ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಸಮಾಜದಲ್ಲಿ ಹೆಸರನ್ನು ಗಳಿಸುವ ಅವಕಾಶ ನಿಮಗೆ ಸಿಗಲಿದೆ
  • ಆಧ್ಯಾತ್ಮಿಕವಾಗಿ ಚಿಂತಿಸುತ್ತೀರಿ, ಆದರೆ ಪ್ರಯೋಜನವಾಗುವುದಿಲ್ಲ
  • ಯೋಜನಾ ಬದ್ಧವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಸಮಾಜದಲ್ಲಿ ಹೆಸರನ್ನು ಗಳಿಸುವ ಅವಕಾಶ ನಿಮಗೆ ಸಿಗಲಿದೆ
  • ಅನಿರೀಕ್ಷಿತ ಧನಾಗಮನ ಆಗುತ್ತದೆ
  • ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಲು ಉತ್ತಮವಾದ ದಿನ
  • ಕೈ ಹಿಡಿದ ಕೆಲಸಗಳಲ್ಲಿ ಹಿನ್ನಡೆ ಕಾಣುತ್ತದೆ ನೀವು ತಲೆಕೆಡೆಸಿಕೊಳ್ಳುವುದಿಲ್ಲ
  • ಮಕ್ಕಳು ತುಂಬಾ ವಿಧೇಯರಾಗಿರುತ್ತಾರೆ, ಪೋಷಕರಿಗೆ, ಶಿಕ್ಷಕರ ಮನಸ್ಸಿಗೆ ಸಂತೋಷ ಸಿಗಲಿದೆ
  • ಪುರಸ್ಕಾರ, ಬಹುಮಾನ ಎಲ್ಲವೂ ನಿಮ್ಮ ಪಾಲಾಗಲಿದೆ
  • ಸಾಲ ಸುಲಭವಾಗಿ ಸಿಗುತ್ತದೆ ಆದರೆ ಯೋಚನೆ ಮಾಡಿ
  • ಗುರುದಕ್ಷಣಾ ಮೂರ್ತಿಯನ್ನು ಆರಾಧನೆ ಮಾಡಿ

ವೃಷಭ

publive-image

  • ವಿದ್ಯಾರ್ಥಿಗಳು ಹೆಚ್ಚಿನ ನಿರ್ಲಕ್ಷ್ಯ ಮಾಡಿ ತೊಂದರೆಗೆ ಕಾರಣರಾಗುತ್ತೀರಿ
  • ಸಂಬಂಧಿಕರು ನಿಮ್ಮನ್ನು ಹಣಕ್ಕಾಗಿ ಹಿಂಸಿಸಬಹುದು
  • ಮಂಗಳ ಕಾರ್ಯದಲ್ಲಿ ಭಾಗಿಯಾಗಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯವಿರುತ್ತದೆ
  • ಬೇರೆಯವರ ಸಮಸ್ಯೆಗಳನ್ನ ಬಗೆಹರಿಸುವುದಕ್ಕೆ ಹೋಗಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ
  • ಹಿರಿಯರು ನಿಮ್ಮನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ ಕಿರಿಯರು ಗೌರವಿಸುತ್ತಾರೆ
  • ಆಧ್ಯಾತ್ಮಿಕವಾಗಿ ಚಿಂತಿಸುತ್ತೀರಿ, ಆದರೆ ಪ್ರಯೋಜನವಾಗುವುದಿಲ್ಲ
  • ಮಾನಸಿಕ ಚಂಚಲತೆ ನಿಯಂತ್ರಣದಲ್ಲಿಟ್ಟುಕೊಳ್ಳಿ
  • ಮನೆದೇವರನ್ನು ಪ್ರಾರ್ಥಿಸಿ

ಮಿಥುನ

publive-image

  • ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಜಗಳ ಆಗಬಹುದು ಆದರೆ ಏನು ಪ್ರಯೋಜನವಾಗುವುದಿಲ್ಲ
  • ಆತುರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ
  • ಯೋಜನಾ ಬದ್ಧವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು
  • ತುಂಬಾ ತಿರುಗಾಟ ಇರುತ್ತದೆ ಆದರೆ ಆದಾಯ ಮಾತ್ರ ಇರುವುದಿಲ್ಲ
  • ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಿ
  • ಕೆಲಸದ ಒತ್ತಡ ತುಂಬಾ ಇರುತ್ತದೆ ಜಾಗರೂಕತೆಯಿಂದ ನಿಭಾಯಿಸಬೇಕು
  • ಇಷ್ಟದೇವತೆಯನ್ನು ಪ್ರಾರ್ಥಿಸಿ

ಕಟಕ

publive-image

  • ದಾಂಪತ್ಯ ಜೀವನ ಸುಖಮಯವಾಗಿದ್ದರೂ ಕೂಡ ನೀವು ಆಸ್ಪದ ಕೊಡುವುದಿಲ್ಲ
  • ಮನೆಯ ನವೀಕರಣ ಮತ್ತು ಅಲಂಕಾರಕ್ಕೆ ಹಣ ಖರ್ಚಾಗಲಿದೆ
  • ಕರ್ತವ್ಯಲೋಪದಿಂದ ನಿಮ್ಮ ಮೇಲೆ ಆಪಾದನೆ ಬರಬಹುದು
  • ವಿನಾಕಾರಣ ಕೋಪಗೊಳ್ಳುತ್ತೀರಿ ಇದರಿಂದ ಮನೆಯವರಿಗೆಲ್ಲ ಆತಂಕವಾಗುತ್ತದೆ
  • ಬೌದ್ಧಿಕವಾದಂತಹ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಆದಾಯ ಚೆನ್ನಾಗಿರುತ್ತದೆ ನೀವಿರುವ ಜಾಗಕ್ಕೆ ಅದೃಷ್ಟ ಲಕ್ಷ್ಮೀ ಹುಡುಕಿಕೊಂಡು ಬರುವ ದಿನ
  • ಕಾನೂನು ವಿದ್ಯಾರ್ಥಿಗಳಿಗೆ ಮತ್ತು ನ್ಯಾಯವಾದಿಗಳಿಗೆ ಶುಭದಿನ
  • ಆರೋಗ್ಯದಲ್ಲಿ ವ್ಯತ್ಯಯ ಕಂಡರೂ ಗಾಬರಿ ಆಗೋದು ಬೇಡ
  • ತುಂಬಾ ಗಂಭೀರ ಮತ್ತು ತಾಳ್ಮೆಯಿಂದ ಮಾಡಿದ ಕೆಲಸಗಳು ಕೈಗೂಡುತ್ತವೆ
  • ಉತ್ತಮವಾದ ಹಣವಾದರೆ ಮಾತ್ರ ಸ್ವೀಕರಿಸಿ ಇಲ್ಲದಿದ್ದರೆ ತಿರಸ್ಕಾರ ಮಾಡಿ
  • ಉಚಿತವಾಗಿ ಯಾರಿಗೂ ಸಲಹೆ ನೀಡಬೇಡಿ
  • ಕುಲದೇವತೆಯನ್ನು ಆರಾಧನೆ ಮಾಡಿ

ಕನ್ಯಾ

publive-image

  • ನೀವು ಬೇರೆಯವರ ಹಿಂಸೆಗೆ ಒಳಗಾಗಬಹುದು
  • ತಾಯಿಯವರ ಆರೋಗ್ಯಕ್ಕೆ ಸ್ವಲ್ಪ ತೊಂದರೆಯಾಗಬಹುದು ಎಚ್ಚರವಹಿಸಿ
  • ಬಹಳ ಉತ್ತೇಜನಕಾರಿ ಕೆಲಸಗಳು ಹಾಗೆ ಉಳಿಯಬಹುದು
  • ಪ್ರಯಾಣ ಮಾಡಲು ಈ ದಿನ ಯೋಗ್ಯವಲ್ಲ ಬೆನ್ನುನೋವು ಕಾಡಬಹುದು ಎಚ್ಚರಿಕೆ
  • ಸರಿಯಾದ ಲೆಕ್ಕಚಾರವಿರದೆ ಹಣದ ಅಥವಾ ವಸ್ತುವಿನ ನಷ್ಟ ಸಾಧ್ಯತೆ ಇದೆ
  • ನಿನ್ನೆ ಮಾಡಿದ ತಪ್ಪಿನಿಂದ ಈ ದಿನ ನಿಮ್ಮ ಕೆಲಸದಲ್ಲಿ ಸಮಸ್ಯೆ ಅನುಭವಿಸುತ್ತೀರಿ
  • ಕುಬೇರ ಲಕ್ಷ್ಮೀಯನ್ನು ಪ್ರಾರ್ಥಿಸಿ

ತುಲಾ

publive-image

  • ಮನೆಯಲ್ಲಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೀರಿ
  • ನಿಮ್ಮ ಆಲೋಚನೆಗಳನ್ನು ಹೇಗೆ ವ್ಯಕ್ತ ಪಡಿಸಬೇಕೆಂಬ ಗೊಂದಲವಿರುತ್ತದೆ
  • ಕಣ್ಣಿಗೆ ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ ತೊಂದರೆಯಾಗಬಹುದು
  • ಹಳೆಯ ಘಟನೆ ಮನಸ್ಸಿಗೆ ಬಂದು ತುಂಬಾ ಭಾವುಕತೆಯನ್ನು ಉಂಟು ಮಾಡುತ್ತದೆ
  • ಸಂಶೋಧನಾ ಕಾರ್ಯದಲ್ಲಿ ಯಶಸ್ಸನ್ನ ಹೊಂದಬಹುದು
  • ಪ್ರೀತಿ - ಪ್ರೇಮದ ವಿಚಾರ ಪ್ರಸ್ತಾಪಕ್ಕೆ ಬಂದು ಸಿಟ್ಟನ್ನು ಮಾಡಿಕೊಳ್ತೀರಿ
  • ಸೂರ್ಯದೇವರನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ತುಂಬಾ ಆತಂಕಪಡುವ ಯಾವುದೇ ಕೆಲಸಗಳಿಗೂ ಹೋಗಬಾರದು
  • ಅನಗತ್ಯ ಓಡಾಟ, ಪ್ರಯಾಣ,ಪ್ರವಾಸಗಳಿದ್ದರೆ ಮುಂದಕ್ಕೆ ಹಾಕಿ
  • ರಕ್ತದೊತ್ತಡ ರೋಗಿಗಳಿಗೆ ಸ್ವಲ್ಪ ತೊಂದರೆ ಇರುವ ದಿನ ಜಾಗ್ರತೆವಹಿಸಿ
  • ಆದಷ್ಟು ಮನಸ್ಸನ್ನು ಧ್ಯಾನದಲ್ಲಿ ತೊಡಗಿಸಿಕೊಳ್ಳಿ ಸಮಾಧಾನ ಸಿಗುತ್ತದೆ
  • ಪ್ರೇಮಿಗಳು ಪರಸ್ಪರ ವಾದ ಮಾಡಬಾರದು
  • ಆಹಾರ ಮಿತವಾಗಿರಲಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮೃತ್ಯುಂಜಯ ಮಂತ್ರವನ್ನು 11 ಬಾರಿ ಹೇಳಿ ಪ್ರಾರ್ಥಿಸಿ

ಧನಸ್ಸು

publive-image

  • ನಿಲ್ಲಿಸಿದ ಕೆಲಸ ಇದ್ದಕ್ಕಿದ್ದಂತೆ ಪ್ರಾರಂಭವಾಗುವ ದಿವಸ
  • ಉದ್ಯೋಗದಲ್ಲಿ ಹೆಚ್ಚು ಕೆಲಸದ ಹೊರೆಯಿರುತ್ತದೆ
  • ಎದುರಾಳಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
  • ಹಿರಿಯರ ಮತ್ತು ಅನುಭವಿಗಳ ಸಂಪರ್ಕ ಇಟ್ಟುಕೊಳ್ಳಿ ಉಪಯೋಗವಾಗುತ್ತದೆ
  • ಅಧ್ಯಾಪನ ವೃತ್ತಿಯಲ್ಲಿ ಇರುವವರಿಗೆ ಅಪರಾಧ ಭಾವನೆ ಕಾಡಬಹುದು
  • ಮನೆಯಲ್ಲಿ ಮತ್ತು ಹೊರಗಡೆ ಚಿಕ್ಕ ಮಕ್ಕಳ ಜೊತೆಯಲ್ಲಿ ಆನಂದವಾಗಿರುವ ದಿನ
  • ಸರಸ್ವತಿಯನ್ನು ಆರಾಧನೆ ಮಾಡಿ

ಮಕರ

publive-image

  • ನಿಮ್ಮ ಜವಾಬ್ದಾರಿ ಪೂರ್ಣ ಆಗುವುದಿಲ್ಲ, ಮನಸ್ಸಿಗೆ ಬೇಸರವಾಗುವ ದಿನ
  • ವಿದ್ಯಾರ್ಥಿಗಳಿಗೆ ಹಣದ ದೃಷ್ಟಿಯಿಂದ ಸ್ವಲ್ಪ ಸಂಕಷ್ಟದ ದಿನ
  • ಆದಾಯದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ಅಸಮಾಧಾನ ಹೊಂದುತ್ತೀರಿ
  • ಪ್ರಯತ್ನ ಕಡಿಮೆ ಮಾಡಿ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತೀರಿ
  • ಯಾವ ಕೆಲಸದಲ್ಲೂ ಮಾನಸಿಕ ಕೀಳರಿಮೆ ಇರಬಾರದು
  • ಕೆಲವು ಕಾರಣಗಳಿಂದ ಕೆಲವು ಕೆಲಸಗಳು ಸ್ಥಗಿತಗೊಳ್ಳಬಹುದು
  • ವಿವಾಹ ವಿಚಾರದಲ್ಲಿ ಕಹಿಯ ವಾತಾವರಣ
  • ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಸಮಸ್ಯೆ ಇದ್ದು ಬೇಸರ ತರುವಂತಹದ್ದು
  • ಧರ್ಮಸ್ಥಳ ಮಂಜುನಾಥೇಶ್ವರನನ್ನು ಆರಾಧಿಸಿ

ಕುಂಭ

publive-image

  • ವ್ಯವಹಾರದ ದೃಷ್ಠಿಯಿಂದ ಸಾಧಾರಣವಾದ ದಿನ ಮನಸ್ಸಿಗೆ ಸಂತೋಷದ ದಿನ
  • ನಿಮ್ಮ ಒಳ್ಳೆಯ ಸ್ವಭಾವ, ನಿಮ್ಮ ವ್ಯಕ್ತಿತ್ವ, ವರ್ತನೆ ಬೇರೆಯವರಿಗೆ ಮಾರ್ಗದರ್ಶಿ ಆಗುವಂತಹದ್ದು
  • ಅದಕ್ಕೋಸ್ಕರ ಜನ ನಿಮ್ಮನ್ನು ಕಾಯುತ್ತಿರುತ್ತಾರೆ
  • ಪ್ರೇಮಿಗಳ ಮಧ್ಯದಲ್ಲಿ ಅನುಮಾನಗಳು ಭಿನ್ನಾಭಿಪ್ರಾಯಗಳು ಹೆಚ್ಚು ಬರಲಿದೆ
  • ಆತ್ಮ ಗೌರವ ಹೆಚ್ಚಿಸಿಕೊಳ್ಳಿ ಯಾವುದೇ ವಿಷಯದಲ್ಲೂ ಕೂಡ ರಾಜಿ ಮಾಡಿಕೊಳ್ಳಬೇಡಿ
  • ಆಹಾರ ಪದ್ಧತಿಯಲ್ಲಿ ಜಾಗರೂಕರಾಗಿರಿ ಶಾಸ್ತ್ರದಲ್ಲಿ ಲಂಘನಂ ಪರಮೌಷಧಮ್ ಅಂತಾರೆ
  • ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ

ಮೀನ 

publive-image

  • ಸ್ನೇಹಿತರ ಪ್ರೀತಿಗೆ ಕಟ್ಟುಬಿದ್ದು ಈ ದಿನ ವ್ಯರ್ಥವಾಗಬಹುದು
  • ಬಿಡುವಿಲ್ಲದ ಕೆಲಸದ ಮಧ್ಯೆ ಅತಿಯಾದ ಸಂತೋಷವನ್ನು ನಿಮ್ಮದಾಗಿಸಿಕೊಳ್ಳುತ್ತೀರಿ
  • ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
  • ಕೋಪ ಮತ್ತು ಉತ್ಸಾಹ ಎರಡೂ ನಿಯಂತ್ರಣದಲ್ಲಿರಬೇಕಾಗುತ್ತದೆ
  • ಹೊಸ ವಾಹನ ಖರೀದಿಸುವ ಯೋಗವಿದೆ
  • ಉಪಯೋಗಿಸಿದ ವಾಹನ ಕೊಂಡುಕೊಳ್ಳುವುದು ಬೇಡ
  • ಕುಲದೇವತಾ ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment