/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಹುಣ್ಣಿಮೆ ತಿಥಿ, ಜ್ಯೇಷ್ಠಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಹಾರದ ವ್ಯತ್ಯಯಗಳಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
 - ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಬರುವ ಸೂಚನೆಗಳಿವೆ
 - ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ
 - ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಪಡಿಕೊಳ್ಳಲು ಕಾಯ್ತಾ ಇರ್ತಾರೆ ಜಾಗ್ರತೆಯನ್ನು ವಹಿಸಿ
 - ಸ್ತ್ರೀಯರಿಗೆ ಅನುಕೂಲವಾಗುವ ದಿನ
 - ಖರೀದಿಗೆ ಹೆಚ್ಚು ಅವಕಾಶಗಳಿವೆ
 - ಮೋಸ ಹೋಗುವುದು ಬೇಡ
 - ಮನೆ ದೇವರನ್ನು ಪ್ರಾರ್ಥನೆ ಮಾಡಿ
 
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರರಿಗೆ, ವೃತ್ತಿಪರರಿಗೆ ಕಿರಿಕಿರಿ ಆಗಬಹುದು
 - ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಗೊಳ್ಳುವ ಸಾಧ್ಯತೆಯಿದೆ
 - ಮಾನಸಿಕ ಸಮಾಧಾನ ಮುಖ್ಯವಾಗುತ್ತದೆ
 - ಅಕ್ಕಪಕ್ಕದವರ ಜೊತೆ, ಸ್ನೇಹಿತರ ಜೊತೆ ಜಗಳ ಬೇಡ
 - ಹಿರಿಯರು, ಮೇಲಾಧಿಕಾರಿಗಳು, ಶಿಕ್ಷಕರು, ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು
 - ದೊಡ್ಡವರನ್ನು ಗೌರವಿಸಿ
 - ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯಿಂದ ನಿಮ್ಮ ಕಾರ್ಯವನ್ನು ನಿಭಾಯಿಸಿ
 - ಯಾವುದೇ ಕೆಲಸವನ್ನು ತುಂಬಾ ಆತುರವಾಗಿ ಮಾಡಬೇಡಿ ಯಶಸ್ಸಿಗೆ ಅಡ್ಡಿ ಆಗಬಹುದು
 - ನಿಧಾನವಾಗಿ ಯೋಚಿಸಿ ಇರುವ ಸಮಯವನ್ನು ಉಪಯೋಗಿಸಿ ಕೆಲಸ ಮಾಡಿ
 - ನಿಮ್ಮ ಸಮಯವನ್ನು ಒಳ್ಳೆಯ ಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಿ
 - ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
 
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಮೊದಲಿನಿಂದ ನಡೆದುಕೊಂಡು ಬಂದಿರುವ ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸಬಹುದು
 - ಬೇರೆಯವರು ಏನೋ ಮಾತನಾಡಿಕೊಳ್ಳುತ್ತಾರೆ ಅನ್ನೊ ಉದ್ದೇಶದಿಂದ ನಿಮ್ಮ ವ್ಯಾಪಾರವನ್ನು ಕೈ ಬಿಡಬೇಡಿ
 - ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ
 - ಇಂದು ಪ್ರೇಮಿಗಳಿಗೆ ಶುಭದಿನ
 - ನೀವು ಹೊಸದಾಗಿ ವ್ಯವಹಾರ ಆರಂಭ ಮಾಡಬೇಕೆಂದರೆ ಆಗು ಹೋಗುಗಳನ್ನು ಗಮನಿಸಿ ವ್ಯವಹರಿಸಿ
 - ಭೂ ವ್ಯವಹಾರ ಮಾಡುವವರಿಗೆ ಸಾಯಂಕಾಲದ ನಂತರದ ವ್ಯವಹಾರ ಶುಭವಾಗಲಿದೆ
 - ಮನೆಯಲ್ಲಿ, ವ್ಯವಹಾರದ ಸ್ಥಳದಲ್ಲಿ ಜಗಳ ಬೇಡ
 - ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
 
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದವರನ್ನು ದ್ವೇಷಿಸಬೇಡಿ
 - ಕೇವಲ ಅಂತರವನ್ನು ಕಾಯ್ದುಕೊಳ್ಳಿ
 - ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆ ಮಾಡಿ
 - ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ದಿಯನ್ನು ಹೆಚ್ಚಿಸಲಿವೆ
 - ಕೆಲಸದ ಸ್ಥಳದಲ್ಲಿ ನಿಮಗೆ ಸಣ್ಣಪುಟ್ಟ ಅಡ್ಡಿಯಾದರೂ ಆತಂಕ ಪಡಬೇಕಾಗಿಲ್ಲ
 - ಈ ದಿನ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ ಶುಭವಿದೆ
 - ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
 
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
 - ರಕ್ತದೊತ್ತಡ ಸಮಸ್ತೆಯಿರುವವರು ಜಾಗ್ರತೆಯಿಂದಿರಿ
 - ಸರ್ಕಾರಿ ಕೆಲಸಗಳಲ್ಲಿ ಅಡಚಣೆಯಿರುತ್ತದೆ
 - ಉದ್ಯೋಗ ಹಾಗೂ ವ್ಯವಹಾರದಲ್ಲಿ ಅನಿರೀಕ್ಷಿತ ನಷ್ಟ ಸಾಧ್ಯತೆ
 - ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಾರ್ತೆ
 - ಈ ದಿನ ಆಲಸ್ಯ ತೋರಿಸಬಾರದು
 - ನಿಮ್ಮ ಕೆಲಸಕ್ಕೆ ಸಂಬಂಧಿಸಿದವರು ನಿಮ್ಮ ಅಹವಾಲನ್ನು ಸ್ವೀಕರಿಸಿ ನಿಮಗೆ ಭರವಸೆ ನೀಡುವ ಸಾಧ್ಯತೆಗಳಿವೆ
 - ನಿಮ್ಮ ಮನಸ್ಸಿಗೆ ಆನಂದವಾಗಬಹುದು
 - ಈ ದಿನ ಕೆಲಸದಲ್ಲಿ ಉತ್ತೇಜನ ಬರುತ್ತದೆ ಹಾಗೆ ಮುಂದುವರೆಸಿ ಶುಭ ಫಲವಿದೆ
 - ಪಾರ್ವತಿ ದೇವಿಯನ್ನು ಆರಾಧಿಸಿ
 
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ತಲೆನೋವು ಮಾನಸಿಕ ಉದ್ವೇಗಕ್ಕೆ ಒಳಗಾಗುವ ದಿನ
 - ಪ್ರೇಮಿಗಳ ಮಧ್ಯೆ ಬಿರುಕು ಉಂಟಾಗಬಹುದು
 - ಪ್ರೀತಿಸಿ ಮದುವೆಯಾದ ಒಂದೇ ನಕ್ಷತ್ರ ಒಂದೇ ರಾಶಿಯವರು ಪರಸ್ಪರ ಜಗಳ ಮಾಡಬಹುದು
 - ಕೊನೆಗೆ ಕಾನೂನಿನ ಮೊರೆ ಹೋಗುವ ಸಾಧ್ಯತೆಗಳು ಇರುತ್ತವೆ
 - ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು
 - ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬೇಡಿ
 - ತಾಳ್ಮೆ ಇರಲಿ ವಾದ-ವಿವಾದಗಳು ಅಥವಾ ಜಗಳವೇ ಇದಕ್ಕೆ ಪರಿಹಾರವಲ್ಲ
 - ನಿಧಾನವಾಗಿ ಯೋಚಿಸಿ ಸಮಸ್ಯೆಗಳನ್ನು ಶಾಂತವಾಗಿ ಬಗೆಹರಿಸಿಕೊಳ್ಳಲು ಅವಕಾಶಗಳಿವೆ
 - ವೃದ್ಧ ದಂಪತಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ
 
ತುಲಾ/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ತುಂಬಾ ಪ್ರೋತ್ಸಾಹ ಸಿಗಲಿದೆ
 - ಹಣದ ಅನುಕೂಲವಾಗುವ ಸಾಧ್ಯತೆಗಳಿವೆ
 - ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿರುವ ಈ ರಾಶಿಯವರು ಸರಿಯಾದ ನಾಯಕರ ಮಾರ್ಗದರ್ಶನ ಪಡೆದು ಮುಂದುವರೆಯ ಬೇಕಾಗುತ್ತದೆ
 - ಮನೆಯಲ್ಲಿ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಇರುತ್ತವೆ
 - ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಒಂದು ಅವಕಾಶ
 - ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬಂದ ಅನುಭವವಾಗುತ್ತದೆ
 - ಯಾವುದರ ದುರುಪಯೋಗವನ್ನು ಮಾಡಿಕೊಳ್ಳದೆ ಕಾರ್ಯತತ್ಪರರಾಗಿರಿ
 - ನದಿ ತೀರದಲ್ಲಿರುವ ದೇವಿಯನ್ನು ಆರಾಧಿಸಿ
 
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶ ಪ್ರಯಾಣಕ್ಕೆ ಪ್ರಯತ್ನಿಸುವವರಿಗೆ ಈ ದಿನ ಶುಭವಾಗಲಿದೆ
 - ಇಂದು ಹಣದ ಕೊರತೆ ಆಗಬಹುದು
 - ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ
 - ಪದವೀಧರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುವ ಸಾಧ್ಯತೆ
 - ಇಲ್ಲಿಯೇ ಕೆಲಸಕ್ಕೆ ಅವಕಾಶಗಳಿರುತ್ತವೆ
 - ವಿದೇಶಕ್ಕೆ ಹೋಗುವ ಸಾಧ್ಯತೆ, ಏನು ಮಾಡಲಿ ಎಂಬ ಚಿಂತೆ ಕಾಡಬಹುದು
 - ಅವಕಾಶವನ್ನು ಮುಂದಿಟ್ಟುಕೊಂಡು ಯೋಚಿಸಿ ಫಲವಿಲ್ಲ ಸರಿಯಾದ ನಿರ್ಧಾರ ಮಾಡಿ
 - ವಿಷ್ಣು ಸಹಸ್ರನಾಮ ಶ್ರವಣ ಮಾಡಿ
 
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಇಂಜಿನಿಯರ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಪ್ರದವಾದ ದಿನ
 - ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
 - ತಾಯಿಯ ಕಡೆಯಿಂದ ಉತ್ತಮ ಬೆಂಬಲ ಧನ ಸಹಾಯವಾಗುವುದು
 - ನಿಮಗಿರುವ ಬುದ್ಧಿವಂತಿಕೆಯನ್ನು ತೋರಿಸಿ ಶುಭ ಫಲವಿದೆ
 - ಕಾರ್ಯಕರ್ತರಲ್ಲಿ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಬಹುದು
 - ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತ ಉನ್ನತ ವ್ಯಾಸಂಗಕ್ಕೆ ಯೋಜನೆ ಹಾಕಿಕೊಂಡು ಮುಂದುವರಿಯುವ ಸಾಧ್ಯತೆಗಳಿವೆ
 - ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
 - ಬಡ ವಿದ್ಯಾರ್ಥಿಗಳ ಸಹಾಯವನ್ನು ಮಾಡಿ
 
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪ್ರಾಮಾಣಿಕತೆ ಮತ್ತು ಕೆಲಸ ಕಾರ್ಯಗಳಲ್ಲಿ ನಿಮಗಿರುವ ಬದ್ಧತೆ ನಿಮ್ಮ ಗೌರವವನ್ನು ಹೆಚ್ಚಿಸುವ ದಿನ
 - ಆರ್ಥಿಕವಾಗಿ ನಿಮಗೆ ಅನುಕೂಲವಿದೆ
 - ಹಣಕ್ಕಿಂತ ನಿಮ್ಮ ಕಾರ್ಯವೈಖರಿಯನ್ನು ಜನ ಮೆಚ್ಚಿ ಅಭಿನಂದಿಸುವುದೇ ನಿಮಗೆ ಹೆಚ್ಚೆನಿಸುತ್ತದೆ
 - ನಿಜವಾಗಿ ಇದು ಶಾಶ್ವತವಾದುದು
 - ಮಾತು-ಮನಸು ತುಂಬಾ ಮಾಧುರ್ಯವಾಗಿರುವ ದಿನ
 - ಜನರು ನಿಮ್ಮ ಆಕರ್ಷಣೆಗೆ ಒಳಗಾಗುತ್ತಾರೆ
 - ನಿಮ್ಮ ವೃತ್ತಿ, ನೌಕರಿ ದೃಷ್ಟಿಯಿಂದ ಜನರಿಗೆ, ಸಮಾಜಕ್ಕೆ ಒಳಿತು ಮಾಡಲು ಇದೊಂದು ಸದಾವಕಾಶ
 - ನಿಮ್ಮನ್ನು ತೊಡಗಿಸಿಕೊಂಡು ಇನ್ನು ಹೆಚ್ಚಿನ ಜನಪ್ರಿಯತೆಗೆ ಪಾತ್ರರಾಗಿ
 - ಗುರು ಹಿರಿಯರನ್ನು ಗೌರವಿಸಿ ಆಶೀರ್ವಾದ ಪಡೆಯಿರಿ
 
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಮನಸ್ಥಿತಿ ಸರಿ ಇರದ ಕಾರಣ ಯಾವುದೋ ಹಳೆಯ ವಿಷಯಕ್ಕೆ ಸಹೋದರ,ಬಂಧುಗಳ ಮಧ್ಯೆ ಕಲಹಕ್ಕೆ ಅವಕಾಶಗಳಿವೆ
 - ಮನೆಯ ವಿಚಾರದಲ್ಲಿ ಹೊರಗಿನ ಸಲಹೆ ಅನಗತ್ಯ ಅನಿಸುತ್ತದೆ
 - ನಿಮ್ಮ ಪರವಾಗಿ ಬೇರೆಯವರು ಮಾತನಾಡಿದರೆ ಅವರಿಗೆ ಅವಮಾನದ ಸಾಧ್ಯತೆಗಳು ಹೆಚ್ಚು
 - ಅದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
 - ಇಂದು ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ
 - ನಿಮ್ಮ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಕಂಡರೆ ತಾತ್ಸಾರ ಮಾಡಬೇಡಿ
 - ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು
 - ನಿಮ್ಮ ಮನಸ್ಸು ಪರಿವರ್ತನೆಗೆ ಕಾಯುತ್ತಿರುತ್ತದೆ
 - ಮಹಾಕಾಳಿಯನ್ನು ಪ್ರಾರ್ಥಿಸಿ
 
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ತಂದೆಯವರ, ದೊಡ್ಡವರ ಸೂಕ್ತ ಮಾರ್ಗದರ್ಶನ ನಿಮಗೆ ಲಭ್ಯವಾಗುತ್ತದೆ
 - ನಿಮ್ಮ ಪ್ರತಿಭೆ-ವಿಚಾರವಂತಿಕೆ ಪ್ರಕಾಶ ಪಡಿಸಲು ಸದಾವಕಾಶ
 - ಸ್ನೇಹಿತರು ಬಂಧುಗಳ ಪ್ರೀತಿ ವಿಶ್ವಾಸ ನಿಮಗೆ ಸ್ಫೂರ್ತಿದಾಯಕಗಳು
 - ಧ್ಯಾನ, ಯೋಗ, ವ್ಯಾಯಾಮಗಳಿಗೆ ಹೆಚ್ಚಿನ ಮನಸ್ಸಿರುತ್ತದೆ
 - ಎಲ್ಲಾ ದೃಷ್ಟಿಯಿಂದ ಶುಭ ದಿವಸ
 - ಸಮಾಜಕ್ಕೆ ಅನುಕೂಲವಾಗುವ ಉತ್ತಮ ಕೆಲಸ ಮಾಡಿ ಶುಭವಾಗಲಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us