ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ದಿನ ನಿತ್ಯದ ಕೆಲಸಗಳಲ್ಲಿ ಸ್ವಲ್ಪ ವ್ಯತ್ಯಯಗಳು ಕಾಣಬಹುದು
  • ಅಸಮಾಧಾನ, ಒತ್ತಡಗಳು ಕೋಪವನ್ನು ಹೆಚ್ಚಿಸಬಹುದು
  • ಕಾಯಕವೇ ನಿಮ್ಮ ಧ್ಯೇಯ ಎಂದು ತಿಳಿದುಕೊಳ್ಳಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ದಿನ ನಿತ್ಯದ ಕೆಲಸಗಳಲ್ಲಿ ಸ್ವಲ್ಪ ವ್ಯತ್ಯಯಗಳು ಕಾಣಬಹುದು
  • ಬೇರೆಯವರಿಗೆ ಮಾದರಿಯಾಗಿರಬೇಕಾದ ನೀವು ಅಪಹಾಸ್ಯಕ್ಕೆ ಗುರಿಯಾಗುವ ದಿನ
  • ಕುಲದೇವತಾ ಮತ್ತು ಗುರುಗಳಲ್ಲಿ ಅಚಲವಾದ ಭಕ್ತಿಯನ್ನು ಇಟ್ಟುಕೊಳ್ಳಿ
  • ಕಾಯಕವೇ ನಿಮ್ಮ ಧ್ಯೇಯ ಎಂದು ತಿಳಿದುಕೊಳ್ಳಬೇಕು
  • ಕೇವಲ ವ್ಯಾವಹಾರಿಕವಾಗಿ ಚಿಂತನೆ ಮಾಡುವುದನ್ನು ಬಿಟ್ಟು ವೈಚಾರಿಕತೆಯಿಂದ ಚಿಂತನೆ ಮಾಡಿ
  • ಅಸಮಾಧಾನ, ಒತ್ತಡಗಳು ಕೋಪವನ್ನು ಹೆಚ್ಚಿಸಬಹುದು
  • ಅವಲಂಬಿತ ಕೆಲಸಗಳು ಹಿನ್ನಡೆ ಕಾಣುವಂತಹದ್ದು
  • ಅನಾಥಾಲಯಗಳಿಗೆ ಕೈಲಾದ ಸಹಾಯ ಮಾಡಿ

ವೃಷಭ

publive-image

  • ಕೋಪ ಮತ್ತು ಅಸಹನೆಯಿಂದ ತೊಂದರೆಯಾಗಲಿದೆ
  • ಸೋದರರ ಜೊತೆ ಜಗಳವಿದ್ದರೆ ಇಂದು ಅಂತ್ಯಗೊಳಿಸಿದರೆ ಒಳ್ಳೆಯದು
  • ಈ ದಿನ ಸ್ವಯಂಕೃತ ಅಪರಾಧಗಳು ಬೇಡ
  • ಹಣದ ವಿಚಾರ ಅಥವಾ ಸಾಲದ ವಿಚಾರವಾಗಿ ಮಾತು ಕಥೆ ನಡೆಸಬಹುದು
  • ಆರೋಗ್ಯ ಚೆನ್ನಾಗಿರುತ್ತದೆ ಆದರೆ ಕಾಲು ನೋವು ಕಾಣಬಹುದು
  • ಶನೈಶ್ಚರನ ಮಂತ್ರ ಪಠಿಸಿ

ಮಿಥುನ

publive-image

  • ಕುಟುಂಬದ ಕಲಹ ಮಾನಸಿಕವಾಗಿ ಖಿನ್ನತೆ ಉಂಟುಮಾಡಲಿದೆ
  • ಸಕಾರಾತ್ಮಕ ಚಿಂತನೆ ಮಾಡಿ ನೆಮ್ಮದಿಯನ್ನು ಅರಸಿ
  • ಆಯಸ್ಸಿನ ಬಗ್ಗೆ ವಿಚಾರ ಮಾಡುತ್ತೀರಿ ಆದರೆ ಮನಸ್ಸಿಗೆ ಬೇಸರ ತರಲಿದೆ
  • ಹಿರಿಯರ ಅಥವಾ ಗುರುಸ್ಥಾನದವರ ಬೇಸರಕ್ಕೆ ಕಾರಣವಾಗಬಹುದು
  • ಹಣದ ವಿಚಾರ ಎಲ್ಲವನ್ನೂ ಮರೆಸುತ್ತದೆ
  • ಗುಪ್ತರೋಗ ನಿಮ್ಮನ್ನು ಕಾಡಬಹುದು
  • ಸ್ನೇಹಿತರಿಗೆ ಸಿಹಿ ಹಂಚಿ

ಕಟಕ

publive-image

  • ಅನುಮಾನಾಸ್ಪದವಾಗಿ ಮನೆಯಲ್ಲಿ ಅಥವಾ ಸಮಾಜದಲ್ಲಿ ನಡೆದುಕೊಳ್ಳಬಾರದು​
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
  • ದೂರದ ಬಂಧುಗಳಿಂದ ಬರುವ ಅಶುಭ ವಾರ್ತೆಯಿಂದ ನೋವನ್ನು ಅನುಭವಿಸುತ್ತೀರಿ
  • ಸಹೋದರ ವರ್ಗದ ಜೊತೆಯಲ್ಲಿ ಜಗಳ ಮಾಡುವುದರಿಂದ ಬೇಸರ ಅಗಬಹುದು
  • ಮಾನಸಿಕ ಕಿರಿಕಿರಿ ದಿನಪೂರ್ತಿ ಕಾಡಲಿದೆ
  • ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ
  • ಮೂಲ ದೇವರನ್ನು ಪ್ರಾರ್ಥಿಸಿ

ಸಿಂಹ

publive-image

  • ಸಾಯಂಕಾಲಕ್ಕೆ ಬೇಸರದ ವಾತಾವರಣ ಹಾಗೆ ಅಧಿಕವಾಗಿ ಹಣ ಖರ್ಚಾಗಲಿದೆ
  • ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ
  • ಬೇರೆಯವರನ್ನು ಅವಲಂಬಿಸಿ ಅವಮಾನವನ್ನು ಹೊಂದುತ್ತೀರಿ
  • ತಾಯಿಯವರಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆವಹಿಸಿ
  • ವೃತ್ತಿಪರ ಸಾಧನೆ ತೃಪ್ತಿ ಕೊಡುವಂತಹದ್ದು
  • ಒತ್ತಡಗಳಿಂದ ದೂರ ಉಳಿಯಬೇಕು
  • ಅಮೃತ ಮೃತ್ಯುಂಜಯ ಜಪ ಹಾಗೂ ಹೋಮವನ್ನು ಮಾಡಿಸಿ

ಕನ್ಯಾ

publive-image

  • ಲಾಭ-ನಷ್ಟಗಳ ಚಿಂತೆಯನ್ನು ಮಾಡಬೇಡಿ
  • ಆಸಕ್ತಿದಾಯಕ ವಿಚಾರಗಳಲ್ಲಿ ಚರ್ಚೆಯನ್ನು ಮಾಡಿ ಸಮಾಜಕ್ಕೆ ಸಂದೇಶವನ್ನು ನೀಡಿ
  • ಸಹಾಯ ಮಾಡಿದವರು ನಿಮ್ಮನ್ನು ಈ ದಿನ ಆಶ್ರಯಿಸಬಹುದು
  • ಧಾರ್ಮಿಕ ಮುಖಂಡರ ಸಲಹೆಯಿಂದ ಸಮಾಧಾನ ಸಿಗಲಿದೆ
  • ಆರೋಗ್ಯದ ಬಗ್ಗೆ ಗಮನ ಇರಲಿ ತಾತ್ಸಾರ ಬೇಡ
  • ಹಣ ಹೂಡಿಕೆಗೆ ಉತ್ತಮವಾದ ದಿನ
  • ನವಗ್ರಹರನ್ನು ಆರಾಧನೆ ಮಾಡಿ

ತುಲಾ

publive-image

  • ಬೇರೆಯವರೊಂದಿಗಿನ ಸಂಪರ್ಕ ಸಮಾಧಾನ ನೀಡುತ್ತದೆ
  • ವಾಸ್ತವದ ವಿಚಾರಕ್ಕೆ ಹೋರಾಟ ಮಾಡಿದರೆ ಜಯ ಕಾಣುತ್ತೀರಿ
  • ಕಾರ್ಯಕ್ಷೇತ್ರ,ವೃತ್ತಿ,ವ್ಯಾಪಾರದಲ್ಲಿ ಹಿನ್ನಡೆ ಕಾಣುವ ಸಾಧ್ಯತೆ ಇದೆ
  • ಮಕ್ಕಳ ವಿಚಾರದಲ್ಲಿ ಜಯ ಸಿಗುವುದರಿಂದ ಸಂತೋಷವಾಗಿರುತ್ತೀರಿ
  • ಅನಗತ್ಯ ಮಾತಿನಿಂದ ಅಪಯಶಸ್ಸು ಕಾಣಬಹುದು
  • ಸಾಮಾಜಿಕ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ಅಕ್ಕಪಕ್ಕದವರು ನಿಮಗೆ ಸಹಾಯ ಮಾಡಬಹುದು
  • ಮಕ್ಕಳ ಜೊತೆಗಿನ ಬಾಂಧವ್ಯ ಹಾಗೆ ಉಳಿಸಿಕೊಳ್ಳಿ
  • ಇಂದು ನೀವು ಹಿರಿಯರ ನಿಂದನೆಗೆ ಒಳಗಾಗುತ್ತೀರಿ
  • ಹಣದ ವಿಚಾರದಲ್ಲಿ ಜಾಗ್ರತೆವಹಿಸಿ
  • ವಾತಾವರಣದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
  • ನಿಮ್ಮ ಶಿಸ್ತು, ನಿಮ್ಮ ವರ್ತನೆಯಿಂದ ಬೇರೆಯವರ ಮೇಲೆ ಒತ್ತಡ ಏರಬಾರದು
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ

ಧನಸ್ಸು

publive-image

  • ಆರೋಗ್ಯದ ವಿಚಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ
  • ಹಳೆಯ ವಿಚಾರ ಮತ್ತು ಸ್ನೇಹಿತರ ಭೇಟಿ ಆಗುವ ಅವಕಾಶವಿರುತ್ತದೆ
  • ಮನೆ ಕಟ್ಟುವ ವಿಚಾರದಲ್ಲಿ ನೆಮ್ಮದಿ ವಾತಾವರಣ ಇರಲಿದೆ
  • ತುಂಬಾ ಹಣ ಖರ್ಚು ಆಗುವ ಸಾಧ್ಯತೆ ಆದರೂ ನೆಮ್ಮದಿ ಸಿಗಲಿದೆ
  • ಇಂದು ಕೋಪ ಕಡಿಮೆ ಇದ್ದರೆ ಒಳಿತು
  • ದೀರ್ಘಕಾಲದ ಆಲೋಚನೆಗಳು ಇಂದು ಪೂರ್ಣವಾಗಬಹುದು
  • ವೃದ್ಧರಿಗೆ ವಸ್ತ್ರದಾನ ಮಾಡಿ

ಮಕರ

publive-image

  • ತುಂಬಾ ಪರಿಶ್ರಮದ ದಿನವಾಗಿರುತ್ತದೆ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲು ಎದುರಾಗುವ ಸಾಧ್ಯತೆ
  • ಹಿನ್ನಡೆ ಕಾಣಬಹುದು ಆದರೆ ಭವಿಷ್ಯದ ಮೆಟ್ಟಿಲ್ಲನ್ನೇರುತ್ತೀವಿ ಅನ್ನೋ ಭಾವನೆ ನಿಮ್ಮಲ್ಲಿರಬೇಕು
  • ಆರ್ಥಿಕವಾಗಿ ಯಾವುದೇ ತೊಂದರೆಗಳು ಕಾಣುವುದಿಲ್ಲ
  • ಸಾಲವನ್ನು ತೀರಿಸಲು ಇಂದು ಸಾಧ್ಯವಾಗುತ್ತದೆ
  • ಅತಿಥಿಗಳ ಆಗಮನ ಆಗುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ
  • ಮನೆಯ ವಾತಾವರಣ ಸಾಯಂಕಾಲದ ಹೊತ್ತಿಗೆ ಶುಭವಾಗಲಿದೆ
  • ಉಗ್ರನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಕುಂಭ

publive-image

  • ನಿಮ್ಮ ವೃತ್ತಿ, ನೌಕರಿಯಲ್ಲಿ, ವಿದ್ಯಾರ್ಥಿಗಳಿಗೆ ಸ್ವಲ್ಪ ಅಡ್ಡಿ ಆಗುವ ಸೂಚನೆ ಇದೆ ಗಮನಹರಿಸಿ
  • ಆಹಾರ ಮಿತವಾಗಿರಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ
  • ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡುತ್ತದೆ
  • ಮನೆಯವರಿಂದ ಆಶ್ಚರ್ಯ ಕಾದಿರುತ್ತದೆ
  • ಈ ದಿನ ಆಲಸ್ಯವನ್ನು ಸ್ವಲ್ಪ ದೂರಮಾಡಿ
  • ಸಮಾಜದಲ್ಲಿ ನಿಮ್ಮ ಬಗ್ಗೆ ಇಲ್ಲ ಸಲ್ಲದ ಮಾತು ಬರಬಹುದು
  • ಹಣದ ವಿಚಾರದಲ್ಲಿ ನಷ್ಟ ಅಥವಾ ಮೋಸ ಆಗಬಹುದು ಕಾಳಜಿವಹಿಸಿ
  • ಮಾನಸಿಕವಾದ ಸ್ಥಿಮಿತತೆ ಇಲ್ಲದೆ ಇದ್ದಾಗ ಯಾವುದೇ ವ್ಯವಹಾರ ಮಾಡಬೇಡಿ
  • ಕುಲದೇವತಾ ಪ್ರಾರ್ಥನೆ ಮಾಡಿ

ಮೀನ 

publive-image

  • ಪ್ರವಾಸಕ್ಕೆ ಅವಕಾಶವಿರುವ ದಿನವಾಗಿರುತ್ತದೆ
  • ಇಂದು ಆತ್ಮೀಯರು ದೂರವಾಗಬಹುದು
  • ಸಮಾಜದಲ್ಲಿ ಗಣ್ಯ ವ್ಯಕ್ತಿಗಳ ಭೇಟಿ ಆಗುವ ಸಾಧ್ಯತೆ ಇದೆ
  • ಆರ್ಥಿಕ ಲಾಭವಿದ್ದರೂ ಕೂಡ ಭಯ ಪಡಬೇಕಾದ ದಿನ
  • ನಿರೀಕ್ಷಿಸಿದ ವಿಚಾರ ಮಾತ್ರ  ತೃಪ್ತಿ ಕೊಡುವುದಿಲ್ಲ
  • ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment