ಪ್ರೇಮಿಗಳಿಗೆ ಶುಭ, ಮನೆ, ಜಮೀನು ಮಾರುವವರಿಗೆ ಲಾಭ ಸಿಗುವ ದಿನ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಸಾಯಂಕಾಲದಲ್ಲಿ ಅನಿರೀಕ್ಷಿತವಾದ ಭೇಟಿಯಿಂದ ಶುಭ ಸಮಾಚಾರ
  • ತುಂಬಾ ಕೋಪ, ತಾಳ್ಮೆ ಕಳೆದುಕೊಳ್ಳುವ ಪ್ರಸಂಗ ಬರಬಹುದು
  • ಯಾರು ವಿಶೇಷವಾದ ಪ್ರತಿಭೆ ಹೊಂದಿರೋರು ಪ್ರದರ್ಶಿಸಲು ಉತ್ತಮ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಅಪರೂಪಕ್ಕೆ ಉದಾರ ಸ್ವಭಾವವನ್ನು ನೋಡಿ ಅಕ್ಕ-ಪಕ್ಕದವರು, ಬಂಧುಗಳು ಆಶ್ಚರ್ಯ ಪಡುತ್ತಾರೆ
  • ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ಉಂಟಾಗುತ್ತದೆ
  • ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಮತ್ತು ಶಿಕ್ಷಕರಿಂದ ಸಹಾಯ ಪಡೆಯುತ್ತಾರೆ
  • ಪ್ರೇಮಿಗಳಿಗೆ ಶುಭ ದಿನವಾದರೂ ಸಮಸ್ಯೆ ಉಂಟಾಗಬಹುದು ಜಾಗ್ರತೆವಹಿಸಿ
  • ಇಂದಿನ ದಿನಮಾನಕ್ಕೆ ಅನುಗುಣವಾಗಿ ಹಿರಿಯರನ್ನು ನೀವು ಒಪ್ಪುವುದಿಲ್ಲ
  • ಇವತ್ತಿನ ಕಾಲದ ಮಕ್ಕಳನ್ನು ಕೂಡ ಹಿರಿಯರು ಒಪ್ಪುವುದಿಲ್ಲ
  • ಸಾಯಂಕಾಲದಲ್ಲಿ ಅನಿರೀಕ್ಷಿತವಾದ ಭೇಟಿಯಿಂದ ಶುಭ ಸಮಾಚಾರ ಸಿಗುವಂತಹದ್ದು
  • ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥಿಸಿ

ವೃಷಭ

publive-image

  • ಕುಟುಂಬದ ಸದಸ್ಯರು ನಿಮ್ಮ ಮಾತನ್ನು ಕೇಳುವಂತಹದ್ದು
  • ನೀವು ಆಡಿದ ಮಾತುಗಳು ಹಲವರಿಗೆ ಮಾರ್ಗದರ್ಶನ ಆಗುತ್ತದೆ
  • ಆಂತರಿಕ ಶತ್ರುಗಳು ನಿಮಗೆ ಅವಮಾನಿಸಲು ಕಾಯುತ್ತಿರುತ್ತಾರೆ
  • ನೀವು ಎಷ್ಟೇ ಪ್ರಯತ್ನಿಸಿದರೂ ಶತ್ರುಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ
  • ತುಂಬಾ ಕೋಪ,ತಾಳ್ಮೆ ಕಳೆದುಕೊಳ್ಳುವ ಪ್ರಸಂಗ ಬರಬಹುದು ಜಾಗ್ರತೆವಹಿಸಿ
  • ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆವಹಿಸಿ ತೊಂದರೆಯಾಗುವ ಸಾಧ್ಯತೆ ಇದೆ
  • ಶ್ರೀರಾಮ ಪರಿವಾರ ದೇವತೆಯನ್ನು ಉಪಾಸನೆ ಮಾಡಿ

ಮಿಥುನ

publive-image

  • ಇಂದು ಪ್ರೇಮಿಗಳಿಗೆ ಶುಭದಿನ
  • ಯಾರು ವಿಶೇಷವಾದ ಪ್ರತಿಭೆಯನ್ನು ಹೊಂದಿರುವವರು ಪ್ರದರ್ಶಿಸಲು ಉತ್ತಮವಾದ ದಿನ
  • ಮನೆಯಲ್ಲಿ ಮದುವೆ ವಿಚಾರ ಮುನ್ನೆಲೆಗೆ ಬಂದು ಶುಭವನ್ನು ಕೊಡುವಂತಹದ್ದು
  • ಬೇರೆ ಬೇರೆ ವಿಚಾರಗಳಲ್ಲಿ ಮನೆಯವರೆಲ್ಲ ನಿಷ್ಠೂರವಾಗುವ ಸಾಧ್ಯತೆಗಳಿವೆ
  • ಸಮಸ್ಯೆ ಬಗೆಹರಿಸುವಲ್ಲಿ ನೀವು ಯಶಸ್ವಿಯಾಗುವಿರಿ
  • ಮನೆಯಲ್ಲಿ ನಿಮ್ಮ ಮಾತಿಗೆ ಬೇಸರ ವ್ಯಕ್ತವಾಗಬಹುದು
  • ವೈಶ್ರವಣನ ಉಪಾಸನೆ ಮಾಡಿ

ಕಟಕ

publive-image

  • ತೆರೆದ ಮನಸ್ಸಿನಿಂದ ಮಾತನಾಡಬೇಕು ಇಲ್ಲದಿದ್ದರೆ ತೊಂದರೆಯಾಗಬಹುದು
  • ರಾತ್ರಿಯ ಹೊತ್ತಿಗೆ ಮನೆಯಲ್ಲಿ ಜಗಳವಾಗಬಹುದು
  • ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುತ್ತೀರಿ
  • ಆಹಾರ - ಔಷದೋಪಚಾರ ಇವೆರಡು ವ್ಯತ್ಯಾಸ ಆಗಿ ಆತಂಕವಾಗಬಹುದು
  • ಕಷ್ಟಪಟ್ಟು ದುಡಿದು ತಿನ್ನುವವರಿಗೆ ಈ ದಿನ ಒಳಿತಲ್ಲ
  • ಹಣದ ವಿಚಾರದಲ್ಲಿ ಗೊಂದಲ,ದೋಷ, ನಷ್ಟ ಆಗುವ ಸಾಧ್ಯತೆ ಇದೆ
  • ದುರ್ಗಾರಾಧನೆ ಮಾಡಿ

ಸಿಂಹ

publive-image

  • ಉದ್ಯೋಗದಲ್ಲಿ ನಿಮ್ಮ ಗುರಿ ಸಾಧಿಸಲು ಹಲವಾರು ಸವಾಲುಗಳು ಎದುರಾಗಬಹುದು
  • ವೈವಾಹಿಕ ಜೀವನದಲ್ಲಿ ವ್ಯತ್ಯಯ, ಗೊಂದಲ, ಗಲಾಟೆ ಸಾಧ್ಯತೆ
  • ಅಹಂಭಾವದ ಕಾರಣದಿಂದಾಗಿ ತುಂಬಾ ಸಮಸ್ಯೆಗಳು ಕಾಡಬಹುದು
  • ಮನಸ್ಸನ್ನ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ವಿಫಲ ಸಾಧ್ಯತೆ
  • ಆದರೆ ಹೊಂದಾಣಿಕೆ ಮಾಡಿಕೊಂಡರೆ ಒಳ್ಳೆಯದು
  • ಕೋಪ, ಅಸಹನೆ, ತಾಳ್ಮೆಯಿಲ್ಲದೆ ಇರುವುದು ಕೆಡಕನ್ನ ಉಂಟು ಮಾಡಬಹುದು
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
  • ಶ್ರೀ ಸೂಕ್ತಮಂತ್ರ ಪಠಿಸಿ

ಕನ್ಯಾ

publive-image

  • ನಿಮ್ಮ ವೃತ್ತಿಯಲ್ಲಿ ಕಿರಿಯರಿಂದ ತೊಂದರೆ, ಅಡ್ಡಿ-ಆತಂಕ ಸಾಧ್ಯತೆ
  • ಯೋಗ್ಯರಲ್ಲದವರ ಪರಿಚಯ, ಅವರ ಜೊತೆ ಅನಿವಾರ್ಯವಾಗಿ ಕೆಲಸ ಮಾಡಬೇಕಾಗಬಹುದು
  • ಪೂರ್ವ ಜನ್ಮದ ಸುಕೃತ ನೆನೆದು ಬಹಳ ಬೇಸರ ಪಡಬಹುದು
  • ಧನಾತ್ಮಕ ಚಿಂತನೆಯು ನಿಮಗೆ ಯಶಸ್ಸು ನೀಡಬಹುದು
  • ನಿಮ್ಮ ವಿದ್ಯೆ, ಬುದ್ಧಿ ಮತ್ತು ಭಾವನಾತ್ಮಕವಾದಂತದ್ದು ನಿಮಗೆ ಗೆಲುವಾಗಿ ಪರಿಣಮಿಸಬಹುದು
  • ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ ಗಮನವಿರಲಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ನೌಕರಿ ಅಥವಾ ವೃತ್ತಿಯಲ್ಲಿ ಹೊಸ ಆಹ್ವಾನಗಳು ಬರಬಹುದು
  • ಬೆನ್ನು ಮೂಳೆ ನೋವಿನಿಂದ ಬಳಲುತ್ತಿರುವವರಿಗೆ ತೊಂದರೆಯಿದೆ ಎಚ್ಚರಿಕೆ
  • ನಿಮ್ಮ ಮೂಲ ಉದ್ದೇಶ ಏನಿದೆಯೋ ಅದನ್ನು ತಲುಪಲು ಅವಕಾಶವಿಲ್ಲ
  • ಹೊಸ ಯೋಜನೆಯನ್ನು ಪ್ರಾರಂಭಿಸಲು ಅವಕಾಶವಿದೆ
  • ಸ್ವಂತ ಉದ್ದಿಮೆಯನ್ನು ಮಾಡುವವರಿಗೆ ಈ ದಿನ ಚೆನ್ನಾಗಿದೆ
  • ವೈದ್ಯರಿಗೆ ಹಿನ್ನಡೆ ನಷ್ಟ ಆಗಬಹುದಾದ ದಿನವಾಗಿದೆ
  • ನವಗ್ರಹ ಪ್ರಾರ್ಥನೆ ಮಾಡಿ ಅದರಲ್ಲೂ ಮಂಗಳಗ್ರಹ ಆರಾಧನೆ ಮಾಡಿ

ವೃಶ್ಚಿಕ

publive-image

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿದೆ
  • ಮನೆ, ನಿವೇಶನವನ್ನು ಮಾರುವವರಿಗೆ ಲಾಭ ಸಿಗುವ ದಿನ
  • ಮನೆ ಮತ್ತು ನಿವೇಶನ ಈ ದಿನ ಖರೀದಿಸಿದರೆ ನಷ್ಟ ಆಗಬಹುದು
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲಗಳು ಉಂಟಾಗಬಹುದು
  • ಸರ್ಕಾರದ ಕೆಲವು ನಿಯಮಗಳನ್ನ, ಕಾನೂನು ಕ್ರಮಗಳನ್ನ ಸರಿಯಾಗಿ ಪಾಲಿಸದೆ ನಿಮಗೆ ಅಡ್ಡಿಯಾಗಬಹುದು
  • ಕುಟುಂಬದವರ ವಿಶ್ವಾಸ ಚೆನ್ನಾಗಿರಬೇಕು ಇಲ್ಲದಿದ್ದರೆ ವ್ಯವಹಾರ ಸುಗಮವಾಗಿರುವುದಿಲ್ಲ
  • ಭೂ ವರಾಹಸ್ವಾಮಿಯನ್ನು ಪ್ರಾರ್ಥಿಸಿ

ಧನಸ್ಸು

publive-image

  • ಹಿಂದೆ ಮಾಡಿದ ಯಾವುದೊ ವ್ಯವಹಾರದ ದುಡ್ಡು ಈ ದಿನ ನಿಮ್ಮ ಕೈ ಸೇರಬಹುದು
  • ಯಾವುದೇ ವ್ಯವಹಾರ ಅಥವಾ ದುಡ್ಡಿನ ವಿಚಾರಗಳನ್ನು ಮನೆಯಲ್ಲಿ ತಿಳಿಸುವುದು ಉತ್ತಮ
  • ನೌಕರಿಯಲ್ಲಿ ಮತ್ತು ವೃತ್ತಿಯಲ್ಲಿ ಸಮಾಧಾನವಿರುತ್ತದೆ
  • ವಿದ್ಯಾರ್ಥಿಗಳಿಗೆ ಕೆಲವು ವಿಚಾರಕ್ಕೆ ಜಗಳ ಆಗುವ ಸೂಚನೆ ಇದೆ
  • ವೃತ್ತಿಪರ ಮಹಿಳೆಯರಿಗೆ ಆರ್ಥಿಕ ನೆರವು ಸಿಗಬಹುದು
  • ದೈನಂದಿನ ದಿನಚರಿಯಲ್ಲಿ ಸ್ವಲ್ಪ ವ್ಯತ್ಯಯ ಕಾಣಬಹುದು
  • ಮಹಾಲಕ್ಷ್ಮಿಯನ್ನು ಆರಾಧಿಸಿ

ಮಕರ

publive-image

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೋನಸ್ ಸಿಗುವ ಸಾಧ್ಯತೆ ಇದೆ
  • ಬೆಳಗ್ಗೆ ಶುಭ ಸುದ್ದಿ ಕೇಳಿ ಮನಸ್ಸು ಆನಂದದಾಯಕವಾಗಿರುತ್ತದೆ
  • ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ
  • ಅಪೂರ್ಣವಾದ ಕೆಲಸಗಳಿಂದ ಅವಮಾನವಾಗುವ ಸಾಧ್ಯತೆ
  • ನವ ವಿವಾಹಿತರಿಗೆ ಪ್ರವಾಸದ ಖುಷಿ,ಸಂತೋಷ ಮನೆ ಮಾಡಿರುತ್ತದೆ
  • ಬೇರೆಯವರೊಂದಿಗೆ ಮಾತನಾಡುವಾಗ ಎಚ್ಚರಿಕೆಯನ್ನು ವಹಿಸಬೇಕು
  • ಬೆಳಗ್ಗೆ ಮತ್ತು ಸಂಜೆ 11 ಸಲ ಓಂ ನಮಃ ಶಿವಾಯ ಅಂತ ಪಠಿಸಿ

ಕುಂಭ

publive-image

  • ಈ ದಿನ ಚೆನ್ನಾಗಿದೆ ಅನಗತ್ಯ ಕೆಲಸಗಳಿಗೆ ಸಮಯ ವ್ಯರ್ಥ ಮಾಡಬೇಡಿ
  • ಮನೆಯವರಿಗೆ ಬಹಳ ಸಂತೋಷ ಮತ್ತು ತೃಪ್ತಿ ಸಿಗಲಿದೆ
  • ಮಂಗಳ ಕಾರ್ಯದ ಬಗ್ಗೆ ಚರ್ಚೆ ನಡೆಯಬಹುದು
  • ಮನೆಯಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ಮೌಲ್ಯಯುತವಾಗಿರುತ್ತದೆ
  • ವ್ಯಾಪಾರ, ವ್ಯವಹಾರ ಬೇರೆ ಕಾರ್ಯ ಯೋಜನೆಯಿದ್ದರೆ ಅವೆಲ್ಲವೂ ಕೂಡಿ ಬರುವ ಸಮಯ
  • ಮಕ್ಕಳು ಮತ್ತು ವಿದ್ಯಾರ್ಥಿಗಳು ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ
  • ಮಹಾ ವಿಷ್ಣುವಿನ ಆರಾಧನೆ ಮಾಡಿ

ಮೀನ 

publive-image

  • ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣುವುದು ಗಾಬರಿಯಾಗಬೇಡಿ ಚಿಕಿತ್ಸೆ ಪಡೆಯಿರಿ
  • ಅಧಿಕ ಖರ್ಚು ಇರುವಂತಹ ದಿನ
  • ಆರೋಗ್ಯದಲ್ಲಿ ವ್ಯತ್ಯಾಸದಿಂದ ಕೆಲಸದಲ್ಲಿ ಅಡಚಣೆಯಾಗಬಹುದು
  • ತುಂಬಾ ಅನಗತ್ಯವಾದಂತಹ ಆಯೋಜಿಸಿದ್ದ ಕಾರ್ಯಕ್ರಮ ಸ್ಧಗಿತವಾಗಬಹುದು
  • ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷಾ ಸಿದ್ಧತೆಗೆ ಅವಕಾಶವಿದ್ದರೂ ಮನಸ್ಸಿರುವುದಿಲ್ಲ
  • ಮಾನಸಿಕ ಒತ್ತಡ, ಖರ್ಚು ಎಲ್ಲವೂ ಒಟ್ಟಿಗೆ ಆಕ್ರಮಿಸಬಹುದು
  • ಬೇರೆ ಬೇರೆ ಕಿರಿಕಿರಿಗಳಿಂದ ಈ ದಿನ ಕಳೆಯುತ್ತದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment