/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಹೊಸ ಕೆಲಸ ಆರಂಭಿಸಲು ಸೂಕ್ತಕಾಲ
- ಈ ದಿನ ಮನೆ ಬದಲಾವಣೆ ಯೋಚನೆ ಬೇಡ
- ತಂತ್ರಜ್ಞಾನದ ವಿಚಾರಕ್ಕೆ ಹಣ ಖರ್ಚಾಗಬಹುದು
- ಸ್ಥಗಿತಗೊಂಡಿರುವ ಕಾರ್ಯ ಮುಂದುವರಿಸಿ
- ಮಾನಸಿಕ ಗೊಂದಲಗಳು ದೂರವಾಗುತ್ತದೆ
- ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಯಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
- ಮನೆ ಖರ್ಚನ್ನು ನಿಯಂತ್ರಿಸಿ
- ಮನೆಗೆ ಹೊಸ ಅತಿಥಿಯ ಆಗಮನ ಸೂಚನೆ
- ಅಹಂಭಾವ, ಅತೀವ ಸಂತೋಷ ಬೇಡ ನಿರಾಸೆಯಾಗಬಹುದು
- ಷೇರು ಹೊಡಿಕೆಗಳನ್ನು ಪ್ರಾರಂಭಿಸಬಹುದು
- ಪ್ರೇಮಿಗಳಿಗೆ ದೊಡ್ಡ ಸಮಸ್ಯೆ ಕಾದಿದೆ
- ಪ್ರಮುಖ ಕೆಲಸಗಳಿಗೆ ಅಡಚಣೆಯಾಗಬಹುದು
ಮೈಲಾರಲಿಂಗೇಶ್ವರನನ್ನು ಪ್ರಾರ್ಥನೆ ಮಾಡಿ
ಮಿಥುನ
- ಆರ್ಥಿಕವಾಗಿ ಇರುವ ಸಮಸ್ಯೆಗಳಿಗೆ ಪರಿಹಾರವಿಲ್ಲ
- ಪೋಷಕರ ಸಲಹೆಗೆ ಮಾನ್ಯತೆ ನೀಡಿ
- ಬೇರೆಯವರನ್ನು ವ್ಯಂಗ್ಯ ಮಾಡದಿರಿ, ಅವಮಾನ ಆಗಬಹುದು
- ಹೊಸ ಕೆಲಸಕ್ಕೆ ಸರಿಯಾದ ಸಮಯವಲ್ಲ
- ಯೋಜನೆಗಳನ್ನು ಬದಲಾಯಿಸಿ ಅನುಕೂಲವಿದೆ
- ತಂದೆಯವರ ಬೇಸರಕ್ಕೆ ಕಾರಣವಾಗದಿರಿ
- ಶನೈಶ್ಚರ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ
ಕಟಕ
- ಕುಟುಂಬದಲ್ಲಿ ಶಾಂತಿ ವಾತಾವರಣ
- ನಿಮ್ಮ ಶಿಸ್ತು, ಕಾರ್ಯವೈಖರಿಯನ್ನು ಹಾಗೇ ಉಳಿಸಿಕೊಳ್ಳಿ
- ವ್ಯವಹಾರದ ಚತುರತೆ ನಿಮ್ಮ ಲಾಭಕ್ಕೆ ಕಾರಣ
- ಸಹೋದ್ಯೋಗಿಗಳೊಂದಿಗೆ ಸಂತೋಷದ ಸಮಯವಿದೆ
- ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವಿದೆ
- ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುವ ದಿನ
- ಸುಬ್ರಹ್ಮಣ್ಯನಿಗೆ ಪ್ರಾರ್ಥನೆ ಮಾಡಿ
ಸಿಂಹ
- ನೌಕರಿಗೆ ಸಂಬಂಧಿಸಿದಂತೆ ವಿದೇಶ ವಾರ್ತೆ ಸಂತೋಷವಾಗುತ್ತದೆ
- ಸ್ನೇಹಿತರಿಗೆ ಸಹಾಯ ಮಾಡಬಹುದು
- ಪೂರ್ಣಮಾಡಬೇಕಾದ ಕೆಲಸಗಳು ಹಾಗೆ ಉಳಿಯಬಹುದು
- ಅನಗತ್ಯ ಮಾತುಬೇಡ, ಹಗುರವಾಗಿ ಇರುತ್ತೀರಿ
- ಅಜೀರ್ಣ ಸಮಸ್ಯೆ ಕಾಡಬಹುದು
- ಸ್ನೇಹಿತರ ಮಧ್ಯೆ ಅಧಿಕಾರ ಬೇಡ, ಸ್ವಾಭಾವಿಕರಾಗಿರಿ
- ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ
ಕನ್ಯಾ
- ನಿಮ್ಮ ಕೆಲಸದಲ್ಲಿ ಪ್ರಮುಖ ಸ್ಥಾನವಿರುತ್ತದೆ
- ಗೌರವಕ್ಕೆ ತಕ್ಕ ಕೆಲಸಮಾಡಿ ಶುಭವಿದೆ
- ಬೇರೆಯವರನ್ನು ಅವಲಂಬಿಸಿ ಕಾರ್ಯಪ್ರವೃತ್ತರಾಗಬಾರದು
- ಮಕ್ಕಳಿಂದ ಅವಮಾನ ಅಗಬಹುದು
- ನಿಮ್ಮ ಲೋಪ ದೋಷಗಳ ಅನಾವರಣ ಅವಮಾನ ಆಗಬಹುದು
- ಕುಟುಂಬ ನಿರ್ವಹಣೆಯ ಬಗ್ಗೆ ಚರ್ಚೆ, ಕಲಹ
- ಗಣಪತಿಗೆ ಚಂದನದ ಲೇಪನ ಮಾಡಿಸಿ
ತುಲಾ
- ಶತ್ರುಗಳಿಂದ, ವಿರೋಧಿಗಳಿಂದ ಕೆಲಸ ಹಾಳಾಗಬಹುದು
- ನಿಮ್ಮ ವರ್ತನೆ ಎಂದಿನಂತೆಯಿರಲಿ ರಾಜಿಬೇಡ
- ವಿದ್ಯಾರ್ಥಿಗಳಿಗೆ ಅನುಕೂಲವಿದೆ ಅಲಸ್ಯಬೇಡ
- ವ್ಯಾಪಾರ, ವೃತ್ತಿಯಲ್ಲಿ ಅನಿರೀಕ್ಷಿತ ಲಾಭ
- ಸಾಧುಗಳ, ಧಾರ್ಮಿಕ ಮುಖಂಡರ ಭೇಟಿಯಾಗಬಹುದು
- ಹಣಕ್ಕೆ ಕೊರತೆಯಿಲ್ಲ ಕೀರ್ತಿಯೂ ಇದೆ
- ನಾಗನಿಗೆ ಅಡಿಕೆ, ಹೂ ಅರ್ಪಿಸಿ
ವೃಶ್ಚಿಕ
- ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಅವಕಾಶವಿದೆ
- ರಾಜಕೀಯ ವಿಷಯದಿಂದ ದೂರವಿದ್ದರೆ ಒಳಿತು
- ಅನಗತ್ಯ ವಿಚಾರಗಳಿಂದ ಗೊಂದಲ ನಿರಾಸೆಯಾಗಬಹುದು
- ಕುಟುಂಬದಲ್ಲಿ ಅಶಾಂತಿ ತಲೆದೋರಬಹುದು
- ಹಣಕಾಸಿನ ಲಾಭದ ಆಸೆಯಿಂದ ಮೋಸ ಹೋಗಬಹುದು
- ಬೇರೆಯವರ ಸಂಪರ್ಕದಿಂದ ಮನೆಯಲ್ಲಿ ಬೇಸರ
- ದತ್ತಾತ್ರೇಯರ ಆರಾಧನೆ ಮಾಡಿ
ಧನಸ್ಸು
- ಮನೆಯವರ ಯೋಗಕ್ಷೇಮ ಗಮನಿಸಿ
- ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಿ
- ಹಳೆಯ ನೆನಪುಗಳಿಂದ ಕಣ್ಣೀರು, ಕಹಿ ಅನುಭವ
- ಸಾಲದ ವಿಚಾರಕ್ಕೆ ಸಿಕ್ಕಿಕೊಳ್ಳಬಹುದು
- ಬೇರೆಯವರಿಗೆ ಸಹಾಯದ ಹಸ್ತ ಬೇಡ ತೊಂದರೆಯಾಗಬಹುದು
- ಹಳೆಯ ಚಿಂತೆ ಮರೆತರೆ ಅನುಕೂಲವಿದೆ
- ನದೀ ತೀರದ ದೇವಾಲಯಕ್ಕೆ ಸೇವೆ ಮಾಡಿಸಿ
ಮಕರ
- ಕುಟುಂಬ ರಾಜಕಾರಣ, ಕಲಹ, ಮನಸ್ತಾಪಗಳಿರುತ್ತವೆ
- ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದೊಡ್ಡ ಗಲಾಟೆಯಾಗಬಹುದು
- ನಿಮ್ಮದಲ್ಲದ ವಿಚಾರ ನಿಮಗೆ ತೊಂದರೆ ಮಾಡುತ್ತದೆ
- ಸ್ವನಿರ್ಧಾರ ಒಳಿತು ಕುತಂತ್ರ ಬೇಡ
- ಬೇರೆಯವರಿಗೆ ಸಹಾಯ ಮಾಡಿದ್ರೆ ಅವರಿಂದ ಏನನ್ನು ನಿರೀಕ್ಷಿಸಬೇಡಿ
- ವೃತ್ತಿಯಲ್ಲಿ ತೊಂದರೆಯಾಗಬಹುದು
- ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಬಂಧುಗಳಲ್ಲಿ ಅಲ್ಪ ಪ್ರೀತಿ ಬೇಸರ ಆಗಬಹುದು
- ಮಕ್ಕಳ ಭವಿಷ್ಯದ ಚಿಂತೆ
- ತಪ್ಪು ನಿರ್ಧಾರಗಳು ಬೇಡ
- ಧಾರ್ಮಿಕ ಕಾರ್ಯಗಳ ಯೋಚನೆ ಹಾಕುತ್ತೀರಿ, ಕಾರ್ಯರೂಪಕ್ಕೆ ಬರುವುದಿಲ್ಲ
- ಬೇರೆಯವರ ಬಗ್ಗೆ ಅನುಮಾನ ಮೂಡಬಹುದು
- ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
- ಅಮೃತ ಮೃತ್ಯುಂಜನನ್ನು ಪ್ರಾರ್ಥನೆ ಮಾಡಿ
ಮೀನ
- ವ್ಯಾವಹಾರಿಕವಾಗಿ ಬೇರೆಯವರ ಸಹಾಯ ದೊರೆಯುತ್ತದೆ
- ಲಾಭಗಳಿಸುವ ಹಂಬಲದಲ್ಲಿ ನೈತಿಕತೆ ದೂರಮಾಡಬಾರದು
- ದಿನಚರಿಯಲ್ಲಿ ಬದಲಾವಣೆ ಕಾಯುವಿಕೆಯಿಂದ ಬೇಸರ
- ಯಶಸ್ಸಿನ ಆಸೆಯಿಂದ ದುರಾಸೆ ಬೇಡ
- ಮಕ್ಕಳು, ಮೊಮ್ಮಕ್ಕಳಿಂದ ಉತ್ತಮ ಸಾಧನೆ ಸಮಾಧಾನ ಸಿಗಲಿದೆ
- ಕೋಪ ಕಡಿಮೆಯಿರಲಿ ನಿಮ್ಮ ಕೆಲಸಗಳಾಗುತ್ತವೆ
- ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ