/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೈಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಬೆಂಕಿಯ ಅವಘಡ ಸಂಭವಿಸಬಹುದು ಜಾಗ್ರತೆವಹಿಸಿ
- ಧಾರ್ಮಿಕ ವೃತ್ತಿ, ಪುರೋಹಿತರು,ಅರ್ಚಕರಿಗೆ ಧನಲಾಭವಾಗುವ ದಿನವಾಗಿದೆ
- ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
- ಇಂದು ಆತ್ಮವಿಶ್ವಾಸದ ಕೊರತೆ ಹೆಚ್ಚಾಗಿ ಕಾಡಬಹುದು
- ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಿ
- ತೆಂಗು ಬೆಳೆಗಾರರಿಗೆ, ಕಾರ್ಮಿಕರಿಗೆ ಲಾಭವಾಗುವ ದಿನ
- ಸಾಮಾಜಿಕ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ಸ್ಥಾನ ಸಿಗಲಿದೆ
- ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುವ ಚಾಲಕರಿಗೆ ವಿಶೇಷವಾದ ಲಾಭವಿದೆ
- ಅಗ್ನಿದುರ್ಗೆಯನ್ನು ಆರಾಧಿಸಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಉಂಟಾಗಬಹುದು
- ಸ್ವಂತ ವ್ಯವಹಾರ ಮಾಡುವವರಿಗೆ ತುಂಬಾ ಅನುಕೂಲವಾಗುವ ದಿನ
- ನಿರೀಕ್ಷಿತ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಾಗಿದೆ
- ತೈಲ ವ್ಯಾಪಾರಿಗಳಿಗೆ ಶುಭಫಲ, ಧನಲಾಭವೂ ಇದೆ
- ಕುಟುಂಬದಲ್ಲೂ ಪ್ರಗತಿ ಕಾಣುತ್ತೀರಿ
- ಆತ್ಮೀಯರಿಂದ ಸುಖ-ಸಂತೋಷ ಸಿಗುವ ದಿನ
- ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಶುಭಫಲ
- ಇಂದು ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
- ನೀವು ಮಾಡಬೇಕಾದ ಕೆಲಸಗಳನ್ನು ರಹಸ್ಯವಾಗಿಡಿ
- ಸುದರ್ಶನ ಹೋಮ ಮಾಡಿಸಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಬ್ಯಾಂಕ್​, ಫೈನಾನ್ಸ್ ಕೆಲಸ ಮಾಡುವವರಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
- ಕಾರ್ಯದೊತ್ತಡ ಬದಿಗಿಟ್ಟು ಈ ದಿನ ಆನಂದವಾಗಿರುತ್ತೀರಿ
- ಈ ರಾಶಿಯವರು ಮುದ್ರಣಾ ಕ್ಷೇತ್ರದಲ್ಲಿದ್ದರೆ ನಷ್ಟವನ್ನು ಅನುಭವಿಸುವ ದಿನವಾಗಿದೆ
- ಜನರ ಮಧ್ಯದಲ್ಲಿ ಸಮಾಜಸೇವೆ ಮಾಡುವ ಯೋಗವು ಒದಗಿಬರುವ ದಿನ
- ಧಾರ್ಮಿಕ - ಆಧ್ಯಾತ್ಮ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಶುಭ
- ಕಲಾವಿದರಿಗೆ ಉತ್ತಮ ಪುರಸ್ಕಾರ ಸಿಗುವ ದಿನ
- ಕೂಲಿ ಕಾರ್ಮಿಕರಿಗೆ ಹೆಚ್ಚು ಸಂಬಳ ಸಿಗುವ ದಿನ
- ಕಟ್ಟಡ ಮಾಲೀಕರು,ಕಾರ್ಮಿಕರು ಎಚ್ಚರಿಕೆಯಿಂದಿರಬೇಕು
- ಮಧುಮತಿ ದೇವಿಯನ್ನು ಆರಾಧಿಸಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಹಿತಶತ್ರುಗಳ ಕಾಟ ಹೆಚ್ಚಾಗಬಹುದು
- ಸರ್ಕಾರಿ ನೌಕರರಿಗೆ ಒತ್ತಡ ಹೆಚ್ಚಾಗುವ ದಿನ
- ಅನುಮಾನಾಸ್ಪದ ಕೆಲಸಗಳನ್ನು ಮಾಡಬೇಡಿ ಶೋಭೆ ತರೋಲ್ಲ
- ನಾಯಕತ್ವದ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿವೆ
- ಕೃಷಿ ಕಾರ್ಮಿಕರಿಗೆ ಹೆಚ್ಚು ಆದಾಯ ಸಿಗುವ ದಿನವಾಗಿದೆ
- ಸಾಹಿತ್ಯ - ಸಂಗೀತ ಕ್ಷೇತ್ರದಲ್ಲಿರುವವರಿಗೆ ವಿಶೇಷ ಪುರಸ್ಕಾರ, ಗೌರವ ಸಿಗುತ್ತದೆ
- ತುಂಬಾ ಶ್ರಮ ಪಡಬೇಕಾದ ದಿನವಾಗಿರುತ್ತದೆ
- ಇಂದು ಮನೆ ಬದಲಾಯಿಸುವವರಿಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ
- ರೇಣುಕಾ ದೇವಿಯನ್ನು ಆರಾಧಿಸಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ನಿಯಮಗಳನ್ನು ಅನ್ವಯಿಸದೆ ವ್ಯಾಪಾರ ಮಾಡುತ್ತಿದ್ದರೆ ದಂಡ ಕಟ್ಟಬೇಕಾಗುತ್ತದೆ ಜಾಗ್ರತೆ
- ಚಲನಚಿತ್ರ ನಿರ್ಮಾಪಕರಿಗೆ ಲಾಭವಿದೆ ಅಷ್ಟೇ ಅವಮಾನವೂ ಅಗತ್ತೆ ಜಾಗ್ರತೆ
- ಚಿತ್ರೀಕರಣ ಮಾಡುವ ವ್ಯಕ್ತಿಗಳಿಗೆ ಲಾಭವಿದೆ
- ಭೂ ವ್ಯವಹಾರದಲ್ಲಿ ಲಾಭ ಕಾಣುತ್ತೀರಿ
- ಕಾರ್ಮಿಕ ವರ್ಗದವರಿಗೆ ಮೋಸವಾಗುವ ಸಾಧ್ಯತೆಗಳಿವೆ ಎಚ್ಚರಿಕೆ
- ಇಂದು ಖರ್ಚಿಗೆ ಹೆಚ್ಚಿನ ಕಡಿವಾಣ ಹಾಕಬೇಕು
- ವೈಯಕ್ತಿಕ ವಿಚಾರಗಳನ್ನು ಸ್ನೇಹಿತರಲ್ಲಿ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗಬಹುದು
- ಸಾಮಾಜಿಕವಾಗಿ ಪ್ರೋತ್ಸಾಹ ಸಿಗಲಿದೆ
- ಬಹಳ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ
- ಅಧಿಕಾರ, ಪ್ರೋತ್ಸಾಹ ದೊರಕುವುದರಿಂದ ಮನಸ್ಸಿಗೆ ಹೆಚ್ಚು ಆನಂದ ಉಂಟಾಗುವ ದಿನ
- ಲಲಿತ ಪರಮೇಶ್ವರಿಯನ್ನು ಪ್ರಾರ್ಥಿಸಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ತೈಲ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ
- ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ
- ಪಶುಸಂಗೋಪನೆ ಮಾಡುವವರಿಗೆ ಒಳ್ಳೆಯ ದಿನ
- ಯಾವುದೇ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ
- ಈ ರಾಶಿಯ ವಿದ್ಯಾರ್ಥಿಗಳಿಗೆ ಅಶುಭ
- ಮನೋರಂಜನೆಗಾಗಿ ಹಣವ್ಯಯ ಮಾಡುವ ಸಾಧ್ಯತೆ
- ಹಳೆಯ ನಿಯಮಗಳಿಗೆ ಅನುಸಾರವಾಗಿ ನಿಮ್ಮ ವ್ಯಾಪಾರದಲ್ಲಿ ಮುಂದುವರೆಯಬಹುದು
- ನಿಮ್ಮ ಉದ್ಯೋಗ ಬದಲಾವಣೆಯ ವಿಚಾರವನ್ನು ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ
- ಕುಲದೇವತಾ ಹೋಮವನ್ನು ಮಾಡಿಸಿ
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿವಾಹದ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಚ್ಚರಿಕೆ
- ಇಂದು ಅನಿರೀಕ್ಷಿತ ಧನಲಾಭ ಉಂಟಾಗಬಹುದು
- ನೌಕರರಿಗೆ ಶುಭಫಲಗಳು ಹೆಚ್ಚಾಗಿರುತ್ತದೆ
- ಕಠಿಣ ಶ್ರಮವನ್ನು ಪಡಬೇಕಾಗುವಂತಹ ದಿನ
- ಹಣವನ್ನು ಮಿತವಾಗಿ ಖರ್ಚು ಮಾಡಿ
- ನೌಕರಿಯಲ್ಲಿರುವ ಸ್ತ್ರೀಯರಿಗೆ ವಿಶೇಷವಾದ ಸ್ಥಾನಮಾನಗಳು, ಲಾಭಗಳು ದೊರೆಯಲಿದೆ
- ವಿಶೇಷ ವ್ಯಕ್ತಿಯ ಸಹಕಾರ ದೊರಕುವ ದಿವಸ
- ಹಿನ್ನಡೆಯಾದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಮಗ್ನರಾದರೆ ಒಳಿತು
- ಕಾಶಿ ಬಿಂದುಮಾಧವ ದೇವರನ್ನು ಪೂಜಿಸಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕವಾಗಿ, ದೈಹಿಕವಾಗಿ ಹೆಚ್ಚು ಸಂತೋಷದಿಂದಿರುತ್ತೀರಿ
- ಮಾತು ಮಿತವಾಗಿದ್ದರೆ ತುಂಬಾ ಒಳ್ಳೆಯದು
- ಹಳೆಯ ಹೂಡಿಕೆಯ ಬಗ್ಗೆ ಹೆಚ್ಚು ಚಿಂತನೆ ಮಾಡಿದರೆ ಅನುಕೂಲವಾಗುತ್ತದೆ
- ರಿಯಲ್​ ಎಸ್ಟೇಟ್, ಭೂ ವ್ಯವಹಾರ ಮಾಡುವವರಿಗೆ ಈ ದಿನ ಲಾಭವಿದೆ
- ನೌಕರಿಯಲ್ಲಿ ಉತ್ತಮ ಪದವಿಯನ್ನು ಪಡೆಯುತ್ತೀರಿ
- ಬರಹಗಾರರಿಗೆ, ಸಂಶೋಧಕರಿಗೆ ಸಿಹಿ ಸುದ್ದಿ ಸಿಗುವ ದಿನ
- ಸರ್ಕಾರಿ ಗುತ್ತಿಗೆ ಕೆಲಸಗಳು ಹೇರಳವಾಗಿ ಬರಬಹುದು
- ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಉಂಟಾಗಬಹುದು
- ಚಂಡಿಕಾ ಪಾರಾಯಣ ಮಾಡಿಸಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ವಿರೋಧಿಗಳಿಂದ ಕೆಲವು ಕೆಲಸಕ್ಕೆ ಅಡ್ಡಿಯಾಗಬಹುದು
- ಕೈಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಬೆಂಕಿಯ ಅವಘಡ ಸಂಭವಿಸಬಹುದು ಜಾಗ್ರತೆವಹಿಸಿ
- ಲೇವಾದೇವಿ ವ್ಯವಹಾರ ಮಾಡುವವರಿಗೆ ವಿಶೇಷ ಲಾಭವಿದೆ
- ಹಣದ ಮತ್ತು ವ್ಯವಹಾರಿಕ ಲೆಕ್ಕಾಚಾರವನ್ನು ಪರಿಪೂರ್ಣವಾಗಿ ಮುಗಿಸದೆ ಒದ್ದಾಡಬೇಕಾಗುವ ಪರಿಸ್ಥಿತಿ
- ಆದರೆ ಕೆಲಸವನ್ನು ಮಾತ್ರ ನಾಳೆಗೆ ಮುಂದೂಡಬೇಡಿ
- ಉಪಕರಣಗಳು ನಷ್ಟವಾಗುವುದರಿಂದ ಈ ನಷ್ಟವನ್ನು ತುಂಬ ಬೇಕಾಗುತ್ತದೆ ಜಾಗ್ರತೆ
- ಇಂದು ಪರೀಕ್ಷಾ ಸ್ಪರ್ಧಿಗಳಿಗೆ ಶುಭದಿನ
- ದೂರದೂರಿಗೆ ಪ್ರವಾಸ ಹೋಗಲು ಇಂದು ಪ್ಲಾನ್​ ಮಾಡುತ್ತೀರಿ
- ಎಲೆಕ್ಟ್ರಿಕಲ್​ ಮತ್ತು ವಾಹನ ರಿಪೇರಿ ಮಾಡುವವರಿಗೆ ಧನಲಾಭ ಸಾಧ್ಯತೆ
- ಶನಿಶಾಂತಿಯನ್ನು ಮಾಡಿಸಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಿಲ ವ್ಯಾಪಾರಿಗಳಿಗೆ​ ಸ್ವಲ್ಪ ನಷ್ಟ ಉಂಟಾಗಬಹುದು
- ಏಜೆಂಟ್ಸ್​ಗಳಿಗೆ ಕಮೀಷನ್ ಮೂಲಕ ಲಾಭವಾಗುವ ಸಾಧ್ಯತೆಗಳಿವೆ
- ಒಡಹುಟ್ಟಿದವರಿಗೆ ಸಹಾಯವನ್ನು ಮಾಡುವ ಯೋಗ ನಿಮ್ಮದಾಗುತ್ತದೆ
- ಇಂದು ಕೆಲಸದಲ್ಲಿ ವ್ಯತ್ಯಯವನ್ನು ಮಾಡಿಕೊಳ್ಳುತ್ತೀರಿ
- ಸಹೋದರ-ಸಹೋದರಿ ವರ್ಗದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಅನರ್ಥವಾಗುವ ಸಾಧ್ಯತೆ
- ಇವತ್ತಿನ ನಷ್ಟ ಮುಂದೆ ವ್ಯವಹಾರಿಕವಾಗಿ ಅನುಕೂಲವಾಗುವುದು
- ಇಂದು ಅವಿವಾಹಿತರಿಗೆ ಶುಭ ಸುದ್ದಿ
- ತಾಯಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆ ವಹಿಸಿ
- ಮಾರುತಿಯನ್ನು ಪ್ರಾರ್ಥನೆ ಮಾಡಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರ್ಥಿಕವಾದ ಮುಗ್ಗಟ್ಟು ತುಂಬಾ ಕಾಡಬಹುದು
- ಬರಬೇಕಾದ ಹಣ ಸಕಾಲದಲ್ಲಿ ಕೈ ಸೇರದೆ ತೊಂದರೆಯಾಗಬಹುದು
- ಮೇಲಾಧಿಕಾರಿಗಳಿಂದ ಸಿಗುವ ಮಾರ್ಗದರ್ಶನದಿಂದ ನಷ್ಟವನ್ನು ಭರಿಸಬಹುದು
- ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ
- ಕಳ್ಳತನದ ಆಪಾದನೆ ನಿಮ್ಮ ಮೇಲೆ ಬರುವ ಸಾಧ್ಯತೆಗಳಿವೆ ಎಚ್ಚರ
- ಮನಸ್ಸನ್ನು ಸ್ಥಿಮಿತವಾಗಿಟ್ಟುಕೊಳ್ಳಿ
- ಕೆಲಸದ ಬದಲಾವಣೆ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಕೈಬಿಡಿ
- ಗುರುದತ್ತಾತ್ರೇಯರನ್ನು ಆರಾಧಿಸಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಜವಾಬ್ದಾರಿಗಳನ್ನು ತುಂಬಾ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ
- ಹಣ ನಿರ್ವಹಣೆಯನ್ನು ನೀವು ಚೆನ್ನಾಗಿ ನಿರ್ವಹಿಸುತ್ತೀರಿ ಶುಭಫಲ
- ಮುಂದೆ ಲಾಭದ ಸೂಚನೆಗಳಿರುತ್ತವೆ
- ಈ ದಿನ ಆರ್ಥಿಕವಾಗಿ ಕೊರತೆ ಇರುವುದಿಲ್ಲ
- ರಾಜಕೀಯ ವ್ಯಕ್ತಿಗಳು ಈ ದಿನ ಗೌಪ್ಯವಾದ ಸ್ಥಳದಲ್ಲಿ ಕಳೆಯುವ ಯೋಗವಿದೆ
- ಉತ್ತಮವಾದ ಶಿಸ್ತನ್ನು ಬೆಳೆಸಿಕೊಂಡರೆ ಬೇರೆ ಅವಕಾಶಗಳು ಲಭಿಸುತ್ತದೆ
- ಬೆಟ್ಟದ ಮೇಲಿರುವ ದೇವಿಗೆ ಕಾಲ್ನಡಿಗೆಯಲ್ಲಿ ಹೋಗಿ ಸೇವೆ ಮಾಡಿ
- ಗಾಯಿತ್ರಿದೇವಿಯನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us