Advertisment

ಈ ರಾಶಿಯವರಿಗೆ ತುಂಬಾ ನಷ್ಟ, ಸುಳ್ಳು ಹೇಳಿದ್ರೆ ಅಪಾಯ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನಿಮ್ಮ ನಡವಳಿಕೆಯಿಂದ ನೀವು ಪೊಲೀಸರ ಅತಿಥಿಯಾಗಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯವಿರುತ್ತದೆ
  • ಸಾಯಂಕಾಲದ ಸಮಯ ಚೆನ್ನಾಗಿರುವುದಿಲ್ಲ ಮನೆಯಲ್ಲಿ ಅಶಾಂತಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ

ಮೇಷ ರಾಶಿ

publive-image

  • ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುವ ದಿನ
  • ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
  • ನಿಮ್ಮ ಆರೋಗ್ಯ ಸಮಸ್ಯೆಯನ್ನು ತಾತ್ಸಾರ ಮಾಡಬೇಡಿ
  • ನಿಮ್ಮ ಮಹತ್ತರವಾದ ಆಲೋಚನೆಗಳನ್ನ ಉತ್ತಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
  • ಜನರು ನಿಮ್ಮ ವ್ಯವಹಾರವನ್ನು ಗೇಲಿ ಮಾಡಬಹುದು
  • ಪಶ್ಚಾತಾಪ ಪಡುವಂತಹ ಯಾವ ಕೆಲಸಗಳನ್ನು ಇಂದು ಮಾಡಬೇಡಿ
  • ಮುತ್ತುರಾಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಕಣ್ಣಿನ ತೊಂದರೆ ಕಾಣಬಹುದು ಜಾಗ್ರತೆ ವಹಿಸಿ
  • ಕಬ್ಬಿಣ ವ್ಯಾಪಾರಿಗಳಿಗೆ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಶುಭವಿದೆ
  • ದೂರದ ಸಂಬಂಧಿಕರನ್ನು ಭೇಟಿ ಮಾಡಿ ವಿವಾಹ ವಿಚಾರ ಪ್ರಸ್ತಾಪ ಮಾಡಬಹುದು
  • ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
  • ಕುಟುಂಬದವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ
  • ದೇವಿಯನ್ನು ಆರಾಧನೆ ಮಾಡಿ
Advertisment

ಮಿಥುನ

publive-image

  • ಮನಸ್ಸಿನಲ್ಲಿ ಹಲವಾರು ಗೊಂದಲಗಳಿರುತ್ತವೆ
  • ನೀವು ಮಾಡಿದ ಕೆಲಸ ನಿಮಗೆ ತೃಪ್ತಿಯಾಗುವುದಿಲ್ಲ
  • ಹೆಚ್ಚು ಪರಿಶ್ರಮ ಪಡುತ್ತೀರಿ ಅದರಿಂದ ಶುಭಫಲವಾಗುತ್ತದೆ
  • ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
  • ಸಾಯಂಕಾಲದ ಸಮಯ ಚೆನ್ನಾಗಿರುವುದಿಲ್ಲ ಮನೆಯಲ್ಲಿ ಅಶಾಂತಿ ವಾತಾವರಣ
  • ಹಿರಿಯರ ಅನಾರೋಗ್ಯ ನಿಮ್ಮ ಮನಸ್ಸಿಗೆ ನೋವು ಉಂಟುಮಾಡುತ್ತದೆ
  • ಕುಲದೇವತಾ ಸ್ಮರಣೆ ಮಾಡಿ

ಕಟಕ

publive-image

  • ನಿಗೂಢ ವಿಚಾರಗಳಲ್ಲಿ ಮನಸ್ಸು ತಲ್ಲೀನವಾಗಿರುತ್ತದೆ
  • ಮನೆಯವರು ನಿಮಗೆ ಏನೇ ಹೇಳಿದ್ರೂ ನಿಮ್ಮ ತಲೆಗೆ ಹೋಗುವುದಿಲ್ಲ
  • ಆದರೆ ನೀವು ನಿಮ್ಮದೆ ಲೋಕದಲ್ಲಿ ವಿಹರಿಸುತ್ತಿರುತ್ತೀರಿ
  • ಮನೆಯಲ್ಲಿ ಹಲವು ಜಟಿಲ ಸಮಸ್ಯೆಗಳಿರುತ್ತವೆ ನೀವು ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ
  • ಮನೆಯವರಿಗೆ ಆತಂಕ ಉಂಟು ಮಾಡುತ್ತೆ
  • ಮಾಂತ್ರಿಕ ವಿಚಾರಗಳಿಂದ ದೂರ ಉಳಿಯಬೇಕು
  • ಆಸೆಗೆ ಕಟ್ಟು ಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಕಾಗಬಹುದು
  • ರಕ್ಷಾ ಸುದರ್ಶನನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಆರ್ಥಿಕ ದೃಷ್ಠಿಯಿಂದ ಹಣಕಾಸಿನ ವಿಚಾರದಿಂದ ಈ ದಿನ ಚೆನ್ನಾಗಿರುವುದಿಲ್ಲ
  • ನಿಮ್ಮ ಆಲೋಚನೆಯೇ ಬೇರೆ, ಕಾರ್ಯಕ್ಷೇತ್ರದಲ್ಲಿ ನಡೆಯೋದೆ ಬೇರೆ ಆಗಿರುತ್ತದೆ
  • ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇರುವ ಸಂದರ್ಭ ನಿಮ್ಮ ಆಲೋಚನೆಗಳು ಬೇರೆ ಇರುತ್ತದೆ
  • ಪದವೀಧರ ವಿದ್ಯಾರ್ಥಿಗಳಿಗೆ ಓದಲು ಬರೆಯಲು ಸಮಯ ಇರುವುದಿಲ್ಲ
  • ಮಾನಸಿಕವಾಗಿ ಭಯ ಹೆಚ್ಚಾಗುವ ಸಂದರ್ಭ
  • ಇಡೀ ಕುಟುಂಬ ಮತ್ತು ಭವಿಷ್ಯದ ಕೆಲವು ಅಂಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
  • ಕೆಟ್ಟ ಕೆಟ್ಟ ಶಕುನಗಳು ನಿಮ್ಮ ಧೈರ್ಯವನ್ನು ಕಡಿಮೆ ಮಾಡುತ್ತದೆ
  • ನೀಲಿ ಹೂವಿನಿಂದ ಶನೈಶ್ಚರನನ್ನು ಪ್ರಾರ್ಥನೆ ಮಾಡಿ
Advertisment

ಕನ್ಯಾ

publive-image

  • ಈ ದಿನ ನವವಿವಾಹಿತರಿಗೆ ಶುಭದಿನ
  • ಎರಡನೇ ಮದುವೆಯಾದವರಿಗೆ ಅನುಮಾನ ಕಾಡಿ ವಿರಸಕ್ಕೆ ಅವಕಾಶ ಉಂಟಾಗಬಹುದು
  • ಅಕಸ್ಮಾತಾಗಿ ಕಾಲಿಗೆ ಪೆಟ್ಟು ಬೀಳಬಹುದು ಗಮನಹರಿಸಿ
  • ಮಕ್ಕಳ ವಿಚಾರದಲ್ಲಿ ತಾತ್ಸಾರ ಬೇಡ
  • ನೆರೆಹೊರೆಯವರು ಸಹಾಯ ಮಾಡುವ ರೂಪದಲ್ಲಿ ಬಂದು ನಿಮ್ಮನ್ನು ಮೋಸ ಮಾಡಬಹುದು
  • ಹಿರಿಯರನ್ನು ಪೋಷಕರನ್ನು ನೋಡುವ ತವಕ ಹೆಚ್ಚಾಗಬಹುದು
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ತುಲಾpublive-image

  • ಆಧುನಿಕ ತಂತ್ರಜ್ಞಾನದಲ್ಲಿ ಆಸಕ್ತಿಯಿಂದ ಅದರ ಮೊರೆ ಹೋಗುತ್ತೀರಿ
  • ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯವಿರುತ್ತದೆ
  • ತಮ್ಮ ಶಕ್ತಿ, ಸಾಮರ್ಥ್ಯ, ಹಣವನ್ನು ಖರ್ಚು ಮಾಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಅಶುಭ
  • ನ್ಯಾಯಾಲಯದಲ್ಲಿ ಕೆಲಸಗಳಿದ್ದರೆ ಅದು ಇತ್ಯರ್ಥವಾಗದೆ ಸಮಸ್ಯೆ ಹೆಚ್ಚಾಗಬಹುದು
  • ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಲಾಭವಿದೆ
  • ಹಾವಿನಿಂದ ತೊಂದರೆಯಾಗಬಹುದು ತುಂಬಾ ಜಾಗ್ರತೆವಹಿಸಿ
  • ಅಷ್ಟಕುಲ ನಾಗೇಂದ್ರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಪುಸ್ತಕ ಪ್ರೇಮಿಗಳಿಗೆ ತುಂಬಾ ಶುಭ ದಿನ
  • ಪುಸ್ತಕದ ಪ್ರಭಾವ ನಿಮ್ಮನ್ನು ಪೂರ್ಣವಾಗಿ ಆವರಿಸುವ ಸಾಧ್ಯತೆ
  • ಜಗತ್ತಿನ ಒಳಿತಿಗೆ ಯಾವುದು ಬೇಕು ಬೇಡದ ಬಗ್ಗೆ ಚರ್ಚಿಸುತ್ತೀರಿ
  • ಮನೆಯ ಹತ್ತಿರದಲ್ಲಿ ಬೆಂಕಿ ಅವಘಡ ಸಂಭವಿಸಬಹುದು
  • ಇಂದು ಯಾವುದೇ ಅಪೇಕ್ಷೆಯಿಲ್ಲದ ಸಹಾಯ ಮಾಡುವ ಸ್ವಭಾವ ನಿಮ್ಮದಾಗಬೇಕು
  • ಜೀವನದಲ್ಲಿ ಜಿಗುಪ್ಸೆ ಅಥವಾ ವೈರಾಗ್ಯ ಕಾಡಲು ಆರಂಭವಾಗಬಹುದು
  • ಜೀವನ ಇಷ್ಟೇ ಎಂಬ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಆದರೆ ಧನಾತ್ಮಕವಾಗಿರಲಿ
  • ಉದಯಿಸುತ್ತಿರುವ ಸೂರ್ಯನನ್ನು ಪ್ರಾರ್ಥನೆ ಮಾಡಿ
Advertisment

ಧನಸ್ಸು

publive-image

  • ಸಗಟು ವ್ಯಾಪಾರಿಗಳಿಗೆ ತಮ್ಮ ಕರ್ತವ್ಯ ಲೋಪದಿಂದ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆಯಿದೆ
  • ಕಳ್ಳರು ತಮ್ಮ ಕೈಚಳಕ ಫಲಿಸಲಿಲ್ಲ ಅಂತ ಯೋಚಿಸುವಾಗ ಪೊಲೀಸರು ಬಂಧಿಸಬಹುದು
  • ಮಾತೆಯರು ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ
  • ಮನಸ್ಸು, ಶರೀರದ ಮೇಲೆ ಪ್ರಭಾವ ಬೀರುವ ಯಾವುದೇ ಆಲೋಚನೆ ಮಾಡಬೇಡಿ ಅನಾರೋಗ್ಯ ಕಾಡಬಹುದು
  • ಸಾಯಂಕಾಲ ಸುಖವಾದ ಭೋಜನಕ್ಕೆ ಅವಕಾಶವಿದೆ
  • ಇಂದು ನರಸಿಂಹನನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಮಕರ ರಾಶಿಯ ಹಲವರಿಗೆ ಈ ದಿನ ಶುಭವಿಲ್ಲ
  • ಹುಚ್ಚು ಧೈರ್ಯ ಇರುವ ಪ್ರೇಮಿಗಳಿಗೆ ಅಪಘಾತ, ವಾಹನ ಜಖಂ ಆಗುವ ಸಾಧ್ಯತೆಯಿದೆ
  • ತಮ್ಮ ವ್ಯವಹಾರದ ವಿಚಾರಗಳು ಮನೆಯಲ್ಲಿ ತಿಳಿಸದ ಕಾರಣ ತೊಂದರೆಯಾಗುವ ಸಾಧ್ಯತೆಯಿದೆ
  • ನಿಮ್ಮ ನಡವಳಿಕೆ, ತೆಗೆದುಕೊಳ್ಳುವ ನಿರ್ಧಾರ ತೊಂದರೆ ಉಂಟು ಮಾಡಬಹುದು
  • ನಿಮ್ಮ ನಡವಳಿಕೆಯಿಂದ ನೀವು ಪೊಲೀಸರ ಅತಿಥಿಯಾಗಬಹುದು
  • ಸುಳ್ಳು ಯಾವುದೇ ಕಾರಣಕ್ಕೂ ಹೇಳಬೇಡಿ ತೊಂದರೆಯಾದರೂ ಸತ್ಯವನ್ನೇ ಹೇಳಿ ಜಯಶೀಲರಾಗಿ
  • ದುರ್ಗಾಪರಮೇಶ್ವರಿಗೆ ಹಾಲು ಮತ್ತು ಕುಂಕುಮ ಅರ್ಪಣೆ ಮಾಡಿ

ಕುಂಭ

publive-image

  • ನಿಮ್ಮ ಆತುರದ ನಿರ್ಧಾರಗಳಿಂದ ತುಂಬಾ ನಷ್ಟವನ್ನು ಹೊಂದುವ ಸಾಧ್ಯತೆಯಿದೆ
  • ತುಂಬಾ ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದರೆ ಈ ದಿನ ಪರಿಹಾರ ಸಿಗಬಹುದು
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಅಥವಾ ಮೋಸ ಆಗುವ ಸಾಧ್ಯತೆಯಿದೆ
  • ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬಹುದು
  • ವಿದ್ಯಾರ್ಥಿಗಳು ಮತ್ತು ಮಕ್ಕಳು ತುಂಬಾ ತಾಳ್ಮೆಯಿಂದ ವರ್ತಿಸಬೇಕಾದ ದಿನ
  • ಏಕಾಗ್ರತೆಯಿಂದ ಮಾತ್ರ ಜಯಶೀಲರಾಗುವ ಸಾಧ್ಯತೆ
  • ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಅನಗತ್ಯ ಹಣ ಖರ್ಚಾಗುವ ಸಾಧ್ಯತೆಯಿದೆ
  • ನವಗ್ರಹರನ್ನು ಪ್ರಾರ್ಥನೆ ಮಾಡಿ, ನವಗ್ರಹ ಸ್ತೋತ್ರ ಪಠಿಸಿ
Advertisment

ಮೀನ 

publive-image

  • ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ತುಂಬಾ ಶುಭ ದಿನ
  • ತಮ್ಮ ಜೊತೆ ಕೆಲಸ ಮಾಡುವವರು ಅನಾರೋಗ್ಯದಿಂದ ಜೀವನದ ಕೊನೆಯ ಹಂತ ತಲುಪಿರಬಹುದು
  • ನಿಮ್ಮ ಮನಸ್ಸಿಗೆ ತುಂಬಾ ನೋವು ಉಂಟುಮಾಡಬಹುದು
  • ಇಂದು ಸಂಪಾದನೆಯೇ ನಿಮ್ಮ ಗುರಿಯಾಗಿರುತ್ತದೆ
  • ಏನೂ ಕೆಲಸವಿರುವುದಿಲ್ಲ, ಆದರೆ ಪುರುಸೊತ್ತು ಮಾತ್ರ ಇರುವುದಿಲ್ಲ
  • ಮಾನಸಿಕ ವಿರಾಮದಿಂದ ಸಾಯಂಕಾಲಕ್ಕೆ ಎಲ್ಲಾ ಸರಿ ಹೋಗಬಹುದು
  • ಈಶ್ವರನನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                              

Advertisment
Advertisment
Advertisment