/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುವ ದಿನ
- ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
- ನಿಮ್ಮ ಆರೋಗ್ಯ ಸಮಸ್ಯೆಯನ್ನು ತಾತ್ಸಾರ ಮಾಡಬೇಡಿ
- ನಿಮ್ಮ ಮಹತ್ತರವಾದ ಆಲೋಚನೆಗಳನ್ನ ಉತ್ತಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
- ಜನರು ನಿಮ್ಮ ವ್ಯವಹಾರವನ್ನು ಗೇಲಿ ಮಾಡಬಹುದು
- ಪಶ್ಚಾತಾಪ ಪಡುವಂತಹ ಯಾವ ಕೆಲಸಗಳನ್ನು ಇಂದು ಮಾಡಬೇಡಿ
- ಮುತ್ತುರಾಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಣ್ಣಿನ ತೊಂದರೆ ಕಾಣಬಹುದು ಜಾಗ್ರತೆ ವಹಿಸಿ
- ಕಬ್ಬಿಣ ವ್ಯಾಪಾರಿಗಳಿಗೆ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಶುಭವಿದೆ
- ದೂರದ ಸಂಬಂಧಿಕರನ್ನು ಭೇಟಿ ಮಾಡಿ ವಿವಾಹ ವಿಚಾರ ಪ್ರಸ್ತಾಪ ಮಾಡಬಹುದು
- ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
- ಕುಟುಂಬದವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ
- ದೇವಿಯನ್ನು ಆರಾಧನೆ ಮಾಡಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನಸ್ಸಿನಲ್ಲಿ ಹಲವಾರು ಗೊಂದಲಗಳಿರುತ್ತವೆ
- ನೀವು ಮಾಡಿದ ಕೆಲಸ ನಿಮಗೆ ತೃಪ್ತಿಯಾಗುವುದಿಲ್ಲ
- ಹೆಚ್ಚು ಪರಿಶ್ರಮ ಪಡುತ್ತೀರಿ ಅದರಿಂದ ಶುಭಫಲವಾಗುತ್ತದೆ
- ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
- ಸಾಯಂಕಾಲದ ಸಮಯ ಚೆನ್ನಾಗಿರುವುದಿಲ್ಲ ಮನೆಯಲ್ಲಿ ಅಶಾಂತಿ ವಾತಾವರಣ
- ಹಿರಿಯರ ಅನಾರೋಗ್ಯ ನಿಮ್ಮ ಮನಸ್ಸಿಗೆ ನೋವು ಉಂಟುಮಾಡುತ್ತದೆ
- ಕುಲದೇವತಾ ಸ್ಮರಣೆ ಮಾಡಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಗೂಢ ವಿಚಾರಗಳಲ್ಲಿ ಮನಸ್ಸು ತಲ್ಲೀನವಾಗಿರುತ್ತದೆ
- ಮನೆಯವರು ನಿಮಗೆ ಏನೇ ಹೇಳಿದ್ರೂ ನಿಮ್ಮ ತಲೆಗೆ ಹೋಗುವುದಿಲ್ಲ
- ಆದರೆ ನೀವು ನಿಮ್ಮದೆ ಲೋಕದಲ್ಲಿ ವಿಹರಿಸುತ್ತಿರುತ್ತೀರಿ
- ಮನೆಯಲ್ಲಿ ಹಲವು ಜಟಿಲ ಸಮಸ್ಯೆಗಳಿರುತ್ತವೆ ನೀವು ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ
- ಮನೆಯವರಿಗೆ ಆತಂಕ ಉಂಟು ಮಾಡುತ್ತೆ
- ಮಾಂತ್ರಿಕ ವಿಚಾರಗಳಿಂದ ದೂರ ಉಳಿಯಬೇಕು
- ಆಸೆಗೆ ಕಟ್ಟು ಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಕಾಗಬಹುದು
- ರಕ್ಷಾ ಸುದರ್ಶನನನ್ನು ಪ್ರಾರ್ಥನೆ ಮಾಡಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರ್ಥಿಕ ದೃಷ್ಠಿಯಿಂದ ಹಣಕಾಸಿನ ವಿಚಾರದಿಂದ ಈ ದಿನ ಚೆನ್ನಾಗಿರುವುದಿಲ್ಲ
- ನಿಮ್ಮ ಆಲೋಚನೆಯೇ ಬೇರೆ, ಕಾರ್ಯಕ್ಷೇತ್ರದಲ್ಲಿ ನಡೆಯೋದೆ ಬೇರೆ ಆಗಿರುತ್ತದೆ
- ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇರುವ ಸಂದರ್ಭ ನಿಮ್ಮ ಆಲೋಚನೆಗಳು ಬೇರೆ ಇರುತ್ತದೆ
- ಪದವೀಧರ ವಿದ್ಯಾರ್ಥಿಗಳಿಗೆ ಓದಲು ಬರೆಯಲು ಸಮಯ ಇರುವುದಿಲ್ಲ
- ಮಾನಸಿಕವಾಗಿ ಭಯ ಹೆಚ್ಚಾಗುವ ಸಂದರ್ಭ
- ಇಡೀ ಕುಟುಂಬ ಮತ್ತು ಭವಿಷ್ಯದ ಕೆಲವು ಅಂಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
- ಕೆಟ್ಟ ಕೆಟ್ಟ ಶಕುನಗಳು ನಿಮ್ಮ ಧೈರ್ಯವನ್ನು ಕಡಿಮೆ ಮಾಡುತ್ತದೆ
- ನೀಲಿ ಹೂವಿನಿಂದ ಶನೈಶ್ಚರನನ್ನು ಪ್ರಾರ್ಥನೆ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ನವವಿವಾಹಿತರಿಗೆ ಶುಭದಿನ
- ಎರಡನೇ ಮದುವೆಯಾದವರಿಗೆ ಅನುಮಾನ ಕಾಡಿ ವಿರಸಕ್ಕೆ ಅವಕಾಶ ಉಂಟಾಗಬಹುದು
- ಅಕಸ್ಮಾತಾಗಿ ಕಾಲಿಗೆ ಪೆಟ್ಟು ಬೀಳಬಹುದು ಗಮನಹರಿಸಿ
- ಮಕ್ಕಳ ವಿಚಾರದಲ್ಲಿ ತಾತ್ಸಾರ ಬೇಡ
- ನೆರೆಹೊರೆಯವರು ಸಹಾಯ ಮಾಡುವ ರೂಪದಲ್ಲಿ ಬಂದು ನಿಮ್ಮನ್ನು ಮೋಸ ಮಾಡಬಹುದು
- ಹಿರಿಯರನ್ನು ಪೋಷಕರನ್ನು ನೋಡುವ ತವಕ ಹೆಚ್ಚಾಗಬಹುದು
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ತುಲಾ/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಧುನಿಕ ತಂತ್ರಜ್ಞಾನದಲ್ಲಿ ಆಸಕ್ತಿಯಿಂದ ಅದರ ಮೊರೆ ಹೋಗುತ್ತೀರಿ
- ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯವಿರುತ್ತದೆ
- ತಮ್ಮ ಶಕ್ತಿ, ಸಾಮರ್ಥ್ಯ, ಹಣವನ್ನು ಖರ್ಚು ಮಾಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಅಶುಭ
- ನ್ಯಾಯಾಲಯದಲ್ಲಿ ಕೆಲಸಗಳಿದ್ದರೆ ಅದು ಇತ್ಯರ್ಥವಾಗದೆ ಸಮಸ್ಯೆ ಹೆಚ್ಚಾಗಬಹುದು
- ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಲಾಭವಿದೆ
- ಹಾವಿನಿಂದ ತೊಂದರೆಯಾಗಬಹುದು ತುಂಬಾ ಜಾಗ್ರತೆವಹಿಸಿ
- ಅಷ್ಟಕುಲ ನಾಗೇಂದ್ರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಪುಸ್ತಕ ಪ್ರೇಮಿಗಳಿಗೆ ತುಂಬಾ ಶುಭ ದಿನ
- ಪುಸ್ತಕದ ಪ್ರಭಾವ ನಿಮ್ಮನ್ನು ಪೂರ್ಣವಾಗಿ ಆವರಿಸುವ ಸಾಧ್ಯತೆ
- ಜಗತ್ತಿನ ಒಳಿತಿಗೆ ಯಾವುದು ಬೇಕು ಬೇಡದ ಬಗ್ಗೆ ಚರ್ಚಿಸುತ್ತೀರಿ
- ಮನೆಯ ಹತ್ತಿರದಲ್ಲಿ ಬೆಂಕಿ ಅವಘಡ ಸಂಭವಿಸಬಹುದು
- ಇಂದು ಯಾವುದೇ ಅಪೇಕ್ಷೆಯಿಲ್ಲದ ಸಹಾಯ ಮಾಡುವ ಸ್ವಭಾವ ನಿಮ್ಮದಾಗಬೇಕು
- ಜೀವನದಲ್ಲಿ ಜಿಗುಪ್ಸೆ ಅಥವಾ ವೈರಾಗ್ಯ ಕಾಡಲು ಆರಂಭವಾಗಬಹುದು
- ಜೀವನ ಇಷ್ಟೇ ಎಂಬ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಆದರೆ ಧನಾತ್ಮಕವಾಗಿರಲಿ
- ಉದಯಿಸುತ್ತಿರುವ ಸೂರ್ಯನನ್ನು ಪ್ರಾರ್ಥನೆ ಮಾಡಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸಗಟು ವ್ಯಾಪಾರಿಗಳಿಗೆ ತಮ್ಮ ಕರ್ತವ್ಯ ಲೋಪದಿಂದ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆಯಿದೆ
- ಕಳ್ಳರು ತಮ್ಮ ಕೈಚಳಕ ಫಲಿಸಲಿಲ್ಲ ಅಂತ ಯೋಚಿಸುವಾಗ ಪೊಲೀಸರು ಬಂಧಿಸಬಹುದು
- ಮಾತೆಯರು ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ
- ಮನಸ್ಸು, ಶರೀರದ ಮೇಲೆ ಪ್ರಭಾವ ಬೀರುವ ಯಾವುದೇ ಆಲೋಚನೆ ಮಾಡಬೇಡಿ ಅನಾರೋಗ್ಯ ಕಾಡಬಹುದು
- ಸಾಯಂಕಾಲ ಸುಖವಾದ ಭೋಜನಕ್ಕೆ ಅವಕಾಶವಿದೆ
- ಇಂದು ನರಸಿಂಹನನ್ನು ಪ್ರಾರ್ಥನೆ ಮಾಡಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕರ ರಾಶಿಯ ಹಲವರಿಗೆ ಈ ದಿನ ಶುಭವಿಲ್ಲ
- ಹುಚ್ಚು ಧೈರ್ಯ ಇರುವ ಪ್ರೇಮಿಗಳಿಗೆ ಅಪಘಾತ, ವಾಹನ ಜಖಂ ಆಗುವ ಸಾಧ್ಯತೆಯಿದೆ
- ತಮ್ಮ ವ್ಯವಹಾರದ ವಿಚಾರಗಳು ಮನೆಯಲ್ಲಿ ತಿಳಿಸದ ಕಾರಣ ತೊಂದರೆಯಾಗುವ ಸಾಧ್ಯತೆಯಿದೆ
- ನಿಮ್ಮ ನಡವಳಿಕೆ, ತೆಗೆದುಕೊಳ್ಳುವ ನಿರ್ಧಾರ ತೊಂದರೆ ಉಂಟು ಮಾಡಬಹುದು
- ನಿಮ್ಮ ನಡವಳಿಕೆಯಿಂದ ನೀವು ಪೊಲೀಸರ ಅತಿಥಿಯಾಗಬಹುದು
- ಸುಳ್ಳು ಯಾವುದೇ ಕಾರಣಕ್ಕೂ ಹೇಳಬೇಡಿ ತೊಂದರೆಯಾದರೂ ಸತ್ಯವನ್ನೇ ಹೇಳಿ ಜಯಶೀಲರಾಗಿ
- ದುರ್ಗಾಪರಮೇಶ್ವರಿಗೆ ಹಾಲು ಮತ್ತು ಕುಂಕುಮ ಅರ್ಪಣೆ ಮಾಡಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆತುರದ ನಿರ್ಧಾರಗಳಿಂದ ತುಂಬಾ ನಷ್ಟವನ್ನು ಹೊಂದುವ ಸಾಧ್ಯತೆಯಿದೆ
- ತುಂಬಾ ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದರೆ ಈ ದಿನ ಪರಿಹಾರ ಸಿಗಬಹುದು
- ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಅಥವಾ ಮೋಸ ಆಗುವ ಸಾಧ್ಯತೆಯಿದೆ
- ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬಹುದು
- ವಿದ್ಯಾರ್ಥಿಗಳು ಮತ್ತು ಮಕ್ಕಳು ತುಂಬಾ ತಾಳ್ಮೆಯಿಂದ ವರ್ತಿಸಬೇಕಾದ ದಿನ
- ಏಕಾಗ್ರತೆಯಿಂದ ಮಾತ್ರ ಜಯಶೀಲರಾಗುವ ಸಾಧ್ಯತೆ
- ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಅನಗತ್ಯ ಹಣ ಖರ್ಚಾಗುವ ಸಾಧ್ಯತೆಯಿದೆ
- ನವಗ್ರಹರನ್ನು ಪ್ರಾರ್ಥನೆ ಮಾಡಿ, ನವಗ್ರಹ ಸ್ತೋತ್ರ ಪಠಿಸಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ತುಂಬಾ ಶುಭ ದಿನ
- ತಮ್ಮ ಜೊತೆ ಕೆಲಸ ಮಾಡುವವರು ಅನಾರೋಗ್ಯದಿಂದ ಜೀವನದ ಕೊನೆಯ ಹಂತ ತಲುಪಿರಬಹುದು
- ನಿಮ್ಮ ಮನಸ್ಸಿಗೆ ತುಂಬಾ ನೋವು ಉಂಟುಮಾಡಬಹುದು
- ಇಂದು ಸಂಪಾದನೆಯೇ ನಿಮ್ಮ ಗುರಿಯಾಗಿರುತ್ತದೆ
- ಏನೂ ಕೆಲಸವಿರುವುದಿಲ್ಲ, ಆದರೆ ಪುರುಸೊತ್ತು ಮಾತ್ರ ಇರುವುದಿಲ್ಲ
- ಮಾನಸಿಕ ವಿರಾಮದಿಂದ ಸಾಯಂಕಾಲಕ್ಕೆ ಎಲ್ಲಾ ಸರಿ ಹೋಗಬಹುದು
- ಈಶ್ವರನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us