/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಜನ ನಿಮ್ಮನ್ನು ನೋಡಿದ್ರೆ ಇವರಿಗೆ ಯಾವ ಕೆಲಸವನ್ನು ಮಾಡಿಕೊಡಬಾರದು ಅನ್ನೋ ಮನಸ್ಥಿತಿಗೆ ತಲಪುತ್ತಾರೆ
- ಬೇರೆಯವರ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ ದೂರವಿದ್ದರೆ ಒಳ್ಳೆಯದು
- ಪತಿ-ಪತ್ನಿಯರ ಸಂಬಂಧ ಪ್ರಭಾವ ಬೀರುವಂತದ್ದು
- ಇಂದು ಸಾಮಾಜಿಕ ಸ್ಥಾನಮಾನ ಹೆಚ್ಚಾಗುವ ದಿನ
- ನಿಮ್ಮ ಬುದ್ಧಿವಂತಿಕೆಯಿಂದ ಹಣವನ್ನು, ಜನರನ್ನು ಸಂಪಾದಿಸುವ ದಿನ
- ಇಂದು ಒಳ್ಳೆಯ ಆಹಾರ ಸ್ವೀಕರಿಸುತ್ತೀರಿ
- ವಿನಾಕಾರಣ ಹಣವನ್ನು ದುಂದುವೆಚ್ಚ ಮಾಡಬೇಡಿ
- ಶಿವಮಂತ್ರ ಪಠನೆ ಮಾಡಿ
ವೃಷಭ
- ವ್ಯಾಪಾರ- ವ್ಯವಹಾರದ ದೃಷ್ಟಿಯಿಂದ ಪ್ರಯಾಣ ಮಾಡಲು ಶುಭದಿನ
- ಇಂದು ನಿಮಗೆ ಸಂಪೂರ್ಣವಾಗಿ ಶುಭದಿನ
- ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ, ಮಾನ್ಯತೆ ದೊರೆಯುವ ದಿನವಾಗಿದೆ
- ಇಂದು ಸರ್ಕಾರಿ ಕೆಲಸ ತುಂಬಾ ವಿಳಂಬವಾಗುವ ಸಾಧ್ಯತೆ ಇದೆ ಯೋಚಿಸಿ
- ಸಾಂಸಾರಿಕ ಅನುಕೂಲಗಳು ಹೆಚ್ಚಾಗುವ ದಿನ
- ಸಹೋದರರನ್ನು, ಸಂಬಂಧಿಕರನ್ನು ಈ ದಿನ ಸಂತೋಷ ಪಡಿಸುತ್ತೀರಿ
- ನಿಮ್ಮ ಕೆಲಸವನ್ನು ಜಾಗರೂಕತೆಯಿಂದ ಮಾಡಿ
- ಮನಸ್ಸಿಗೆ ಸಂತೋಷ ಸಿಗುವಂತಹ ದಿನವಾಗಿರತ್ತದೆ
- ಕುಟುಂಬ ಸದಸ್ಯರ ಆರೋಗ್ಯ ವ್ಯತ್ಯಯವಾಗಬಹುದು ಗಮನವಿರಲಿ
- ಇಂದು ಹಣವನ್ನು ಎಷ್ಟು ಉಳಿಸಿದರೂ ಅಷ್ಟು ಒಳ್ಳೆಯದು
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ನೀವು ಅಂದುಕೊಂಡ ಕೆಲಸವನ್ನು ಸಾಧಿಸಲು ಒಳ್ಳೆಯದಿನ
- ನಿಮ್ಮ ವಿರೋಧಿಗಳು, ಶತ್ರುಗಳು ಸಮಸ್ಯೆಗಳನ್ನು ಸೃಷ್ಟಿಸಿ ನಿಮ್ಮನ್ನ ಗೊಂದಲಕ್ಕೆ ಸಿಲುಕಿಸಬಹುದು ಜಾಗ್ರತೆ
- ಬಾಕಿ ಬರಬೇಕಾದ ಹಣವು ಇಂದು ನಿಮ್ಮ ಕೈಸೇರುವ ಸಾಧ್ಯತೆ ಇದೆ
- ಹಣವನ್ನು ಅವಲಂಬಿಸಿ ಮಾಡುವ ಯೋಜನೆಗಳು ಇಂದು ಒಳಿತಾಗುತ್ತದೆ
- ಇಂದು ಸ್ತ್ರೀಯರಿಗೆ ಕಾಲಿನ ಚರ್ಮವ್ಯಾಧಿ ಕಾಡಬಹುದು ಜಾಗ್ರತೆವಹಿಸಿ
- ಸೂರ್ಯನಾರಾಯಣನನ್ನು ಪ್ರಾರ್ಥಿಸಿ
ಕಟಕ
- ಗೌಪ್ಯತೆ ಕಾಪಾಡಿಕೊಂಡು ಮಾಡ್ತಾ ಇದ್ದ ಕೆಲಸವು ಇಂದು ಫಲ ನೀಡಬಹುದು
- ಹಣಕಾಸಿನ ವ್ಯವಸ್ಥೆ ಬಹಳ ಅನುಕೂಲಕರವಾಗಿರುವ ದಿನವಾಗಿದೆ
- ಬೇರೆಯವರ ಜೊತೆ ವ್ಯವಹರಿಸುವುದು, ಪಾಲುದಾರಿಕೆ ಈ ದಿನ ಬೇಡ
- ಕೆಲವೊಂದು ಕೆಲಸ ವಿಳಂಬವಾಗಿ ಮನೆಯವರಿಗೆಲ್ಲಾ ಆತಂಕ
- ನೀವೂ ಕೂಡ ವೈದ್ಯರ ಸಲಹೆ ಪಡೆಯಬೇಕಾಗಿ ಬರಬಹುದು
- ಕೆಲಸದಲ್ಲಿ ಗೌರವ ಸಿಕ್ಕಿದ್ರೂ ಸಹೋದ್ಯೋಗಿಗಳ ವರ್ತನೆ ನಿಮಗೆ ಬೇಸರ ತರಬಹುದು
- ವಿದ್ಯಾರ್ಥಿಗಳಿಗೆ ಇಂದು ತುಂಬಾ ಉತ್ತಮವಾದ ದಿನ
- ಉಮಾಮಹೇಶ್ವರರನ್ನು ಪ್ರಾರ್ಥಿಸಿ
ಸಿಂಹ
- ನಿಮ್ಮ ಗುರಿಯ ಬಗ್ಗೆ ಹೆಚ್ಚಿನ ಗಮನ ಕೊಡಿ
- ಇಂದು ನಿಮಗೆ ಆತಂಕ ಅನ್ನೋದು ತಪ್ಪಿದಲ್ಲಾ ಎಚ್ಚರಿಕೆ ಇರಲಿ
- ಈ ದಿನ ಕೆಲಸದಲ್ಲಿ ವಿಶೇಷವಾಗಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ
- ಇಂದು ಎಲ್ಲಾ ದೃಷ್ಟಿಯಿಂದ ಅನುಕೂಲಕರವಾದ ಶುಭ ದಿನ
- ಹಳೆಯ ಅನುಭವಗಳು ಇಂದು ಎಲ್ಲಾ ರೀತಿಯಿಂದಲೂ ಉಪಯೋಗಕ್ಕೆ ಬರಬಹುದು
- ಇಂದು ನಿಮ್ಮ ಮಾತಿನ ಮೇಲೆ ಜಾಗ್ರತೆ ಇರಲಿ
- ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥಿಸಿ
ಕನ್ಯಾ
- ಇಂದು ಹೊಸತನ್ನು ಕಲಿಯುವ ಮನಸ್ಥಿತಿ ನಿಮ್ಮದಾಗಿರುತ್ತದೆ
- ಇಂದು ಹಣದ ಖರ್ಚನ್ನು ಕಡಿಮೆ ಮಾಡಿ
- ಮನಸ್ಸಿನಲ್ಲಿ ಕಳವಳ ಹೊಂದಿ ಕೆಲಸಗಳನ್ನ ಅರ್ಧಕ್ಕೆ ನಿಲ್ಲಿಸಬೇಡಿ
- ನೌಕರರಿಗೆ ಬಡ್ತಿ, ಕೆಲಸಗಾರರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ
- ವಿದ್ಯುತ್ ಉಪಕರಣದಿಂದ ಹಾನಿ ಉಂಟಾಗಬಹುದು ಎಚ್ಚರಿಕೆ
- ಮುನೇಶ್ವರನನ್ನು ಪ್ರಾರ್ಥಿಸಿ
ತುಲಾ
- ವಿವಾದಾತ್ಮಕ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಡಿ ಜಾಗ್ರತೆ
- ಹೊಸ ಕೆಲಸಗಳ ಬಗ್ಗೆ ಆಲೋಚನೆಗಳು ಬರುವ ಸಾಧ್ಯತೆ
- ಉದ್ಯೋಗ ಮತ್ತು ವಿದ್ಯಾಕ್ಷೇತ್ರದಲ್ಲಿ ಅನೇಕ ದುಷ್ಟರು ಎದುರಾಗಬಹುದು ದೂರ ಇದ್ದರೆ ಒಳಿತು
- ಪ್ರೇಮಿಗಳ ಮಧ್ಯ ಘರ್ಷಣೆ ಉಂಟಾಗಬಹುದು
- ಉಳಿತಾಯದ ಹಣವೇ ಈ ದಿನ ಆದಾಯವಾಗಿ ಪರಿಣಮಿಸುತ್ತದೆ
- ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ
- ಇಂದ್ರಾಣಿ ದೇವಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ನಿಮ್ಮ ಯೋಜನೆಗಳ ಬಗ್ಗೆ ಸರಿಯಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ
- ನಿಮಗೆ ಜನಬಲ - ಧನಬಲ ನನ್ನ ಜೊತೆಯಲ್ಲಿದೆ ಅನ್ನೋ ಭಾವನೆ ಗಟ್ಟಿಯಾಗುವ ದಿನ
- ಇಂದು ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು
- ಮನಸ್ಸಿಗೆ ಹಿತ ಸಿಗುವ ದಿನವಾಗಿದೆ
- ಆರೋಗ್ಯವನ್ನು ನಿರ್ಲಕ್ಷ ಮಾಡಬೇಡಿ
- ದುರ್ಗಾದೇವಿಯನ್ನು ಆರಾಧಿಸಿ
ಧನಸ್ಸು
- ಇಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಿಗುವ ಸಾಧ್ಯತೆ
- ನಿಮ್ಮ ಮಾತಿನಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ
- ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
- ಇಂದು ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಸಾಧ್ಯತೆ ಜಾಗ್ರತೆ ಇರಲಿ
- ಈಶ್ವರನ ಆರಾಧನೆ ಮಾಡಿ
ಮಕರ
- ವಿದೇಶದಿಂದ ಇಲ್ಲಿಗೆ ಬರುವಂತಹ ವ್ಯಕ್ತಿಗಳಿಗೂ ಇದು ಅನ್ವಯವಾಗುತ್ತದೆ
- ಧಾರಾಳವಾಗಿ ಹಣ ಖರ್ಚು ಮಾಡಬೇಕಾಗುವ ಸಂದರ್ಭ ಬರಬಹುದು
- ನಿಮ್ಮ ಸಹೋದ್ಯೋಗಿಗಳು, ಮಿತ್ರರು ನಿಮ್ಮ ಬಗ್ಗೆ ಸಂತೋಷ ವ್ಯಕ್ತಪಡಿಸುವ ಸಾಧ್ಯತೆ
- ಇಂದು ವ್ಯರ್ಥವಾಗಿ ಓಡಾಡುವುದನ್ನು ಕಡಿಮೆ ಮಾಡಿ
- ಈ ದಿನ ನಿಮ್ಮ ಕೆಲಸ ಹೆಚ್ಚಾಗಿ ಸುಸ್ತಾಗುವ ಸಾಧ್ಯತೆ
- ಇಂದು ಯಾವುದೇ ರೀತಿಯ ವಾದ-ವಿವಾದಗಳು ಬೇಡ
- ಇಷ್ಟದೇವತಾರಾಧನೆ ಮಾಡಿ
ಕುಂಭ
- ಯಾವ ಕೆಲಸದಲ್ಲೂ ಆತುರದ ನಿರ್ಧಾರ ಬೇಡ
- ಕುಟುಂಬ, ಬಂಧುಗಳು ಅಥವಾ ಸ್ನೇಹಿತರ ಮನೆಯಲ್ಲಿ ಹಿರಿಯರ ಆರೋಗ್ಯ ಚಿಂತಾಜನಕ ಸಾಧ್ಯತೆ
- ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯಕ್ಷೇತ್ರ ಅಥವಾ ಕೆಲಸಕ್ಕೆ ಹೋದರೆ ಗೌರವ ಸಿಗುತ್ತದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ ಸಾಧ್ಯತೆ
- ನಿಮ್ಮ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಮಾಧಾನ ಹೇಳಿ
- ಈಶ್ವರನ ಆರಾಧನೆ ಮಾಡಿ
ಮೀನ
- ಪ್ರೇಮಿಗಳು ಹಿಂದಿನ ದ್ವೇಷ ಬಿಟ್ಟು ಅನ್ಯೋನ್ಯತೆ ಕಾಪಾಡಿಕೊಂಡರೆ ಒಳಿತು
- ವಿದೇಶ ಪ್ರಯಾಣಕ್ಕೆ ಹೊರಟವರಿಗೂ ಸ್ವಲ್ಪ ಅಡ್ಡಿಯಾಗಬಹುದು
- ನಿಮಗೆ ಗೊತ್ತಿಲ್ಲದ ಭಯ ನಿಮ್ಮನ್ನು ಕಾಡಬಹುದು, ಹೆದರಿಕೆ ಬೇಡ
- ಇಂದು ನಿಮ್ಮ ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು
- ಹನುಮಂತನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ