಿಯಲ್ಲಿ ಕಿರಿಕಿರಿ, ವರ್ಗಾವಣೆ ಸಾಧ್ಯತೆ
- ನಿಮ್ಮ ಪ್ರಯತ್ನ ಸಫಲವಾದ ದಿನ
- ಹಲವರಲ್ಲಿ ಮೈಮನಸ್ಸು ಬೆಳೆಯಬಹುದು
- ಆಹಾರದಿಂದ ವ್ಯತ್ಯಾಸವಾಗಿ ಆತಂಕ ಆಗಬಹುದು
- ಈ ದಿನ ಮನೆಯಲ್ಲಿ ಕಲಹವಾಗಬಹುದು
- ಹಿರಿಯರನ್ನು ಅಗೌರವಿಸುತ್ತೀರಿ ಜಾಗ್ರತೆ
- ನಿಮ್ಮ ಕೆಲಸಗಳಲ್ಲಿ ಹಿನ್ನಡೆಯಾಗುವುದರಿಂದ ನೋವಿನಲ್ಲಿರುತ್ತೀರಿ
- ಮಾರುತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಮನೆಯ ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ
- ರಾಜಕೀಯದ ವಿಚಾರಗಳು ಮುನ್ನಲೆಗೆ ಬರುತ್ತದೆ
- ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸಾಧ್ಯತೆಗಳಿವೆ
- ಬೇರೆ ವ್ಯವಹಾರಕ್ಕೆ ಹಣದ ಹೂಡಿಕೆ ಮಾಡುತ್ತೀರಿ
- ಚಿನ್ನಾಭರಣ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ ತಂದುಕೊಳ್ಳಬೇಕಾಗುತ್ತದೆ
- ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ, ತೊಂದರೆಯಿದೆ
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಮನೆಯಲ್ಲಿ ಸಂಭ್ರಮದ ವಾತಾವರಣ
- ನಿಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ
- ಸಾಲಬಾಧೆಗೆ ನೀವು ಹೆದರುವುದಿಲ್ಲ ಆದರೆ ಧೈರ್ಯ ಕಡಿಮೆಯಾಗಬಹುದು
- ಉದ್ಯೋಗದಲ್ಲಿ ಕಿರಿ ಕಿರಿ ಉಂಟಾಗಬಹುದು
- ಈ ದಿನ ಸ್ಥಳ ಬದಲಾವಣೆಯ ವಿಚಾರ ಬರುತ್ತದೆ
- ಶುಭ ಸಮಾಚಾರ ನಿಮಗೆ ಉತ್ಸಾಹ ನೀಡುತ್ತದೆ
- ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಸಾಮಾಜಿಕ ಬದುಕಿನಲ್ಲಿ ಬದಲಾವಣೆ ಗಾಳಿ ಬೀಸುತ್ತದೆ
- ಉನ್ನತ ಅಧಿಕಾರ ಪ್ರಾಪ್ತಿಯಾಗಬಹುದು
- ಸರಳ ಜೀವನದ ಕಡೆ ಮನಸ್ಸು ಹೋಗಬಹುದು
- ಸಹೋದರರ ಕಿರಿ ಕಿರಿಯನ್ನು ಸಹಿಸಬೇಕಾಗುತ್ತದೆ, ನೆಮ್ಮದಿಯಿರುವುದಿಲ್ಲ
- ಪಿತ್ರ್ರಾರ್ಜಿತ ಆಸ್ತಿಯನ್ನು ನೀವೇ ಖರೀದಿಸಲು ಮುಂದಾಗುತ್ತೀರಿ
- ಹಣವನ್ನು ಹೊಂದಿಸಿಕೊಳ್ಳುವ, ಸಾಲಪಡೆಯುವ ಬಗ್ಗೆ ಚಿಂತಿಸುವಿರಿ ಶುಭವಿದೆ
- ನಂದೀಶ್ವರನನ್ನು ಪ್ರಾರ್ಥನೆ ಮಾಡಿ
ಧನಸ್ಸು
- ವಿಚಿತ್ರ ಸನ್ನಿವೇಶಗಳಿಂದ ನಿಮಗೆ ಅಚ್ಚರಿಯುಂಟಾಗಬಹುದು
- ಸಂಬಂಧಗಳಿಂದ ದೂರವಾಗಲು ಯತ್ನಿಸುತ್ತೀರಿ
- ಶಸ್ತ್ರ ಚಿಕಿತ್ಸೆಯ ಸಂಭವವಿದೆ
- ಇಂದು ಧನನಷ್ಟ ,ಮಾನಸಿಕ ಕ್ಷೋಭೆ
- ಮಕ್ಕಳ ಬಗ್ಗೆ ಗಮನವಿರಲಿ, ಒಬ್ಬರನ್ನೇ ಬಿಡುವುದು ಒಳಿತಲ್ಲ
- ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಮಾಡಿ
ಮಕರ
- ತುಂಬಾ ದಿನಗಳಿಂದ ಬರಬೇಕಾದ ಹಣ ಸಾಯಂಕಾಲ ಕೈ ಸೇರಬಹುದು
- ಹಣ ಕೈಯಲ್ಲಿದ್ದರೂ ಮಾನಸಿಕ ನೆಮ್ಮದಿಯಿರುವುದಿಲ್ಲ
- ನಿಮ್ಮ ಆಲಸ್ಯ ಅಥವಾ ಕೆಲಸವನ್ನು ಮುಂದೂಡುವಿಕೆಯಿಂದ ನಷ್ಟವಾಗುತ್ತದೆ
- ಲೆಕ್ಕಾಧಿಕಾರಿಗಳಿಗೆ ತುಂಬಾ ಶುಭ ಲಾಭವಿದೆ
- ಹತ್ತಿ ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
- ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸಿ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
- ದೈನಂದಿನ ಚಟುವಟಿಕೆಯನ್ನು ಹೊರತಾಗಿ ಬೇರೆ ಕೆಲಸಗಳಲ್ಲಿ ಆಸಕ್ತಿವಹಿಸುವಿರಿ
- ಮಹಿಳೆಯರಿಗೆ ವಸ್ತ್ರ ಆಭರಣ ಪ್ರಾಪ್ತಿಯಾಗಲಿದೆ
- ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
- ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ
- ಆಸ್ತಿ, ವಸ್ತು, ದ್ರವ್ಯ ನಷ್ಟವಾಗುವ ಸೂಚನೆಯಿದೆ
- ನಿಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಬದಿಗಿಟ್ಟು ಭಗವಂತನಿಗೆ ಶರಣು ಹೋಗಬೇಕು
- ಹಿರಿಯರ ಆಶೀರ್ವಾದ ಪಡೆಯಿರಿ
ಮೀನ
- ಸ್ನೇಹಿತರ, ಬಂಧುಗಳ ಮಧ್ಯದಲ್ಲಿದ್ದ ಗೊಂದಲವನ್ನು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುತ್ತೀರಿ
- ಸುಖ-ದುಃಖ, ಮಾನಾಪಮಾನಗಳೆರಡನ್ನು ಸಮಾನವಾಗಿ ಸ್ವೀಕರಿಸಿ
- ಇಂದು ಯಾರನ್ನು ತುಂಬಾ ನಂಬಬೇಡಿ
- ಈ ದಿನ ಅಪನಿಂದನೆಯೂ ಬರಬಹುದು
- ವ್ಯವಹಾರದ ಮಾತುಕತೆ ಫಲಪ್ರದವಾಗಬಹುದು
- ಅನರ್ಥಗಳಿಂದ ಮಾನಹಾನಿಯಾಗುವ ಸಾಧ್ಯತೆಗಳಿವೆ
- ಗುರುಗಳಿಗೆ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ