/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30ರವರೆಗೆ ಇರಲಿದೆ.
ಮೇಷ ರಾಶಿ
- ಅಮೂಲ್ಯ ವಸ್ತಗಳನ್ನು ಖರೀದಿಸಲು ಈ ದಿನ ಶುಭದಿನ
- ಆಹಾರ ಮತ್ತು ನಿದ್ರೆಯ ಬಗ್ಗೆ ಹೆಚ್ಚು ಗಮನಹರಿಸಿ
- ಇಂದು ಅನಿರೀಕ್ಷಿತ ಲಾಭ ಸಿಗುತ್ತದೆ
- ಸಾಧನೆ ಮಾಡಲು ಹೊರಟವರಿಗೆ ಉತ್ತಮ ಮಾರ್ಗದರ್ಶನ ಸಿಗುವಂತ ದಿನ
- ನೆರೆಹೊರೆಯವರಿಂದ, ಸಹೋದ್ಯೋಗಿಗಳಿಂದ ಉತ್ತಮ ಭರವಸೆ ದೊರೆಯುವ ದಿನ
- ಆರ್ಥಿಕ ಅನುಕೂಲ, ಮಿತ್ರರ ಸಹಕಾರ ನಿಮಗೆ ದೊರೆಯಲಿದೆ
- ಅಶ್ವಾರೂಢ ಪಾರ್ವತಿಯ ಮಂತ್ರ ಶ್ರವಣ ಮಾಡಿ
ವೃಷಭ
- ಮಕ್ಕಳಿಗೆ ಒತ್ತಡ ಹಾಕದೆ ಮಾರ್ಗದರ್ಶನ ಮಾಡಿ
- ಹಿರಿಯರ ಮಾರ್ಗದರ್ಶನದಿಂದ ಉತ್ತಮ ವ್ಯವಸ್ಥೆಯಾಗುವ ದಿನ
- ಒತ್ತಡದಿಂದ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶುಭದಿನ
- ದೂರ ಪ್ರಯಾಣದ ಚಿಂತನೆಯ ದಿನವಾಗಿದೆ
- ಹೂಡಿಕೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ
- ಬಾಡಿಗೆ ಹಣ ಸಿಗುವುದರಿಂದ ಆರ್ಥಿಕ ಅಭಿವೃಧ್ಧಿಯಿದೆ
- ಧಾರಣಾಸರಸ್ವತಿಯನ್ನು ಆರಾಧನೆ ಮಾಡಿ
ಮಿಥುನ
- ಮನೆಯಲ್ಲಿರುವ ಸ್ತ್ರೀಯರಿಗೆ ಅಶುಭ ದಿನ
- ವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿರಿ
- ಸಹೋದರ-ಸಹೋದರಿಯರ ನಡುವೆ ಇರುವ ಮನಸ್ತಾಪ ದ್ವೇಷಕ್ಕೆ ತಿರುಗದಂತೆ ನೋಡಿಕೊಳ್ಳಿ
- ಪರ್ವತಾರೋಹಿಗಳಿಗೆ ಯಶಸ್ಸು ಸಿಗುವ ಶುಭದಿನ
- ಆಧ್ಯಾತ್ಮಿಕ ಚಿಂತನೆ, ತತ್ವದ ಬಗ್ಗೆ ಹೆಚ್ಚು ಗಮನ ಕೊಡುವ ಅವಕಾಶಗಳಿವೆ
- ಶುಭ ಕಾರ್ಯಗಳಿಗೆ ಅತಿಯಾದ ಖರ್ಚು ಸಾಧ್ಯತೆ
- ಇದರಿಂದ ಕುಟುಂಬದವರು ಆತಂಕಕ್ಕೆ ಈಡಾಗುತ್ತಾರೆ
- ಶಕ್ತಿ ಪಂಚಾಕ್ಷರಿ ಮಂತ್ರವನ್ನು ಪಠಿಸಿ
ಕಟಕ
- ವೃತ್ತಿಯಲ್ಲಿ ಪ್ರಗತಿ ಕಾಣುವ ದಿನವಾದರೂ ವಿಘ್ನಭೀತಿ ಕಾಡುವ ಸಾಧ್ಯತೆ
- ಕುಟುಂಬದ ಸದಸ್ಯರ ಜೊತೆ ಸಮಯವನ್ನು ಕಳೆಯಿರಿ
- ಹೊಸ ಬದುಕನ್ನು ಆರಂಭಿಸಲು ಶುಭದಿನ
- ಕೈಗಾರಿಕೋದ್ಯಮದವರಿಗೆ ಉತ್ತಮ ದಿನ
- ಇಂದು ಭವಿಷ್ಯ ಉಜ್ವಲವಾಗುವ ದಿನ
- ಇಂದು ನಿಮ್ಮ ಮನಸ್ಸು ಭಯದಿಂದ ಕೂಡಿರುವ ದಿನವಾಗಿರುತ್ತದೆ
- ಆವಹಂತೀ ಮಂತ್ರ ಪಠಿಸಿ
ಸಿಂಹ
- ಚಿತ್ರೋದ್ಯಮ, ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನ ಉತ್ತಮವಾಗಿದೆ
- ಮಕ್ಕಳ ವಿಚಾರದಲ್ಲಿ ಗಮನವಿರಲಿ
- ದಾಂಪತ್ಯದಲ್ಲಿ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯಬೇಡ
- ಇಂದು ಹೊಸ ಸಾಲ ಮಾಡಲು ಮುಂದಾಗುತ್ತೀರಿ
- ಉಡುಪು ವಿನ್ಯಾಸ ಮಾಡುವವರಿಗೆ ಶುಭದಿನ
- ನಿಮ್ಮ ವ್ಯವಹಾರ ಶೈಲಿ ಚಿಕ್ಕವರಿಗೆ ಮಾರ್ಗದರ್ಶನವಾಗುವ ದಿನ
- ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ ಉಂಟಾಗಿ ಶತ್ರುಕಾಟ ಹೆಚ್ಚಾಗುವ ಸಾಧ್ಯತೆ
- ಇಂದು ಕೋರ್ಟ್-ಕಚೇರಿ ವಿಚಾರಕ್ಕೆ ಅಲೆದಾಟ
- ಅನ್ನಪೂಣೇಶ್ವರಿಯನ್ನು ಸ್ಮರಣೆ ಮಾಡಿ
ಕನ್ಯಾ
- ಗೃಹೋಪಕರಣವನ್ನು ಖರೀದಿಸಲು ಇಂದು ಒಳ್ಳೆಯ ದಿನ
- ಈ ದಿನ ಜವಾಬ್ದಾರಿ ಹೆಚ್ಚಾಗುತ್ತದೆ
- ಅಪರಿಚಿತ ವ್ಯಕ್ತಿಗಳ ಮೇಲೆ ಹೆಚ್ಚು ಗಮನವಿರಲಿ
- ಅಕ್ಕಪಕ್ಕದವರಿಂದ ಮಾನಸಿಕ ಕಿರಿಕಿರಿ ಉಂಟಾಗುವ ದಿನ
- ಕೆಲಸದ ಹೊರೆ ಜಾಸ್ತಿಯಾಗುವ ಸಾಧ್ಯತೆ ಇದೆ
- ಮಾಡಿರುವ ಸಾಲಗಳು ತೀರುತ್ತದೆ
- ಕಾತ್ಯಾಯಿನಿ ದೇವಿಯನ್ನು ಆರಾಧನೆ ಮಾಡಿ
ತುಲಾ
- ಆಂತರಿಕವಾಗಿ ಸಣ್ಣ - ಪುಟ್ಟ ಸಮಸ್ಯೆಗಳು ಉಂಟಾಗಬಹುದು
- ಮಧ್ಯವರ್ತಿಗಳಿಗೆ ಬೇಡಿಕೆ ಹೆಚ್ಚಾಗಿ ಲಾಭವೂ ಉಂಟಾಗುತ್ತದೆ
- ನಿಮ್ಮ ಶಿಸ್ತು ಬೇರೆಯವರನ್ನ ಪ್ರಭಾವಿತರನ್ನಾಗಿ ಮಾಡುತ್ತದೆ
- ಭೂ ವ್ಯವಹಾರದಿಂದ ಶುಭ ಸುದ್ಧಿ ಸಿಗುವ ದಿನ
- ಆವೇಶ, ಉದ್ವೇಗಗಳ ವರ್ತನೆ ಬೇಡ, ತಾಳ್ಮೆ ಇರಲಿ
- ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸೂಚನೆ ಇದೆ
- ಮಹಿಳಾ ಉದ್ಯಮಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವ ದಿನ
- ವಾಗ್ವಾದಿನೀ ಮಂತ್ರ ಶ್ರವಣ ಮಾಡಿ
ವೃಶ್ಚಿಕ
- ಕುಟುಂಬದಲ್ಲಿ, ಕಾರ್ಯಕ್ಷೇತ್ರದಲ್ಲಿ ಬೇಸರ ಉಂಟಾಗುವ ದಿನ
- ಸಹೋದ್ಯೋಗಿಗಳು, ಸ್ನೇಹಿತರ ಜೊತೆ ಕಾಲಹರಣ ಮಾಡುವ ದಿನ
- ನಿಮಗಾಗುವ ಅನುಕೂಲದಲ್ಲಿ ತಾರತಮ್ಯ ಇದೆ ಎಂಬ ಅನುಮಾನ ಉದ್ವೇಗಕ್ಕೆ ಒಳಗಾಗಬಹುದು
- ರಹಸ್ಯ ಯೋಜನೆಗಳು ನಿಮ್ಮ ಮನಸ್ಸಿಗೆ ಬರಬಹುದು
- ಭುವನೇಶ್ವರಿಯ ಉಪಾಸನೆ ಮಾಡಿ
ಧನಸ್ಸು
- ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಅಂತರಾಷ್ಟ್ರೀಯ ಮಟ್ಟದ ಗೌರವ, ಪುರಸ್ಕಾರ ದೊರೆಯುವ ದಿನ
- ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
- ಹೊಸ ಖರೀದಿಗೆ ತೀರ್ಮಾನ ಮಾಡುವ ದಿನವಾಗಿದೆ
- ಇಂದು ನಷ್ಟ ಆಗುವ ಸಾಧ್ಯತೆ ಇದೆ ಗಮನವಿರಲಿ
- ಸ್ವತಃ ಉತ್ಪಾದಿಸಿ ಮಾರಾಟ ಮಾಡುವ ವಸ್ತುಗಳಿಗೆ ಬೆಲೆ ಕುಸಿತದ ಭೀತಿ ಕಾಡತ್ತೆ ಜಾಗ್ರತೆ ವಹಿಸಿ
- ಮುಖ್ಯಾ ಸರಸ್ವತಿಯನ್ನು ಆರಾಧನೆ ಮಾಡಿ
ಮಕರ
- ರಾಜಕೀಯ ವ್ಯಕ್ತಿಗಳಿಗೆ ಮೋಡಕವಿದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ
- ಈ ದಿವಸ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಟ್ಟರೆ ಒಳ್ಳೆಯದು
- ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
- ನಿಮ್ಮ ಪ್ರಯತ್ನ ಕಾರ್ಯ ವಿಳಂಬದಲ್ಲೇ ಕೂಡಿರುತ್ತದೆ
- ಮಕ್ಕಳ ಭವಿಷ್ಯಕ್ಕೋಸ್ಕರ ನೀವು ಅನಿವಾರ್ಯವಾಗಿ ಕೆಲಸವನ್ನು ಮಾಡಲೆಬೇಕಾಗುವ ದಿನ
- ಇಂದು ಯಂತ್ರಗಳನ್ನು, ವಾಹನಗಳನ್ನು ಖರೀದಿಸುವ ಯೋಗವಿದೆ
- ಮೇಲಾಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಕಷ್ಟವನ್ನು ಎದುರಿಸುತ್ತೀರಿ
- ತ್ರಿಶಕ್ತಿ ಲಕ್ಷ್ಯಾಂಬ ದೇವಿಯನ್ನು ಆರಾಧಿಸಿ
ಕುಂಭ
- ಸಾಧನೆ ಮಾಡುತ್ತೇನೆಂಬ ಹುಮ್ಮಸ್ಸು ನಿಮಗೆ ಹಿನ್ನಡೆಯಾಗಬಹುದು ಎಚ್ಚರಿಕೆ ವಹಿಸಿ
- ಖರ್ಚು ಮಾಡಿದ್ದ ಹಣ ವಾಪಸ್ಸು ಬರುತ್ತೊ ಇಲ್ಲವೋ ಎಂಬ ಭಯಕ್ಕೆ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗಬಹುದು
- ಸಣ್ಣ - ಪುಟ್ಟ ವ್ಯಾಪಾರ ಮಾಡುವವರಿಗೆ ಶುಭದಿನವಾಗಿದೆ
- ಈ ದಿನ ನಿಮ್ಮ ಗುರಿಯನ್ನು ತಲುಪುತ್ತೇನೆಂಬ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಿ
- ಅಷ್ಟಾಕ್ಷರೀ ಮಹಾಲಕ್ಷ್ಮೀ ಧ್ಯಾನವನ್ನು ಮಾಡಿ
ಮೀನ
- ವೃತ್ತಿಯಲ್ಲಿ ಬದಲಾವಣೆ ಬಯಸಿದರೆ ಅದು ನಿಮ್ಮದಾಗುವುದಿಲ್ಲ
- ಮಕ್ಕಳ ವಿದ್ಯಾಭ್ಯಾಸ, ಪ್ರಗತಿ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ದಿನವಾಗಿದೆ
- ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದೀರೋ ಅವರು ವಿದ್ಯಾಭ್ಯಾಸವನ್ನು ಮುಂದುವರೆಸಿದರೆ ಒಳ್ಳೆಯದು
- ಇಂದು ಅಪರಾಧ,ಆತಂಕ,ಅನಾಹುತ,ಸೋಲುಗಳಿಗೆ ನೀವು ಕಾರಣೀಭೂತರಾಗಬೇಡಿ
- ರಮಾವಿದ್ಯಾ ಮಂತ್ರವನ್ನು ಪಠಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ