/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಸಮಾಜದಲ್ಲಿ ಹೆಸರನ್ನು ಗಳಿಸುವ ಅವಕಾಶ ನಿಮಗೆ ಸಿಗಲಿದೆ
- ಅನಿರೀಕ್ಷಿತ ಧನಾಗಮನ ಆಗುತ್ತದೆ
- ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಲು ಉತ್ತಮವಾದ ದಿನ
- ಕೈ ಹಿಡಿದ ಕೆಲಸಗಳಲ್ಲಿ ಹಿನ್ನಡೆ ಕಾಣುತ್ತದೆ ನೀವು ತಲೆಕೆಡೆಸಿಕೊಳ್ಳುವುದಿಲ್ಲ
- ಮಕ್ಕಳು ತುಂಬಾ ವಿಧೇಯರಾಗಿರುತ್ತಾರೆ, ಪೋಷಕರಿಗೆ, ಶಿಕ್ಷಕರ ಮನಸ್ಸಿಗೆ ಸಂತೋಷ ಸಿಗಲಿದೆ
- ಪುರಸ್ಕಾರ, ಬಹುಮಾನ ಎಲ್ಲವೂ ನಿಮ್ಮ ಪಾಲಾಗಲಿದೆ
- ಸಾಲ ಸುಲಭವಾಗಿ ಸಿಗುತ್ತದೆ ಆದರೆ ಯೋಚನೆ ಮಾಡಿ
- ಗುರುದಕ್ಷಣಾ ಮೂರ್ತಿಯನ್ನು ಆರಾಧನೆ ಮಾಡಿ
ವೃಷಭ
- ವಿದ್ಯಾರ್ಥಿಗಳು ಹೆಚ್ಚಿನ ನಿರ್ಲಕ್ಷ್ಯ ಮಾಡಿ ತೊಂದರೆಗೆ ಕಾರಣರಾಗುತ್ತೀರಿ
- ಸಂಬಂಧಿಕರು ನಿಮ್ಮನ್ನು ಹಣಕ್ಕಾಗಿ ಹಿಂಸಿಸಬಹುದು
- ಮಂಗಳ ಕಾರ್ಯದಲ್ಲಿ ಭಾಗಿಯಾಗಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯವಿರುತ್ತದೆ
- ಬೇರೆಯವರ ಸಮಸ್ಯೆಗಳನ್ನ ಬಗೆಹರಿಸುವುದಕ್ಕೆ ಹೋಗಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ
- ಹಿರಿಯರು ನಿಮ್ಮನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ ಕಿರಿಯರು ಗೌರವಿಸುತ್ತಾರೆ
- ಆಧ್ಯಾತ್ಮಿಕವಾಗಿ ಚಿಂತಿಸುತ್ತೀರಿ, ಆದರೆ ಪ್ರಯೋಜನವಾಗುವುದಿಲ್ಲ
- ಮಾನಸಿಕ ಚಂಚಲತೆ ನಿಯಂತ್ರಣದಲ್ಲಿಟ್ಟುಕೊಳ್ಳಿ
- ಮನೆದೇವರನ್ನು ಪ್ರಾರ್ಥಿಸಿ
ಮಿಥುನ
- ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಜಗಳ ಆಗಬಹುದು ಆದರೆ ಏನು ಪ್ರಯೋಜನವಾಗುವುದಿಲ್ಲ
- ಆತುರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ
- ಯೋಜನಾ ಬದ್ಧವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು
- ತುಂಬಾ ತಿರುಗಾಟ ಇರುತ್ತದೆ ಆದರೆ ಆದಾಯ ಮಾತ್ರ ಇರುವುದಿಲ್ಲ
- ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಿ
- ಕೆಲಸದ ಒತ್ತಡ ತುಂಬಾ ಇರುತ್ತದೆ ಜಾಗರೂಕತೆಯಿಂದ ನಿಭಾಯಿಸಬೇಕು
- ಇಷ್ಟದೇವತೆಯನ್ನು ಪ್ರಾರ್ಥಿಸಿ
ಕಟಕ
- ದಾಂಪತ್ಯ ಜೀವನ ಸುಖಮಯವಾಗಿದ್ದರೂ ಕೂಡ ನೀವು ಆಸ್ಪದ ಕೊಡುವುದಿಲ್ಲ
- ಮನೆಯ ನವೀಕರಣ ಮತ್ತು ಅಲಂಕಾರಕ್ಕೆ ಹಣ ಖರ್ಚಾಗಲಿದೆ
- ಕರ್ತವ್ಯಲೋಪದಿಂದ ನಿಮ್ಮ ಮೇಲೆ ಆಪಾದನೆ ಬರಬಹುದು
- ವಿನಾಕಾರಣ ಕೋಪಗೊಳ್ಳುತ್ತೀರಿ ಇದರಿಂದ ಮನೆಯವರಿಗೆಲ್ಲ ಆತಂಕವಾಗುತ್ತದೆ
- ಬೌದ್ಧಿಕವಾದಂತಹ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಆದಾಯ ಚೆನ್ನಾಗಿರುತ್ತದೆ ನೀವಿರುವ ಜಾಗಕ್ಕೆ ಅದೃಷ್ಟ ಲಕ್ಷ್ಮೀ ಹುಡುಕಿಕೊಂಡು ಬರುವ ದಿನ
- ಕಾನೂನು ವಿದ್ಯಾರ್ಥಿಗಳಿಗೆ ಮತ್ತು ನ್ಯಾಯವಾದಿಗಳಿಗೆ ಶುಭದಿನ
- ಆರೋಗ್ಯದಲ್ಲಿ ವ್ಯತ್ಯಯ ಕಂಡರೂ ಗಾಬರಿ ಆಗೋದು ಬೇಡ
- ತುಂಬಾ ಗಂಭೀರ ಮತ್ತು ತಾಳ್ಮೆಯಿಂದ ಮಾಡಿದ ಕೆಲಸಗಳು ಕೈಗೂಡುತ್ತವೆ
- ಉತ್ತಮವಾದ ಹಣವಾದರೆ ಮಾತ್ರ ಸ್ವೀಕರಿಸಿ ಇಲ್ಲದಿದ್ದರೆ ತಿರಸ್ಕಾರ ಮಾಡಿ
- ಉಚಿತವಾಗಿ ಯಾರಿಗೂ ಸಲಹೆ ನೀಡಬೇಡಿ
- ಕುಲದೇವತೆಯನ್ನು ಆರಾಧನೆ ಮಾಡಿ
ಕನ್ಯಾ
- ನೀವು ಬೇರೆಯವರ ಹಿಂಸೆಗೆ ಒಳಗಾಗಬಹುದು
- ತಾಯಿಯವರ ಆರೋಗ್ಯಕ್ಕೆ ಸ್ವಲ್ಪ ತೊಂದರೆಯಾಗಬಹುದು ಎಚ್ಚರವಹಿಸಿ
- ಬಹಳ ಉತ್ತೇಜನಕಾರಿ ಕೆಲಸಗಳು ಹಾಗೆ ಉಳಿಯಬಹುದು
- ಪ್ರಯಾಣ ಮಾಡಲು ಈ ದಿನ ಯೋಗ್ಯವಲ್ಲ ಬೆನ್ನುನೋವು ಕಾಡಬಹುದು ಎಚ್ಚರಿಕೆ
- ಸರಿಯಾದ ಲೆಕ್ಕಚಾರವಿರದೆ ಹಣದ ಅಥವಾ ವಸ್ತುವಿನ ನಷ್ಟ ಸಾಧ್ಯತೆ ಇದೆ
- ನಿನ್ನೆ ಮಾಡಿದ ತಪ್ಪಿನಿಂದ ಈ ದಿನ ನಿಮ್ಮ ಕೆಲಸದಲ್ಲಿ ಸಮಸ್ಯೆ ಅನುಭವಿಸುತ್ತೀರಿ
- ಕುಬೇರ ಲಕ್ಷ್ಮೀಯನ್ನು ಪ್ರಾರ್ಥಿಸಿ
ತುಲಾ
- ಮನೆಯಲ್ಲಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೀರಿ
- ನಿಮ್ಮ ಆಲೋಚನೆಗಳನ್ನು ಹೇಗೆ ವ್ಯಕ್ತ ಪಡಿಸಬೇಕೆಂಬ ಗೊಂದಲವಿರುತ್ತದೆ
- ಕಣ್ಣಿಗೆ ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ ತೊಂದರೆಯಾಗಬಹುದು
- ಹಳೆಯ ಘಟನೆ ಮನಸ್ಸಿಗೆ ಬಂದು ತುಂಬಾ ಭಾವುಕತೆಯನ್ನು ಉಂಟು ಮಾಡುತ್ತದೆ
- ಸಂಶೋಧನಾ ಕಾರ್ಯದಲ್ಲಿ ಯಶಸ್ಸನ್ನ ಹೊಂದಬಹುದು
- ಪ್ರೀತಿ - ಪ್ರೇಮದ ವಿಚಾರ ಪ್ರಸ್ತಾಪಕ್ಕೆ ಬಂದು ಸಿಟ್ಟನ್ನು ಮಾಡಿಕೊಳ್ತೀರಿ
- ಸೂರ್ಯದೇವರನ್ನು ಪ್ರಾರ್ಥಿಸಿ
ವೃಶ್ಚಿಕ
- ತುಂಬಾ ಆತಂಕಪಡುವ ಯಾವುದೇ ಕೆಲಸಗಳಿಗೂ ಹೋಗಬಾರದು
- ಅನಗತ್ಯ ಓಡಾಟ, ಪ್ರಯಾಣ,ಪ್ರವಾಸಗಳಿದ್ದರೆ ಮುಂದಕ್ಕೆ ಹಾಕಿ
- ರಕ್ತದೊತ್ತಡ ರೋಗಿಗಳಿಗೆ ಸ್ವಲ್ಪ ತೊಂದರೆ ಇರುವ ದಿನ ಜಾಗ್ರತೆವಹಿಸಿ
- ಆದಷ್ಟು ಮನಸ್ಸನ್ನು ಧ್ಯಾನದಲ್ಲಿ ತೊಡಗಿಸಿಕೊಳ್ಳಿ ಸಮಾಧಾನ ಸಿಗುತ್ತದೆ
- ಪ್ರೇಮಿಗಳು ಪರಸ್ಪರ ವಾದ ಮಾಡಬಾರದು
- ಆಹಾರ ಮಿತವಾಗಿರಲಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಮೃತ್ಯುಂಜಯ ಮಂತ್ರವನ್ನು 11 ಬಾರಿ ಹೇಳಿ ಪ್ರಾರ್ಥಿಸಿ
ಧನಸ್ಸು
- ನಿಲ್ಲಿಸಿದ ಕೆಲಸ ಇದ್ದಕ್ಕಿದ್ದಂತೆ ಪ್ರಾರಂಭವಾಗುವ ದಿವಸ
- ಉದ್ಯೋಗದಲ್ಲಿ ಹೆಚ್ಚು ಕೆಲಸದ ಹೊರೆಯಿರುತ್ತದೆ
- ಎದುರಾಳಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
- ಹಿರಿಯರ ಮತ್ತು ಅನುಭವಿಗಳ ಸಂಪರ್ಕ ಇಟ್ಟುಕೊಳ್ಳಿ ಉಪಯೋಗವಾಗುತ್ತದೆ
- ಅಧ್ಯಾಪನ ವೃತ್ತಿಯಲ್ಲಿ ಇರುವವರಿಗೆ ಅಪರಾಧ ಭಾವನೆ ಕಾಡಬಹುದು
- ಮನೆಯಲ್ಲಿ ಮತ್ತು ಹೊರಗಡೆ ಚಿಕ್ಕ ಮಕ್ಕಳ ಜೊತೆಯಲ್ಲಿ ಆನಂದವಾಗಿರುವ ದಿನ
- ಸರಸ್ವತಿಯನ್ನು ಆರಾಧನೆ ಮಾಡಿ
ಮಕರ
- ನಿಮ್ಮ ಜವಾಬ್ದಾರಿ ಪೂರ್ಣ ಆಗುವುದಿಲ್ಲ, ಮನಸ್ಸಿಗೆ ಬೇಸರವಾಗುವ ದಿನ
- ವಿದ್ಯಾರ್ಥಿಗಳಿಗೆ ಹಣದ ದೃಷ್ಟಿಯಿಂದ ಸ್ವಲ್ಪ ಸಂಕಷ್ಟದ ದಿನ
- ಆದಾಯದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ಅಸಮಾಧಾನ ಹೊಂದುತ್ತೀರಿ
- ಪ್ರಯತ್ನ ಕಡಿಮೆ ಮಾಡಿ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತೀರಿ
- ಯಾವ ಕೆಲಸದಲ್ಲೂ ಮಾನಸಿಕ ಕೀಳರಿಮೆ ಇರಬಾರದು
- ಕೆಲವು ಕಾರಣಗಳಿಂದ ಕೆಲವು ಕೆಲಸಗಳು ಸ್ಥಗಿತಗೊಳ್ಳಬಹುದು
- ವಿವಾಹ ವಿಚಾರದಲ್ಲಿ ಕಹಿಯ ವಾತಾವರಣ
- ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಸಮಸ್ಯೆ ಇದ್ದು ಬೇಸರ ತರುವಂತಹದ್ದು
- ಧರ್ಮಸ್ಥಳ ಮಂಜುನಾಥೇಶ್ವರನನ್ನು ಆರಾಧಿಸಿ
ಕುಂಭ
- ವ್ಯವಹಾರದ ದೃಷ್ಠಿಯಿಂದ ಸಾಧಾರಣವಾದ ದಿನ ಮನಸ್ಸಿಗೆ ಸಂತೋಷದ ದಿನ
- ನಿಮ್ಮ ಒಳ್ಳೆಯ ಸ್ವಭಾವ, ನಿಮ್ಮ ವ್ಯಕ್ತಿತ್ವ, ವರ್ತನೆ ಬೇರೆಯವರಿಗೆ ಮಾರ್ಗದರ್ಶಿ ಆಗುವಂತಹದ್ದು
- ಅದಕ್ಕೋಸ್ಕರ ಜನ ನಿಮ್ಮನ್ನು ಕಾಯುತ್ತಿರುತ್ತಾರೆ
- ಪ್ರೇಮಿಗಳ ಮಧ್ಯದಲ್ಲಿ ಅನುಮಾನಗಳು ಭಿನ್ನಾಭಿಪ್ರಾಯಗಳು ಹೆಚ್ಚು ಬರಲಿದೆ
- ಆತ್ಮ ಗೌರವ ಹೆಚ್ಚಿಸಿಕೊಳ್ಳಿ ಯಾವುದೇ ವಿಷಯದಲ್ಲೂ ಕೂಡ ರಾಜಿ ಮಾಡಿಕೊಳ್ಳಬೇಡಿ
- ಆಹಾರ ಪದ್ಧತಿಯಲ್ಲಿ ಜಾಗರೂಕರಾಗಿರಿ ಶಾಸ್ತ್ರದಲ್ಲಿ ಲಂಘನಂ ಪರಮೌಷಧಮ್ ಅಂತಾರೆ
- ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ
ಮೀನ
- ಸ್ನೇಹಿತರ ಪ್ರೀತಿಗೆ ಕಟ್ಟುಬಿದ್ದು ಈ ದಿನ ವ್ಯರ್ಥವಾಗಬಹುದು
- ಬಿಡುವಿಲ್ಲದ ಕೆಲಸದ ಮಧ್ಯೆ ಅತಿಯಾದ ಸಂತೋಷವನ್ನು ನಿಮ್ಮದಾಗಿಸಿಕೊಳ್ಳುತ್ತೀರಿ
- ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
- ಕೋಪ ಮತ್ತು ಉತ್ಸಾಹ ಎರಡೂ ನಿಯಂತ್ರಣದಲ್ಲಿರಬೇಕಾಗುತ್ತದೆ
- ಹೊಸ ವಾಹನ ಖರೀದಿಸುವ ಯೋಗವಿದೆ
- ಉಪಯೋಗಿಸಿದ ವಾಹನ ಕೊಂಡುಕೊಳ್ಳುವುದು ಬೇಡ
- ಕುಲದೇವತಾ ಸ್ಮರಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ