/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ದಿನ ನಿತ್ಯದ ಕೆಲಸಗಳಲ್ಲಿ ಸ್ವಲ್ಪ ವ್ಯತ್ಯಯಗಳು ಕಾಣಬಹುದು
- ಬೇರೆಯವರಿಗೆ ಮಾದರಿಯಾಗಿರಬೇಕಾದ ನೀವು ಅಪಹಾಸ್ಯಕ್ಕೆ ಗುರಿಯಾಗುವ ದಿನ
- ಕುಲದೇವತಾ ಮತ್ತು ಗುರುಗಳಲ್ಲಿ ಅಚಲವಾದ ಭಕ್ತಿಯನ್ನು ಇಟ್ಟುಕೊಳ್ಳಿ
- ಕಾಯಕವೇ ನಿಮ್ಮ ಧ್ಯೇಯ ಎಂದು ತಿಳಿದುಕೊಳ್ಳಬೇಕು
- ಕೇವಲ ವ್ಯಾವಹಾರಿಕವಾಗಿ ಚಿಂತನೆ ಮಾಡುವುದನ್ನು ಬಿಟ್ಟು ವೈಚಾರಿಕತೆಯಿಂದ ಚಿಂತನೆ ಮಾಡಿ
- ಅಸಮಾಧಾನ, ಒತ್ತಡಗಳು ಕೋಪವನ್ನು ಹೆಚ್ಚಿಸಬಹುದು
- ಅವಲಂಬಿತ ಕೆಲಸಗಳು ಹಿನ್ನಡೆ ಕಾಣುವಂತಹದ್ದು
- ಅನಾಥಾಲಯಗಳಿಗೆ ಕೈಲಾದ ಸಹಾಯ ಮಾಡಿ
ವೃಷಭ
- ಕೋಪ ಮತ್ತು ಅಸಹನೆಯಿಂದ ತೊಂದರೆಯಾಗಲಿದೆ
- ಸೋದರರ ಜೊತೆ ಜಗಳವಿದ್ದರೆ ಇಂದು ಅಂತ್ಯಗೊಳಿಸಿದರೆ ಒಳ್ಳೆಯದು
- ಈ ದಿನ ಸ್ವಯಂಕೃತ ಅಪರಾಧಗಳು ಬೇಡ
- ಹಣದ ವಿಚಾರ ಅಥವಾ ಸಾಲದ ವಿಚಾರವಾಗಿ ಮಾತು ಕಥೆ ನಡೆಸಬಹುದು
- ಆರೋಗ್ಯ ಚೆನ್ನಾಗಿರುತ್ತದೆ ಆದರೆ ಕಾಲು ನೋವು ಕಾಣಬಹುದು
- ಶನೈಶ್ಚರನ ಮಂತ್ರ ಪಠಿಸಿ
ಮಿಥುನ
- ಕುಟುಂಬದ ಕಲಹ ಮಾನಸಿಕವಾಗಿ ಖಿನ್ನತೆ ಉಂಟುಮಾಡಲಿದೆ
- ಸಕಾರಾತ್ಮಕ ಚಿಂತನೆ ಮಾಡಿ ನೆಮ್ಮದಿಯನ್ನು ಅರಸಿ
- ಆಯಸ್ಸಿನ ಬಗ್ಗೆ ವಿಚಾರ ಮಾಡುತ್ತೀರಿ ಆದರೆ ಮನಸ್ಸಿಗೆ ಬೇಸರ ತರಲಿದೆ
- ಹಿರಿಯರ ಅಥವಾ ಗುರುಸ್ಥಾನದವರ ಬೇಸರಕ್ಕೆ ಕಾರಣವಾಗಬಹುದು
- ಹಣದ ವಿಚಾರ ಎಲ್ಲವನ್ನೂ ಮರೆಸುತ್ತದೆ
- ಗುಪ್ತರೋಗ ನಿಮ್ಮನ್ನು ಕಾಡಬಹುದು
- ಸ್ನೇಹಿತರಿಗೆ ಸಿಹಿ ಹಂಚಿ
ಕಟಕ
- ಅನುಮಾನಾಸ್ಪದವಾಗಿ ಮನೆಯಲ್ಲಿ ಅಥವಾ ಸಮಾಜದಲ್ಲಿ ನಡೆದುಕೊಳ್ಳಬಾರದು
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
- ದೂರದ ಬಂಧುಗಳಿಂದ ಬರುವ ಅಶುಭ ವಾರ್ತೆಯಿಂದ ನೋವನ್ನು ಅನುಭವಿಸುತ್ತೀರಿ
- ಸಹೋದರ ವರ್ಗದ ಜೊತೆಯಲ್ಲಿ ಜಗಳ ಮಾಡುವುದರಿಂದ ಬೇಸರ ಅಗಬಹುದು
- ಮಾನಸಿಕ ಕಿರಿಕಿರಿ ದಿನಪೂರ್ತಿ ಕಾಡಲಿದೆ
- ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ
- ಮೂಲ ದೇವರನ್ನು ಪ್ರಾರ್ಥಿಸಿ
ಸಿಂಹ
- ಸಾಯಂಕಾಲಕ್ಕೆ ಬೇಸರದ ವಾತಾವರಣ ಹಾಗೆ ಅಧಿಕವಾಗಿ ಹಣ ಖರ್ಚಾಗಲಿದೆ
- ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ
- ಬೇರೆಯವರನ್ನು ಅವಲಂಬಿಸಿ ಅವಮಾನವನ್ನು ಹೊಂದುತ್ತೀರಿ
- ತಾಯಿಯವರಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆವಹಿಸಿ
- ವೃತ್ತಿಪರ ಸಾಧನೆ ತೃಪ್ತಿ ಕೊಡುವಂತಹದ್ದು
- ಒತ್ತಡಗಳಿಂದ ದೂರ ಉಳಿಯಬೇಕು
- ಅಮೃತ ಮೃತ್ಯುಂಜಯ ಜಪ ಹಾಗೂ ಹೋಮವನ್ನು ಮಾಡಿಸಿ
ಕನ್ಯಾ
- ಲಾಭ-ನಷ್ಟಗಳ ಚಿಂತೆಯನ್ನು ಮಾಡಬೇಡಿ
- ಆಸಕ್ತಿದಾಯಕ ವಿಚಾರಗಳಲ್ಲಿ ಚರ್ಚೆಯನ್ನು ಮಾಡಿ ಸಮಾಜಕ್ಕೆ ಸಂದೇಶವನ್ನು ನೀಡಿ
- ಸಹಾಯ ಮಾಡಿದವರು ನಿಮ್ಮನ್ನು ಈ ದಿನ ಆಶ್ರಯಿಸಬಹುದು
- ಧಾರ್ಮಿಕ ಮುಖಂಡರ ಸಲಹೆಯಿಂದ ಸಮಾಧಾನ ಸಿಗಲಿದೆ
- ಆರೋಗ್ಯದ ಬಗ್ಗೆ ಗಮನ ಇರಲಿ ತಾತ್ಸಾರ ಬೇಡ
- ಹಣ ಹೂಡಿಕೆಗೆ ಉತ್ತಮವಾದ ದಿನ
- ನವಗ್ರಹರನ್ನು ಆರಾಧನೆ ಮಾಡಿ
ತುಲಾ
- ಬೇರೆಯವರೊಂದಿಗಿನ ಸಂಪರ್ಕ ಸಮಾಧಾನ ನೀಡುತ್ತದೆ
- ವಾಸ್ತವದ ವಿಚಾರಕ್ಕೆ ಹೋರಾಟ ಮಾಡಿದರೆ ಜಯ ಕಾಣುತ್ತೀರಿ
- ಕಾರ್ಯಕ್ಷೇತ್ರ,ವೃತ್ತಿ,ವ್ಯಾಪಾರದಲ್ಲಿ ಹಿನ್ನಡೆ ಕಾಣುವ ಸಾಧ್ಯತೆ ಇದೆ
- ಮಕ್ಕಳ ವಿಚಾರದಲ್ಲಿ ಜಯ ಸಿಗುವುದರಿಂದ ಸಂತೋಷವಾಗಿರುತ್ತೀರಿ
- ಅನಗತ್ಯ ಮಾತಿನಿಂದ ಅಪಯಶಸ್ಸು ಕಾಣಬಹುದು
- ಸಾಮಾಜಿಕ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು
- ಶ್ರೀ ಕೃಷ್ಣನನ್ನು ಪ್ರಾರ್ಥಿಸಿ
ವೃಶ್ಚಿಕ
- ಅಕ್ಕಪಕ್ಕದವರು ನಿಮಗೆ ಸಹಾಯ ಮಾಡಬಹುದು
- ಮಕ್ಕಳ ಜೊತೆಗಿನ ಬಾಂಧವ್ಯ ಹಾಗೆ ಉಳಿಸಿಕೊಳ್ಳಿ
- ಇಂದು ನೀವು ಹಿರಿಯರ ನಿಂದನೆಗೆ ಒಳಗಾಗುತ್ತೀರಿ
- ಹಣದ ವಿಚಾರದಲ್ಲಿ ಜಾಗ್ರತೆವಹಿಸಿ
- ವಾತಾವರಣದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
- ನಿಮ್ಮ ಶಿಸ್ತು, ನಿಮ್ಮ ವರ್ತನೆಯಿಂದ ಬೇರೆಯವರ ಮೇಲೆ ಒತ್ತಡ ಏರಬಾರದು
- ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ
ಧನಸ್ಸು
- ಆರೋಗ್ಯದ ವಿಚಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ
- ಹಳೆಯ ವಿಚಾರ ಮತ್ತು ಸ್ನೇಹಿತರ ಭೇಟಿ ಆಗುವ ಅವಕಾಶವಿರುತ್ತದೆ
- ಮನೆ ಕಟ್ಟುವ ವಿಚಾರದಲ್ಲಿ ನೆಮ್ಮದಿ ವಾತಾವರಣ ಇರಲಿದೆ
- ತುಂಬಾ ಹಣ ಖರ್ಚು ಆಗುವ ಸಾಧ್ಯತೆ ಆದರೂ ನೆಮ್ಮದಿ ಸಿಗಲಿದೆ
- ಇಂದು ಕೋಪ ಕಡಿಮೆ ಇದ್ದರೆ ಒಳಿತು
- ದೀರ್ಘಕಾಲದ ಆಲೋಚನೆಗಳು ಇಂದು ಪೂರ್ಣವಾಗಬಹುದು
- ವೃದ್ಧರಿಗೆ ವಸ್ತ್ರದಾನ ಮಾಡಿ
ಮಕರ
- ತುಂಬಾ ಪರಿಶ್ರಮದ ದಿನವಾಗಿರುತ್ತದೆ
- ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲು ಎದುರಾಗುವ ಸಾಧ್ಯತೆ
- ಹಿನ್ನಡೆ ಕಾಣಬಹುದು ಆದರೆ ಭವಿಷ್ಯದ ಮೆಟ್ಟಿಲ್ಲನ್ನೇರುತ್ತೀವಿ ಅನ್ನೋ ಭಾವನೆ ನಿಮ್ಮಲ್ಲಿರಬೇಕು
- ಆರ್ಥಿಕವಾಗಿ ಯಾವುದೇ ತೊಂದರೆಗಳು ಕಾಣುವುದಿಲ್ಲ
- ಸಾಲವನ್ನು ತೀರಿಸಲು ಇಂದು ಸಾಧ್ಯವಾಗುತ್ತದೆ
- ಅತಿಥಿಗಳ ಆಗಮನ ಆಗುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ
- ಮನೆಯ ವಾತಾವರಣ ಸಾಯಂಕಾಲದ ಹೊತ್ತಿಗೆ ಶುಭವಾಗಲಿದೆ
- ಉಗ್ರನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ಕುಂಭ
- ನಿಮ್ಮ ವೃತ್ತಿ, ನೌಕರಿಯಲ್ಲಿ, ವಿದ್ಯಾರ್ಥಿಗಳಿಗೆ ಸ್ವಲ್ಪ ಅಡ್ಡಿ ಆಗುವ ಸೂಚನೆ ಇದೆ ಗಮನಹರಿಸಿ
- ಆಹಾರ ಮಿತವಾಗಿರಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ
- ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡುತ್ತದೆ
- ಮನೆಯವರಿಂದ ಆಶ್ಚರ್ಯ ಕಾದಿರುತ್ತದೆ
- ಈ ದಿನ ಆಲಸ್ಯವನ್ನು ಸ್ವಲ್ಪ ದೂರಮಾಡಿ
- ಸಮಾಜದಲ್ಲಿ ನಿಮ್ಮ ಬಗ್ಗೆ ಇಲ್ಲ ಸಲ್ಲದ ಮಾತು ಬರಬಹುದು
- ಹಣದ ವಿಚಾರದಲ್ಲಿ ನಷ್ಟ ಅಥವಾ ಮೋಸ ಆಗಬಹುದು ಕಾಳಜಿವಹಿಸಿ
- ಮಾನಸಿಕವಾದ ಸ್ಥಿಮಿತತೆ ಇಲ್ಲದೆ ಇದ್ದಾಗ ಯಾವುದೇ ವ್ಯವಹಾರ ಮಾಡಬೇಡಿ
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
- ಪ್ರವಾಸಕ್ಕೆ ಅವಕಾಶವಿರುವ ದಿನವಾಗಿರುತ್ತದೆ
- ಇಂದು ಆತ್ಮೀಯರು ದೂರವಾಗಬಹುದು
- ಸಮಾಜದಲ್ಲಿ ಗಣ್ಯ ವ್ಯಕ್ತಿಗಳ ಭೇಟಿ ಆಗುವ ಸಾಧ್ಯತೆ ಇದೆ
- ಆರ್ಥಿಕ ಲಾಭವಿದ್ದರೂ ಕೂಡ ಭಯ ಪಡಬೇಕಾದ ದಿನ
- ನಿರೀಕ್ಷಿಸಿದ ವಿಚಾರ ಮಾತ್ರ ತೃಪ್ತಿ ಕೊಡುವುದಿಲ್ಲ
- ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ