ಹೊಸ ವಸ್ತು ಖರೀದಿಗೆ ಶುಭ ದಿನ, ಸುಖಾ ಸುಮ್ಮನೆ ಹಣ ಖರ್ಚಾಗುವ ಸಾಧ್ಯತೆ ;ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಅಮೂಲ್ಯ ವಸ್ತಗಳನ್ನು ಖರೀದಿಸಲು ಈ ದಿನ ಶುಭದಿನ
  • ಪರ್ವತಾರೋಹಿಗಳಿಗೆ ಯಶಸ್ಸು ಸಿಗುವ ಶುಭದಿನ
  • ಶುಭ ಕಾರ್ಯಗಳಿಗೆ ಅತಿಯಾದ ಖರ್ಚು ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಅಮೂಲ್ಯ ವಸ್ತಗಳನ್ನು ಖರೀದಿಸಲು ಈ ದಿನ ಶುಭದಿನ
  • ಆಹಾರ ಮತ್ತು ನಿದ್ರೆಯ ಬಗ್ಗೆ ಹೆಚ್ಚು ಗಮನಹರಿಸಿ
  • ಇಂದು ಅನಿರೀಕ್ಷಿತ ಲಾಭ ಸಿಗುತ್ತದೆ
  • ಸಾಧನೆ ಮಾಡಲು ಹೊರಟವರಿಗೆ ಉತ್ತಮ ಮಾರ್ಗದರ್ಶನ ಸಿಗುವಂತ ದಿನ
  • ನೆರೆಹೊರೆಯವರಿಂದ, ಸಹೋದ್ಯೋಗಿಗಳಿಂದ ಉತ್ತಮ ಭರವಸೆ ದೊರೆಯುವ ದಿನ
  • ಆರ್ಥಿಕ ಅನುಕೂಲ, ಮಿತ್ರರ ಸಹಕಾರ ನಿಮಗೆ ದೊರೆಯಲಿದೆ
  • ಅಶ್ವಾರೂಢ ಪಾರ್ವತಿಯ ಮಂತ್ರ ಶ್ರವಣ ಮಾಡಿ

ವೃಷಭ

publive-image

  • ಮಕ್ಕಳಿಗೆ ಒತ್ತಡ ಹಾಕದೆ ಮಾರ್ಗದರ್ಶನ ಮಾಡಿ
  • ಹಿರಿಯರ ಮಾರ್ಗದರ್ಶನದಿಂದ ಉತ್ತಮ ವ್ಯವಸ್ಥೆಯಾಗುವ ದಿನ
  • ಒತ್ತಡದಿಂದ ಮನಸ್ಸಿಗೆ ಸಮಾಧಾನವಿರುವುದಿಲ್ಲ
  • ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶುಭದಿನ
  • ದೂರ ಪ್ರಯಾಣದ ಚಿಂತನೆಯ ದಿನವಾಗಿದೆ
  • ಹೂಡಿಕೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ
  • ಬಾಡಿಗೆ ಹಣ ಸಿಗುವುದರಿಂದ ಆರ್ಥಿಕ ಅಭಿವೃಧ್ಧಿಯಿದೆ
  • ಧಾರಣಾಸರಸ್ವತಿಯನ್ನು ಆರಾಧನೆ ಮಾಡಿ

ಮಿಥುನ

publive-image

  • ಮನೆಯಲ್ಲಿರುವ ಸ್ತ್ರೀಯರಿಗೆ ಅಶುಭ ದಿನ
  • ವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿರಿ
  • ಸಹೋದರ-ಸಹೋದರಿಯರ ನಡುವೆ ಇರುವ ಮನಸ್ತಾಪ ದ್ವೇಷಕ್ಕೆ ತಿರುಗದಂತೆ ನೋಡಿಕೊಳ್ಳಿ
  • ಪರ್ವತಾರೋಹಿಗಳಿಗೆ ಯಶಸ್ಸು ಸಿಗುವ ಶುಭದಿನ
  • ಆಧ್ಯಾತ್ಮಿಕ ಚಿಂತನೆ, ತತ್ವದ ಬಗ್ಗೆ ಹೆಚ್ಚು ಗಮನ ಕೊಡುವ ಅವಕಾಶಗಳಿವೆ
  • ಶುಭ ಕಾರ್ಯಗಳಿಗೆ ಅತಿಯಾದ ಖರ್ಚು ಸಾಧ್ಯತೆ
  • ಇದರಿಂದ ಕುಟುಂಬದವರು ಆತಂಕಕ್ಕೆ ಈಡಾಗುತ್ತಾರೆ
  • ಶಕ್ತಿ ಪಂಚಾಕ್ಷರಿ ಮಂತ್ರವನ್ನು ಪಠಿಸಿ

ಕಟಕ

publive-image

  • ವೃತ್ತಿಯಲ್ಲಿ ಪ್ರಗತಿ ಕಾಣುವ ದಿನವಾದರೂ ವಿಘ್ನಭೀತಿ ಕಾಡುವ ಸಾಧ್ಯತೆ
  • ಕುಟುಂಬದ ಸದಸ್ಯರ ಜೊತೆ ಸಮಯವನ್ನು ಕಳೆಯಿರಿ
  • ಹೊಸ ಬದುಕನ್ನು ಆರಂಭಿಸಲು ಶುಭದಿನ
  • ಕೈಗಾರಿಕೋದ್ಯಮದವರಿಗೆ ಉತ್ತಮ ದಿನ
  • ಇಂದು ಭವಿಷ್ಯ ಉಜ್ವಲವಾಗುವ ದಿನ
  • ಇಂದು ನಿಮ್ಮ ಮನಸ್ಸು ಭಯದಿಂದ ಕೂಡಿರುವ ದಿನವಾಗಿರುತ್ತದೆ
  • ಆವಹಂತೀ ಮಂತ್ರ ಪಠಿಸಿ

ಸಿಂಹ

publive-image

  • ಚಿತ್ರೋದ್ಯಮ, ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನ ಉತ್ತಮವಾಗಿದೆ
  • ಮಕ್ಕಳ ವಿಚಾರದಲ್ಲಿ ಗಮನವಿರಲಿ
  • ದಾಂಪತ್ಯದಲ್ಲಿ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯಬೇಡ
  • ಇಂದು ಹೊಸ ಸಾಲ ಮಾಡಲು ಮುಂದಾಗುತ್ತೀರಿ
  • ಉಡುಪು ವಿನ್ಯಾಸ ಮಾಡುವವರಿಗೆ ಶುಭದಿನ
  • ನಿಮ್ಮ ವ್ಯವಹಾರ ಶೈಲಿ ಚಿಕ್ಕವರಿಗೆ ಮಾರ್ಗದರ್ಶನವಾಗುವ ದಿನ
  • ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ ಉಂಟಾಗಿ ಶತ್ರುಕಾಟ ಹೆಚ್ಚಾಗುವ ಸಾಧ್ಯತೆ
  • ಇಂದು ಕೋರ್ಟ್-ಕಚೇರಿ ವಿಚಾರಕ್ಕೆ ಅಲೆದಾಟ
  • ಅನ್ನಪೂಣೇಶ್ವರಿಯನ್ನು ಸ್ಮರಣೆ ಮಾಡಿ

ಕನ್ಯಾ

publive-image

  • ಗೃಹೋಪಕರಣವನ್ನು ಖರೀದಿಸಲು ಇಂದು ಒಳ್ಳೆಯ ದಿನ
  • ಈ ದಿನ ಜವಾಬ್ದಾರಿ ಹೆಚ್ಚಾಗುತ್ತದೆ
  • ಅಪರಿಚಿತ ವ್ಯಕ್ತಿಗಳ ಮೇಲೆ ಹೆಚ್ಚು ಗಮನವಿರಲಿ
  • ಅಕ್ಕಪಕ್ಕದವರಿಂದ ಮಾನಸಿಕ ಕಿರಿಕಿರಿ ಉಂಟಾಗುವ ದಿನ
  • ಕೆಲಸದ ಹೊರೆ ಜಾಸ್ತಿಯಾಗುವ ಸಾಧ್ಯತೆ ಇದೆ
  • ಮಾಡಿರುವ ಸಾಲಗಳು ತೀರುತ್ತದೆ
  • ಕಾತ್ಯಾಯಿನಿ ದೇವಿಯನ್ನು ಆರಾಧನೆ ಮಾಡಿ

ತುಲಾ

publive-image

  • ಆಂತರಿಕವಾಗಿ ಸಣ್ಣ - ಪುಟ್ಟ ಸಮಸ್ಯೆಗಳು ಉಂಟಾಗಬಹುದು
  • ಮಧ್ಯವರ್ತಿಗಳಿಗೆ ಬೇಡಿಕೆ ಹೆಚ್ಚಾಗಿ ಲಾಭವೂ ಉಂಟಾಗುತ್ತದೆ
  • ನಿಮ್ಮ ಶಿಸ್ತು ಬೇರೆಯವರನ್ನ ಪ್ರಭಾವಿತರನ್ನಾಗಿ ಮಾಡುತ್ತದೆ
  • ಭೂ ವ್ಯವಹಾರದಿಂದ ಶುಭ ಸುದ್ಧಿ ಸಿಗುವ ದಿನ
  • ಆವೇಶ, ಉದ್ವೇಗಗಳ ವರ್ತನೆ ಬೇಡ, ತಾಳ್ಮೆ ಇರಲಿ
  • ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸೂಚನೆ ಇದೆ
  • ಮಹಿಳಾ ಉದ್ಯಮಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವ ದಿನ
  • ವಾಗ್ವಾದಿನೀ ಮಂತ್ರ ಶ್ರವಣ ಮಾಡಿ

ವೃಶ್ಚಿಕ

publive-image

  • ಕುಟುಂಬದಲ್ಲಿ, ಕಾರ್ಯಕ್ಷೇತ್ರದಲ್ಲಿ ಬೇಸರ ಉಂಟಾಗುವ ದಿನ
  • ಸಹೋದ್ಯೋಗಿಗಳು, ಸ್ನೇಹಿತರ ಜೊತೆ ಕಾಲಹರಣ ಮಾಡುವ ದಿನ
  • ನಿಮಗಾಗುವ ಅನುಕೂಲದಲ್ಲಿ ತಾರತಮ್ಯ ಇದೆ ಎಂಬ ಅನುಮಾನ ಉದ್ವೇಗಕ್ಕೆ ಒಳಗಾಗಬಹುದು
  • ರಹಸ್ಯ ಯೋಜನೆಗಳು ನಿಮ್ಮ ಮನಸ್ಸಿಗೆ ಬರಬಹುದು
  • ಭುವನೇಶ್ವರಿಯ ಉಪಾಸನೆ ಮಾಡಿ

ಧನಸ್ಸು 

publive-image

  • ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಅಂತರಾಷ್ಟ್ರೀಯ ಮಟ್ಟದ ಗೌರವ, ಪುರಸ್ಕಾರ ದೊರೆಯುವ ದಿನ
  • ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
  • ಹೊಸ ಖರೀದಿಗೆ ತೀರ್ಮಾನ ಮಾಡುವ ದಿನವಾಗಿದೆ
  • ಇಂದು ನಷ್ಟ ಆಗುವ ಸಾಧ್ಯತೆ ಇದೆ ಗಮನವಿರಲಿ
  • ಸ್ವತಃ ಉತ್ಪಾದಿಸಿ ಮಾರಾಟ ಮಾಡುವ ವಸ್ತುಗಳಿಗೆ ಬೆಲೆ ಕುಸಿತದ ಭೀತಿ ಕಾಡತ್ತೆ ಜಾಗ್ರತೆ ವಹಿಸಿ
  • ಮುಖ್ಯಾ ಸರಸ್ವತಿಯನ್ನು ಆರಾಧನೆ ಮಾಡಿ

ಮಕರ

publive-image

  • ರಾಜಕೀಯ ವ್ಯಕ್ತಿಗಳಿಗೆ ಮೋಡಕವಿದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ
  • ಈ ದಿವಸ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಟ್ಟರೆ ಒಳ್ಳೆಯದು
  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
  • ನಿಮ್ಮ ಪ್ರಯತ್ನ ಕಾರ್ಯ ವಿಳಂಬದಲ್ಲೇ ಕೂಡಿರುತ್ತದೆ
  • ಮಕ್ಕಳ ಭವಿಷ್ಯಕ್ಕೋಸ್ಕರ ನೀವು ಅನಿವಾರ್ಯವಾಗಿ ಕೆಲಸವನ್ನು ಮಾಡಲೆಬೇಕಾಗುವ ದಿನ
  • ಇಂದು ಯಂತ್ರಗಳನ್ನು, ವಾಹನಗಳನ್ನು ಖರೀದಿಸುವ ಯೋಗವಿದೆ
  • ಮೇಲಾಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಕಷ್ಟವನ್ನು ಎದುರಿಸುತ್ತೀರಿ
  • ತ್ರಿಶಕ್ತಿ ಲಕ್ಷ್ಯಾಂಬ ದೇವಿಯನ್ನು ಆರಾಧಿಸಿ

ಕುಂಭ

publive-image

  • ಸಾಧನೆ ಮಾಡುತ್ತೇನೆಂಬ ಹುಮ್ಮಸ್ಸು ನಿಮಗೆ ಹಿನ್ನಡೆಯಾಗಬಹುದು ಎಚ್ಚರಿಕೆ ವಹಿಸಿ
  • ಖರ್ಚು ಮಾಡಿದ್ದ ಹಣ ವಾಪಸ್ಸು ಬರುತ್ತೊ ಇಲ್ಲವೋ ಎಂಬ ಭಯಕ್ಕೆ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗಬಹುದು
  • ಸಣ್ಣ - ಪುಟ್ಟ ವ್ಯಾಪಾರ ಮಾಡುವವರಿಗೆ ಶುಭದಿನವಾಗಿದೆ
  • ಈ ದಿನ ನಿಮ್ಮ ಗುರಿಯನ್ನು ತಲುಪುತ್ತೇನೆಂಬ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಿ
  • ಅಷ್ಟಾಕ್ಷರೀ ಮಹಾಲಕ್ಷ್ಮೀ ಧ್ಯಾನವನ್ನು ಮಾಡಿ

ಮೀನ 

publive-image

  • ವೃತ್ತಿಯಲ್ಲಿ ಬದಲಾವಣೆ ಬಯಸಿದರೆ ಅದು ನಿಮ್ಮದಾಗುವುದಿಲ್ಲ
  • ಮಕ್ಕಳ ವಿದ್ಯಾಭ್ಯಾಸ, ಪ್ರಗತಿ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ದಿನವಾಗಿದೆ
  • ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದೀರೋ ಅವರು ವಿದ್ಯಾಭ್ಯಾಸವನ್ನು ಮುಂದುವರೆಸಿದರೆ ಒಳ್ಳೆಯದು
  • ಇಂದು ಅಪರಾಧ,ಆತಂಕ,ಅನಾಹುತ,ಸೋಲುಗಳಿಗೆ ನೀವು ಕಾರಣೀಭೂತರಾಗಬೇಡಿ
  • ರಮಾವಿದ್ಯಾ ಮಂತ್ರವನ್ನು ಪಠಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment