ಸರ್ಕಾರಿ ನೌಕರರಿಗೆ ಬಡ್ತಿ, ಕೆಲಸಗಾರರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನಿಮ್ಮ ಬುದ್ಧಿವಂತಿಕೆಯಿಂದ ಹಣವನ್ನು, ಜನರನ್ನು ಸಂಪಾದಿಸುವ ದಿನ
  • ಬೇರೆಯವರ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ ದೂರವಿದ್ದರೆ ಒಳ್ಳೆಯದು
  • ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ, ಮಾನ್ಯತೆ ದೊರೆಯುವ ದಿನವಾಗಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಜನ ನಿಮ್ಮನ್ನು ನೋಡಿದ್ರೆ ಇವರಿಗೆ ಯಾವ ಕೆಲಸವನ್ನು ಮಾಡಿಕೊಡಬಾರದು ಅನ್ನೋ ಮನಸ್ಥಿತಿಗೆ ತಲಪುತ್ತಾರೆ
  • ಬೇರೆಯವರ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ ದೂರವಿದ್ದರೆ ಒಳ್ಳೆಯದು
  • ಪತಿ-ಪತ್ನಿಯರ ಸಂಬಂಧ ಪ್ರಭಾವ ಬೀರುವಂತದ್ದು
  • ಇಂದು ಸಾಮಾಜಿಕ ಸ್ಥಾನಮಾನ ಹೆಚ್ಚಾಗುವ ದಿನ
  • ನಿಮ್ಮ ಬುದ್ಧಿವಂತಿಕೆಯಿಂದ ಹಣವನ್ನು, ಜನರನ್ನು ಸಂಪಾದಿಸುವ ದಿನ
  • ಇಂದು ಒಳ್ಳೆಯ ಆಹಾರ ಸ್ವೀಕರಿಸುತ್ತೀರಿ
  • ವಿನಾಕಾರಣ ಹಣವನ್ನು ದುಂದುವೆಚ್ಚ ಮಾಡಬೇಡಿ
  • ಶಿವಮಂತ್ರ ಪಠನೆ ಮಾಡಿ

ವೃಷಭ

publive-image

  • ವ್ಯಾಪಾರ- ವ್ಯವಹಾರದ ದೃಷ್ಟಿಯಿಂದ ಪ್ರಯಾಣ ಮಾಡಲು ಶುಭದಿನ
  • ಇಂದು ನಿಮಗೆ ಸಂಪೂರ್ಣವಾಗಿ ಶುಭದಿನ
  • ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ, ಮಾನ್ಯತೆ ದೊರೆಯುವ ದಿನವಾಗಿದೆ
  • ಇಂದು ಸರ್ಕಾರಿ ಕೆಲಸ ತುಂಬಾ ವಿಳಂಬವಾಗುವ ಸಾಧ್ಯತೆ ಇದೆ ಯೋಚಿಸಿ
  • ಸಾಂಸಾರಿಕ ಅನುಕೂಲಗಳು ಹೆಚ್ಚಾಗುವ ದಿನ
  • ಸಹೋದರರನ್ನು, ಸಂಬಂಧಿಕರನ್ನು ಈ ದಿನ ಸಂತೋಷ ಪಡಿಸುತ್ತೀರಿ
  • ನಿಮ್ಮ ಕೆಲಸವನ್ನು ಜಾಗರೂಕತೆಯಿಂದ ಮಾಡಿ
  • ಮನಸ್ಸಿಗೆ ಸಂತೋಷ ಸಿಗುವಂತಹ ದಿನವಾಗಿರತ್ತದೆ
  • ಕುಟುಂಬ ಸದಸ್ಯರ ಆರೋಗ್ಯ ವ್ಯತ್ಯಯವಾಗಬಹುದು ಗಮನವಿರಲಿ
  • ಇಂದು ಹಣವನ್ನು ಎಷ್ಟು ಉಳಿಸಿದರೂ ಅಷ್ಟು ಒಳ್ಳೆಯದು
  • ಕುಲದೇವತಾ ಆರಾಧನೆ ಮಾಡಿ

ಮಿಥುನ

publive-image

  • ನೀವು ಅಂದುಕೊಂಡ ಕೆಲಸವನ್ನು ಸಾಧಿಸಲು ಒಳ್ಳೆಯದಿನ
  • ನಿಮ್ಮ ವಿರೋಧಿಗಳು, ಶತ್ರುಗಳು ಸಮಸ್ಯೆಗಳನ್ನು ಸೃಷ್ಟಿಸಿ ನಿಮ್ಮನ್ನ ಗೊಂದಲಕ್ಕೆ ಸಿಲುಕಿಸಬಹುದು ಜಾಗ್ರತೆ
  • ಬಾಕಿ ಬರಬೇಕಾದ ಹಣವು ಇಂದು ನಿಮ್ಮ ಕೈಸೇರುವ ಸಾಧ್ಯತೆ ಇದೆ
  • ಹಣವನ್ನು ಅವಲಂಬಿಸಿ ಮಾಡುವ ಯೋಜನೆಗಳು ಇಂದು ಒಳಿತಾಗುತ್ತದೆ
  • ಇಂದು ಸ್ತ್ರೀಯರಿಗೆ ಕಾಲಿನ ಚರ್ಮವ್ಯಾಧಿ ಕಾಡಬಹುದು ಜಾಗ್ರತೆವಹಿಸಿ
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ

ಕಟಕ

publive-image

  • ಗೌಪ್ಯತೆ ಕಾಪಾಡಿಕೊಂಡು ಮಾಡ್ತಾ ಇದ್ದ ಕೆಲಸವು ಇಂದು ಫಲ ನೀಡಬಹುದು
  • ಹಣಕಾಸಿನ ವ್ಯವಸ್ಥೆ ಬಹಳ ಅನುಕೂಲಕರವಾಗಿರುವ ದಿನವಾಗಿದೆ
  • ಬೇರೆಯವರ ಜೊತೆ ವ್ಯವಹರಿಸುವುದು, ಪಾಲುದಾರಿಕೆ ಈ ದಿನ ಬೇಡ
  • ಕೆಲವೊಂದು ಕೆಲಸ ವಿಳಂಬವಾಗಿ ಮನೆಯವರಿಗೆಲ್ಲಾ ಆತಂಕ
  • ನೀವೂ ಕೂಡ ವೈದ್ಯರ ಸಲಹೆ ಪಡೆಯಬೇಕಾಗಿ ಬರಬಹುದು
  • ಕೆಲಸದಲ್ಲಿ ಗೌರವ ಸಿಕ್ಕಿದ್ರೂ ಸಹೋದ್ಯೋಗಿಗಳ ವರ್ತನೆ ನಿಮಗೆ ಬೇಸರ ತರಬಹುದು
  • ವಿದ್ಯಾರ್ಥಿಗಳಿಗೆ ಇಂದು ತುಂಬಾ ಉತ್ತಮವಾದ ದಿನ
  • ಉಮಾಮಹೇಶ್ವರರನ್ನು ಪ್ರಾರ್ಥಿಸಿ

ಸಿಂಹ

publive-image

  • ನಿಮ್ಮ ಗುರಿಯ ಬಗ್ಗೆ ಹೆಚ್ಚಿನ ಗಮನ ಕೊಡಿ
  • ಇಂದು ನಿಮಗೆ ಆತಂಕ ಅನ್ನೋದು ತಪ್ಪಿದಲ್ಲಾ ಎಚ್ಚರಿಕೆ ಇರಲಿ
  • ಈ ದಿನ ಕೆಲಸದಲ್ಲಿ ವಿಶೇಷವಾಗಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ
  • ಇಂದು ಎಲ್ಲಾ ದೃಷ್ಟಿಯಿಂದ ಅನುಕೂಲಕರವಾದ ಶುಭ ದಿನ
  • ಹಳೆಯ ಅನುಭವಗಳು ಇಂದು ಎಲ್ಲಾ ರೀತಿಯಿಂದಲೂ ಉಪಯೋಗಕ್ಕೆ ಬರಬಹುದು
  • ಇಂದು ನಿಮ್ಮ ಮಾತಿನ ಮೇಲೆ ಜಾಗ್ರತೆ ಇರಲಿ
  • ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥಿಸಿ

ಕನ್ಯಾ

publive-image

  • ಇಂದು ಹೊಸತನ್ನು ಕಲಿಯುವ ಮನಸ್ಥಿತಿ ನಿಮ್ಮದಾಗಿರುತ್ತದೆ
  • ಇಂದು ಹಣದ ಖರ್ಚನ್ನು ಕಡಿಮೆ ಮಾಡಿ
  • ಮನಸ್ಸಿನಲ್ಲಿ ಕಳವಳ ಹೊಂದಿ ಕೆಲಸಗಳನ್ನ ಅರ್ಧಕ್ಕೆ ನಿಲ್ಲಿಸಬೇಡಿ
  • ನೌಕರರಿಗೆ ಬಡ್ತಿ, ಕೆಲಸಗಾರರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ
  • ವಿದ್ಯುತ್​ ಉಪಕರಣದಿಂದ ಹಾನಿ ಉಂಟಾಗಬಹುದು ಎಚ್ಚರಿಕೆ
  • ಮುನೇಶ್ವರನನ್ನು ಪ್ರಾರ್ಥಿಸಿ

ತುಲಾ

publive-image

  • ವಿವಾದಾತ್ಮಕ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಡಿ ಜಾಗ್ರತೆ
  • ಹೊಸ ಕೆಲಸಗಳ ಬಗ್ಗೆ ಆಲೋಚನೆಗಳು ಬರುವ ಸಾಧ್ಯತೆ
  • ಉದ್ಯೋಗ ಮತ್ತು ವಿದ್ಯಾಕ್ಷೇತ್ರದಲ್ಲಿ ಅನೇಕ ದುಷ್ಟರು ಎದುರಾಗಬಹುದು ದೂರ ಇದ್ದರೆ ಒಳಿತು
  • ಪ್ರೇಮಿಗಳ ಮಧ್ಯ ಘರ್ಷಣೆ ಉಂಟಾಗಬಹುದು
  • ಉಳಿತಾಯದ ಹಣವೇ ಈ ದಿನ ಆದಾಯವಾಗಿ ಪರಿಣಮಿಸುತ್ತದೆ
  • ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ
  • ಇಂದ್ರಾಣಿ ದೇವಿಯನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ನಿಮ್ಮ ಯೋಜನೆಗಳ ಬಗ್ಗೆ ಸರಿಯಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ
  • ನಿಮಗೆ ಜನಬಲ - ಧನಬಲ ನನ್ನ ಜೊತೆಯಲ್ಲಿದೆ ಅನ್ನೋ ಭಾವನೆ ಗಟ್ಟಿಯಾಗುವ ದಿನ
  • ಇಂದು ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು
  • ಮನಸ್ಸಿಗೆ ಹಿತ ಸಿಗುವ ದಿನವಾಗಿದೆ
  • ಆರೋಗ್ಯವನ್ನು ನಿರ್ಲಕ್ಷ ಮಾಡಬೇಡಿ
  • ದುರ್ಗಾದೇವಿಯನ್ನು ಆರಾಧಿಸಿ

ಧನಸ್ಸು 

publive-image

  • ಇಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಿಗುವ ಸಾಧ್ಯತೆ
  • ನಿಮ್ಮ ಮಾತಿನಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ
  • ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
  • ಇಂದು ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಸಾಧ್ಯತೆ ಜಾಗ್ರತೆ ಇರಲಿ
  • ಈಶ್ವರನ ಆರಾಧನೆ ಮಾಡಿ

ಮಕರ

publive-image

  • ವಿದೇಶದಿಂದ ಇಲ್ಲಿಗೆ ಬರುವಂತಹ ವ್ಯಕ್ತಿಗಳಿಗೂ ಇದು ಅನ್ವಯವಾಗುತ್ತದೆ
  • ಧಾರಾಳವಾಗಿ ಹಣ ಖರ್ಚು ಮಾಡಬೇಕಾಗುವ ಸಂದರ್ಭ ಬರಬಹುದು
  • ನಿಮ್ಮ ಸಹೋದ್ಯೋಗಿಗಳು, ಮಿತ್ರರು ನಿಮ್ಮ ಬಗ್ಗೆ ಸಂತೋಷ ವ್ಯಕ್ತಪಡಿಸುವ ಸಾಧ್ಯತೆ
  • ಇಂದು ವ್ಯರ್ಥವಾಗಿ ಓಡಾಡುವುದನ್ನು ಕಡಿಮೆ ಮಾಡಿ
  • ಈ ದಿನ ನಿಮ್ಮ ಕೆಲಸ ಹೆಚ್ಚಾಗಿ ಸುಸ್ತಾಗುವ ಸಾಧ್ಯತೆ
  • ಇಂದು ಯಾವುದೇ ರೀತಿಯ ವಾದ-ವಿವಾದಗಳು ಬೇಡ
  • ಇಷ್ಟದೇವತಾರಾಧನೆ ಮಾಡಿ

ಕುಂಭ

publive-image

  • ಯಾವ ಕೆಲಸದಲ್ಲೂ ಆತುರದ ನಿರ್ಧಾರ ಬೇಡ
  • ಕುಟುಂಬ, ಬಂಧುಗಳು ಅಥವಾ ಸ್ನೇಹಿತರ ಮನೆಯಲ್ಲಿ ಹಿರಿಯರ ಆರೋಗ್ಯ ಚಿಂತಾಜನಕ ಸಾಧ್ಯತೆ
  • ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯಕ್ಷೇತ್ರ ಅಥವಾ ಕೆಲಸಕ್ಕೆ ಹೋದರೆ ಗೌರವ ಸಿಗುತ್ತದೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ ಸಾಧ್ಯತೆ
  • ನಿಮ್ಮ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಮಾಧಾನ ಹೇಳಿ
  • ಈಶ್ವರನ ಆರಾಧನೆ ಮಾಡಿ

ಮೀನ 

publive-image

  • ಪ್ರೇಮಿಗಳು ಹಿಂದಿನ ದ್ವೇಷ ಬಿಟ್ಟು ಅನ್ಯೋನ್ಯತೆ ಕಾಪಾಡಿಕೊಂಡರೆ ಒಳಿತು
  • ವಿದೇಶ ಪ್ರಯಾಣಕ್ಕೆ ಹೊರಟವರಿಗೂ ಸ್ವಲ್ಪ ಅಡ್ಡಿಯಾಗಬಹುದು
  • ನಿಮಗೆ ಗೊತ್ತಿಲ್ಲದ ಭಯ ನಿಮ್ಮನ್ನು ಕಾಡಬಹುದು, ಹೆದರಿಕೆ ಬೇಡ
  • ಇಂದು ನಿಮ್ಮ ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು
  • ಹನುಮಂತನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment