/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ
ಇರಲಿದೆ.
ಮೇಷ ರಾಶಿ
- ದೊಡ್ಡವರ, ತಂದೆಯವರ ಮಾರ್ಗದರ್ಶನ ಉತ್ತಮವಾಗಿ ದೊರೆಯುತ್ತದೆ
- ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಚ್ಚರಿಕೆ
- ಇದು ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುವಂತದ್ದು
- ವಿದ್ಯಾರ್ಥಿಗಳು ಕೆಲಸದಲ್ಲಿ ತುಂಬಾ ಆತುರವಾಗಿ ಮುಂದುವರೆಯುವುದರಿಂದ ಯಶಸ್ಸಿಗೆ ಅಡ್ಡಿ ಉಂಟಾಗಬಹುದು
- ಜನರು ನಿಮ್ಮ ದೌರ್ಬಲ್ಯಗಳನ್ನು ಅಸ್ತ್ರವನ್ನಾಗಿಟ್ಟುಕೊಂಡು ನಿಮಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ
- ಇಂದು ಸ್ತ್ರೀಯರಿಗೆ ಅನುಕೂಲಕರವಾದ ದಿನ
- ಈ ದಿನ ಖರೀದಿಗೆ ಹೆಚ್ಚು ಅವಕಾಶಗಳಿವೆ
- ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರಿಕೆ
- ಮನೆ ದೇವರನ್ನು ಪ್ರಾರ್ಥಿಸಿ
ವೃಷಭ
- ಈ ರಾಶಿಯ ನೌಕರರಿಗೆ ಕಿರಿ ಕಿರಿ ಉಂಟಾಗುವ ದಿನ
- ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಗೊಳ್ಳುವ ಸಾಧ್ಯತೆ
- ಮಾನಸಿಕ ಸಮಾಧಾನ ಮುಖ್ಯವಾಗಿರುತ್ತದೆ
- ಅಕ್ಕ ಪಕ್ಕದವರ ಜೊತೆ ಜಗಳ ಮಾಡಬೇಡಿ
- ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಯಶಸ್ಸು ನಿಮ್ಮದಾಗಿರುತ್ತದೆ
- ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು ಅವರನ್ನು ಗೌರವಿಸಿ
- ಇಂದು ನಿಮಗೆ ತುಂಬಾ ತಾಳ್ಮೆ ಇರಬೇಕು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಮಿಥುನ
- ಕುಟುಂಬದಲ್ಲಿ ಮೊದಲಿನಿಂದಲೂ ನಡೆಸಿಕೊಂಡು ಬಂದಿರುವ ವ್ಯಾಪಾರ, ವ್ಯವಹಾರದಲ್ಲಿ ಲಾಭ ದೊರಕುವ ದಿನ
- ಬೇರೆಯವರು ಏನೇನೋ ಮಾತಾಡಿಕೊಳ್ಳುತ್ತಾರೆಂದು ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಿಕೊಳ್ಳಬೇಡಿ
- ಹೊಸ ವ್ಯಾಪಾರ ಪ್ರಾರಂಭಿಸುವ ಮುಂಚೆ ಯೋಚಿಸಿ ನಿರ್ಧಾರ ಮಾಡಿ
- ನಿಧಾನವಾಗಿ ಯೋಚನೆ ಮಾಡಿ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ
- ಇದರಿಂದ ನಿಮ್ಮ ಮನಸ್ಸಿಗೆ ಆನಂದವಾಗುತ್ತದೆ
- ಭೂ ವ್ಯವಹಾರ ಮಾಡುವವರಿಗೆ ಸಾಯಂಕಾಲ ಶುಭವಾಗಲಿದೆ
- ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳ ಮಾಡಿಕೊಳ್ಳಬೇಡಿ
- ದುರ್ಗಾದೇವಿಯನ್ನು ಆರಾಧಿಸಿ
ಕಟಕ
- ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದವರನ್ನು ದ್ವೇಷಿಸಬೇಡಿ
- ಅವರಿಂದ ಅಂತರವನ್ನು ಕಾಯ್ದುಕೊಳ್ಳಿ
- ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಾರ್ತೆ
- ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆ ಮಾಡಿ
- ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚಿಸಲಿದೆ
- ಕೆಲಸದ ಸ್ಥಳದಲ್ಲಿ ನಿಮಗೆ ಸಣ್ಣ ಪುಟ್ಟ ಅಡ್ಡಿಯಾದ್ರೂ ಆತಂಕ ಪಡಬೇಕಾಗಿರುವುದಿಲ್ಲ
- ಈ ದಿನ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ
- ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
ಸಿಂಹ
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ರಕ್ತದೊತ್ತಡ ಸಮಸ್ಯೆಯಿರುವವರು ಜಾಗ್ರತೆಯಿಂದಿರಿ
- ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಅಡಚಣೆಯಾಗಬಹುದು
- ನಿಧಾನವಾಗಿ ಯೋಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
- ವ್ಯಾವಹಾರಿಕವಾಗಿ, ಉದ್ಯೋಗಿಕವಾಗಿ ಸ್ವಲ್ಪ ನಷ್ಟವನ್ನು ಅನುಭವಿಸುವ ದಿನ
- ಆಲಸ್ಯ ತೋರಿಸಬಾರದು, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ನಿಮ್ಮ ಅಹವಾಲನ್ನು ಸ್ವೀಕರಿಸಿ
- ನಿಮ್ಮ ಕೆಲಸಕ್ಕೆ ಭರವಸೆ ನೀಡುವ ಕೆಲಸಗಳು ನಡೆಯುತ್ತದೆ
- ಕೆಲಸದಲ್ಲಿ ಉತ್ತೇಜನ ಬರುತ್ತದೆ ಹಾಗೆ ಮುಂದುವರೆಸಿಕೊಂಡು ಶುಭಫಲವನ್ನು ನಿರೀಕ್ಷಿಸುತ್ತೀರಿ
- ಪಾರ್ವತಿ ದೇವಿಯನ್ನು ಆರಾಧಿಸಿ
ಕನ್ಯಾ
- ಈ ರಾಶಿಯವರಿಗೆ ತಲೆನೋವು ಮಾನಸಿಕ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ
- ಪ್ರೇಮಿಗಳ ಮಧ್ಯೆ ಬಿರುಕು ಉಂಟಾಗುವ ದಿನ
- ಪ್ರೀತಿಸಿ ಮದುವೆಯಾದ ದಂಪತಿಗಳ ಒಂದೇ ನಕ್ಷತ್ರ ಆಗಿದ್ರೆ ಜಗಳವನ್ನು ಮಾಡಿಕೊಳ್ಳುವ ಸಾಧ್ಯತೆ
- ಕೊನೆಗೆ ಕಾನೂನಿನ ಮೊರೆ ಹೋಗುವ ಸಾಧ್ಯತೆಗಳು ಇದೆ
- ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಇದೊಂದು ಸದಾವಕಾಶ
- ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು
- ವಾದ-ವಿವಾದಗಳಿಗೆ ಅಥವಾ ಜಗಳಕ್ಕೆ ಪರಿಹಾರವಲ್ಲ
- ಶಾಂತವಾಗಿ ನಿಮ್ಮ ಮನಸ್ಸು ಒಳ್ಳೆಯ ಮಾರ್ಗದತ್ತ ಮುಂದುವರೆಯಲಿ
- ವೃದ್ಧ ದಂಪತಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಅವರ ಆಶೀರ್ವಾದ ಪಡೆಯಿರಿ
- ವಿಷ್ಟು ಸಹಸ್ರನಾಮ ಶ್ರವಣ ಮಾಡಿ
ತುಲಾ
- ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ತುಂಬಾ ಪ್ರೋತ್ಸಾಹ ಸಿಗುತ್ತದೆ
- ಹಣದ ಅನುಕೂಲ ಆಗುವ ಸಾಧ್ಯತೆಗಳಿವೆ
- ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಾ ಉನ್ನತ ವ್ಯಾಸಂಗ ಮಾಡಲು ಅವಕಾಶವಾಗುತ್ತದೆ
- ಪದವೀಧರ ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ
- ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಸರಿಯಾದ ನಾಯಕರ ಮಾರ್ಗದರ್ಶನ ಪಡೆದು
- ಮುಂದುವರೆದರೆ ಒಳಿತು
- ಯಾವುದರ ದುರುಪಯೋಗವನ್ನು ಮಾಡಿಕೊಳ್ಳದೆ ಶುಭ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ
- ನದಿ ತೀರದಲ್ಲಿರುವ ದೇವಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ನಿಮ್ಮ ಪರವಾಗಿ ಬೇರೆಯವರು ಮಾತನಾಡಿದ್ರೆ ಕುಟುಂಬದ ಸದಸ್ಯರು ಸಿಟ್ಟಿನಿಂದ ವಿರೋಧ ವ್ಯಕ್ತಪಡಿಸುತ್ತಾರೆ
- ವಿದೇಶ ಪ್ರಯಾಣಕ್ಕೆ ಪ್ರಯತ್ನಿಸುವವರಿಗೆ ಈ ದಿನ ಶುಭವಾಗಲಿದೆ
- ಹಣದ ಕೊರತೆಯಾಗಬಹುದು ಸರಿಯಾದ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ
- ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬಾರದು
- ಅವಕಾಶವನ್ನು ಮುಂದಿಟ್ಟುಕೊಂಡು ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಇಂಜಿನಿಯರ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಪ್ರದವಾದ ದಿನ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
- ಅದೃಷ್ಟಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬಂದ ಅನುಭವವಾಗುತ್ತದೆ
- ತಾಯಿಯ ಕಡೆಯಿಂದ ಉತ್ತಮ ಬೆಂಬಲ ಮತ್ತು ಧನ ಸಹಾಯವಾಗುತ್ತದೆ
- ನಿಮಗಿರುವ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿ ಅದಕ್ಕೆ ಗೌರವ ಲಭಿಸುತ್ತೆ
- ಕಾರ್ಯಕ್ಷೇತ್ರದಲ್ಲಿ ಹಿರಿಯ ಆಧಿಕಾರಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಓದಬೇಕೆಂಬ ಹಂಬಲವಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
- ಈಶ್ವರನನ್ನು ಪ್ರಾರ್ಥನೆ ಮಾಡಿ
ಮಕರ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮಗಿರುವ ಬದ್ಧತೆ ಮತ್ತು ಗೌರವವನ್ನು ಹೆಚ್ಚಿಸುವ ದಿನ
- ಆರ್ಥಿಕವಾಗಿ ನಿಮಗೆ ಅನುಕೂಲವಿದೆ
- ನೀವು ಎಲ್ಲ ಕೆಲಸಗಳನ್ನು ಮಾಡಲು ಸ್ಫೂರ್ತಿದಾಯಕವಾಗಿರುತ್ತದೆ
- ಹಣಕ್ಕಿಂತ ಹೆಚ್ಚಾಗಿ ನಿಮ್ಮ ಕಾರ್ಯವೈಖರಿಯನ್ನು ಜನಮೆಚ್ಚಿ ಅಭಿನಂದಿಸುತ್ತಾರೆ
- ನಿಮಗೆ ಶಾಶ್ವತವಾದ ಗೌರವ ಅನ್ನೋ ಭಾವನೆ ಬರುವ ದಿನ
- ನಿಮ್ಮ ಮನಸ್ಸು ತುಂಬಾ ಮಾಧುರ್ಯ ಹೊಂದುವ ದಿನ
- ಅದರಲ್ಲಿಯೂ ನಿಮ್ಮನ್ನು ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಜನಪ್ರಿಯತೆ ಗಳಿಸಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
- ಸಹೋದರರ ಅಥವಾ ಬಂಧುಗಳ ಜೊತೆ ಹಳೆ ವಿಷಯಕ್ಕೆ ಜಗಳ ಮಾಡಿಕೊಂಡು ಮನಸ್ತಾಪ ಆಗುವ ಸಾಧ್ಯತೆ
- ಕುಟುಂಬದ ಹೊರಗಿನ ವಿಚಾರದಲ್ಲಿ ಬೇರೆಯವರ ಸಲಹೆ ಪಡೆಯುವ ಅವಕಾಶವಿರುತ್ತದೆ
- ಅದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
- ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ
- ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ವೈದ್ಯರ ಸಲಹೆ ಪಡೆಯಿರಿ
- ಧ್ಯಾನ, ಯೋಗ, ವ್ಯಾಯಾಮ ಇತ್ಯಾಧಿಗಳಿಗೆ ಹೆಚ್ಚಿನ ಸಮಯವನ್ನು ಕೊಡಬೇಕು
- ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಸಿಗುವ ದಿನ
- ಮಹಾಕಾಳಿಯನ್ನು ಪ್ರಾರ್ಥಿಸಿ
ಮೀನ
- ಮನೆಯಲ್ಲಿ ಹಲವು ವಿಷಯಗಳಿಗೆ ಭಿನ್ನಾಭಿಪ್ರಾಯಗಳಿರುತ್ತವೆ
- ನಿಮ್ಮ ವೃತ್ತಿ ದೃಷ್ಟಿಯಿಂದ ಜನರಿಗೆ, ಸಮಾಜಕ್ಕೆ ಒಳ್ಳೆಯದು ಮಾಡಲು ಇದೊಂದು ಸದಾವಕಾಶ
- ಜನರು ನಿಮ್ಮ ಕಡೆ ಆಕರ್ಷಣೆಗೆ ಒಳಗಾಗುತ್ತಾರೆ
- ಆಹಾರದ ವೃತ್ಯಯದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳು ಕಾಣಬಹುದು ಜಾಗ್ರತೆ
- ನಿಮ್ಮದೆ ಸ್ಥಳದಲ್ಲಿ ಹಾಗೂ ವಿದೇಶದಲ್ಲಿ ಕೆಲಸಕ್ಕೆ ಹೋಗುವ ಅವಕಾಶಗಳಿವೆ
- ನಿಮ್ಮ ಪ್ರತಿಭೆ, ವಿಚಾರವಂತಿಕೆ ಪ್ರಕಾಶಪಡಿಸಲು ಸಹಾಯ ಸಿಗುತ್ತದೆ
- ಸ್ನೇಹಿತರು ಬಂಧುಗಳು ನಿಮಗೆ ಪ್ರೀತಿ ವಿಶ್ವಾಸವನ್ನು ತೋರಿಸುತ್ತಾರೆ
- ಎಲ್ಲಾ ದೃಷ್ಟಿಯಿಂದ ನಿಮಗೆ ಶುಭದಿನ
- ಗುರು ಹಿರಿಯರನ್ನು ಗೌರವಿಸಿ, ಆಶೀರ್ವಾದ ಪಡೆಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ